AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Festivals in July 2023: ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು, ವ್ರತಗಳು

ಹಿಂದೂ ಧರ್ಮದಲ್ಲಿ ಜುಲೈ ತಿಂಗಳು ಬಹಳ ವಿಶೇಷವಾಗಿದೆ ಏಕೆಂದರೆ ಈ ತಿಂಗಳಿನಲ್ಲಿ ಶ್ರಾವಣ ಮಾಸ ಆರಂಭವಾಗುವುದರಿಂದ ಹಲವು ಹಬ್ಬಗಳು ಮತ್ತು ವ್ರತಗಳನ್ನು ಆಚರಿಸಲಾಗುತ್ತದೆ. ವರ್ಷದ ಏಳನೇ ತಿಂಗಳಾಗಿರುವ ಈ ಜುಲೈನಲ್ಲಿ ಪ್ರಮುಖ ಹಬ್ಬಗಳು ಮತ್ತು ವ್ರತಗಳ ಮಾಹಿತಿ ಇಲ್ಲಿದೆ.

Festivals in July 2023: ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು, ವ್ರತಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 04, 2023 | 6:09 AM

Share

ಧಾರ್ಮಿಕ ದೃಷ್ಟಿಕೋನದಿಂದ ಜುಲೈ ತಿಂಗಳನ್ನು ವಿಶೇಷವಾಗಿ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ತಿಂಗಳಿನಲ್ಲಿ ಪ್ರಮುಖ ಪೂರ್ಣಿಮೆಗಳು, ಏಕಾದಶಿ ಮತ್ತು ಅಮವಾಸ್ಯೆಯ ದಿನವನ್ನು ಆಚರಿಸಲಾಗುತ್ತದೆ. ಅಲ್ಲದೆ ಜುಲೈ ತಿಂಗಳು ಆಷಾಢ ಮಾಸ ಕೊನೆಗೊಂಡು ಶ್ರಾವಣ ಮಾಸದ ಆರಂಭವನ್ನು ಸೂಚಿಸುತ್ತದೆ. ಶ್ರಾವಣ ಮಾಸ ಶಿವ ದೇವರ ನೆಚ್ಚಿನ ಮಾಸವಾಗಿರುದರಿಂದ ಅನೇಕ ಭಕ್ತರು ಈ ತಿಂಗಳಲ್ಲಿ ಶಿವ ದೇವರ ಪೂಜೆಯಲ್ಲಿ ತೊಡಗುತ್ತಾರೆ. ಜುಲೈ ತಿಂಗಳಿನಲ್ಲಿ ಶಿವನಿಗೆ ಸಮರ್ಪಿತವಾದ ಉಪವಾಸಗಳು ಮತ್ತು ಹಬ್ಬಗಳು ಹೆಚ್ಚು ನಡೆಯುತ್ತವೆ. ನಂಬಿಕಗಳ ಪ್ರಕಾರ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಹಾಗೂ ಈ ಮಾಸದಲ್ಲಿ ಬರುವ ಪ್ರತಿ ಸೋಮವಾರದಂದು ಉಪವಾಸ ವ್ರತ ಆಚರಿಸುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಶ್ರಾವಣ ಮಾಸ ವಿಶೇಷ:

ಈ ಬಾರಿ ಶ್ರಾವಣ ಮಾಸವು ಬಹಳ ವಿಶೇಷವಾಗಿರಲಿದೆ. ಏಕೆಂದರೆ ಅಧಿಕ ಮಾಸದ ಕಾರಣದಿಂದಾಗಿ, ಈ ಬಾರಿಯ ಶ್ರಾವಣ ಮಾಸವು ಜುಲೈ 4ರಂದು ಆರಂಭವಾಗಿ ಆಗಸ್ಟ್ 31ರಂದು ಕೊನೆಗೊಳ್ಳುತ್ತದೆ. ಹಾಗಾಗಿ ಶಿವಭಕ್ತರು ಎರಡು ತಿಂಗಳುಗಳ ಕಾಲ ಶಿವ ಪೂಜೆಯಲ್ಲಿ ತೊಡಗಬಹುದು. ಅಲ್ಲದೆ ಈ ಬಾರಿಯ ಶ್ರಾವಣದಲ್ಲಿ 8 ಶ್ರಾವಣ ಸೋಮವಾರ ಉಪವಾಸಗಳನ್ನು ಆಚರಿಸಲಾಗುತ್ತದೆ. ಅಲ್ಲದೆ ಶ್ರಾವಣ ಮಾಸದ ಈ ಜುಲೈ ತಿಂಗಳಲ್ಲಿ ಹಲವು ಹಬ್ಬಗಳು ಹಾಗೂ ವ್ರತಗಳು ನಡೆಯಲಿವೆ.

ಇದನ್ನೂ ಓದಿ:Event Calendar July 2023: ಜುಲೈ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಮುಖ ದಿನಗಳ ಯಾವುವು? ಇಲ್ಲಿದೆ ಮಾಹಿತಿ

ಜುಲೈ ತಿಂಗಳಲ್ಲಿನ ಆಚರಿಸಲಾಗುವ ಪ್ರಮುಖ ಹಬ್ಬಗಳು ಮತ್ತು ವ್ರತಗಳ ಪಟ್ಟಿ:

ಜುಲೈ 3, ಸೋಮವಾರ: ಗುರು ಪೂರ್ಣಿಮಾ, ಆಷಾಢ ಪೂರ್ಣಿಮಾ ವ್ರತ

ಜುಲೈ 4 ಮಂಗಳವಾರ: ಶ್ರಾವಣ ಮಾಸದ ಆರಂಭ ಹಾಗೂ ಮೊದಲ ಮಂಗಳಗೌರಿ ವ್ರತ

ಜುಲೈ 6 ಗುರುವಾರ: ಜಯಪಾರ್ವತಿ ವ್ರತ, ಸಂಕಷ್ಟ ಚತುರ್ಥಿ

ಜುಲೈ 9, ಭಾನುವಾರ: ಭಾನು ಸಪ್ತಮಿ, ಕಲಾಷ್ಟಮಿ,

ಜುಲೈ 10 ಸೋಮವಾರ: ಮೊದಲ ಶ್ರಾವಣ ಸೋಮವಾರ ವ್ರತ

ಜುಲೈ 11 ಮಂಗಳವಾರ : ಶ್ರಾವಣ ಮಾಸದ ಎರಡನೇ ಮಂಗಳಗೌರಿ ವ್ರತ

ಜುಲೈ 13 ಗುರುವಾರ: ಕಾಮಿಕಾ ಏಕಾದಶಿ

ಜುಲೈ 14 ಶುಕ್ರವಾರ: ಪ್ರದೋಷ ವ್ರತ

ಜುಲೈ 15 ಶನಿವಾರ: ಶ್ರಾವಣ ಶಿವರಾತ್ರಿ, ಶನಿ ಪ್ರದೋಷ

ಜುಲೈ 16 ಭಾನುವಾರ: ಕರ್ಕ ಸಂಕ್ರಮಣ

ಜುಲೈ 17 ಸೋಮವಾರ: ಶ್ರಾವಣ ಅಮವಾಸ್ಯೆ, ಸೋಮವತಿ ಅಮವಾಸ್ಯೆ

ಜುಲೈ 18 ಮಂಗಳವಾರ: ಮೂರನೇ ಮಂಗಳಗೌರಿ ವ್ರತ, ಅಧಿಕ ಮಾಸ ಪ್ರಾರಂಭ

ಜುಲೈ 23 ಭಾನುವಾರ: ಸ್ಕಂದ ಷಷ್ಠಿ

ಜುಲೈ 24 ಸೋಮವಾರ: ಎರಡನೇ ಶ್ರಾವಣ ಸೋಮವಾರ

ಜುಲೈ 29 ಶನಿವಾರ: ಪದ್ಮಿನಿ ಏಕಾದಶಿ, ಮೊಹರಂ ಆಚರಣೆ

ಜುಲೈ 30 ಭಾನುವಾರ: ರವಿ ಪ್ರದೋಷ ವ್ರತ

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ