AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ವಜ್ರಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ, ಏನಿದು ವಜ್ರಮುಷ್ಟಿ ಕಾಳಗ? ಇತಿಹಾಸ ತಿಳಿದುಕೊಳ್ಳಿ

Vajramushti Kalaga History: ನಾಳೆ (ಮಂಗಳವಾರ) ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಆದ್ರೆ, ಅರಮನೆಯಿಂದ ಅಂಬಾರಿ ಮೆರವಣಿಗೆ ಹೋಗಬೇಕಾದರೆ ವಜ್ರಮುಷ್ಟಿ ಕಾಳಗ ಅಥವಾ ಜಟ್ಟಿ ಕಾಳಗ ನಡೆಯಲೇಬೇಕು. ವಜ್ರಮುಷ್ಟಿ ಕಾಳಗ ಬಳಿಕವಷ್ಟೇ ಜಂಬೂಸವಾರಿ ಆರಂಭವಾಗಲಿದೆ. ಅಷ್ಟಕ್ಕೂ ಏನಿದು ವಜ್ರಮುಷ್ಟಿ ಕಾಳಗ? ಇದರ ಇತಿಹಾಸ ತಿಳಿದುಕೊಳ್ಳಿ.

ಮೈಸೂರು ದಸರಾ ವಜ್ರಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ, ಏನಿದು ವಜ್ರಮುಷ್ಟಿ ಕಾಳಗ? ಇತಿಹಾಸ ತಿಳಿದುಕೊಳ್ಳಿ
ವಜ್ರ ಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 23, 2023 | 9:57 AM

ಮೈಸೂರು, (ಅಕ್ಟೋಬರ್ 23): ಮೈಸೂರು ದಸರಾ(Mysore Dasara) ವಜ್ರಮುಷ್ಟಿ ಕಾಳಗಕ್ಕೆ(vajramushti kalaga)  ಚಾಮರಾಜನಗರದ ವೆಂಕಟೇಶ್ ಜಟ್ಟಿ ಆಯ್ಕೆಯಾಗಿದ್ದಾರೆ. ಪುಟ್ಟರಂಗ ಜಟ್ಟಿ ಅವರಿಂದ ವೆಂಕಟೇಶ್ ಜಟ್ಟಿ ತರಬೇತಿ ಪಡೆಯುತ್ತಿದ್ದು, ನಾಳೆ ಅಂದರೆ ಜಂಬೂಸವಾರಿ ದಿನದಂದು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಟಿ ಕಾಳಗ ನಡೆಯಲಿದೆ. ಚಾಮರಾಜನಗರದಲ್ಲಿ ಜಟ್ಟಿಗಳ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಮೈಸೂರು ಅರಮನೆಗೆ ತೆರಳಲಿದ್ದಾರೆ. ಅರಮನೆ ಸಂಪ್ರದಾಯದಂತೆ ವಜ್ರಮುಷ್ಟಿ ಕಾಳಗದ ಬಳಿಕ ಯದುವೀರ್ ಒಡೆಯರ್ ಅವರು ಬನ್ನಿ ಪೂಜೆಗೆ ತೆರಳಲಿದ್ದಾರೆ. ಮೈಸೂರಿನ ರಾಜಾಶ್ರಯದಲ್ಲಿ ಬೆಳೆದುಬಂದಿರುವ ಈ ಕಾಳಗ ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಕ ಕ್ರೀಡೆ. ಇತಿಹಾಸದ ಪ್ರಕಾರ ವಜ್ರಮುಷ್ಟಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡಬೇಕು. ಹಾಗಾದ್ರೆ ಏನಿದು ಜಟ್ಟಿ ಕಾಳಗ ಅಥವಾ ವಜ್ರಮುಷ್ಟಿ ಕಾಳಗ? ಇತಿಹಾಸ ಇಲ್ಲಿದೆ ನೋಡಿ.

ಏನಿದು ವಜ್ರಮುಷ್ಟಿ ಕಾಳಗ?

ವಜ್ರಮುಷ್ಟಿ ಕಾಳಗ ಮೈಸೂರು ದಸರಾದ ಪ್ರಮುಖ ಕ್ರೀಡೆ,  ಮೈಸೂರಿನ ರಾಜಾಶ್ರಯದಲ್ಲಿ ಬೆಳೆದುಬಂದಿರುವ ಈ ಕಾಳಗ ವಿಜಯದಶಮಿಯಂದು ಅಂಬಾರಿಯು ಅರಮನೆಯಿಂದ ಹೊರಡುವ ಮುನ್ನ ನಡೆಯುವ ಸಾಂಪ್ರದಾಯಕ ಕ್ರೀಡೆ. ಇತಿಹಾಸದ ಪ್ರಕಾರ ವಜ್ರಮುಷ್ಟಿ ಕಾಳಗ ಮುಗಿದ ನಂತರವಷ್ಟೇ ಅಂಬಾರಿ ಅರಮನೆಯಿಂದ ಹೊರಡಬೇಕು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪ್ರಕ್ರಿಯೆಗೆ ಅದರದ್ದೇ ಆದ ಘನತೆ, ಇತಿಹಾಸ ಇದೆ. ಈ ಕಾಳಗದಲ್ಲಿ ಭಾಗವಹಿಸುವವರದ್ದೂ ಒಂದು ಪ್ರತ್ಯೇಕ ಇತಿಹಾಸ ಇದೆ. ಈ ಕ್ರೀಡೆಯನ್ನು ಜಟ್ಟಿ ಕಾಳಗ ಎಂದೂ, ಈ ಕುಸ್ತಿ ಆಡುವವರನ್ನು ಜಟ್ಟಿಗಳು ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ

ಘಟಾನುಘಟಿಗಳಿಬ್ಬರು ವಜ್ರಮುಷ್ಟಿ ಹಿಡಿದು ಹತ್ತಿಪ್ಪತ್ತು ನಿಮಿಷಗಳು ಮಾಡುವ ರೋಚಕ ಕಾಳಗದ ದೃಶ್ಯ ನೋಡುಗರನ್ನು ರೋಮಾಂಚಕಗೊಳಿಸುತ್ತೆ. ರಾಜವಂಶಸ್ಥರು, ವೀಕ್ಷಕರು, ಅರಮನೆಯವರೆಲ್ಲರ ಎದುರು ಇಬ್ಬರು ಘಟಾನುಘಟಿಗಳು ತೊಡೆತಟ್ಟಿ ನಿಲ್ಲುತ್ತಾರೆ. ಕೈಯಲ್ಲಿ ವಜ್ರಮುಷ್ಟಿ ಹಿಡಿದು ಕುಸ್ತಿಗೆ ತಯಾರಾಗಿ ನಿಂತ ಅವರ ಮೇಲೆ ನೂರಾರು ಜೋಡಿ ಕಣ್ಣುಗಳು ನೆಟ್ಟಿರುತ್ತವೆ. ಇಂತಹ ಜಟ್ಟಿಗಳ ಪರಾಕ್ರಮ ಮೈಸೂರು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತದೆ.

ವ್ರತಧಾರಿಗಳಾಗಿ ವಜ್ರಮುಷ್ಟಿ ಕಾಳಗದ ದಿನ ಅರಮನೆ ಪ್ರವೇಶಿಸುವ ಜಟ್ಟಿಗಳಿಗೆ ಅರಮನೆಯ ಶ್ವೇತವರಾಹ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಕೆಂಪುಮಣ್ಣು, ಮಟ್ಟಿ ಮಣ್ಣು, ಅರಿಶಿನ- ಕುಂಕುಮ, ಕಣ್ಣುಕಪ್ಪುಗಳನ್ನು ಬಳಿದು ನಂತರ ಕಾಳಗ ನಡೆಸುತ್ತಾರೆ. ಉಸ್ತಾದ್‌ ಗಳ ಉಪಸ್ಥಿತಿಯಲ್ಲಿ ಇಬ್ಬರೂ ಜಟ್ಟಿಗಳು ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಆಯುಧವನ್ನು ಕೈಗೆ ಧರಿಸಿ ಹಣೆಯಲ್ಲಿ ರಕ್ತ ಚಿಮ್ಮುವವರೆಗೆ ಕಾದಾಡುತ್ತಾರೆ. ಈ ಕಾಳಗ ಸುಮಾರು 10ರಿಂದ 20 ನಿಮಿಷಗಳವರೆಗೆ ನಡೆಯುತ್ತದೆ. ಇಲ್ಲಿ ಸೋಲು ಗೆಲುವು ಎಂಬುವುದಿಲ್ಲ. ಹಣೆಯಲ್ಲಿ ರಕ್ತ ಚಿಮ್ಮಬೇಕು ಅಷ್ಟೇ. ರಕ್ತ ಬಂದರೆ ಮಾತ್ರ ಕಾಳಗ ಸಂಪ್ರಾಪ್ತಿ ಆಗುತ್ತದೆ. ಆನಂತರ ದೇವರಿಗೆ ಪೂಜೆ ಸಲ್ಲಿಸಿ ಜಂಬೂಸವಾರಿ ಆರಂಭಿಸುವ ಕಲಾಪಗಳು ನಡೆಯುತ್ತವೆ.d ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಇಂದಿಗೂ ಅರಮನೆಯಲ್ಲಿ ದಸರಾ ಸಮಯದಲ್ಲಿ ಚಾಚೂ ತಪ್ಪದೆ ಪಾಲಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:54 am, Mon, 23 October 23

ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ