Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ.

Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
Follow us
| Edited By: Ayesha Banu

Updated on: Sep 23, 2021 | 7:21 AM

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ||ಗುರುವಾರ|| ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ವಾರ ಬಂತಮ್ಮ ಗುರುವಾರ ಬಂತಮ್ಮ ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ಎಂದು ಡಾ. ರಾಜ್ ಕುಮಾರ್ ರಾಯರ ಬಗ್ಗೆ ಹಾಡಿ ಹೊಗಳಿದ್ದಾರೆ. ಗುರುರಾಯರ ಪೂಜೆಗೆ ಗುರುವಾರವೇ ಶ್ರೇಷ್ಠ ದಿನವೆಂದು ಹೇಳಲಾಗುತ್ತೆ. ಗುರುವಾರದಂದು ಭಗವಾನ್ ವಿಷ್ಣು(Lord Vishnu) ಮತ್ತು ಶ್ರೀ ಗುರು ರಾಘವೇಂದ್ರರನ್ನು(Sri Guru Raghavendra Swamiji) ಪೂಜಿಸಲಾಗುತ್ತೆ. ನಾವು ನಿಮಗೆ ಇವತ್ತು ಶ್ರೀ ಗುರು ರಾಘವೇಂದ್ರರನ್ನು ಗುರುವಾರದಂದು ಪೂಜಿಸುವುದೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತೇವೆ.

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ. ಇನ್ನು ಗುರುವಾರದ ಶುಭ ದಿನದಂದು ಗುರುರಾಯರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಗುರುವಾರ ಗುರುರಾಯರನ್ನು ಪೂಜಿಸುವುದು ಹೇಗೆ? ಮೊದಲಿಗೆ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಬೇಕು. ಬಳಿಕ ರಂಗೋಲಿಯ ಮೇಲೆ ಮಣೆಯನ್ನು ಅಥವಾ ಟೇಬಲ್ ಇಟ್ಟು ಅದರ ಮೇಲೆ ರಾಘವೇಂದ್ರ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನಿಡಬೇಕು. ನಂತರ ಗುರುರಾಯರ ವಿಗ್ರಹವನ್ನು ಸ್ವಚ್ಛಗೊಳಿಸಿ ಶ್ರೀಗಂಧ ಮತ್ತು ಕುಂಕುಮವನ್ನು ಇಡಬೇಕು.

ರಾಯರ ವಿಗ್ರಹಕ್ಕೆ ತುಳಸಿ, ಹೂವಿನ ಹಾರವನ್ನು ಹಾಕಬೇಕು. ರಾಯರ ಪೂಜೆಯಲ್ಲಿ ತುಳಸಿ ಬಳಸುವುದು ಶ್ರೇಷ್ಠ ಎನ್ನಲಾಗುತ್ತೆ. ರಾಯರ ಪೂಜೆಗೆ ಹಣ್ಣುಗಳು, ತೆಂಗಿನಕಾಯಿ, ವೀಳ್ಯದೆಲೆ ಅರ್ಪಿಸಬೇಕು. ರಾಯರನ್ನು ಪೂಜಿಸುವ ಮೊದಲು ಗಣೇಶನನ್ನು ಪೂಜಿಸಬೇಕು. ಬಳಿಕ ರಾಯರಿಗೆ ಧೂಪ-ದೀಪ ಬೆಳಗಿ ನೈವೇದ್ಯವಿಟ್ಟು 11 ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುತ್ತ ಈ ಮಂತ್ರವನ್ನು ಜಪಿಸಬೇಕು. “ಪೂಜ್ಯಾಯಾ ಶ್ರೀ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಯಾ ನಮತಾಂ ಶ್ರೀ ಕಾಮಧೇನುವೇ”

ಇದನ್ನೂ ಓದಿ: Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ

ತಾಜಾ ಸುದ್ದಿ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ