AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2024: ಶರನ್ನವರಾತ್ರಿ ಮೊದಲ ದಿನ ‘ಶೈಲಪುತ್ರಿ’ಯ ಆರಾಧನೆ; ಈ ದೇವಿಯ ಹಿನ್ನೆಲೆ ಹಾಗೂ ಮಹತ್ವ

ಶರನ್ನವರಾತ್ರಿ ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥ.ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆ ದೇವಿಯ ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುತ್ತದೆ.

Navratri 2024: ಶರನ್ನವರಾತ್ರಿ ಮೊದಲ ದಿನ 'ಶೈಲಪುತ್ರಿ'ಯ ಆರಾಧನೆ; ಈ ದೇವಿಯ ಹಿನ್ನೆಲೆ ಹಾಗೂ ಮಹತ್ವ
Devi Shaila Puthri
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on:Sep 28, 2024 | 6:07 PM

Share

ನವರಾತ್ರಿಯಲ್ಲಿ ಆ ಜಗನ್ಮಾತೆಯನ್ನು ಆರಾಧಿಸುವ ಒಂಬತ್ತು ಸ್ವರೂಪಗಳಲ್ಲಿ ಮೊದಲನೆಯದು ಶೈಲಪುತ್ರಿ. ಲೋಕಕ್ಕೆ ಕಂಟಕರಾದಂಥ ರಾಕ್ಷಸರನ್ನು ಸಂಹಾರ ಮಾಡಿದ ಜಗಜ್ಜನನಿಯ ಒಂಬತ್ತು ಸ್ವರೂಪವನ್ನು ನಾವು ಇಲ್ಲಿ ಆರಾಧಿಸುತ್ತೇವೆ. ಮೊದಲ ದಿನ ಸ್ನಾನ ಮಾಡಿದ ನಂತರದಲ್ಲಿ ನಿತ್ಯ ಶುದ್ಧಿ ಮಾಡಿದ ಮೇಲೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿ ರಂಗೋಲಿಯಲ್ಲಿ ಅಷ್ಟದಳವನ್ನು ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ದೇವಿ ಆರಾಧನೆ ಮಾಡಬೇಕು.

ಶೈಲಪುತ್ರಿ ಯಾರು?

ಶೈಲ ಅಂದರೆ ಪರ್ವತ ಎಂದರ್ಥ. ಇನ್ನು ಪುತ್ರಿ ಅಂದರೆ ಮಗಳು. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥ ಆಗುತ್ತದೆ. ಆಕೆ ಹಿಮಾಲಯ ರಾಜನ ಮಗಳು. ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆ ದೇವಿಯ ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುತ್ತದೆ.

ಇನ್ನು ಪುರಾಣಗಳ ಪ್ರಕಾರ ಒಂದು ಉಲ್ಲೇಖ ಇದೆ. ಅದರಂತೆ, ಮಹಾವಿಷ್ಣುವಿನ ನಾಭಿ ಕಮಲದಲ್ಲಿ ನೆಲೆಸಿದ ಬ್ರಹ್ಮನಿಗೆ ವಿಷ್ಣುವಿನ ಕಿವಿಗಳ ಕಶ್ಮಲದಿಂದ ಉದ್ಭವಿಸುವ ಮಧು ಹಾಗೂ ಕೈಟಭ ಎಂಬ ರಕ್ಕಸರಿಬ್ಬರು ಬಹಳ ತೊಂದರೆ ನೀಡುತ್ತಿರುತ್ತಾರೆ. ಅದರಿಂದಾಗಿ ಸೃಷ್ಟಿ ಕಾರ್ಯದಲ್ಲಿ ಅಡಚಣೆ ಎದುರಿಸುವ ಬ್ರಹ್ಮದೇವ ಈ ಇಬ್ಬರು ರಾಕ್ಷಸರ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾನೆ.

ಆದರೆ, ಆ ಸಮಯದಲ್ಲಿ ಮಹಾವಿಷ್ಣು ಯೋಗನಿದ್ರಾವಸ್ಥೆಯಲ್ಲಿ ಇದ್ದುದರಿಂದ ಬ್ರಹ್ಮನ ಮೊರೆ ಆಲಿಸುವುದಿಲ್ಲ. ಆಗ ಬೇರೆ ದಾರಿಯೇ ಕಾಣದ ಬ್ರಹ್ಮ, ಆ ಮಹಾವಿಷ್ಣುವನ್ನು ಆವರಿಸಿರುವ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಸ್ತುತಿ ಮಾಡುತ್ತಾನೆ. ಆಗ ಪ್ರಸನ್ನಳಾಗುವ ದೇವಿಯು ಮಹಾವಿಷ್ಣುವು ಯೋಗನಿದ್ರೆಯಿಂದ ಹೊರಬರುವಂತೆ ಮಾಡಿ, ಅದರೊಂದಿಗೆ ಬ್ರಹ್ಮನಿಗೆ ಸಮಸ್ಯೆ ಮಾಡುತ್ತಿದ್ದ ಮಧು-ಕೈಟಭರ ವಧೆ ಆಗುವಂತೆ ಅನುಗ್ರಹಿಸುತ್ತಾಳೆ. ಆದ್ದರಿಂದ ನವರಾತ್ರಿಯ ಮೊದಲ ದಿನ ಕಲಶದಲ್ಲಿ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಆವಾಹನೆ ಮಾಡಿ ಪೂಜಿಸಬೇಕು. ಈ ದಿನದ ಬಣ್ಣ ಬಿಳಿ. ಇದು ಶಾಂತಿ ಮತ್ತು ನೆಮ್ಮದಿಯ ಸಂಕೇತ ಆಗಿದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಮಧು-ಕೈಟಭ:

ಪುರಾಣಗಳ ಪ್ರಕಾರ ಮಧು- ಕೈಟಭ ಎಂಬುವರು ರಾಕ್ಷಸರಾಗಿದ್ದರೂ ಇದು ಪ್ರತಿ ಮನುಷ್ಯನಲ್ಲಿಯೂ ಇರುವ ಪ್ರಧಾನವಾದ ಎರಡು ದುರ್ಗುಣಗಳು. ಮಧು ಎಂದರೆ ಜೇನು. ಅದಕ್ಕಿರುವ ಗುಣ ಅಂಟು. ನಾವು ಪ್ರಪಂಚದ ಎಲ್ಲ ವಿಷಯ ಭೋಗಗಳಿಗೆ ಅಂಟಿಕೊಂಡಿರುತ್ತೇವೆ. ಕೈಟಭ ಎಂದರೆ ಕೀಟ (ಹುಳುವಿನಂತೆ). ಸೃಷ್ಟಿಯ ನಾಶ ಮಾಡುತ್ತಾ ಇರುತ್ತೇವೆ. ಇವುಗಳನ್ನು ಅರಿತು, ಜಾಗೃತಗೊಳ್ಳಲು ಆಗದೆ ನಿದ್ರಾವಸ್ಥೆಯಲ್ಲಿ ಇರುವ ನಾವು ಶೈಲಪುತ್ರಿ ಸ್ವರೂಪದಿಂದ ಧ್ಯಾನಿಸಿ, ಪೂಜಿಸಿ ಮಾಯೆಯಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:24 pm, Sat, 28 September 24

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು