Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ.

Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
Follow us
TV9 Web
| Updated By: ಆಯೇಷಾ ಬಾನು

Updated on: Sep 23, 2021 | 7:21 AM

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ||ಗುರುವಾರ|| ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ವಾರ ಬಂತಮ್ಮ ಗುರುವಾರ ಬಂತಮ್ಮ ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ಎಂದು ಡಾ. ರಾಜ್ ಕುಮಾರ್ ರಾಯರ ಬಗ್ಗೆ ಹಾಡಿ ಹೊಗಳಿದ್ದಾರೆ. ಗುರುರಾಯರ ಪೂಜೆಗೆ ಗುರುವಾರವೇ ಶ್ರೇಷ್ಠ ದಿನವೆಂದು ಹೇಳಲಾಗುತ್ತೆ. ಗುರುವಾರದಂದು ಭಗವಾನ್ ವಿಷ್ಣು(Lord Vishnu) ಮತ್ತು ಶ್ರೀ ಗುರು ರಾಘವೇಂದ್ರರನ್ನು(Sri Guru Raghavendra Swamiji) ಪೂಜಿಸಲಾಗುತ್ತೆ. ನಾವು ನಿಮಗೆ ಇವತ್ತು ಶ್ರೀ ಗುರು ರಾಘವೇಂದ್ರರನ್ನು ಗುರುವಾರದಂದು ಪೂಜಿಸುವುದೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತೇವೆ.

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ. ಇನ್ನು ಗುರುವಾರದ ಶುಭ ದಿನದಂದು ಗುರುರಾಯರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಗುರುವಾರ ಗುರುರಾಯರನ್ನು ಪೂಜಿಸುವುದು ಹೇಗೆ? ಮೊದಲಿಗೆ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಬೇಕು. ಬಳಿಕ ರಂಗೋಲಿಯ ಮೇಲೆ ಮಣೆಯನ್ನು ಅಥವಾ ಟೇಬಲ್ ಇಟ್ಟು ಅದರ ಮೇಲೆ ರಾಘವೇಂದ್ರ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನಿಡಬೇಕು. ನಂತರ ಗುರುರಾಯರ ವಿಗ್ರಹವನ್ನು ಸ್ವಚ್ಛಗೊಳಿಸಿ ಶ್ರೀಗಂಧ ಮತ್ತು ಕುಂಕುಮವನ್ನು ಇಡಬೇಕು.

ರಾಯರ ವಿಗ್ರಹಕ್ಕೆ ತುಳಸಿ, ಹೂವಿನ ಹಾರವನ್ನು ಹಾಕಬೇಕು. ರಾಯರ ಪೂಜೆಯಲ್ಲಿ ತುಳಸಿ ಬಳಸುವುದು ಶ್ರೇಷ್ಠ ಎನ್ನಲಾಗುತ್ತೆ. ರಾಯರ ಪೂಜೆಗೆ ಹಣ್ಣುಗಳು, ತೆಂಗಿನಕಾಯಿ, ವೀಳ್ಯದೆಲೆ ಅರ್ಪಿಸಬೇಕು. ರಾಯರನ್ನು ಪೂಜಿಸುವ ಮೊದಲು ಗಣೇಶನನ್ನು ಪೂಜಿಸಬೇಕು. ಬಳಿಕ ರಾಯರಿಗೆ ಧೂಪ-ದೀಪ ಬೆಳಗಿ ನೈವೇದ್ಯವಿಟ್ಟು 11 ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುತ್ತ ಈ ಮಂತ್ರವನ್ನು ಜಪಿಸಬೇಕು. “ಪೂಜ್ಯಾಯಾ ಶ್ರೀ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಯಾ ನಮತಾಂ ಶ್ರೀ ಕಾಮಧೇನುವೇ”

ಇದನ್ನೂ ಓದಿ: Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ

ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ