AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ…!!

ಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು "ಭಗ" ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಪ್ರಿಯವಾದ ಮಾತುಗಾರರು, ಕೊಡುಗೈ ದಾನಿಗಳು, ಹೆಚ್ಚಿನ ಕಾಂತಿಯುಳ್ಳವರು ಮತ್ತು ಸಾಹಸಿಗಳಾಗಿರುತ್ತಾರೆ. ಆದರೆ ಕೆಲವೊಮ್ಮೆ ಕ್ರೂರ ಸ್ವಭಾವ ಮತ್ತು ಅತಿಯಾದ ಆಸೆಗಳಿಂದ ಬಳಲಬಹುದು. ಫಾಲ್ಗುಣ ಮಾಸ ಈ ನಕ್ಷತ್ರದಿಂದ ಪ್ರಾರಂಭವಾಗುತ್ತದೆ ಎಂಬುದು ವಿಶೇಷ.

ಈ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ...!!
Hubba Nakshatra
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jan 08, 2025 | 9:37 AM

Share

ಇಪ್ಪತ್ತೇಳು ನಕ್ಷತ್ರಗಳಲ್ಲಿ ಇದು ಹನ್ನೊಂದನೇ ನಕ್ಷತ್ರ. ಇದರ ದೇವತೆ ಭಗ. ಅಚ್ಚ ಕನ್ನಡದಲ್ಲಿ ಇದಕ್ಕೆ ಹುಬ್ಬ ಎಂದೂ ಕರೆಯುತ್ತಾರೆ. ಇದು ಉಗ್ರ ಸ್ವಭಾವದ ನಕ್ಷತ್ರ ಎಂಬುದಾಗಿ ಹೇಳುತ್ತಾರೆ. ಎರಡು ನಕ್ಷತ್ರಗಳಿಂದ ಕೂಡಿರುವ ಇದು ಭೂಮಿಯಿಂದ ನೋಡುವಾಗ ಮಲಗುವ ಮಂಚದಂತೆ ಕಾಣಿಸುತ್ತದೆ. ಫಾಲ್ಗುಣ ಮಾಸವಾಗುವುದು ಇದೇ ನಕ್ಷತ್ರದ ಕಾರಣಕ್ಕೆ. ಸಿಂಹ ರಾಶಿಯಲ್ಲಿ ಬರುವ ಮತ್ತೊಂದು ಪೂರ್ಣ ನಕ್ಷತ್ರವಿದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಮ ಮತ್ತು ಟ ಅಕ್ಷರದಿಂದ ನಕ್ಷತ್ರನಾಮವನ್ನು ಇಡುತ್ತಾರೆ. ಇದರಲ್ಲಿ ಜನಿಸದವರು ಎಂತಹವರಾಗಿರುತ್ತಾರೆ?

ಪ್ರಿಯವಾದ ಮಾತುಗಾರ:

ಇವರು ಇನ್ನೊಬ್ಬರಿಗೆ ಪ್ರಿಯವಾಗುವಂತೆ ಮಾತನಾಡುತ್ತಾರೆ. ಸ್ಪಷ್ಟವಾಗಿ ದನಿಯ ಏರಿಳಿತದ ಜೊತೆ ಮಾತನಾಡುವುದರಿಂದ ಮನೋಹವಾಗಿ ಇರುತ್ತದೆ.

ಕೊಡುಗೈ ದಾನಿ:

ತನ್ನ ಬಳಿ ಇರುವ ವಸ್ತು ಅಥವಾ ಸಂಪತ್ತನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವ ಮನಸ್ಸು ಇರುವವನು. ದಾನಶೀಲವು ಇವರಲ್ಲಿ ಅಧಿಕವಾಗಿ ಕಾಣಿಸುವುದು.

ಮೈಕಾಂತಿ ಹೆಚ್ಚು:

ಇವರ ಚರ್ಮದ ಕಾಂತಿ ಆಕರ್ಷಕವಾಗಿ ಇರುತ್ತದೆ. ಹೊಳಪಿನ ಶರೀರ ಇವರದ್ದು. ತೇಜಸ್ಸು ಉಳ್ಳವರಂತೆ ಕಾಣಿಸುವರು.

ತಿರುಗಾಟ ಅಧಿಕ:

ಕುಳಿತಲ್ಲಿ ಕುಳಿತುಕೊಳ್ಳುವ ಸ್ವಭಾವ ಇರದು. ‌ಕ್ರಿಯಾಶೀಲರಾಗಿ ಓಡಾಟ ಮಾಡುತ್ತಲೇ ಇರಬೇಕು. ಕೆಲಸವಿಲ್ಲದಿದ್ದರೂ ಓಡಾಟ ಮಾಡಲಿಕ್ಕಾಗಿಯಾದರೂ ಕೆಲಸವನ್ನು ಹುಡುಕುವರು.

ರಾಜಸೇವಕ:

ರಾಜನ ಅಥವಾ ರಾಜನಿಗೆ ಸಮಾನರಾದವರ ಬಳಿ ಯಾವುದಾದರೂ ಒಂದು ಸೇವಾವೃತ್ತಿಯನ್ನು ಮಾಡುವರು. ಅದರಲ್ಲಿ ರಕ್ತಿ ಅಧಿಕ.

ಶೂರ:

ಪರಾಕ್ರಮವನ್ನು ತೋರಿಸಲು ಹಿಂಜರಿಯುವುದಿಲ್ಲ. ಸಿಂಹದಂತಹ ಶೌರ್ಯ ಇವರಲ್ಲಿ.‌ ಯಾವುದನ್ನೂ ಮಾಡಬಲ್ಲ ಸಾಮರ್ಥ್ಯ ಇವರಲ್ಲಿರುವುದು.

ಸಾಹಸ ವೃತ್ತಿ:

ವೇಗವಾಗಿ ಕೆಲಸವನ್ನು ಮಾಡುತ್ತಾರೆ ಮತ್ತು ಪೂರ್ವಾಪರ ಯೋಚನೆ ಕಡಿಮೆ. ಏನನ್ನಾದರೂ ಮಾಡಬೇಕು ಎಂದುಕೊಂಡರೆ ಮಾಡಿ ಮುಗಿಸುವುದು. ಅನಂತರ ಬಂದಿದ್ದನ್ನು ಎದುರಿಸುವ ಮನೋಭಾವ.

ಹೆಚ್ಚು ಸಂಗಾತಿ:

ಜೀವನದಲ್ಲಿ ಹೆಚ್ಚು ಸಂಗಾತಿಗಳು ಬರಬಹುದು. ಪತ್ನಿಯನ್ನೋ ಪತಿಯನ್ನೋ ಕಲಹಗಳಿಂದ ಪ್ರೀತಿಯಿಂದ ಮರಣದಿಂದ ಹೀಗೆ ನಾನಾಪ್ರಕಾರಗಳಿಂದ ಒಂದಕ್ಕಿಂತ ಹೆಚ್ಚು ಪಡೆಯುವರು.

ಆಸೆ ಅಧಿಕ:

ಅಸೆ ಅತಿಯಾಗಿರುವ ನಕ್ಷತ್ರ ಇದು. ಕಾಮವನ್ನು ಪೂರೈಸಿಕೊಳ್ಳದೇ ದುಃಖಿಸುವ ಸಂದರ್ಭವೂ ಬರಲಿದೆ. ಅತಿ ಆಸೆ ಅತಿ ದುಃಖವನ್ನು ತರುವುದು. ಶುಕ್ರನು ಈ ನಕ್ಷತ್ರದ ಗ್ರಹವಾದ ಕಾರಣ ಭೋಗದಲ್ಲಿ ರಕ್ತಿ ಹೆಚ್ಚು.

ಇದನ್ನೂ ಓದಿ: Vaikuntha Ekadashi 2025: ವೈಕುಂಠ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ

ಸ್ವಭಾವ ಕ್ರೂರ:

ವಾಸ್ತವಿಕವಾಗಿ ಇವರು ಕ್ರೂರಸ್ವಭಾವ ಉಳ್ಳವರು. ಸಿಟ್ಟು, ಇನ್ನೊಬ್ಬರ ಸಂತೋಷವನ್ನು ಹಾಳು ಮಾಡುವರು, ಅಸಹನೆ, ಅಸೂಯೆ ಇವುಗಳು ಹೆಚ್ಚಾಗಿ ಇರುತ್ತದೆ. ಅತಿಯಾದ ಹಾಗೂ ಅನವಶ್ಯಕವಾದ ಅಸೆ. ಅಹಂಕಾರಗಳಿಂದ ಕೂಡಿದವರು ಇವರು. ಏಕೆಂದರೆ ಇದು ಉಗ್ರ ನಕ್ಷತ್ರ. ಆದ್ದರಿಂದ ಇವರ ಸ್ವಭಾವವೂ ಉಗ್ರವೇ.

ವಿಲಾಸಿ ಜೀವನಕ್ಕೆ ಬೇಕಾದ ಕಾರ್ಯಗಳನ್ನು ಈ ನಕ್ಷತ್ರದಲ್ಲಿ ಆರಂಭಿಸಿದರೆ ಶುಭ. ಆದಾಯಗಳು ಹೆಚ್ಚು ಬರುತ್ತವೆ. ಆರ್ಥಿಕತೆಯ ಎತ್ತರಕ್ಕೆ ಏರಲು ಸಾಧ್ಯವಾಗುವುದು. ಇಂತಹ ವಿಶೇಷತೆಯುಳ್ಳ ಅಪರೂಪದ ನಕ್ಷತ್ರ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:32 am, Wed, 8 January 25

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ