AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradosh Vrat2023: ಪ್ರತಿ ತಿಂಗಳು ಆಚರಿಸಲಾಗುವ ಪ್ರದೋಷ ವ್ರತದ ಮಹತ್ವ, ಪೂಜಾ ವಿಧಿವಿಧಾನ ಹೇಗೆ?

ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ವಿಶೇಷ ಮಹತ್ವವಿದೆ. ಈ ಮಂಗಳಕರ ದಿನದಂದು ಭಕ್ತರು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಪ್ರತಿ ತಿಂಗಳು ಆಚರಿಸುವ ಈ ಪವಿತ್ರ ವ್ರತದ ಮಹತ್ವ ಮತ್ತು ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿಯೋಣ.

Pradosh Vrat2023: ಪ್ರತಿ ತಿಂಗಳು ಆಚರಿಸಲಾಗುವ ಪ್ರದೋಷ ವ್ರತದ ಮಹತ್ವ, ಪೂಜಾ ವಿಧಿವಿಧಾನ ಹೇಗೆ?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Jun 14, 2023 | 6:44 AM

Share

ಪ್ರದೋಷ ವ್ರತವು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ್ದಾಗಿದೆ ಪಂಚಾಗದ ಪ್ರಕಾರ, ವರ್ಷದಲ್ಲಿ ಒಟ್ಟು 24 ಪ್ರದೋಷ ವ್ರತಾಚರಣೆಗಳಿವೆ. ಪ್ರದೋಷ ವ್ರತವು ಪ್ರತಿ ತಿಂಗಳು ಎರಡು ಬಾರಿ ಬರುತ್ತದೆ. ಅದು ತ್ರಯೋದಶಿ ತಿಥಿ, ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ. ಈ ಪವಿತ್ರ ದಿನದಂದು ಭಕ್ತರು ಉಪವಾಸ ವ್ರತವನ್ನು ಆಚರಿಸಿ ಶಿವ ಮತ್ತು ಪಾರ್ವತಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಸಾಹಿತ್ಯಿಕ ಅರ್ಥದಲ್ಲಿ ಪ್ರದೋಷವು ಸೂರ್ಯಾಸ್ತಕ್ಕೆ ಸಂಬಂಧಿಸಿದ ಸಮಯವಾಗಿದೆ. ಸೋಮವಾರದಂದು ಬರುವ ಪ್ರದೋಷ ವ್ರತವನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಮಂಗಳವಾರ ಆಚರಿಸುವ ಉಪವಾಸವನ್ನು ಭೌಮ ಪ್ರದೋಷ ವ್ರತ, ಗುರುವಾರ ಆಚರಿಸುವ ವ್ರತವನ್ನು ಗುರು ಪ್ರದೋಷ ವ್ರತ ಹಾಗೂ ಶುಕ್ರವಾರ ಆಚರಿಸುವ ಪ್ರದೋಷ ವ್ರತವನ್ನು ಶುಕ್ರ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪ್ರದೋಷ ವ್ರತವನ್ನು ಚಂದ್ರನ ಹದಿಮೂರನೆಯ ದಿನದಂದು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎರಡರಲ್ಲೂ ಆಚರಿಸಲಾಗುತ್ತದೆ. ಈ ತಿಂಗಳ ಎರಡನೇ ಪ್ರದೋಶ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಈ ಪ್ರದೋಷ ವ್ರತವನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಈ ಗುರು ಪ್ರದೋಷ ವ್ರತವನ್ನು ಆಚರಿಸುವ ಮೂಲಕ ಭಕ್ತರು ತಮಗೆ ಬರುವ ಆಪತ್ತುಗಳನ್ನು ಪರಿಹರಿಸಿಕೊಳ್ಳಬಹುದು. ಇದಲ್ಲದೆ ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸಿದರೆ ಪಾಪಗಳು ನಿವಾರಣೆಯಾಗಿ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಪ್ರದೋಷ ವ್ರತದ ಮಹತ್ವ:

ಪ್ರದೋಷ ವ್ರತದ ಮಹತ್ವವನ್ನು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಪೂಜ್ಯ ಉಪವಾಸವನ್ನು ಭಕ್ತಿ ಮತ್ತು ನಂಬಿಕೆಯಿಂದ ಆಚರಿಸುವವನು ಸಂತೃಪ್ತಿ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ. ಈ ಪುಣ್ಯದಿನದಂದು ಒಲಿಯುವ ದೇವರ ಕೃಪೆ ನಮ್ಮ ಎಲ್ಲಾ ಪಾಪಗಳನ್ನು ಕೊನೆಗೊಳಿಸುತ್ತದೆ ಹಾಗೂ ನಮಗೆ ಸಮೃದ್ಧಿ, ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.

ಮೋಕ್ಷ ಮತ್ತು ಯಶಸ್ಸನ್ನು ಪಡೆಯಲು ಪ್ರದೋಷ ವ್ರತವನ್ನು ಆಚರಿಸಲಾಗಿತ್ತದೆ. ಈ ಸಮಯದಲ್ಲಿ ಶಿವನು ಅತ್ಯಂತ ಉದಾರನಾಗಿರುತ್ತಾನೆ ಮತ್ತು ತನ್ನ ಭಕ್ತರಿಗೆ ಸಮೃದ್ಧಿ ಮತ್ತು ಸಂತೋಷವನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗುತ್ತದೆ. ಪ್ರದೋಷ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರೆ, ದೇವರು ನಿಮ್ಮೆಲ್ಲಾ ಆಸೆಗಳು ಮತ್ತು ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಸ್ತ್ರೀ ಪುರುಷರು ಸಮಾನರೇ? ಇವರ ಸಮಾನತೆ ಬಗ್ಗೆ ಶಾಸ್ತ್ರ ಪುರಾಣಗಳು ಏನು ಹೇಳುತ್ತವೆ?

ಪ್ರದೋಷ ವ್ರತದಲ್ಲಿ ಹೇಗೆ ಪೂಜೆ ಮಾಡಬೇಕು:

ಪ್ರದೋಷ ವ್ರತದ ದಿನ ಸಾಯಂಕಾಲ ಶಿವಪೂಜೆ ಮಾಡಿದರೂ ಬೆಳಗ್ಗೆಯಿಂದಲೇ ಉಪವಾಸವನ್ನು ಆಚರಿಸಬೇಕು. ಮುಂಜಾನೆಯೇ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಇದಾದ ನಂತರ ಭಕ್ತರು ಉಪವಾಸ ಪ್ರತಿಜ್ಞೆ ಮಾಡಬೇಕು. ಸಂಜೆ ಪ್ರದೋಷಕಾಲದಲ್ಲಿ ಶಿವನನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾಗಿ ಸಂಜೆ ಶಿವ ದೇವಾಲಯಕ್ಕೆ ಭೇಟಿ ನೀಡಿ ಶಿವನಿಗೆ ಅಭಿಷೇಕ ಮಾಡುವುದು ಪ್ರದೋಷ ವ್ರತದ ಒಂದು ಭಾಗವಾಗಿದೆ.

ಪ್ರದೋಷವು ಪಾಪಗಳ ಶುದ್ಧೀಕರಣವನ್ನು ಸೂಚಿಸುತ್ತದೆ. ಹಾಗಾಗಿ ಈ ವ್ರತವನ್ನು ಆಚರಿಸುವ ಮೂಲಕ ನಮ್ಮ ಆತ್ಮದ ಶುದ್ಧೀಕರಣವನ್ನು ಮಾಡುವ ಮೂಲಕ ನಕರಾತ್ಮಕ ಕರ್ಮವನ್ನು ತೆಗೆದು ಹಾಕಬಹುದು. ಇದನ್ನು ರುದ್ರಾಭಿಷೇಕದೊಂದಿಗೆ ಸಾಂಕೇತಿಕ ರೀತಿಯಲ್ಲಿ ಮಾಡಲಾಗುತ್ತದೆ.

ಈ ಬಾರಿಯ ಪ್ರದೋಷ ವ್ರತದ ಶುಭ ಮುಹೂರ್ತ:

ಪಂಚಾಂಗದ ಪ್ರಕಾರ ಜೂನ್ ತಿಂಗಳ ಎರಡನೇ ಪ್ರದೋಷ ವ್ರತವನ್ನು ಜೂನ್ 15 ರಂದು ಆಚರಿಸಲಾಗುತ್ತದೆ. ಈ ಪ್ರದೋಷ ವ್ರತದಲ್ಲಿ ಸಂಜೆ 7.20 ರಿಂದ ರಾತ್ರಿ 9.21 ರವರೆಗೆ ಪೂಜೆಯ ಶುಭ ಮುಹೂರ್ತ ನಡೆಯಲಿದೆ. ಈ ಶುಭ ಸಮಯದಲ್ಲಿ ಶಿವನಿಗೆ ಪೂಜೆ ಸಲ್ಲಿಸಬಹುದು.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?