AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2025: ಮಕರ ಸಂಕ್ರಾಂತಿ; ಸೂರ್ಯ ಸಂಕ್ರಮಣ, ಆಚರಣೆ ಮತ್ತು ಮಹತ್ವ

ಮಕರ ಸಂಕ್ರಾಂತಿಯು ಸೂರ್ಯನ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಸಂಕ್ರಮಣವನ್ನು ಸೂಚಿಸುತ್ತದೆ. ಈ ದಿನ ಹಗಲು ರಾತ್ರಿಗಳು ಸಮಾನವಾಗಿರುತ್ತವೆ. ಎಳ್ಳುಬೆಲ್ಲದ ವಿತರಣೆ, ಹೊಸ ಧಾನ್ಯಗಳನ್ನು ಸೂರ್ಯನಿಗೆ ಅರ್ಪಿಸುವುದು ಮುಂತಾದ ಆಚರಣೆಗಳು ನಡೆಯುತ್ತವೆ. ನದೀ ಸ್ನಾನ, ಸೂರ್ಯನಮಸ್ಕಾರ, ಆದಿತ್ಯಹೃದಯ ಪಠಣ ಮುಂತಾದವು ಆರೋಗ್ಯಕರ ಮತ್ತು ಶ್ರೇಯಸ್ಕರವೆಂದು ಪರಿಗಣಿಸಲಾಗಿದೆ.

Makar Sankranti 2025: ಮಕರ ಸಂಕ್ರಾಂತಿ; ಸೂರ್ಯ ಸಂಕ್ರಮಣ, ಆಚರಣೆ ಮತ್ತು ಮಹತ್ವ
Makar Sankranti 2025
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jan 14, 2025 | 9:57 AM

Share

ಸೂರ್ಯನಿಗೆ ಕರ್ಮಸಾಕ್ಷೀ, ಜಗಚ್ಚಕ್ಷು ಎನ್ನುವ ನಾಮಂತರಗಳಿವೆ. ಈ ಪ್ರಪಂಚದಲ್ಲಿ ಕಾಣುವ ಎಲ್ಲ ಬೆಳಕಿಗೂ ಆ ಸೂರ್ಯನೇ ಮೂಲ. ಅವನ ಬೆಳಕಿಲ್ಲದೇ ಪ್ರಪಂಚದ ಯಾವ ಜೀವಿಗೂ ಚೈತನ್ಯ ಇರದು, ತೇಜಸ್ಸು ಇರದು. ಅವಂತ ಸರ್ವಶ್ರೇಷ್ಠ ಹಾಗೂ ಎಲ್ಲರನ್ನೂ ಬದುಕಿಸುವ ಶಕ್ತಿ ಇರುವುದು ಒಬ್ಬ ಸೂರ್ಯನಿಗೆ ಎಂದಾದರೆ ದೇವರ ಸೃಷ್ಟಿ ಎಂತಹ ಚಮತ್ಕಾರ, ವೈಶಿಷ್ಟ್ಯಗಳಿಂದ ಕೂಡಿರಬಹುದು ಎನ್ನುವುದು ಊಹಿಸಲಾಗದು.

ಇಂತಹ ಸೂರ್ಯ ತನ್ನ ದಿಕ್ಕನ್ನು ಬದಲಿಸಿದ್ದಾನೆ. ಸೂರ್ಯನು ಸಂಚರಿಸುವ ಮಾರ್ಗಕ್ಕೆ ಕ್ರಾಂತಿವೃತ್ತ ಎಂದು ಹೆಸರು. ಇದು ಆಕಾಶದ ಮಧ್ಯಭಾಗದಲ್ಲಿ ಇರುವ ನಾಡೀವೃತ್ತದ ಎರಡು ಪಾರ್ಶ್ವಗಳಲ್ಲಿ ಇರುತ್ತದೆ. ಸೂರ್ಯನು ಈ ವೃತ್ತದಲ್ಲಿ ಸಂಚರಿಸುವಾಗ ದಕ್ಷಿಣಾಯನ ಉತ್ತರಾಯಣಗಳು ಆಗುತ್ತವೆ. ದಕ್ಷಿಣ ದಿಕ್ಕಿನ ಕ್ರಾಂತಿವೃತ್ತದಲ್ಲಿ ಸಂಚರಿಸಿದರೆ ದಕ್ಷಿಣಾಯನ, ಉತ್ತೆರದ ಕ್ರಾಂತಿವೃತ್ತದಲ್ಲಿ ಸಂಚರಿಸಿದರೆ ಉತ್ತರಾಯಣವಾಗುತ್ತದೆ.

ಇದು ದೈವಮಾರ್ಗಾನುಸಾರಿಗಳಿಗೆ ಬಹಳ ಶ್ರೇಯಸ್ಕರ. ಹನ್ನೆರಡು ಸಂಕ್ರಾಂತಿಗಳಿದ್ದರೂ ಇದು ಸೂರ್ಯನು ಪಥವನ್ನೇ ಬದಲಿಸುವ ಕಾರಣ ಶ್ರೇಷ್ಠ. ದಕ್ಷಿಣಗೋಲದಲ್ಲಿ ಸೂರ್ಯನ ಸಂಚಾರವಾಗಲಿದೆ. ಇದು ದಕ್ಷಿಣಗೋಲದ ಮಧ್ಯಭಾಗ. ವರ್ಷದ ಎರಡು ಬಾರಿ ಹಗಲು ರಾತ್ರಿಗಳು ಸಮವಾಗಿರುತ್ತವೆ. ಮೇಷ ಹಾಗೂ ತುಲಾ ಮಾಸದಲ್ಲಿ. ಮಕರದಿಂದ ಆರಂಭಿಸದರೆ ಮೇಷಕ್ಕೆ ಸರಿಯಾಗಿ ಉತ್ತರಾಯಣ ನಾಲ್ಕು ತಿಂಗಳು. ಆಗ ಮಧ್ಯಕಾಲ. ಅಲ್ಲಿಂದ ಕರ್ಕದವರೆಗೆ ನಾಲ್ಕು ಅಂತ್ಯಕಾಲ. ಪುನಃ ತುಲಾದ ವರೆಗೆ ಮಧ್ಯಕಾಲ.‌ ಅಲ್ಲಿ ಮತ್ತೆ ರಾತ್ರಿ ಹಗಲುಗಳು ಸಮಾನವಾಗಿರಲಿದೆ.

ಎಳ್ಳುಬೆಲ್ಲ ವಿತರಣೆ :

ಈ ಸಂಕ್ರಾತಿಯು ಶಿಶಿರ ಋತುವಿನ ಆರಂಭ ಆಗುತ್ತದೆ. ಚಳಿಗಾಲ ಅಂದರೆ ವಾತವೃದ್ಧಿಯ ಕಾಲ. ವಾತಶಮನಕ್ಕೆ ಬೇಕಾದ ದ್ರವ್ಯವನ್ನು ಬಳಸುವುದೂ ಹಬ್ಬದ ವಿಶೇಷವೇ. ಎಳ್ಳು, ಬೆಲ್ಲ, ತೆಂಗಿನ ಕಾಯಿ ಇವೆಲ್ಲವೂ ವಾತಶಮನ ಮಾಡಿ ಪಿತ್ತ ಹಾಗೂ ಕಫವನ್ನು ಹೆಚ್ಚಿಸುವ ಪದಾರ್ಥಗಳಾಗಿವೆ.

ಇದನ್ನೂ ಓದಿ: ಮಹಾಕುಂಭ ಮೊದಲ ಬಾರಿ ನಡೆದಿದ್ದು ಎಲ್ಲಿ ಮತ್ತು ಯಾವಾಗ?

ಸುಗ್ಗಿ ಕಾಲ :

ದೇಶದ ಕೆಲವು ಭಾಗಗಳಲ್ಲಿ ತಾವು ಬೆಳೆದ ಹೊಸ ಧಾನ್ಯಗಳನ್ನು ತಂದು ಸೂರ್ಯನಿಗೆ ಅರ್ಪಿಸಿ ತಿನ್ನುವ ಸಂಪ್ರದಾಯವೂ ಇದೆ. ಏಕೆಂದರೆ ಸೂರ್ಯನಿಂದಲೇ ಮಳೆ ಬೆಳೆಗಳು ಆಗುವ ಕಾರಣ ಸೂರ್ಯನಿಗೆ ಕೃತಜ್ಞತೆಯನ್ನು ಅರ್ಪಿಸುವುದು ಇದಾಗಿದೆ.

ಏನು ಮಾಡಬೇಕು?

ನದೀ ಸ್ನಾನ ಮಾಡಿ ತರ್ಪಣಾದಿಗಳನ್ನು ಬಿಡಬಹುದು. ಸೂರ್ಯನ ನಮಸ್ಕಾರ ಮಾಡಿದರೆ ಆರೋಗ್ಯದಲ್ಲಿ ಪುಷ್ಟಿಯಾಗಲಿದೆ. ಆದಿತ್ಯಹೃದಯ ಅಥವಾ ಸೂರ್ಯಾಷ್ಟಕ, ಸೂರ್ಯಸ್ತೋತ್ರವನ್ನು ಮಾಡಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Tue, 14 January 25

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ