Krishna Janmashtami: ಕೃಷ್ಣ ಜನ್ಮಾಷ್ಟಮಿಯ ದಿನ ಹಸುವಿಗೆ ಮೇವು ಹಾಕುವುದರಿಂದ ಸಿಗುತ್ತೇ ವಿಶೇಷ ಲಾಭ

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಗೊಲ್ಲ ಕೃಷ್ಣನಿಗೆ ಹಸುಗಳೆಂದರೆ ಪ್ರಾಣ. ಜನ್ಮಾಷ್ಟಮಿ ದಿನದಂದು ಹಸುಗಳಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬೇಕು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಸುವಿಗೆ ಬೆಲ್ಲ ತಿನ್ನಿಸಬೇಕು. ಇದರಿಂದ ಗೋಮಾತೆ ಸುಪ್ರಸನ್ನಳಾಗಿ ಆಶೀರ್ವಾದ ಮಾಡುತ್ತಾಳೆ.

Krishna Janmashtami: ಕೃಷ್ಣ ಜನ್ಮಾಷ್ಟಮಿಯ ದಿನ ಹಸುವಿಗೆ ಮೇವು ಹಾಕುವುದರಿಂದ ಸಿಗುತ್ತೇ ವಿಶೇಷ ಲಾಭ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Sep 06, 2023 | 12:43 PM

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ(Krishna Janmashtami) ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಈ ಬಾರಿ 2023 ರ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಏಕೆಂದರೆ ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 03:37 ಕ್ಕೆ ಪ್ರಾರಂಭವಾಗಲಿದೆ ಮತ್ತು ಅದು ಸೆಪ್ಟೆಂಬರ್ 7 ರಂದು ಸಂಜೆ 04:14 ಕ್ಕೆ ಕೊನೆಗೊಳ್ಳುತ್ತದೆ. ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 09:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಇದು ಸೆಪ್ಟೆಂಬರ್ 7 ರಂದು ಬೆಳಗ್ಗೆ 10:25 ಕ್ಕೆ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ, ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಎರಡನ್ನೂ ಪರಿಗಣಿಸಿ, 2023 ರ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ ಮತ್ತು ದಹಿ ಹಂಡಿಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ.

ಇಂದು ಹಸುವಿಗೆ ಮೇವು ಹಾಕಿದರೆ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತೆ

ಹಸುವಿಗೆ ಪ್ರತಿ ದಿನ ಮೇವನ್ನು ಕೊಡಬೇಕು. ಇದು ಪ್ರತಿ ದಿನ ಆಗದಿದ್ದರೆ ಕೃಷ್ಣ ಜನ್ಮಾಷ್ಟಮಿಯ ದಿನವಾದರೂ ಹಸುವಿಗೆ ಗೋಗ್ರಾಸ ಅಂದರೆ ಮೇವನ್ನು ಕೊಡಬಹುದು. ಹೀಗೆ ಮಾಡುವುದರಿಂದ ಗೋಮಾತೆಯ ಆಶೀರ್ವಾದದ ಜೊತೆಗೆ ಶ್ರೀಕೃಷ್ಣನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಸುವಿಗೆ ಬೆಲ್ಲ ತಿನ್ನಿಸಬೇಕು. ಇದರಿಂದ ಗೋಮಾತೆ ಸುಪ್ರಸನ್ನಳಾಗಿ ಆಶೀರ್ವಾದ ಮಾಡುತ್ತಾಳೆ. ಎಲ್ಲಿ ಹಸುಗಳು ಖುಷಿಖುಷಿಯಾಗಿರುತ್ತವೋ ಅಲ್ಲೆಲ್ಲಾ ನಕಾರಾತ್ಮಕ ಭಾವಗಳು ತನ್ನಿಂತಾನೇ ನಾಶಗೊಳ್ಳುತ್ತವೆ. ಕೃಷ್ಣ ಜನ್ಮಾಷ್ಟಮಿ ದಿನ ಹಸುಗಳ ಮೈತೊಳೆದು, ಸ್ನಾನ ಮಾಡಿಸುವುದು ಉತ್ಕೃಷ್ಟವಾಗಿರುತ್ತದೆ. ಇದರಿಂದ ಶ್ರೀಕೃಷ್ಣನನ್ನು ಸಂಪ್ರೀತಗೊಳಿಸುವುದರ ಜೊತೆಗೆ 33 ಕೋಟಿ ದೇವ – ದೇವತೆಯನ್ನು ಆರಾಧಿಸಿದಂತಾಗುತ್ತದೆ.

ಹಲವು ಭಕ್ತರು ಜನ್ಮಾಷ್ಟಮಿ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಜನ್ಮಾಷ್ಟಮಿ ವೇಳೆ ಉಪವಾಸ ಮಾಡುವ ಭಕ್ತರು, ಇದನ್ನು ಅಂತ್ಯಗೊಳಿಸುವುದನ್ನು ಸಹ ಸೂಕ್ತ ಸಮಯದಲ್ಲಿ ಮಾಡಬೇಕು. ಜನ್ಮಸ್ಥಾಮಿಯ ಮರುದಿನ ಸೂರ್ಯೋದಯದ ನಂತರ ಉಪವಾಸವನ್ನು ಅಂತ್ಯಗೊಳಿಸಲಾಗುತ್ತದೆ. ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಮುಗಿದ ನಂತರ ಅಂತ್ಯಗೊಳಿಸಬೇಕು.

ಜನ್ಮಾಷ್ಟಮಿಯ ಹಿಂದಿರುವ ದಂತಕಥೆ ಏನು?

ಎಲ್ಲಾ ಪೌರಾಣಿಕ ಹಬ್ಬಗಳಂತೆ, ಜನ್ಮಾಷ್ಟಮಿಯ ಹಿಂದೆಯೂ ಒಂದು ಕುತೂಹಲಕಾರಿ ಕಥೆ ಇದೆ. ದಂತಕಥೆಯ ಪ್ರಕಾರ, ಮಥುರಾ ಸಾಮ್ರಾಜ್ಯವು ಕಂಸ ರಾಜನ ಆಳ್ವಿಕೆಯಲ್ಲಿ ಸೊರಗಿಹೋಗಿತ್ತು. ಅವನು ಸಾಕಷ್ಟು ಕ್ರೂರನಾಗಿದ್ದು ತನ್ನ ಸಹೋದರಿ ರಾಜಕುಮಾರಿ ದೇವಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ದೇವಕಿ ವಾಸುದೇವನನ್ನು ಮದುವೆಯಾದ ಬಳಿಕ ಪ್ರೀತಿ ಬದಲಾಯಿತು. ದೇವಕಿ ವಾಸುದೇವನನ್ನು ಮದುವೆಯಾದ ದಿನ ಪ್ರಬಲವಾದ ಮೋಡವು ಇದ್ದಕ್ಕಿದ್ದಂತೆ ಭವಿಷ್ಯಜ್ಞಾನದೊಂದಿಗೆ ಘರ್ಜಿಸಿ, ಇವರಿಬ್ಬರಿಗೆ ಜನಿಸಿದ ಎಂಟನೇ ಮಗ, ರಾಜ ಕಂಸ ಸಾವಿಗೆ ಕಾರಣ ಎಂದು ಭವಿಷ್ಯ ನುಡಿಯಿತು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದು ಯಾವ ಮಂತ್ರ ಜಪಿಸಬೇಕು?

ಇದನ್ನು ಕೇಳಿದ ಕಂಸ ಆಕ್ರೋಶಗೊಂಡನು. ದೇವಕಿ ಮತ್ತು ವಾಸುದೇವ ಅವರನ್ನು ತಕ್ಷಣ ಜೈಲಿಗೆ ಹಾಕುವಂತೆ ಆದೇಶಿಸಿದ್ದನು. ಅಲ್ಲದೆ, ದಂಪತಿಗೆ ಜನಿಸಿದ ಮೊದಲ ಆರು ಮಕ್ಕಳನ್ನು ಕೊಂದುಹಾಕಿದನು. ಅದೃಷ್ಟವಶಾತ್, ರಾಜಕುಮಾರಿ ದೇವಕಿಯ ಏಳನೇ ಮಗುವಾಗಿ ಬಲರಾಮ ಹುಟ್ಟಿದನು. ಆತ, ಗರ್ಭದಲ್ಲಿದ್ದಾಗಲೇ, ವೃಂದಾವನದ ರಾಜಕುಮಾರಿ ರೋಹಿಣಿಗೆ ಅತೀಂದ್ರಿಯವಾಗಿ ವರ್ಗಾಯಿಸಲಾಯಿತ್ತು.

ಇನ್ನು, ಎಂಟನೇ ಮಗುವಿನ (ಭಗವಾನ್ ಕೃಷ್ಣ) ಜನನದ ನಂತರ, ವೃಂದಾವನದಲ್ಲಿ ನಂದ ಮತ್ತು ಯಶೋಧರಿಗೆ ಮಗುವನ್ನು ನೀಡಲು ದೇವರುಗಳು ವಾಸುದೇವನಿಗೆ ಮಾರ್ಗದರ್ಶನ ನೀಡಿದರು. ವರ್ಷಗಳ ನಂತರ, ಶ್ರೀಕೃಷ್ಣನು ಕಂಸನನ್ನು ಕೊಂದು ಮಥುರಾ ಸಾಮ್ರಾಜ್ಯವನ್ನು ತನ್ನ ಕ್ರೌರ್ಯದ ಸಂಕೋಲೆಗಳಿಂದ ಮುಕ್ತಿಗೊಳಿಸಿದನು.

ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಗುತ್ತದೆ.

ವೇ!!ಶ್ರೀ!! ಕುಮಾರಸ್ವಾಮಿ, ಬೆಂಗಳೂರು

ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ