Mysore Dasara 2022: ಮೈಸೂರು ತಲುಪಿದ ಎರಡನೇ ತಂಡದ ಆನೆಗಳು, ಸರಳ ಸ್ವಾಗತ

ಶ್ರೀರಾಮ, ವಿಜಯ, ಸುರ್ಗಿವ, ಪಾರ್ಥಸಾರಥಿ ಸೇರಿ ಗೋಪಿ ನೇತೃತ್ವದಲ್ಲಿ 5 ಆನೆಗಳು ತಾಲೀಮು ನಡೆಸಲಿವೆ. ಶ್ರೀರಾಮ, ಸುರ್ಗೀವ, ಪಾರ್ಥಸಾರಥಿ ಹೊಸ ಆನೆಗಳಾಗಿದ್ದು, ಇಡೀ ದಸರೆಯಲ್ಲಿ ಪಾರ್ಥಸಾರಥಿ ಅತ್ಯಂತ ಚಿಕ್ಕ ವಯಸ್ಸಿನ ಆನೆಯಾಗಿದೆ.

Mysore Dasara 2022: ಮೈಸೂರು ತಲುಪಿದ ಎರಡನೇ ತಂಡದ ಆನೆಗಳು, ಸರಳ ಸ್ವಾಗತ
ಮೈಸೂರು ತಲುಪಿದ ಎರಡನೇ ತಂಡದ ಆನೆಗಳು
Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2022 | 12:33 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022 ಭಾಗವಹಿಸಲು ನೆನ್ನೆ(ಬುಧವಾರ) ಗಜಪಡೆಯ ಎರಡನೇ ತಂಡ ಅರಮನೆಗೆ ಆಗಮಿಸಿದ್ದು, ಸರಳವಾಗಿ ಸ್ವಾಗತವನ್ನು ಕೋರಲಾಗಿದೆ. ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಗಜಪಡೆ ಸ್ವಾಗತ ಕಾರ್ಯಕ್ರಮ ರದ್ದಾಗಿತ್ತು. ಮೈಸೂರು ತಲುಪಿದ ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲು ಅವಕಾಶ ಮಾಡಲಾಗೊದೆ. ಮೊದಲ ತಂಡದ ಆನೆಗಳಿಗೆ ಬನ್ನಿಮಂಟಪದವರೆಗೂ ತಾಲೀಮು ಮಾಡಿದ್ದು, ಸೋಮವಾರದಿಂದ ಅರಮನೆ ಹೊರಗೆ ಶ್ರೀರಾಮ, ವಿಜಯ, ಸುರ್ಗಿವ, ಪಾರ್ಥಸಾರಥಿ ಸೇರಿ ಗೋಪಿ ನೇತೃತ್ವದಲ್ಲಿ 5 ಆನೆಗಳು ತಾಲೀಮು ನಡೆಸಲಿವೆ.
ಶ್ರೀರಾಮ, ಸುರ್ಗೀವ, ಪಾರ್ಥಸಾರಥಿ ಹೊಸ ಆನೆಗಳಾಗಿದ್ದು, ಇಡೀ ದಸರೆಯಲ್ಲಿ ಪಾರ್ಥಸಾರಥಿ ಅತ್ಯಂತ ಚಿಕ್ಕ ವಯಸ್ಸಿನ ಆನೆಯಾಗಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಿಂದ ಚಿಕ್ಕ ವಯಸ್ಸಿನ ಪಾರ್ಥಸಾರಥಿ ಆನೆಯನ್ನು ಕರೆತರಲಾಗಿದ್ದು, ಕೊಡಗಿನ ನಾಗರಹೊಳೆ ರಾಷ್ಟ್ರೀಯ ವ್ಯಾಪ್ತಿಯ ದುಬಾರೆ ಆನೆ ಶಿಬಿರದಿಂದ ಗೋಪಿ, ಶ್ರೀರಾಮ, ವಿಜಯ, ಸುರ್ಗಿವ ಗಜಪಡೆ ಸೇರಿವೆ.

ಕಳೆದ ತಿಂಗಳು ಅಂದರೆ ಆ.7ರಂದು ಉಮೇಶ್ ಕತ್ತಿ ಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ ದಸರಾ ಪಯಣ ಚಾಲನೆ ನೀಡಿದ್ದರು. ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡದ 9 ಆನೆಗಳು ವಿವಿಧ ಹಂತದ ತಾಲೀಮಿನಲ್ಲಿ ಯಶಸ್ವಿಯಾಗಿವೆ. ಹೊಸ ಆನಗಳು ಮೊದಲ ತಂಡದೊಂದಿಗೆ ಬೆರೆಯಬೇಕಿದ್ದು, ಗೋಪಿ ಹಾಗೂ ವಿಜಯಾ ಆನೆ ದಸರಾದಲ್ಲಿ ಭಾಗವಹಿಸಿರುವ ಅನುಭವವಿದ್ದು, ಇತರೆ 14 ಆನೆಗಳೂ ಎಂದಿನಂತೆ ತಾಲೀಮು ನಡೆಸಲಿವೆ.

ಸದ್ಯ ಎರಡನೇ ತಂಡದಲ್ಲಿರುವ 5 ಆನೆಗಳಲ್ಲಿ ಶ್ರೀರಾಮ, ಸುಗ್ರೀವ ಹಾಗೂ ಪಾರ್ಥಸಾರಥಿ ಇದು ಮೊದಲ ದಸರಾ ಆಗಿದೆ. 2ನೇ ತಂಡದ ಗಜಪಡೆಯ ಆನೆಗಳು ಸೇರಿದಂತೆ ಒಟ್ಟು 14 ಆನೆಗಳ ತೂಕ ಪರೀಕ್ಷೆವನ್ನು ಸೆ.9 ಅಥವಾ 10ರಂದು ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.