ಜಗತ್ತು ಕಂಡ ಪೌರಾಣಿಕ ಪ್ರೇಮ ಕಥೆಗಳು; ಪ್ರೀತಿಯನ್ನು ಪಡೆಯಲು ಆದಿ ಶಕ್ತಿ ಕೂಡ ತಪಸ್ಸು ಮಾಡ್ಬೇಕಾಯ್ತು
ಪ್ರೀತಿ, ಪ್ರೇಮಕ್ಕೆ ಹಲವು ಮುಖಗಳಿವೆ. ಪ್ರೀತಿ ಮನುಷ್ಯನನ್ನು ಏನು ಬೇಕಾದರೂ ಮಾಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಬಿದ್ದ ಮನುಷ್ಯ ಯಾರು ಊಹಿಸಲಾಗದಷ್ಟು ಬದಲಾಗುತ್ತಾನೆ. ಪ್ರೀತಿ ಕೆಲವೊಮ್ಮೆ ಅರಳಿಸುತ್ತದೆ ಮತ್ತೆ ಕೆಲವು ಬಾರಿ ಮುದುಡಿಸುತ್ತದೆ ಹಾಗೇ ದೇವದಾಸನಾಗಿಯೂ ಮಾಡುತ್ತದೆ. ಅದೇನೇ ಇರಲಿ ಜಗತ್ತಿನ ಕಾಲ ಚಕ್ರ ನಿಂತಿರೋದೆ ಪ್ರೀತಿ-ಪ್ರೇಮದ ಮಾಯೆಯ ಮೇಲೆ. ಸುಖ, ದುಃಖ, ಜೀವಿಗಳ ಉಗಮ, ಬೆಳವಣಿಗೆ ಎಲ್ಲದಕ್ಕೂ ಪ್ರೀತಿಯೇ ಮೂಲ ಕಾರಣ. ಹಾಗಾಗಿ ನಾವಿಂದು ಪುರಾಣ ಕತೆಗಳಲ್ಲಿ ಮೂಡಿದ ಪ್ರೇಮ ಕಥೆಗಳು, ಯುಗ ಯುಗಗಳಿಗೂ ಉದಾಹರಣೆಯಾಗಿರುವ ಪ್ರೀತಿಯ ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇವೆ.
Updated on: Nov 29, 2021 | 8:19 AM

here is a five best hindu Mythical love story must know

here is a five best hindu Mythical love story must know

ನಳ ದಮಯಂತಿ(Nala Damayanthi): ಇವರಿಬ್ಬರ ಪ್ರೀತಿ ಪರಸ್ಪರ ಮುಖ ನೋಡುವ ಮುಂಚೆಯೇ ಆರಂಭವಾದದ್ದು. ಹಂಸದ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ದಮಯಂತಿಗೆ ಆಕೆಯ ತಂದೆ ಭೀಮ ಸ್ವಯಂವರ ಏರ್ಪಡಿಸುವ ಮುಂಚೆಯೇ ಆಕೆ ನಳನೇ ತನ್ನ ಪತಿ ಎಂದು ನಿರ್ಧರಿಸಿರುತ್ತಾಳೆ. ಒಟ್ಟಿನಲ್ಲಿ ಅವರಿಬ್ಬರ ವಿವಾಹವಾಗುತ್ತದೆ. ಆದರೆ, ನಂತರದಲ್ಲಿ ಕಲಿಯ ಕಾರಣದಿಂದ ಇವರಿಬ್ಬರ ಜೀವನದಲ್ಲಿ ಅನೇಕ ಅಗ್ನಿ ಪರೀಕ್ಷೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಜಯಿಸಿ ಮತ್ತೆ ಒಂದಾಗುವ ನಳದಮಯಂತಿಯ ಕತೆ ಭಾರತೀಯ ಪುರಾಣದಲ್ಲಿ ಮಹತ್ವದ ಸ್ಥಾನ ಪಡೆದಿದೆ.

ವಿಶ್ವಾಮಿತ್ರ ಹಾಗೂ ಮೇನಕೆ(Vishwamitra and Menaka): ಋಷಿವರ್ಯ ವಿಶ್ವಾಮಿತ್ರರ ಘೋರ ತಪಸ್ಸು ತನ್ನ ಸ್ಥಾನವನ್ನೇ ಅಲ್ಲಾಡಿಸುತ್ತದೆ ಎಂದು ತಿಳಿದಾಗ ದೇವತೆಗಳ ರಾಜ ಇಂದ್ರ, ವಿಶ್ವಾಮಿತ್ರರ ತಪಸ್ಸನ್ನು ಭಂಗ ಮಾಡುವಂತೆ ಅಪ್ಸರೆ ಮೇನಕಳನ್ನು ಕಳುಹಿಸುತ್ತಾನೆ. ಋುಷಿಯ ತಪಸ್ಸನ್ನು ಭಂಗ ಮಾಡುವ ಉದ್ದೇಶದಿಂದ ಧರೆಗಿಳಿದ ಮೇನಕೆಗೆ ವಿಶ್ವಾಮಿತ್ರ ಮೇಲೆ ಪ್ರೇಮಾಂಕುರವಾಗುತ್ತೆ. ವಿಶ್ವಾಮಿತ್ರರೂ ಮೇನಕೆಯೂ ಪ್ರೇಮದ ಉತ್ಕಟತೆಯಲ್ಲಿರುವಾಗಲೇ ಒಂದು ದಿನ ಮೇನಕೆ ತಾನು ಬಂದು ಅವರೆದುರು ನರ್ತಿಸಿದ ಉದ್ದೇಶವನ್ನು ಹೇಳುತ್ತಾಳೆ. ಇದರಿಂದ ನಂಬಿಕೆದ್ರೋಹಕ್ಕೊಳಗಾದಂತೆನಿಸಿ ವಿಶ್ವಾಮಿತ್ರರು ಮೇನಕೆಗೆ ತನಗೆ ಮುಖ ತೋರಿಸಬೇಡ ಎಂದು ಶಾಪ ನೀಡುತ್ತಾರೆ. ಇದರಿಂದ ಆಕೆ ಅವರನ್ನು ಬಿಟ್ಟು ತೆರಳಲೇಬೇಕಾಗುತ್ತದೆ. ಆದರೆ ಇವರಿಬ್ಬರ ಪ್ರೇಮಕತೆ ಮಾತ್ರ ಶಾಶ್ವತವಾಗಿದೆ.

ಸತ್ಯವಾನ್ ಸಾವಿತ್ರಿ(Sathyavan Savithri): ಮಾದ್ರ ದೇಶದ ರಾಜಕುಮಾರಿ ಸಾವಿತ್ರಿ, ಆಳಲು ದೇಶವಿಲ್ಲದೆ ಕಾಡು ಸೇರಿದ್ದ ಕುರುಡ ರಾಜ ಬಲ್ವನ ಪುತ್ರ ಸತ್ಯವಾನನನ್ನು ವಿವಾಹವಾಗಲು ನಿರ್ಧರಿಸುತ್ತಾಳೆ. ಆದರೆ, ನಾರದರು ಸತ್ಯವಾನನಿಗೆ ಒಂದೇ ವರ್ಷ ಆಯಸ್ಸಿರುವುದೆಂದು ಸಾವಿತ್ರಿಗೆ ತಿಳಿಸುತ್ತಾರೆ. ಅದು ತಿಳಿದೂ ಕೂಡಾ ಸಾವಿತ್ರಿ ತಾನು ಮನಸ್ಸಿನಲ್ಲೇ ಆತನನ್ನು ಪತಿಯಾಗಿ ಸ್ವೀಕರಿಸಿದ್ದೇನೆಂದು ಹೇಳಿ ವಿವಾಹವಾಗುತ್ತಾಳೆ. ಆದರೆ, ಈ ಪ್ರೇಮಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ವಿವಾಹವಾದ ನಂತರ ರಾಜವೈಭೋಗ ಬಿಟ್ಟು ಅತ್ತೆ ಮಾವ ಪತಿಯ ಸೇವೆ ಮಾಡುತ್ತಾ ಕಾಡಿನಲ್ಲಿ ವಾಸಿಸುವ ಸಾವಿತ್ರಿ ಪತಿಯ ಪ್ರಾಣ ಉಳಿಸಲು ಹಲವಾರು ವೃಥಗಳನ್ನು ಆಚರಿಸುತ್ತಾಳೆ. ಅಷ್ಟಾಗಿಯೂ ಒಂದು ದಿನ ಸತ್ಯವಾನನ ಪ್ರಾಣ ತೆಗೆದುಕೊಂಡು ಹೋಗಲು ಯಮ ಬಂದಾಗ, ಆತನೊಂದಿಗೆ ವಾದಿಸಿ, ಮಾತಿನಲ್ಲೇ ಆತನನ್ನು ಸೋಲಿಸಿ ಪತಿಯ ಪ್ರಾಣವನ್ನು ಹಿಂದೆ ಪಡೆದುಕೊಂಡು ಬರುತ್ತಾಳೆ ಸಾವಿತ್ರಿ. ತನ್ನ ಅಚಲ ಪ್ರೇಮದಿಂದ ಪತಿಯ ಪ್ರಾಣವನ್ನುಳಿಸುತ್ತಾಳೆ.
