Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?
Navratri Specialಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.

ಮನುಷ್ಯ ಅತ್ಯಂತ ಶ್ರದ್ಧೆಯಿಂದ ನವರಾತ್ರೆಯಲ್ಲಿ ಉಪವಾಸ, ವ್ರತ, ಪೂಜೆ, ಪಾರಾಯಣ, ಅರ್ಚನೆ ಇತ್ಯಾದಿ ಹಲವು ವಿಧದಲ್ಲಿ ಶ್ರೀದೇವಿಯ ಸೇವೆಯನ್ನು ಮಾಡಬಹುದು. ಆದರೆ ಈ ಒಂದು ಕಾರ್ಯವನ್ನು ಪ್ರತೀದಿನ ಆರತಿಯ ನಂತರ ಮಾಡಲೇ ಬೇಕು ಇಲ್ಲದಿದ್ದರೆ ಮಾಡಿದ ಕಾರ್ಯವು ನಿಷ್ಫಲವಾಗುವುದು.ಅದು ಯಾವುದೆಂದರೆ ಅರ್ಘ್ಯಪ್ರಧಾನವೆಂಬ ಸಮರ್ಪಣಾ ಕಾರ್ಯ. ಅದರ ಸ್ವರೂಪ ಇಂತಿದೆ –
ಮೊದಲ ದಿನ
ಮಹಾವಿದ್ಯೇ ಮಹಾಮಾಯೇ ಯೋಗನಿದ್ರೇ ಶಿವಪ್ರಿಯೇ |
ಇದಮರ್ಘ್ಯಂ ಪ್ರದಾಸ್ಯಾಮಿ ಮಹಾಕಾಳಿ ನಮೋಸ್ತುತೇ ||
ಓಂ ಯೋಗನಿದ್ರಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.
ಎರಡನೇಯ ದಿನ
ದೇವಜಾತಾ ಮಹಾಧೇನುರ್ಭಾರತೀ ವಾಕ್ಸರಸ್ವತೀ |
ವಿಷ್ಣುಪ್ರೀತಿಕರೀಮಾತರ್ದತ್ತಮರ್ಘಂ ಗೃಹಾಣ ಮೇ ||
ಓಂ ದೇವಾತಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .
ಮೂರನೇಯ ದಿನ
ತ್ರೈಲೋಕ್ಯಸುಂದರೀ ದೇವಿ ಮಹಿಷಾಸುರನಾಶಿನೀ |
ಗೃಹಾಣಾರ್ಘ್ಯಂ ಮಯಾ ದತ್ತಂ ಸರ್ವೇಶ್ವರಿ ನಮೋಸ್ತುತೇ ||
ಓಂ ಮಹಿಷಾಸುರಮರ್ದಿನ್ಯೈ ನಮಃ ಅರ್ಘ್ಯಂ ಸಮರ್ಪಯಾಮಿ .
ನಾಲ್ಕನೇಯ ದಿನ
ಶೈಲಜಾಯೈ ನಮಸ್ತುಭ್ಯಂ ತ್ರಿದಶೈರಭಿ ಪೂಜಿತೇ |
ಹಿಮಾಚಲ ಕೃತಾವಾಸೇ ದತ್ತಮರ್ಘ್ಯಂ ಗೃಹಾಣ ಮೇ ||
ಓಂ ಶೈಲಜಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .
ಐದನೇಯ ದಿನ
ಧೂಮ್ರಾಹಾಯೈ ನಮಸ್ತುಭ್ಯಂ ದೇವನಾಂ ಸುಖದೇ ಶಿವೇ |
ರಾಕ್ಷಸಘ್ನೇ ಶುಭೇ ದೇವಿ ಕಾಳಿಕೇ ತೇ ನಮೋ ನಮಃ ||
ಓಂ ಧೂರ್ಮಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .
ಆರನೇಯ ದಿನ
ದೇವನಾಂ ದುಃಖದೌ ದೈತ್ಯೌ ಚಂಡಮುಂಡೌ ಮಹಾಬಲೌ |
ತೌ ನಾಶಯಿತ್ವಾ ದೇವಾನಾಂ ಸುಖದೇ ತೇ ನಮೋ ನಮಃ ||
ಓಂ ಚಂಡಮುಂಡಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .
ಏಳನೇಯ ದಿನ
ರಕ್ತಬೀಜವಧೇ ದೇವಿ ಮಹಾಕಾಳಿ ನಮೋಸ್ತುತೇ |
ಗೃಹಾಣಾರ್ಘ್ಯಂ ಮಯಾದತ್ತಂ ಶಾಂಭವ್ಯೈ ತೇ ನಮೋ ನಮಃ ||
ಓಂ ರಕ್ತಬೀಜಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.
ಎಂಟನೇಯ ದಿನ
ತ್ರಿಲೋಕಜಯಿನಂ ವೀರಂ ನಿಶುಂಭಂ ದೇವವೈರಿಣಂ |
ನಾಶಯಿತ್ವಾ ಮಹಾದೇವಿ ಏಕವೀರೇ ನಮೋಸ್ತುತೇ ||
ಓಂ ನಿಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.
ಒಂಭತ್ತನೇಯ ದಿನ
ಮಹಾವೀರಂ ಮಹಾಕಾಯಂ ದೇವನಾಮಂತಕಂ ರಿಪುಮ್ |
ಶುಂಭಂ ಮಹಾಬಲಂ ಹತ್ವಾ ಲೋಕಾನಾಂ ಸುಖದೇ ನಮಃ ||
ಓಂ ಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.
ಈ ರೀತಿಯಾಗಿ ಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com
Published On - 11:03 am, Mon, 26 September 22