AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pitru Paksha 2022: ಪಿಂಡ ದಾನ ಮಾಡುವ ಪವಿತ್ರ ಸ್ಥಳಗಳು, ಇಲ್ಲಿ ಪಿಂಡ ದಾನ ಮಾಡಿದ್ರೆ ಮೋಕ್ಷ ಪಕ್ಕ

ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡುವಾಗ ಎಲ್ಲಾ ಸ್ಥಳಗಳಲ್ಲೂ ಪಿಂಡ ದಾನ ಮಾಡಲಾಗುವುದಿಲ್ಲ. ಕೆಲವೊಂದು ಪವಿತ್ರ ಸ್ಥಳಗಳಲ್ಲಿ ಪಿಂಡವನ್ನು, ಶ್ರಾದ್ಧಾ ಕಾರ್ಯಗಳನ್ನು ಮಾಡಲಾಗುತ್ತದೆ.

TV9 Web
| Edited By: ಆಯೇಷಾ ಬಾನು|

Updated on: Sep 14, 2022 | 6:30 AM

Share
ಕಾಶಿ: ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಕಾಶಿ ಒಂದಾಗಿದೆ. ಶ್ರದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದಕ್ಕಾಗಿ ದೂರದಿಂದ ಜನರು ಇಲ್ಲಿಗೆ ಬರುತ್ತಾರೆ. ಚಿತಾಭಸ್ಮವನ್ನು ಬಿಡಲು, ಮೃತ ವ್ಯಕ್ತಿಗಳ ಮೂಳೆಯನ್ನು ನೀರಿನಲ್ಲಿ ಹರಿ ಬಿಡಲು ಮತ್ತು ಶ್ರಾದ್ಧಾ ಕ್ರಮಗಳನ್ನು ಮಾಡಲು ಇಲ್ಲಿ ಸಂಪೂರ್ಣ ಅವಕಾಶವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಕಾಶಿಯಲ್ಲಿ ಸತ್ತವರು ನರಕ ಅಥವಾ ಯಮಲೋಕಕ್ಕೆ ಹೋಗುವುದಿಲ್ಲ. ಬದಲಾಗಿ, ಅವರು ಸ್ವರ್ಗವನ್ನು ಸೇರುತ್ತಾರೆನ್ನುವ ನಂಬಿಕೆಯಿದೆ.

ಕಾಶಿ: ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಕಾಶಿ ಒಂದಾಗಿದೆ. ಶ್ರದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದಕ್ಕಾಗಿ ದೂರದಿಂದ ಜನರು ಇಲ್ಲಿಗೆ ಬರುತ್ತಾರೆ. ಚಿತಾಭಸ್ಮವನ್ನು ಬಿಡಲು, ಮೃತ ವ್ಯಕ್ತಿಗಳ ಮೂಳೆಯನ್ನು ನೀರಿನಲ್ಲಿ ಹರಿ ಬಿಡಲು ಮತ್ತು ಶ್ರಾದ್ಧಾ ಕ್ರಮಗಳನ್ನು ಮಾಡಲು ಇಲ್ಲಿ ಸಂಪೂರ್ಣ ಅವಕಾಶವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಕಾಶಿಯಲ್ಲಿ ಸತ್ತವರು ನರಕ ಅಥವಾ ಯಮಲೋಕಕ್ಕೆ ಹೋಗುವುದಿಲ್ಲ. ಬದಲಾಗಿ, ಅವರು ಸ್ವರ್ಗವನ್ನು ಸೇರುತ್ತಾರೆನ್ನುವ ನಂಬಿಕೆಯಿದೆ.

1 / 7
ಮಥುರಾ: ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲೂ ಶ್ರಾದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ. ಈ ಸ್ಥಳವನ್ನು ಪುರಾಣದಲ್ಲಿ ಅತ್ಯಂತ ಶ್ರೇಷ್ಟವೆಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಸ್ಥಳಗಳನ್ನು ಇಲ್ಲಿ ನಾವು ನೋಡಬಹುದು. ಮಥುರಾದಲ್ಲಿ ಪೂರ್ವಜರಿಗೆ ಅಥವಾ ಪಿತೃಗಳಿಗೆ ತರ್ಪಣವನ್ನು ನೀಡುವುದರಿಂದ ಅವರ ಆತ್ಮವು ಶಾಂತಿಯಿಂದಿರುತ್ತದೆ ಮತ್ತು ಕೃಷ್ಣನ ಆಶೀರ್ವಾದ ಪಡೆದುಕೊಳ್ಳುವರು ಎನ್ನುವ ನಂಬಿಕೆಯಿದೆ.

ಮಥುರಾ: ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲೂ ಶ್ರಾದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ. ಈ ಸ್ಥಳವನ್ನು ಪುರಾಣದಲ್ಲಿ ಅತ್ಯಂತ ಶ್ರೇಷ್ಟವೆಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಸ್ಥಳಗಳನ್ನು ಇಲ್ಲಿ ನಾವು ನೋಡಬಹುದು. ಮಥುರಾದಲ್ಲಿ ಪೂರ್ವಜರಿಗೆ ಅಥವಾ ಪಿತೃಗಳಿಗೆ ತರ್ಪಣವನ್ನು ನೀಡುವುದರಿಂದ ಅವರ ಆತ್ಮವು ಶಾಂತಿಯಿಂದಿರುತ್ತದೆ ಮತ್ತು ಕೃಷ್ಣನ ಆಶೀರ್ವಾದ ಪಡೆದುಕೊಳ್ಳುವರು ಎನ್ನುವ ನಂಬಿಕೆಯಿದೆ.

2 / 7
ಬ್ರಹ್ಮಕಪಾಲ ಘಾಟ್: ಉತ್ತರಾಖಂಡದಲ್ಲಿರುವ ಬ್ರಹ್ಮಕಪಾಲ ಘಾಟ್ ಶ್ರಾದ್ಧಾ ಮತ್ತು ಪಿಂಡ ದಾನ ಕರ್ಮಗಳಿಗೆ ಅತ್ಯಂತ ಮಹತ್ವವನ್ನು ಹೊಂದಿದೆ. ಇಲ್ಲಿ ಶಿವನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತಿಯನ್ನು ಪಡೆದನೆಂಬ ಉಲ್ಲೇಖವಿದೆ. ಅಲ್ಲದೆ ಈ ಸ್ಥಳ ಮಹಾಭಾರತದೊಂದಿಗೂ ಸಂಬಂಧವನ್ನು ಹೊಂದಿದೆ. ಮಹಾಭಾರತ ಯುದ್ಧದ ನಂತರ ಪಾಂಡವರು ತಾವು ಮಾಡಿದ ಪಾಪಗಳಿಗೆ ಮುಕ್ತಿಯನ್ನು ಪಡೆಯಲು ಇಲ್ಲಿ ಪೂಜೆಯನ್ನು ನಡೆಸಿದ್ದರು. ಬ್ರಹ್ಮಕಪಾಲ ಘಾಟ್ ಬದ್ರಿನಾಥದ ಬಳಿಯಿರುವ ಅಲಕಾನಂದ ತೀರದಲ್ಲಿದೆ.

ಬ್ರಹ್ಮಕಪಾಲ ಘಾಟ್: ಉತ್ತರಾಖಂಡದಲ್ಲಿರುವ ಬ್ರಹ್ಮಕಪಾಲ ಘಾಟ್ ಶ್ರಾದ್ಧಾ ಮತ್ತು ಪಿಂಡ ದಾನ ಕರ್ಮಗಳಿಗೆ ಅತ್ಯಂತ ಮಹತ್ವವನ್ನು ಹೊಂದಿದೆ. ಇಲ್ಲಿ ಶಿವನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತಿಯನ್ನು ಪಡೆದನೆಂಬ ಉಲ್ಲೇಖವಿದೆ. ಅಲ್ಲದೆ ಈ ಸ್ಥಳ ಮಹಾಭಾರತದೊಂದಿಗೂ ಸಂಬಂಧವನ್ನು ಹೊಂದಿದೆ. ಮಹಾಭಾರತ ಯುದ್ಧದ ನಂತರ ಪಾಂಡವರು ತಾವು ಮಾಡಿದ ಪಾಪಗಳಿಗೆ ಮುಕ್ತಿಯನ್ನು ಪಡೆಯಲು ಇಲ್ಲಿ ಪೂಜೆಯನ್ನು ನಡೆಸಿದ್ದರು. ಬ್ರಹ್ಮಕಪಾಲ ಘಾಟ್ ಬದ್ರಿನಾಥದ ಬಳಿಯಿರುವ ಅಲಕಾನಂದ ತೀರದಲ್ಲಿದೆ.

3 / 7
ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ: ಪವಿತ್ರ ನದಿಗಳಲ್ಲಿ ಬಿಡುವ ಪಿಂಡವು ತೃಪ್ತಿ ಹೊಂದುತ್ತದೆ ಎನ್ನಲಾಗುತ್ತೆ. ಹೀಗಾಗಿ ಗಂಗಾ, ಯಮುನಾ ಮತ್ತು ಸರಸ್ವತಿಯು ಸಂಗಮವಾಗುವ ಸ್ಥಳದಲ್ಲಿ ಪಿಂಡ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ತೀರ್ಥಯಾತ್ರೆಯ ರಾಜನೆಂದೇ ಪ್ರಸಿದ್ಧಿಯನ್ನು ಪಡೆದ ಪ್ರಯಾಗರಾಜದಲ್ಲಿ ಪ್ರತಿ ವರ್ಷ ಪಿತೃ ಪಕ್ಷದ ಸಮಯಕ್ಕೆ ದೊಡ್ಡ ಜಾತ್ರೆಯೇ ನಡೆಯುತ್ತದೆ. ಜನರು ದೂರದ ಊರಿನಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾರೆ. ಈ ಸ್ಥಳದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿ ನಿರ್ಮಾಣದ ಕಾರ್ಯ ಮುಗಿದ ನಂತರ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದನೆಂಬ ನಂಬಿಕೆಯಿದೆ. ಭಗವಾನ್ ವಿಷ್ಣು ಈ ಪವಿತ್ರ ಸ್ಥಳದ ಅಧಿಪತಿಯಾಗಿದ್ದಾನೆ.

ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ: ಪವಿತ್ರ ನದಿಗಳಲ್ಲಿ ಬಿಡುವ ಪಿಂಡವು ತೃಪ್ತಿ ಹೊಂದುತ್ತದೆ ಎನ್ನಲಾಗುತ್ತೆ. ಹೀಗಾಗಿ ಗಂಗಾ, ಯಮುನಾ ಮತ್ತು ಸರಸ್ವತಿಯು ಸಂಗಮವಾಗುವ ಸ್ಥಳದಲ್ಲಿ ಪಿಂಡ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ತೀರ್ಥಯಾತ್ರೆಯ ರಾಜನೆಂದೇ ಪ್ರಸಿದ್ಧಿಯನ್ನು ಪಡೆದ ಪ್ರಯಾಗರಾಜದಲ್ಲಿ ಪ್ರತಿ ವರ್ಷ ಪಿತೃ ಪಕ್ಷದ ಸಮಯಕ್ಕೆ ದೊಡ್ಡ ಜಾತ್ರೆಯೇ ನಡೆಯುತ್ತದೆ. ಜನರು ದೂರದ ಊರಿನಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾರೆ. ಈ ಸ್ಥಳದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿ ನಿರ್ಮಾಣದ ಕಾರ್ಯ ಮುಗಿದ ನಂತರ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದನೆಂಬ ನಂಬಿಕೆಯಿದೆ. ಭಗವಾನ್ ವಿಷ್ಣು ಈ ಪವಿತ್ರ ಸ್ಥಳದ ಅಧಿಪತಿಯಾಗಿದ್ದಾನೆ.

4 / 7
ಮೇಘಂಕರ: ಬ್ರಹ್ಮಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಶ್ರಾದ್ಧಾ ಮತ್ತು ಪಿಂಡ ದಾನ ಕಾರ್ಯಗಳಿಗೆ ಮಹಾರಾಷ್ಟ್ರದ ಮೇಘಂಕರ ಕೂಡ ಪವಿತ್ರವಾದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಮೇಘಂಕರವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಶ್ರಾದ್ಧಾವನ್ನು ಮಾಡುವುದರಿಂದ ಆ ವ್ಯಕ್ತಿಯ ಎಲ್ಲಾ ಪಾಪ - ಕರ್ಮಗಳು ದೂರಾಗುವುದು ಮತ್ತು ಮೋಕ್ಷದ ದಾರಿಯು ಸಿಗುವುದೆನ್ನುವ ನಂಬಿಕೆಯಿದೆ.

ಮೇಘಂಕರ: ಬ್ರಹ್ಮಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಶ್ರಾದ್ಧಾ ಮತ್ತು ಪಿಂಡ ದಾನ ಕಾರ್ಯಗಳಿಗೆ ಮಹಾರಾಷ್ಟ್ರದ ಮೇಘಂಕರ ಕೂಡ ಪವಿತ್ರವಾದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಮೇಘಂಕರವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಶ್ರಾದ್ಧಾವನ್ನು ಮಾಡುವುದರಿಂದ ಆ ವ್ಯಕ್ತಿಯ ಎಲ್ಲಾ ಪಾಪ - ಕರ್ಮಗಳು ದೂರಾಗುವುದು ಮತ್ತು ಮೋಕ್ಷದ ದಾರಿಯು ಸಿಗುವುದೆನ್ನುವ ನಂಬಿಕೆಯಿದೆ.

5 / 7
ಗಯಾ: ಕರ್ನಾಟಕದಲ್ಲಿನ ಲಕ್ಷ್ಮಣಬಾಣ ಕೂಡ ಪಿಂಡ ದಾನಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಭಗವಾನ್ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮತ್ತು ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಕೆಲವೊಂದು ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ತನ್ನ ತಾಯಿ, ಪತ್ನಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಗಯಾದಲ್ಲಿ ತಂದೆಗೆ ಪಿಂಡ ದಾನ ಮಾಡಿದನೆಂದು ಹೇಳಲಾಗುತ್ತದೆ.

ಗಯಾ: ಕರ್ನಾಟಕದಲ್ಲಿನ ಲಕ್ಷ್ಮಣಬಾಣ ಕೂಡ ಪಿಂಡ ದಾನಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಭಗವಾನ್ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮತ್ತು ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಕೆಲವೊಂದು ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ತನ್ನ ತಾಯಿ, ಪತ್ನಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಗಯಾದಲ್ಲಿ ತಂದೆಗೆ ಪಿಂಡ ದಾನ ಮಾಡಿದನೆಂದು ಹೇಳಲಾಗುತ್ತದೆ.

6 / 7
ಹಂಸ ಕುಂಡ ಮತ್ತು ರೇತಸ ಕುಂಡ: ಕೇದಾರನಾಥದಲ್ಲಿನ ಹಂಸ ಕುಂಡ ಮತ್ತು ರೇತಸ ಕುಂಡದಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ಆತ್ಮಗಳಿಗೆ ಮೋಕ್ಷ ದೊರೆಯುವುದೆನ್ನುವ ನಂಬಿಕೆಯಿದೆ. ಮೋಕ್ಷವಿಲ್ಲದೇ ಅಲೆದಾಡುತ್ತಿರುವ ಆತ್ಮಗಳಿಗೆ ಇಲ್ಲಿ ಮೋಕ್ಷವನ್ನು ನಿಡಲಾಗುವುದು. ಈ ಸ್ಥಳದಲ್ಲಿ ಶ್ರಾದ್ಧಾ ಕರ್ಮಗಳನ್ನು, ಪಿಂಡ ದಾನವನ್ನು ಮಾಡಬಹುದಾಗಿದೆ. ಅಯೋಧ್ಯೆಯಲ್ಲಿ ಪಿಂಡ ದಾನ ಮಾಡುವುದನ್ನು ಕೂಡ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಸಪ್ತಪುರಿಗಳಲ್ಲಿ ಅಯೋಧ್ಯೆಯನ್ನು ಮೊದಲ ಪುರಿಯೆಂದು ಗೌರವಿಸಲಾಗುವುದು. ಅಯೋಧ್ಯೆ ಪುರಿಯಲ್ಲಿ ಪಿಂಡ ದಾನ ಮಾಡುವುದರಿಂದ ಪಿತೃಪೂಜೆ ಮಾಡುವುದರಿಂದ ಪಿತೃಗಳು ಆಶೀರ್ವಾದವನ್ನು ಪಡೆದುಕೊಳ್ಳುವರು.

ಹಂಸ ಕುಂಡ ಮತ್ತು ರೇತಸ ಕುಂಡ: ಕೇದಾರನಾಥದಲ್ಲಿನ ಹಂಸ ಕುಂಡ ಮತ್ತು ರೇತಸ ಕುಂಡದಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ಆತ್ಮಗಳಿಗೆ ಮೋಕ್ಷ ದೊರೆಯುವುದೆನ್ನುವ ನಂಬಿಕೆಯಿದೆ. ಮೋಕ್ಷವಿಲ್ಲದೇ ಅಲೆದಾಡುತ್ತಿರುವ ಆತ್ಮಗಳಿಗೆ ಇಲ್ಲಿ ಮೋಕ್ಷವನ್ನು ನಿಡಲಾಗುವುದು. ಈ ಸ್ಥಳದಲ್ಲಿ ಶ್ರಾದ್ಧಾ ಕರ್ಮಗಳನ್ನು, ಪಿಂಡ ದಾನವನ್ನು ಮಾಡಬಹುದಾಗಿದೆ. ಅಯೋಧ್ಯೆಯಲ್ಲಿ ಪಿಂಡ ದಾನ ಮಾಡುವುದನ್ನು ಕೂಡ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಸಪ್ತಪುರಿಗಳಲ್ಲಿ ಅಯೋಧ್ಯೆಯನ್ನು ಮೊದಲ ಪುರಿಯೆಂದು ಗೌರವಿಸಲಾಗುವುದು. ಅಯೋಧ್ಯೆ ಪುರಿಯಲ್ಲಿ ಪಿಂಡ ದಾನ ಮಾಡುವುದರಿಂದ ಪಿತೃಪೂಜೆ ಮಾಡುವುದರಿಂದ ಪಿತೃಗಳು ಆಶೀರ್ವಾದವನ್ನು ಪಡೆದುಕೊಳ್ಳುವರು.

7 / 7
Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ