janmashtami 2021: ಕೃಷ್ಣ ಜನ್ಮಾಷ್ಟಮಿ – ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?

ಜಗತ್​​ ಸೂತ್ರಧಾರಿ ಶ್ರೀ ಕೃಷ್ಣನ ಯಾವುದೇ ಲೀಲೆಯ ಹಿಂದೆ ಒಂದು ಸ್ಪಷ್ಟ, ನಿರ್ದಿಷ್ಟ ಉದ್ದೇಶ ಇರುತ್ತದೆ. ಹಾಗಾಗಿ ಪ್ರತಿಯೊಂದನ್ನೂ ಅರಿಯುವ ಪ್ರಯತ್ನ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಮತ್ತು ಅದರ ಹಿಂದಿನ ಮಹತ್ವವವನ್ನು ತಿಳಿದುಕೊಳ್ಳೋಣ ಬನ್ನೀ.

janmashtami 2021: ಕೃಷ್ಣ ಜನ್ಮಾಷ್ಟಮಿ - ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?
ಕೃಷ್ಣ ಜನ್ಮಾಷ್ಟಮಿ - ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?
Follow us
| Updated By: ಸಾಧು ಶ್ರೀನಾಥ್​

Updated on: Aug 28, 2021 | 7:35 AM

ಆಗಸ್ಟ್​ 30 ರಂದು ಸೋಮವಾರ ಕೃಷ್ಣ ಜನ್ಮಾಷ್ಟಮಿ. ಕೃಷ್ಣ ಪರಮಾತ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಬೇಕು ಅಂದರೆ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪೂಜೆ ಪುನಸ್ಕಾರ ಮಾಡಿ. ಜಗನ್ನಾಟಕಧಾರಿಯ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳೀ. ಶ್ರೀ ಕೃಷ್ಣನಿಗೆ ಕೊಳಲು (Flute) ಮತ್ತು ನವಿಲುಗರಿ (Peacock feather) ಅಂದರೆ ಇಷ್ಟ, ಯಾಕೆ ಎಂಬುದನ್ನು ತಿಳಿದುಕೊಳ್ಳೋಣ.

ಜಗತ್​​ ಸೂತ್ರಧಾರಿ ಶ್ರೀ ಕೃಷ್ಣನ ಯಾವುದೇ ಲೀಲೆಯ ಹಿಂದೆ ಒಂದು ಸ್ಪಷ್ಟ, ನಿರ್ದಿಷ್ಟ ಉದ್ದೇಶ ಇರುತ್ತದೆ. ಹಾಗಾಗಿ ಪ್ರತಿಯೊಂದನ್ನೂ ಅರಿಯುವ ಪ್ರಯತ್ನ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಮತ್ತು ಅದರ ಹಿಂದಿನ ಮಹತ್ವವವನ್ನು ತಿಳಿದುಕೊಳ್ಳೋಣ ಬನ್ನೀ.

ಈ ವರ್ಷದ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ. ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಮುಂದಿನ ಸೋಮವಾರವೇ ಕೃಷ್ಣ ಜನ್ಮೋತ್ಸವ. ದೇವಕಿ ಮತ್ತು ಯಶೋದಾ ಮಮತಾ ಮಾತೆಯರ ಸುಪುತ್ರ, ರಾಧಾರಾಣಿಯ ಪ್ರಿಯತಮ ಭಗವಂತ ಶ್ರೀಕೃಷ್ಣ.

ಪೌರಾಣಿಕವಾಗಿ ಶಾಸ್ತಗಳಲ್ಲಿ ಶ್ರೀಕೃಷ್ಣನ ರೂಪ ಅತ್ಯಂತ ಸುಂದರ ಎಂದು ವರ್ಣಿಸಲಾಗಿದೆ. ಮುದ್ದು ಕೃಷ್ಣನ ಕೈಯಲ್ಲಿ ಕೊಳಲು ಮತ್ತು ಮುಕುಟದಲ್ಲಿ ಕೊಳಲು ಧರಿಸಿರುವುದು ಆತನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಆತನ ಬಳಿ ಇರುವ ಗೋವು ಇನ್ನೂ ಆಕರ್ಷಕವಾಗಿರುತ್ತದೆ.

ಕೊಳಲು (Flute):

ಶ್ರೀಕೃಷ್ಣನಿಗೆ ಕೊಳಲು ಅತ್ಯಂತ ಪ್ರೀತಿಪಾತ್ರವಾದುದು. ಶ್ರೀಕೃಷ್ಣ ಪ್ರೇಮಪೂರ್ವಕವಾಗಿ, ತಲ್ಲೀನನಾಗಿ ಮಧುರವಾಗಿ ಕೊಳಲು ಬಾರಿಸತೊಡಗಿದರೆ ಜನ ತಮ್ಮನ್ನು ತಾವೇ ಮರೆತು ಆಲಿಸುತ್ತಿದ್ದರು. ಆದರೆ ವಾಸ್ತವದಲ್ಲಿ ಶ್ರೀಕೃಷ್ಣ ಕೊಳಲು ನುಡಿಸುವುದಕ್ಕೆ ಬೇರೆಯದ್ದೇ ಉದ್ದೇಶ, ಕಾರಣವಿದೆ. ಹೇಳಬೇಕು ಅಂದರೆ ಕೊಳಲು ಖುಷಿ ಮತ್ತು ಆನಂದದ ಪ್ರತೀಕವಾಗಿದೆ. ಅಂದರೆ ಯಾವುದೇ ಸಂಕಷ್ಟದ ಕಾಲದಲ್ಲೂ ಕೊಳಲು ಕೇಳತೊಡಗಿದರೆ ನಾವೂ ಖುಷಿಯಾಗಿ ಇರಬಹುದು. ಮತ್ತು ಬೇರೆಯವರನ್ನೂ ಆನಂದ, ಉಲ್ಲಸಿತ ರಾಗಿಟ್ಟಿರಬಹುದು. ಇದೇ ಶ್ರೀಕೃಷ್ಣನ ಕೊಳಲಿನ ತತ್ತ್ವ. ಕೊಳಲು ನುಡಿಸುತ್ತಾ ಸ್ವತಃ ಆತನೂ ಆನಂದಮಯವಾಗಿರುತ್ತಾನೆ, ಅದನ್ನು ಕೇಳುವವರನ್ನೂ ಸಂತೋಷದಿಂದ ಇಟ್ಟಿರುತ್ತಾನೆ.

ಇದನ್ನು ಬಿಟ್ಟು ಕೊಳಲಿನ ಇನ್ನೂ ಮೂರು ಗುಣಗಳಿವೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕೊಳಲಿನ ನಿನಾದ ಅಂದರೆ ಅದು ನಾವಾಡುವ ಮಾತಿನಂತೆ. ಕೊಳಲಿನಲ್ಲಿ ಗಂಟು (Knot) ಇರುವುದಿಲ್ಲ. ಅಂದರೆ ಇದನ್ನು ಕೇಳುತಿರುವಾಗ ಮನಸಿನಲ್ಲಿಯೂ ಯಾವುದೇ ಗಂಟು ಅಂದರೆ ಅಡ್ಡ/ ಬಾಧೆ ಮೂಡುವುದಿಲ್ಲ. ಅಂದರೆ ವೈರತ್ವ, ಜಿದ್ದು ಮೂಡುವ ಮನಸ್ಥಿತಿ ಉಂಟಾಗುವುದಿಲ್ಲ.

ಎರಡನೆಯದು, ಕೊಳಲನ್ನು ನೀವು ಬಾರಿಸಿದಾಗಲಷ್ಟೇ ಅದರಿಂದ ನಾದ ಹೊರಹೊಮ್ಮವುದು. ಇದರರ್ಥ ನಿಮ್ಮನ್ನು ಸಲಹೆ ಕೇಳಿದಾಗಲಷ್ಟೇ ಉದಾತ್ತ ಸಲಹೆ ನೀಡಬೇಕು. ಸುಖಾಸುಮ್ಮನೆ ಉಚಿತ ಸಲಹೆ ನೀಡಿ, ನಿಮ್ಮ ಶ್ರಮ ವ್ಯರ್ಥ ಮಾಡಿಕೊಳ್ಳಬೇಡಿ. 3 ನೆಯದು, ಕೊಳಲು ಯಾವಾಗಲೇ ನುಡಿಸಿದರೂ ಅದು ಸುಶ್ರಾವ್ಯವಾಗಿಯೇ ಇರುತ್ತೆ. ಇದರ ನೇರ ಅರ್ಥವೆಂದರೆ ನಾವು ಆಡುವ ಮಾತು ಸಿಹಿಯಾಗಿರಬೇಕು. ಜನ ಮನಮೋಹಕಗೊಳ್ಳಬೇಕು ಹಾಗಿರಬೇಕು ನಾವು ಆಡುವ ಮಾತು. ಅದಕ್ಕೆ ಕೊಳಲಿನ ನಿನಾದವನ್ನು ನಾವಾಡುವ ಮಾತಿಗೆ ಹೋಲಿಸಿರುವುದು.

ನವಿಲುಗರಿ (Peacock feather): ನವಿಲುಗರಿಯಲ್ಲಿ ನಾನಾ ಬಣ್ಣಗಳು ಇರುತ್ತವೆ. ಈ ಬಣ್ಣಗಳು ಜೀವನದ ಪರಿಸ್ಥಿತಿಯನ್ನು ವರ್ಣಿಸುತ್ತದೆ. ನವಿಲುಗರಿಯಲ್ಲಿ ಗಾಢ ಬಣ್ಣ ಜೀವನದಲ್ಲಿನ ಕಠಿಣ ಪರಿಸ್ಥಿತಿಗಳು ಮತ್ತು ದುಃಖಗಳನ್ನು ಸಾದರಪಡಿಸುತ್ತದೆ. ತಿಳಿ ಬಣ್ಣವು ತಿಳಿಯಾದ ಜೀವನದಂತೆ. ಸುಖ, ಶಾಂತಿ ನೆಮ್ಮದಿ, ಸಮೃದ್ಧಿಯ ಪ್ರತೀಕವಾಗಿರುತ್ತದೆ. ಅಂದರೆ ಜೀನವದಲ್ಲಿ ಮನುಷ್ಯ ಸುಖ ಮತ್ತು ದುಃಖ ಎರಡನ್ನೂ ಒಟ್ಟಿಗೇ ಕೊಂಡೊಯ್ಯಬೇಕಾಗುತ್ತದೆ. ಆದರೆ ಅವೆರಡೂ ಒಟ್ಟೊಟ್ಟಿಗೇ ಇರುತ್ತದೆ – ನವಿಲುಗರಿಯಲ್ಲಿ ಬಣ್ಣಗಳ ಹಾಗೆ. ಆದರೆ ಅವೆರಡೂ ಸ್ಥಿತಿಗಳನ್ನು ಸಮತೋಲನದಿಂದ ಸಂಭಾಳಿಸಿದಾಗ ಜೀವನದಲ್ಲಿ ಸಮಚಿತ್ತದಿಂದ, ಸಮಯ ಪ್ರಜ್ಞೆಯಿಂದ ಇರಬಹುದು. ಇದರ ಹೊರತಾಗಿ ನವಿಲು ಪರಿಶುದ್ಧ ಪ್ರೇಮದ ಸಂಕೇತ. ಹಾಗಾಗಿ ಶ್ರೀ ಕೃಷ್ಣನಿಗೆ ಇದು ಇಷ್ಟ.

ಇದನ್ನೂ ಓದಿ: ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​

(janmashtami 2021 why Flute and Peacock feather are favorite to lord krishna know the reason)

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು