AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’

Shabarimala : ‘ನಾಯಿ ಬಾಲ ಯಾವತ್ತೂ ಡೊಂಕೇ. ಆದರೆ ಈ ನಲವತ್ತು ದಿನಗಳಾದರೂ ನನ್ನ ಯಜಮಾನ ಕುಡಿಯುವುದನ್ನು ನಿಲ್ಲಿಸಿದ್ದಾನಲ್ಲ. ಅಷ್ಟೇ ನನಗೆ ಸಾಕು. ಪ್ರತೀ ವರ್ಷ ನಲವತ್ತು ದಿನ ಸ್ವಾಮಿಗೆ ನಡೆದುಕೊಳ್ಳಲಿ ಅಂತ ದೇವರಲ್ಲಿ ಕೇಳುತ್ತೇನೆ.’

Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’
ಡಾ. ಯು. ಆರ್. ಅನಂತಮೂರ್ತಿ
ಶ್ರೀದೇವಿ ಕಳಸದ
|

Updated on:Nov 30, 2021 | 4:18 AM

Share

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗುತ್ತಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

ಖ್ಯಾತ ಸಾಹಿತಿ ಡಾ. ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ ‘ಸುರಗಿ’ಯಿಂದ ‘ರಾಮು ಮತ್ತು ಅಯ್ಯಪ್ಪ ವ್ರತ’   

*

ಮೈಸೂರಿನಲ್ಲಿ ಪ್ರಾಧ್ಯಾಪಕನಾಗಿದ್ದ ನಾನು ರಾಮ ಎನ್ನುವ ದಲಿತ ನೌಕರನೊಬ್ಬನ ಜೊತೆ ಆಗೀಗ ತುಂಬ ಮಾತನಾಡುತ್ತಿದ್ದೆ. ವಿಶ್ವವಿದ್ಯಾಲಯದಲ್ಲಿ ನಮ್ಮ ಕೋಣೆಗಳನ್ನು ಸ್ವಚ್ಛ ಮಾಡುವುದು ಈತನ ಕೆಲಸ. ರಾಮನ ಹೆಂಡತಿಗೂ ಅದೇ ಕೆಲಸ. ಆದರೆ ಇಡೀ ಸಂಸಾರದ ನಿರ್ವಹಣೆ ಹೆಂಡತಿಯದ್ದು. ಯಾಕೆಂದರೆ ರಾಮ ಸಂಬಳ ಬಂದಿದ್ದೇ ಹೆಂಡತಿಗೆ ಕೊಂಚ ಹಣವನ್ನು ಕೊಟ್ಟು ಉಳಿದಿದ್ದನ್ನು ತನ್ನ ಗೆಳೆಯರ ಜತೆಗಿನ ಕುಡಿತದಲ್ಲಿ ಕಳೆದುಬಿಡುತ್ತಿದ್ದ. ಈ ರಾಮನಿಗೆ ರಾಜಕೀಯ ಪ್ರಜ್ಞೆಯೂ ಇತ್ತು. ಜನತಾ ಪಕ್ಷದ ಬೆಂಬಲಿಗನಾಗಿದ್ದ ನಾನು ಒಮ್ಮೆ ಅವನಿಗೆ ಹೇಳಿದೆ, ‘ನೋಡು ರಾಮ ನಿಮ್ಮ ಜನರೇ ಆದ ಬಾಬೂ ಜಗಜೀವನ್ ರಾಂ ಅವರು ಜನತಾದ ಈಗಿನ ಮುಖಂಡರು. ಅವರ ಪಕ್ಷಕ್ಕೆ ನೀನು ಓಟು ಕೊಡುತ್ತೀ ತಾನೆ?’ ರಾಮ ಮುಗುಳ್ನಗುತ್ತಾ ಒಂದು ಕೈಯಲ್ಲಿ ಪೊರಕೆ ಹಿಡಿದು ನಿಂತವನು ಹೇಳಿದ, ‘ನನ್ನ ಓಟು ಅಮ್ಮನಿಗೇ. ಅಮ್ಮ (ಇಂದಿರಾ) ಮಾತ್ರ ನಮಗೇನಾದರೂ ಮಾಡಿಯಾರು. ಅವರು ಹೇಳಿದ್ದನ್ನು ನೀವೆಲ್ಲಾ ಎಲ್ಲಿ ಕೇಳುತ್ತೀರಿ?’

ಈ ರಾಮ ಇದ್ದಕ್ಕಿದ್ದಂತೇ ಅಯ್ಯಪ್ಪ ವ್ರತಿಯಾದ. ಕಪ್ಪು ಉಡುಪಿನಲ್ಲಿ ಕ್ಷೌರ ಮಾಡಿಕೊಳ್ಳದ ಮುಖದಲ್ಲಿ ಕುಡಿಯುವುದನ್ನು ನಿಲ್ಲಿಸಿದ. ಆರೋಗ್ಯದಲ್ಲಿ ನಮಗೆ ಎದುರಾಗತೊಡಗಿದ. ಅವನ ಹೆಂಡತಿಗಂತೂ ಇದರಿಂದ ಅಪಾರವಾದ ಸಂತೋಷವಾಗಿತ್ತು. ಅವಳು ನನಗೆ ಹೇಳಿದ್ದಳು, ‘ನಾಯಿ ಬಾಲ ಯಾವತ್ತೂ ಡೊಂಕೇ. ಆದರೆ ಈ ನಲವತ್ತು ದಿನಗಳಾದರೂ ನನ್ನ ಯಜಮಾನ ಕುಡಿಯುವುದನ್ನು ನಿಲ್ಲಿಸಿದ್ದಾನಲ್ಲ. ಅಷ್ಟೇ ನನಗೆ ಸಾಕು. ಪ್ರತೀ ವರ್ಷ ನಲವತ್ತು ದಿನ ಸ್ವಾಮಿಗೆ ನಡೆದುಕೊಳ್ಳಲಿ ಅಂತ ದೇವರಲ್ಲಿ ಕೇಳುತ್ತೇನೆ.’

ನನಗಾದ ಸಂತೋಷ ಮತ್ತು ಆಶ್ಚರ್ಯವನ್ನು ನಾನಿಲ್ಲಿ ಹೇಳಲೇಬೇಕು. ರಾಮು ತಾನೊಬ್ಬ ಅಸ್ಪೃಶ್ಯನೆಂಬುದನ್ನು ಸಂಪೂರ್ಣ ಮರೆತು ಅಯ್ಯಪ್ಪ ದರ್ಶನ ಮಾಡಿ ಬಂದವನು ನನಗೆ ಪ್ರಸಾದವನ್ನು ತಂದುಕೊಟ್ಟಿದ್ದ.

(ಸೌಜನ್ಯ : ಅಕ್ಷರ ಪ್ರಕಾಶನ, ಹೆಗ್ಗೋಡು)

ಈ ಕೃತಿಯನ್ನು ನಿರೂಪಿಸಿದ ಕವಿ ಜ. ನಾ. ತೇಜಶ್ರೀ ಅವರ ಇತ್ತೀಚಿನ ಕವನ ಸಂಕಲನ : New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’  

Published On - 4:04 am, Tue, 30 November 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ