Guru Mantras: ಗುರು ಮಂತ್ರ ಎಂದರೇನು? ಅದರ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ

ಗುರುಪೂರ್ಣಿಮೆಯು ಗುರುಗಳಿಗೆ ಸಮರ್ಪಿತವಾದ ಪವಿತ್ರ ದಿನ. ಈ ದಿನ ಗುರುಗಳ ಆಶೀರ್ವಾದ ಪಡೆಯುವುದು ಮತ್ತು ಅವರು ನೀಡಿದ ಜ್ಞಾನಕ್ಕೆ ಕೃತಜ್ಞತೆ ಸಲ್ಲಿಸುವುದು ಮುಖ್ಯ. ಗುರುಗಳು ನೀಡುವ ಗುರುಮಂತ್ರವು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಇಲ್ಲಿ ಗುರುಪೂರ್ಣಿಮೆಯ ಮಹತ್ವ, ಗುರುಮಂತ್ರದ ಪ್ರಾಮುಖ್ಯತೆ ಮತ್ತು ಅದರ ಜಪನ ವಿಧಾನವನ್ನು ವಿವರಿಸುಲಾಗಿದೆ.

Guru Mantras: ಗುರು ಮಂತ್ರ ಎಂದರೇನು? ಅದರ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ
ಗುರು ಮಂತ್ರ

Updated on: Jul 10, 2025 | 10:26 AM

ಗುರು ಪೂರ್ಣಿಮೆಯ ಹಬ್ಬವು ಗುರುವಿಗೆ ಸಮರ್ಪಿತವಾಗಿದೆ. ಈ ದಿನ ಸಾಕಷ್ಟು ಜನರು ತಮ್ಮ  ಗುರು ಮತ್ತು ಪೋಷಕರಿಂದ ಆಶೀರ್ವಾದ ಪಡೆಯುತ್ತಾರೆ. ಇದರೊಂದಿಗೆ ಅವರು ಜೀವನದಲ್ಲಿ ನೀಡಿದ ಜ್ಞಾನಕ್ಕಾಗಿ ಅವರಿಗೆ ಗೌರವದಿಂದ ಧನ್ಯವಾದಗಳನ್ನು ಅರ್ಪಿಸಲು ಶುಭ ದಿನ . ಗುರು ಮಂತ್ರವನ್ನು ಆಧ್ಯಾತ್ಮಿಕ ಗುರುಗಳು ನೀಡುತ್ತಾರೆ. ನೀವು ಯಾರನ್ನು ನಿಮ್ಮ ಗುರು ಎಂದು ಪರಿಗಣಿಸುತ್ತೀರೋ ಅಥವಾ ನಿಮ್ಮ ಗುರುಗಳನ್ನಾಗಿ ಮಾಡಿಕೊಳ್ಳುತ್ತೀರೋ, ಅವರ ಮಾತುಗಳನ್ನು ಅನುಸರಿಸುವುದು ಮತ್ತು ಅವುಗಳ ಮೇಲೆ ಕಾರ್ಯನಿರ್ವಹಿಸುವುದು ಗುರು ಮಂತ್ರ.

ಗುರು ಮಂತ್ರವು ಗುರುವು ತನ್ನ ಶಿಷ್ಯನಿಗೆ ನೀಡುವ ಮಂತ್ರ. ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತದೆ. ಗುರು ಮಂತ್ರವು ಆಧ್ಯಾತ್ಮಿಕ ಪ್ರಯಾಣದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಗುರು ಮಂತ್ರವು ಸಾಮಾನ್ಯವಾಗಿ ದೇವತೆಯ ಹೆಸರು, ಒಂದು ನಿರ್ದಿಷ್ಟ ಪದ ಅಥವಾ ವಾಕ್ಯವಾಗಿರುತ್ತದೆ. ಗುರುಗಳು ದೀಕ್ಷೆ ನೀಡುವಾಗ ಈ ಮಂತ್ರವನ್ನು ತಮ್ಮ ಶಿಷ್ಯನಿಗೆ ನೀಡುತ್ತಾರೆ. ಗುರುಗಳು ಮಂತ್ರದ ಅರ್ಥ ಮತ್ತು ಅದನ್ನು ಶಿಷ್ಯನಿಗೆ ಪಠಿಸುವ ವಿಧಾನವನ್ನು ಸಹ ವಿವರಿಸುತ್ತಾರೆ.

ಗುರು ಮಂತ್ರ ಜಪಿಸುವುದು ಹೇಗೆ ?

  • ಗುರು ಮಂತ್ರವು ಒಂದು ರಹಸ್ಯ ಮಂತ್ರ. ಅದನ್ನು ಯಾರಿಗೂ ಹೇಳಬಾರದು.
  • ಗುರು ಮಂತ್ರದ ಪಠಣವು ಗುರುವಿನ ಮೇಲಿನ ಭಕ್ತಿ ಮತ್ತು ಗೌರವವನ್ನು ತೋರಿಸುತ್ತದೆ.
  • ಗುರು ಮಂತ್ರವನ್ನು ನಿಯಮಿತವಾಗಿ ಜಪಿಸಬೇಕು, ಆಗ ಮಾತ್ರ ಅದರ ಪ್ರಯೋಜನಗಳು ಸಿಗುತ್ತವೆ.

“ಧ್ಯಾನ ಮೂಲಂ ಗುರು ಮೂರ್ಥಿ, ಪೂಜಾ ಮೂಲಂ ಗುರು ಪದಮ್।
ಮಂತ್ರ ಮೂಲಂ ಗುರು ವಾಕ್ಯಂ, ಮೋಕ್ಷ ಮೂಲಂ ಗುರು ಕೃಪಾ॥”

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?

ಈ ಶ್ಲೋಕವು ಗುರುವನ್ನು ಪರಮಾತ್ಮನ ರೂಪದಲ್ಲಿ ವರ್ಣಿಸುತ್ತದೆ. ಧ್ಯಾನ, ಪೂಜೆ, ಮಂತ್ರ ಮತ್ತು ಮೋಕ್ಷ ಎಲ್ಲವೂ ಗುರುವಿನಿಂದಲೇ ಆರಂಭವಾಗುತ್ತವೆ ಮತ್ತು ಅಂತ್ಯವಾಗುತ್ತವೆ ಎಂಬ ಗಾಢವಾದ ಸತ್ಯವಿದೆ. ಗುರುವಿನ ಧ್ಯಾನ, ಪಾದಪೂಜೆ, ಮಾತು ಮತ್ತು ಕೃಪೆ ಇವೆಲ್ಲವೂ ಆತ್ಮೋನ್ನತಿಯ ಮಾರ್ಗದಲ್ಲಿ ಅತ್ಯಂತ ಪ್ರಮುಖವಾದವು. ಗುರುವಿನ ಮಾತುಗಳಲ್ಲಿ ಆಳವಾದ ಜ್ಞಾನವಿದೆ ಮತ್ತು ಜೀವನದಲ್ಲಿ ಯಶಸ್ವಿಯಾಗುವ ರಹಸ್ಯ ಅದರಲ್ಲಿ ಕಂಡುಬರುತ್ತದೆ. ಗುರುವಿಲ್ಲದೆ ಸ್ವ-ಕಲ್ಯಾಣ ಸಾಧ್ಯವಿಲ್ಲ. ನಿಜವಾದ ಗುರು ಬಡವನನ್ನು ಸಹ ರಾಜನನ್ನಾಗಿ ಮಾಡಬಹುದು. ಅದಕ್ಕಾಗಿಯೇ ಗುರುವಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರನ್ನು ಗೌರವದಿಂದ ಕಾಣಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Thu, 10 July 25