AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?

Navratri Specialಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.

Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?
Navratri
TV9 Web
| Edited By: |

Updated on:Sep 26, 2022 | 11:05 AM

Share

ಮನುಷ್ಯ ಅತ್ಯಂತ ಶ್ರದ್ಧೆಯಿಂದ ನವರಾತ್ರೆಯಲ್ಲಿ ಉಪವಾಸ, ವ್ರತ, ಪೂಜೆ, ಪಾರಾಯಣ, ಅರ್ಚನೆ ಇತ್ಯಾದಿ ಹಲವು ವಿಧದಲ್ಲಿ ಶ್ರೀದೇವಿಯ ಸೇವೆಯನ್ನು ಮಾಡಬಹುದು. ಆದರೆ ಈ ಒಂದು ಕಾರ್ಯವನ್ನು ಪ್ರತೀದಿನ ಆರತಿಯ ನಂತರ ಮಾಡಲೇ ಬೇಕು ಇಲ್ಲದಿದ್ದರೆ ಮಾಡಿದ ಕಾರ್ಯವು ನಿಷ್ಫಲವಾಗುವುದು.ಅದು ಯಾವುದೆಂದರೆ ಅರ್ಘ್ಯಪ್ರಧಾನವೆಂಬ ಸಮರ್ಪಣಾ ಕಾರ್ಯ. ಅದರ ಸ್ವರೂಪ ಇಂತಿದೆ –

ಮೊದಲ ದಿನ 

ಮಹಾವಿದ್ಯೇ ಮಹಾಮಾಯೇ ಯೋಗನಿದ್ರೇ ಶಿವಪ್ರಿಯೇ |

ಇದಮರ್ಘ್ಯಂ ಪ್ರದಾಸ್ಯಾಮಿ ಮಹಾಕಾಳಿ ನಮೋಸ್ತುತೇ ||

ಓಂ ಯೋಗನಿದ್ರಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಎರಡನೇಯ ದಿನ 

ದೇವಜಾತಾ ಮಹಾಧೇನುರ್ಭಾರತೀ ವಾಕ್ಸರಸ್ವತೀ |

ವಿಷ್ಣುಪ್ರೀತಿಕರೀಮಾತರ್ದತ್ತಮರ್ಘಂ ಗೃಹಾಣ ಮೇ ||

ಓಂ ದೇವಾತಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಮೂರನೇಯ ದಿನ 

ತ್ರೈಲೋಕ್ಯಸುಂದರೀ ದೇವಿ ಮಹಿಷಾಸುರನಾಶಿನೀ |

ಗೃಹಾಣಾರ್ಘ್ಯಂ ಮಯಾ ದತ್ತಂ ಸರ್ವೇಶ್ವರಿ ನಮೋಸ್ತುತೇ ||

ಓಂ ಮಹಿಷಾಸುರಮರ್ದಿನ್ಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ನಾಲ್ಕನೇಯ ದಿನ 

ಶೈಲಜಾಯೈ ನಮಸ್ತುಭ್ಯಂ ತ್ರಿದಶೈರಭಿ ಪೂಜಿತೇ |

ಹಿಮಾಚಲ ಕೃತಾವಾಸೇ ದತ್ತಮರ್ಘ್ಯಂ ಗೃಹಾಣ ಮೇ ||

ಓಂ ಶೈಲಜಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಐದನೇಯ ದಿನ 

ಧೂಮ್ರಾಹಾಯೈ ನಮಸ್ತುಭ್ಯಂ ದೇವನಾಂ ಸುಖದೇ ಶಿವೇ |

ರಾಕ್ಷಸಘ್ನೇ ಶುಭೇ ದೇವಿ ಕಾಳಿಕೇ ತೇ ನಮೋ ನಮಃ ||

ಓಂ ಧೂರ್ಮಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಆರನೇಯ ದಿನ 

ದೇವನಾಂ ದುಃಖದೌ ದೈತ್ಯೌ ಚಂಡಮುಂಡೌ ಮಹಾಬಲೌ |

ತೌ ನಾಶಯಿತ್ವಾ ದೇವಾನಾಂ ಸುಖದೇ ತೇ ನಮೋ ನಮಃ ||

ಓಂ ಚಂಡಮುಂಡಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಏಳನೇಯ ದಿನ 

ರಕ್ತಬೀಜವಧೇ ದೇವಿ ಮಹಾಕಾಳಿ ನಮೋಸ್ತುತೇ |

ಗೃಹಾಣಾರ್ಘ್ಯಂ ಮಯಾದತ್ತಂ ಶಾಂಭವ್ಯೈ ತೇ ನಮೋ ನಮಃ ||

ಓಂ ರಕ್ತಬೀಜಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಎಂಟನೇಯ ದಿನ 

ತ್ರಿಲೋಕಜಯಿನಂ ವೀರಂ ನಿಶುಂಭಂ ದೇವವೈರಿಣಂ |

ನಾಶಯಿತ್ವಾ ಮಹಾದೇವಿ ಏಕವೀರೇ ನಮೋಸ್ತುತೇ ||

ಓಂ ನಿಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಒಂಭತ್ತನೇಯ ದಿನ 

ಮಹಾವೀರಂ ಮಹಾಕಾಯಂ ದೇವನಾಮಂತಕಂ ರಿಪುಮ್ |

ಶುಂಭಂ ಮಹಾಬಲಂ ಹತ್ವಾ ಲೋಕಾನಾಂ ಸುಖದೇ ನಮಃ ||

ಓಂ ಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಈ ರೀತಿಯಾಗಿ ಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

kkmanasvi@gamail.com

Published On - 11:03 am, Mon, 26 September 22

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!