AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trinetra Ganesh Temple: ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪದ ಗಣೇಶ; ಈ ದೇವಸ್ಥಾನ ಎಲ್ಲಿದೆ ಗೊತ್ತಾ?

ರಾಜಸ್ಥಾನದ ರಣಥಂಬೋರ್ ಕೋಟೆಯಲ್ಲಿರುವ ತ್ರಿನೇತ್ರ ಗಣಪತಿ ದೇವಾಲಯ ಭಾರತದ ಏಕೈಕ ವಿಶಿಷ್ಟ ಕ್ಷೇತ್ರ. ಇಲ್ಲಿ ಗಣೇಶನು ಮೂರು ಕಣ್ಣುಗಳೊಂದಿಗೆ, ಪತ್ನಿಯರಾದ ಸಿದ್ಧಿ, ಬುದ್ಧಿ ಮತ್ತು ಪುತ್ರರಾದ ಶುಭ, ಲಾಭರೊಂದಿಗೆ ನೆಲೆಸಿದ್ದಾನೆ. 13ನೇ ಶತಮಾನದ ರಾಜ ಹಮೀರ್ ದೇವ್ ನಿರ್ಮಿಸಿದ ಈ ದೇಗುಲಕ್ಕೆ ಮದುವೆ, ಶುಭಕಾರ್ಯಗಳ ಮೊದಲ ಆಮಂತ್ರಣ ಪತ್ರಿಕೆ ಕಳುಹಿಸುವ ಅಪರೂಪದ ಸಂಪ್ರದಾಯವಿದೆ. ಇದು ಆಧ್ಯಾತ್ಮಿಕ ಇತಿಹಾಸದ ಅನನ್ಯ ಸಂಗಮ.

Trinetra Ganesh Temple: ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪದ ಗಣೇಶ; ಈ ದೇವಸ್ಥಾನ ಎಲ್ಲಿದೆ ಗೊತ್ತಾ?
ರಾಜಸ್ಥಾನದ ರಣಥಂಬೋರ್‌ನಲ್ಲಿರುವ ‘ತ್ರಿನೇತ್ರ ಗಣಪತಿ’Image Credit source: Pinterest
ಅಕ್ಷತಾ ವರ್ಕಾಡಿ
|

Updated on:Jun 19, 2026 | 11:01 AM

Share

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯವಿರಲಿ, ಮೊದಲು ಪೂಜಿಸಲ್ಪಡುವುದು ವಿಘ್ನನಿವಾರಕ ಗಣೇಶ. ಸಾಮಾನ್ಯವಾಗಿ ದೇಶದ ಬಹುತೇಕ ದೇವಾಲಯಗಳಲ್ಲಿ ಗಣಪತಿಯನ್ನು ಒಬ್ಬಂಟಿಯಾಗಿ ಅಥವಾ ಮೂಷಿಕ ವಾಹನದೊಂದಿಗೆ ನೋಡಿರುತ್ತೀರಿ. ಆದರೆ ರಾಜಸ್ಥಾನದ ಪುರಾತನ ಹಾಗೂ ಐತಿಹಾಸಿಕ ಕೋಟೆಯೊಂದರಲ್ಲಿ ಗಣೇಶನು ತನ್ನ ಇಡೀ ಕುಟುಂಬದೊಂದಿಗೆ ನೆಲೆಸಿದ್ದಾನೆ. ಅಷ್ಟೇ ಅಲ್ಲದೆ, ಇಲ್ಲಿ ಭಕ್ತರು ಮೂರು ಕಣ್ಣುಗಳನ್ನು ಹೊಂದಿರುವ ವಿನಾಯಕನ ಅತ್ಯಂತ ಅಪರೂಪದ ರೂಪವನ್ನು ಕಣ್ತುಂಬಿಕೊಳ್ಳಬಹುದು. ಈ ಭವ್ಯವಾದ ಧಾರ್ಮಿಕ ಕೇಂದ್ರವೇ ರಣಥಂಬೋರ್‌ನ ಪ್ರಸಿದ್ಧ ‘ತ್ರಿನೇತ್ರ ಗಣಪತಿ ದೇವಾಲಯ’.

ರಣಥಂಬೋರ್ ಕೋಟೆಯ ಒಡಲಲ್ಲಿರುವ ಆಧ್ಯಾತ್ಮಿಕ ವೈಭವ:

ಈ ಅದ್ಭುತ ದೇವಾಲಯವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಐತಿಹಾಸಿಕವಾಗಿ ಪ್ರಸಿದ್ಧವಾದ ರಣಥಂಬೋರ್ ಕೋಟೆಯ ಆವರಣದಲ್ಲಿದೆ. ಬೆಟ್ಟದ ಮೇಲಿರುವ ಈ ದೇವಸ್ಥಾನವು ದೇಶಾದ್ಯಂತದ ಪ್ರವಾಸಿಗರನ್ನು ಮತ್ತು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಸುತ್ತಲೂ ಹರಡಿರುವ ಪ್ರಕೃತಿ ಸೌಂದರ್ಯ ಮತ್ತು ಕೋಟೆಯ ಗಾಂಭೀರ್ಯದ ನಡುವೆ ನೆಲೆಸಿರುವ ಈ ಗಣಪತಿ ಸನ್ನಿಧಿ, ಆಧ್ಯಾತ್ಮಿಕತೆ ಮತ್ತು ಇತಿಹಾಸದ ಅಪೂರ್ವ ಸಂಗಮವಾಗಿ ಕಂಗೊಳಿಸುತ್ತಿದೆ.

ರಾಜ ಹಮೀರ್ ದೇವ್ ಮತ್ತು ಖಿಲ್ಜಿ ಯುದ್ಧದ ಕಥೆ:

ಈ ದೇವಾಲಯದ ನಿರ್ಮಾಣದ ಹಿಂದೆ 13ನೇ ಶತಮಾನದ ಒಂದು ಕುತೂಹಲಕಾರಿ ಇತಿಹಾಸವಿದೆ. ಆಗ ರಣಥಂಬೋರ್ ಅನ್ನು ಆಳುತ್ತಿದ್ದ ರಾಜ ಹಮೀರ್ ದೇವ್ ಗಣೇಶನ ಪರಮ ಭಕ್ತನಾಗಿದ್ದನು. ಆ ಸಮಯದಲ್ಲಿ ದೆಹಲಿಯ ಸುಲ್ತಾನ ಅಲಾವುದ್ದೀನ್ ಖಿಲ್ಜಿ ಈ ಕೋಟೆಯ ಮೇಲೆ ದಾಳಿ ಮಾಡಿದ್ದರಿಂದ ಸುದೀರ್ಘ ಯುದ್ಧ ನಡೆಯಿತು. ಯುದ್ಧ ಮುಂದುವರೆದಂತೆ ಕೋಟೆಯಲ್ಲಿದ್ದ ಧಾನ್ಯ ಮತ್ತು ಅಗತ್ಯ ಸಾಮಗ್ರಿಗಳ ದಾಸ್ತಾನು ಖಾಲಿಯಾಗತೊಡಗಿತು. ಇದರಿಂದ ಚಿಂತಿತನಾದ ರಾಜನು ಗಣೇಶನಿಗೆ ಶರಣಾಗಿ ಪ್ರಾರ್ಥಿಸಿದಾಗ, ಅರಸನ ಕನಸಿನಲ್ಲಿ ಬಂದ ವಿಘ್ನೇಶ್ವರನು “ಚಿಂತಿಸಬೇಡ, ಎಲ್ಲವೂ ಸರಿಯಾಗುತ್ತದೆ” ಎಂದು ಅಭಯ ನೀಡಿದನಂತೆ.

ಗೋಡೆಯ ಮೇಲೆ ಪ್ರತ್ಯಕ್ಷನಾದ ಮೂರು ಕಣ್ಣುಗಳ ಗಣಪತಿ:

ಸ್ಥಳೀಯ ನಂಬಿಕೆಗಳ ಪ್ರಕಾರ, ಮರುದಿನ ಮುಂಜಾನೆ ಕೋಟೆಯ ಗೋಡೆಯ ಮೇಲೆ ಮೂರು ಕಣ್ಣುಗಳಿರುವ ಗಣೇಶನ ಆಕೃತಿ ಪವಾಡ ಸದೃಶವಾಗಿ ಮೂಡಿಬಂದಿತ್ತು. ಅದರ ಬೆನ್ನಲ್ಲೇ ಯುದ್ಧದ ಪರಿಸ್ಥಿತಿಯೂ ಬದಲಾಗಿ ಶತ್ರು ಪಡೆಗಳು ಹಿಮ್ಮೆಟ್ಟಿದವು. ಅಚ್ಚರಿಯೆಂದರೆ ಖಾಲಿಯಾಗುತ್ತಿದ್ದ ಕೋಟೆಯ ಧಾನ್ಯದ ಉಗ್ರಾಣಗಳು ಕೂಡ ಮತ್ತೆ ಭರ್ತಿಯಾಗಿದ್ದವು. ಈ ದೈವಿಕ ಮಹಿಮೆಗೆ ಕೃತಜ್ಞತೆ ಸಲ್ಲಿಸಲು ರಾಜ ಹಮೀರ್ ದೇವ್ ಗಣೇಶನು ಪ್ರತ್ಯಕ್ಷನಾದ ಅದೇ ಜಾಗದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ.

ಇಡೀ ಕುಟುಂಬದೊಂದಿಗೆ ನೆಲೆಸಿರುವ ವಿನಾಯಕನ ವಿಶೇಷತೆ:

ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪವನ್ನು ನಾವು ಇಲ್ಲಿ ನೋಡಬಹುದು. ಇಲ್ಲಿ ಗಣೇಶನು ಕೇವಲ ತ್ರಿನೇತ್ರಧಾರಿಯಾಗಿ ಮಾತ್ರವಲ್ಲದೆ, ತನ್ನ ಇಡೀ ಕುಟುಂಬದೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಾನೆ. ವಿಘ್ನರಾಜನ ಪಕ್ಕದಲ್ಲೇ ಆತನ ಪತ್ನಿಯರಾದ ಸಿದ್ಧಿ ಮತ್ತು ಬುದ್ಧಿ ದೇವತೆಗಳು ಕುಳಿತಿದ್ದರೆ, ಅವರ ಮುದ್ದಿನ ಪುತ್ರರಾದ ಶುಭ್ ಮತ್ತು ಲಾಭ್ ಕೂಡ ಜೊತೆಯಲ್ಲಿದ್ದಾರೆ. ಇಡೀ ಪರಿವಾರದೊಂದಿಗೆ ನೆಲೆಸಿರುವ ಈ ಗಣಪತಿಯನ್ನು ದರ್ಶನ ಮಾಡುವುದರಿಂದ ಕೌಟುಂಬಿಕ ಸಂತೋಷ, ಸಂಪತ್ತು, ಬುದ್ಧಿಶಕ್ತಿ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೇರ ಗಣಪತಿಗೆ:

ಈ ದೇವಾಲಯದಲ್ಲಿ ಒಂದು ಅತ್ಯಂತ ವಿಶಿಷ್ಟ ಮತ್ತು ಸುಂದರವಾದ ಸಂಪ್ರದಾಯ ರೂಢಿಯಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿ ಹಿಂದೂ ಕುಟುಂಬಗಳಲ್ಲಿ ಮದುವೆ ಅಥವಾ ಯಾವುದೇ ಶುಭ ಕಾರ್ಯ ನಿಶ್ಚಯವಾದರೂ, ಭಕ್ತರು ತಮ್ಮ ಮೊದಲ ಆಮಂತ್ರಣ ಪತ್ರಿಕೆಯನ್ನು (ಲಗ್ನ ಪತ್ರಿಕೆ) ಈ ತ್ರಿನೇತ್ರ ಗಣೇಶನ ವಿಳಾಸಕ್ಕೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸುತ್ತಾರೆ. ತಮ್ಮ ಮನೆಗೆ ಬಂದು ಆಶೀರ್ವದಿಸಲಿ ಎಂದು ಭಕ್ತರು ಕಳುಹಿಸುವ ಸಾವಿರಾರು ಮದುವೆ ಪತ್ರಿಕೆಗಳು ಪ್ರತಿದಿನ ಈ ದೇವಾಲಯಕ್ಕೆ ಬಂದು ತಲುಪುತ್ತವೆ.

ರಣಥಂಬೋರ್ ದೇವಾಲಯ ತಲುಪುವುದು ಹೇಗೆ?

ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಲು ಬಯಸುವವರಿಗೆ ಸವಾಯಿ ಮಾಧೋಪುರ್ ಜಂಕ್ಷನ್ ಅತ್ಯಂತ ಹತ್ತಿರದ ರೈಲು ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲು ಸೌಲಭ್ಯವಿದೆ. ರೈಲು ನಿಲ್ದಾಣದಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ರಣಥಂಬೋರ್ ಕೋಟೆಗೆ ತಲುಪಲು ಖಾಸಗಿ ವಾಹನಗಳು, ಟ್ಯಾಕ್ಸಿಗಳು ಮತ್ತು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಅತ್ಯಂತ ವಿಶೇಷ ಮತ್ತು ಪವಿತ್ರ ಆಧ್ಯಾತ್ಮಿಕ ತಾಣವಿದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 19 June 26

Follow Us
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ