AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamada Ekadashi 2024: ಕಷ್ಟಗಳಿಂದ ಮುಕ್ತಿ ಪಡೆಯಲು ಕಾಮದ ಏಕಾದಶಿಯಂದು ವಿಷ್ಣುವನ್ನು ಈ ರೀತಿ ಪೂಜಿಸಿ

ಈ ಬಾರಿ ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನು ಎ.19 ರ ಶುಕ್ರವಾರ ಆಚರಿಸಲಾಗುತ್ತದೆ. ಕಾಮದ ಏಕಾದಶಿಯ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದಲ್ಲಿ ಜೀವನದಲ್ಲಿರುವ ಎಲ್ಲಾ ದುಃಖ ಮತ್ತು ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಸಂತೋಷ, ಶಾಂತಿ, ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.

Kamada Ekadashi 2024: ಕಷ್ಟಗಳಿಂದ ಮುಕ್ತಿ ಪಡೆಯಲು ಕಾಮದ ಏಕಾದಶಿಯಂದು ವಿಷ್ಣುವನ್ನು ಈ ರೀತಿ ಪೂಜಿಸಿ
ಕಾಮದ ಏಕಾದಶಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2024 | 9:27 AM

ಹಿಂದೂ ಧರ್ಮದಲ್ಲಿ, ಏಕಾದಶಿ (Ekadashi) ಪ್ರತಿ ತಿಂಗಳು 2 ಬಾರಿ ಮತ್ತು ವರ್ಷಕ್ಕೆ 24 ಬಾರಿ ಬರುತ್ತದೆ. ಇದರಲ್ಲಿ ಮೊದಲನೇಯದು ಕೃಷ್ಣ ಪಕ್ಷದ ಏಕಾದಶಿ ಎರಡನೇಯದು ಶುಕ್ಲ ಪಕ್ಷದ ಏಕಾದಶಿ.  m ಈ ದಿನದಂದು ವಿಶ್ವದ ಸೃಷ್ಟಿಕರ್ತ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಈ ಬಾರಿ ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ (Kamada Ekadashi) ಎಂದು ಕರೆಯಲಾಗುತ್ತದೆ. ಇದನ್ನು ಎ.19 ರ ಶುಕ್ರವಾರ ಆಚರಿಸಲಾಗುತ್ತದೆ. ಕಾಮದ ಏಕಾದಶಿಯ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದಲ್ಲಿ ಜೀವನದಲ್ಲಿರುವ ಎಲ್ಲಾ ದುಃಖ ಮತ್ತು ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಸಂತೋಷ, ಶಾಂತಿ, ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.

ಕಾಮದ ಏಕಾದಶಿಯ ಶುಭ ಸಮಯ;

ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯು ಎ. 18 ರಂದು ಸಂಜೆ 05:31 ಕ್ಕೆ ಪ್ರಾರಂಭವಾಗುತ್ತದೆ. ಎ. 19 ರಂದು ರಾತ್ರಿ 08:04 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿಯ ಪ್ರಕಾರ, ಈ ಏಕಾದಶಿ ಉಪವಾಸವನ್ನು ಎ.19 ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಹನುಮಂತನಿಲ್ಲದ ರಾಮ ದೇವಾಲಯ ಎಲ್ಲಿದೆ? ಏಕೆ ಗೊತ್ತಾ?

ಕಾಮದ ಏಕಾದಶಿ ಪೂಜಾ ವಿಧಾನ;

-ಈ ದಿನ, ಬ್ರಹ್ಮ ಮುಹೂರ್ತದಲ್ಲಿ ಬೆಳಿಗ್ಗೆ ಎದ್ದು ಸ್ನಾನ ಮಾಡಿ.

-ದೇವರ ಕೋಣೆಯಲ್ಲಿ ಶ್ರೀಹರಿ ಮತ್ತು ತಾಯಿ ಲಕ್ಷ್ಮೀಯ ವಿಗ್ರಹಗಳಿಗೆ ಅಲಂಕಾರ ಮಾಡಿ.

-ಇದಾದ ನಂತರ, ಅರಿಶಿನ, ಅಕ್ಷತೆ, ಹೂವು ಇತ್ಯಾದಿಗಳನ್ನು ದೇವರಿಗೆ ಅರ್ಪಿಸಿ ಬಳಿಕ ತುಪ್ಪದ ದೀಪ ಹಚ್ಚಿ, ಆರತಿ ಮಾಡಿ.

-ಏಕಾದಶಿ ದಿನ ವಿಷ್ಣು ಚಾಲೀಸಾ ಮತ್ತು ಮಂತ್ರಗಳನ್ನು ಪಠಿಸಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿಗಾಗಿ ವಿಷ್ಣುವನ್ನು ಪ್ರಾರ್ಥಿಸಿ.

-ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಪ್ರಸಾದವನ್ನು ಜನರಿಗೆ ವಿತರಿಸಿ.

-ಏಕಾದಶಿಯ ಕಥೆಯನ್ನು ಓದಿದ ನಂತರ ಆರತಿ ಮಾಡಿ.

-ಸಂಜೆ ತುಳಸಿ ಮಾತೆಯ ಮುಂದೆ ತುಪ್ಪದ ದೀಪವನ್ನು ಹಚ್ಚಿಡುವುದನ್ನು ಮರೆಯಬೇಡಿ.

-ಈ ರೀತಿಯಾಗಿ ಕಾಮದ ಏಕಾದಶಿ ಉಪವಾಸವನ್ನು ಆಚರಣೆ ಮಾಡುವುದರಿಂದ ಜೀವನದಲ್ಲಿನ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು