
ಪ್ರತಿಯೊಂದು ಧರ್ಮದಲ್ಲೂ ಅಂತ್ಯಕ್ರಿಯೆ ಹಾಗೂ ಶೋಕಾಚರಣೆಯ ಸಂಪ್ರದಾಯಗಳು ತಮ್ಮದೇ ಆದ ವಿಶಿಷ್ಟತೆಗಳನ್ನು ಹೊಂದಿರುತ್ತವೆ. ಯಹೂದಿ (Judaism) ಧರ್ಮದಲ್ಲೂ ಸಹ ಮರಣದ ನಂತರ ಅನೇಕ ಆಚಾರ-ವಿಚಾರಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಪ್ರಮುಖವಾದುದು ಮನೆಯಲ್ಲಿರುವ ಎಲ್ಲಾ ಕನ್ನಡಿಗಳನ್ನು ಮುಚ್ಚಿಡುವುದು. ಯಹೂದಿಗಳ ಶೋಕಾಚರಣೆಯ ಈ ವಿಶೇಷ ಅವಧಿಯನ್ನು “ಶಿವ” (Shiva) ಎಂದು ಕರೆಯಲಾಗುತ್ತದೆ. ಯಹೂದಿ ಸಂಪ್ರದಾಯದಲ್ಲಿ ‘ಶಿವ’ ಎಂಬುದು ದೇವರ ಹೆಸರಲ್ಲ, ಅದೊಂದು ಏಳು ದಿನಗಳ ಶೋಕಾಚರಣೆಯ ವಿಧಿ. ಏಳು ದಿನಗಳ ಶೋಕಾಚರಣೆಯ ವಿಧಿ ಕನ್ನಡಿಗಳನ್ನು ಮುಚ್ಚುವ ಈ ಪದ್ಧತಿಯ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರಣಗಳಿದ್ದು, ಅದರ ಸಂಪೂರ್ಣ ರಹಸ್ಯ ಇಲ್ಲಿದೆ.
ಯಹೂದಿ ಧರ್ಮದಲ್ಲಿ ಅಂತ್ಯಕ್ರಿಯೆಯ ನಂತರದ ಏಳು ದಿನಗಳ ಕಾಲ ನಿಕಟ ಕುಟುಂಬಸ್ಥರು ತೀವ್ರ ಶೋಕಾಚರಣೆಯಲ್ಲಿ ತೊಡಗುತ್ತಾರೆ. ಈ ಏಳು ದಿನಗಳ ಅವಧಿಯನ್ನೇ ‘ಶಿವ’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದುಃಖಿತ ಕುಟುಂಬಕ್ಕೆ ಸಾಂತ್ವನ ನೀಡುವುದು ಮತ್ತು ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಈ ಏಳು ದಿನಗಳ ಕಾಲ ಮನೆಯಲ್ಲಿ ನಿರಂತರವಾಗಿ ಒಂದೇ ಮೇಣದಬತ್ತಿ ಉರಿಯುತ್ತಿರುತ್ತದೆ. ಶೋಕದಲ್ಲಿರುವ ಕುಟುಂಬ ಸದಸ್ಯರು ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ. ಅಲ್ಲದೆ, ಈ ಅವಧಿಯಲ್ಲಿ ಪುರುಷರು ಕ್ಷೌರ ಮಾಡಿಕೊಳ್ಳುವುದಿಲ್ಲ ಹಾಗೂ ಮಹಿಳೆಯರು ಮೇಕಪ್ ಮಾಡಿಕೊಳ್ಳುವುದು ಅಥವಾ ಕೂದಲನ್ನು ಅಲಂಕರಿಸಿಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತಾರೆ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ
‘ಶಿವ’ ಶೋಕಾಚರಣೆಯ ಸಮಯದಲ್ಲಿ ಮನೆಯಲ್ಲಿರುವ ಪ್ರತಿಯೊಂದು ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಇದರ ಹಿಂದೆ ಪ್ರಮುಖ ಸಾಮಾಜಿಕ ಮತ್ತು ಆಂತರಿಕ ಕಾರಣಗಳಿವೆ:
ಯಹೂದಿ ಸಂಪ್ರದಾಯದಲ್ಲಿ ಕನ್ನಡಿ ಮುಚ್ಚುವ ಪದ್ಧತಿಯ ಸುತ್ತ ಕೆಲವು ಜನಪ್ರಿಯ ಕಥೆಗಳೂ ಇವೆ. ಮರಣದ ನಂತರ ಕನ್ನಡಿಗಳನ್ನು ಮುಚ್ಚದಿದ್ದರೆ ಅಗಲಿದ ವ್ಯಕ್ತಿಯ ಆತ್ಮವು ಕನ್ನಡಿಯೊಳಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ ಧಾರ್ಮಿಕ ಪಂಡಿತರ ಪ್ರಕಾರ, ಇದು ಕೇವಲ ಜನಪದ ನಂಬಿಕೆಯಾಗಿದೆಯೇ ಹೊರತು ಯಹೂದಿ ಧರ್ಮಗ್ರಂಥಗಳ ಆಧಾರಿತ ಆಚರಣೆಯಲ್ಲ. ಮೂಲತಃ ಈ ಪದ್ಧತಿಯು ಶೋಕದಲ್ಲಿರುವ ಕುಟುಂಬಕ್ಕೆ ಆಂತರಿಕ ಶಾಂತಿ ಮತ್ತು ಸೌಮ್ಯತೆಯನ್ನು ನೀಡಲು ಆಚರಿಸಿಕೊಂಡು ಬರಲಾಗುತ್ತಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ