AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhasma for Lord Shiva: ಪರಮಾತ್ಮ ಶಿವನಿಗೆ ಭಸ್ಮಅಂದರೆ ‘ಪ್ರೀತಿ’ ಯಾಕೆ? ಪುರುಷರು ಮಾತ್ರ ಶಿವನಿಗೆ ಭಸ್ಮ ಅರ್ಪಿಸುತ್ತಾರೆ, ಕಾರಣ ಏನು?

ಶಿವನಿಗೆ ಪ್ರಿಯವಾದ ಭಸ್ಮಧಾರಣೆಯ ಹಿಂದಿನ ಪೌರಾಣಿಕ ನಂಬಿಕೆಯು ಬಹಳ ಜನಪ್ರಿಯವಾಗಿದೆ. ಸತಿ ದೇವಿಯು ತನ್ನ ತಂದೆ ದಕ್ಷನ ಯಜ್ಞದ ಸಮಯದಲ್ಲಿ ಸತಿಗೆ ತನ್ನ ದೇಹವನ್ನು ಅರ್ಪಿಸಿದಳು. ಶಿವನಿಗೆ ಭಸ್ಮಅಂದರೆ ’ಪ್ರೀತಿ‘ ಯಾಕೆ? ಎಂಬುದು ಅಲ್ಲಿಂದ ಉದ್ಭವವಾಗುತ್ತದೆ

Bhasma for Lord Shiva: ಪರಮಾತ್ಮ ಶಿವನಿಗೆ ಭಸ್ಮಅಂದರೆ ‘ಪ್ರೀತಿ’ ಯಾಕೆ? ಪುರುಷರು ಮಾತ್ರ ಶಿವನಿಗೆ ಭಸ್ಮ ಅರ್ಪಿಸುತ್ತಾರೆ, ಕಾರಣ ಏನು?
ಪರಮಾತ್ಮ ಶಿವನಿಗೆ ಭಸ್ಮಅಂದರೆ ’ಪ್ರೀತಿ‘ ಯಾಕೆ?
ಸಾಧು ಶ್ರೀನಾಥ್​
|

Updated on:Aug 03, 2023 | 1:11 PM

Share

ಶಿವನ ಮಹಿಮೆ ಅಪಾರ. ಶಿವನು (Lord Shiva) ಕರುಣಾಮಯಿ ವ್ಯಕ್ತಿ ಎಂಬುದು ಹಿಂದೂಗಳ ನಂಬಿಕೆ. ಶಿವನ ಹುಟ್ಟು ಮತ್ತು ಸಾವಿನ ಬಂಧನಗಳಿಂದ ಮುಕ್ತವಾಗುತ್ತಾನೆ, ಇತರರ ದುಃಖದಲ್ಲಿ ಸಾಂತ್ವನ ಹೇಳುತ್ತಾನೆ ಆ ಪರಮಾತ್ಮ. ನೀವು ಮಾಡಬೇಕಾಗಿರುವುದು ಭಕ್ತಿಯಿಂದ ನೀರನ್ನು ಅರ್ಪಿಸಿ ನಮಸ್ಕರಿಸಿ, ಶಿವ ಸಂಪ್ರೀತನಾಗುತ್ತಾನೆ. ಆತ ಧಾರಾಳವಾಗಿ ತನ್ನ ಆಶೀರ್ವಾದವನ್ನು ಧಾರೆಯೆರೆಯುತ್ತಾನೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ಶಿವನನ್ನು ಭೋಲಾ ಶಂಕರ ಎಂದೂ ಕರೆಯುತ್ತಾರೆ. ಮೇಲಾಗಿ ಶಿವನ ಜೀವನ ಕ್ರಮ ಬೇರೆ ದೇವರುಗಳ ರೀತಿ ಅಲ್ಲ. ಸ್ಮಶಾನಗಳಲ್ಲಿ ವಾಸಿಸುವ, ಹಾವುಗಳನ್ನು ಆಭರಣವಾಗಿ ಧರಿಸುವ, ದೇಹಕ್ಕೆ ಬೂದಿಯನ್ನು ಲೇಪಿಸುವ ಶಂಕರ ಆತ. ವಿಶೇಷವಾಗಿ ಭಸ್ಮ ಎಂಬುದು ಶಿವನಿಗೆ ಪ್ರಿಯವಾದದ್ದು ಎಂದು ಪುರಾಣ ಗ್ರಂಥಗಳಲ್ಲಿ (Spiritual) ಹೇಳಲಾಗಿದೆ. ದೇವಾದಿದೇವನು ತನ್ನ ದೇಹದ ಮೇಲೆ ಬೂದಿಯನ್ನು ಏಕೆ ಹಚ್ಚುತ್ತಾನೆ ಎಂದು ಇಲ್ಲಿ ತಿಳಿದುಕೊಳ್ಳೋಣ (Shravana Masa 2023).

ಭಸ್ಮದಲ್ಲಿರುವ ಎರಡು ಅಕ್ಷರಗಳ ಅರ್ಥ ಹೀಗಿದೆ – ಭ ಎಂದರೆ ಭತ್ಸರಣಂ.. ಎಂದರೆ ನಾಶ ಮಾಡುವುದು, ಇನ್ನು ಸ್ಮ ಎಂದರೆ ಪಾಪಗಳನ್ನು ನಾಶ ಮಾಡಿ ದೇವರನ್ನು ಸ್ಮರಿಸುವುದು ಎಂದರ್ಥ. ಭಸ್ಮ ಎಂದರೆ ಪಾಪಗಳನ್ನು ಸುಡುವುದು ಎಂದು ಪಂಡಿತರು ಹೇಳುತ್ತಾರೆ. ಭಸ್ಮ ನಮಗೆ ಜೀವನದ ನಶ್ವರತೆಯನ್ನು ನೆನಪಿಸುತ್ತಲೇ ಇರುತ್ತದೆ. ಭಸ್ಮವು ಭಗವಾನ್ ಶಿವನ ರೂಪವಾಗಿದೆ ಮತ್ತು ಅದನ್ನು ಬಳಸುವುದರಿಂದ ದುಃಖಗಳು ಮತ್ತು ಪಾಪಗಳು ನಾಶವಾಗುತ್ತವೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಭಸ್ಮವನ್ನು ಮಂಗಳಕರವೆಂದು ವಿವರಿಸಲಾಗಿದೆ.

Also Read: ಝಾನ್ಸಿಯಲ್ಲಿ ಸಾಕ್ಷಾತ್​​ ಶಿವನನ್ನು ಸಾಂಪ್ರದಾಯಿಕವಾಗಿ, ಅದ್ದೂರಿಯಾಗಿ ಅಕ್ಷರಶಃ ಮದುವೆಯಾದ ಯುವತಿ! ಫೋಟೋಗಳು ವೈರಲ್

ಭಸ್ಮವನ್ನು ಶಿವನಿಗೆ ಏಕೆ ಅರ್ಪಿಸಲಾಗುತ್ತದೆ?

ತ್ರಿನೇತ್ರ ಶಿವನಿಗೆ ಭಸ್ಮ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಭಸ್ಮವನ್ನು ಶಿವನಿಗೆ ಆಭರಣವೆಂದು ಪರಿಗಣಿಸಲಾಗಿದೆ. ಭಗವಾನ್ ಶಿವನಿಗೆ ಭಸ್ಮವನ್ನು ಅರ್ಪಿಸುವ ಭಕ್ತರಿಗೆ ತತಕ್ಷಣ ಆಶೀರ್ವದಿಸುತ್ತಾನೆ. ಇದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಭಸ್ಮವನ್ನು ಅರ್ಪಿಸುವುದರಿಂದ ಮನಸ್ಸು ಲೌಕಿಕ ಭ್ರಮೆಗಳಿಂದ ಮುಕ್ತವಾಗುತ್ತದೆ ಎಂಬುದು ನಂಬಿಕೆ. ಆದರೆ ಪುರುಷರು ಮಾತ್ರ ಶಿವನಿಗೆ ಭಸ್ಮವನ್ನು ಅರ್ಪಿಸುತ್ತಾರೆ. ಸ್ತ್ರೀಯರು ಭಸ್ಮವನ್ನು ಅರ್ಪಿಸುವುದು ಶುಭವಲ್ಲ.

ಶಿವನ ದಹನದ ಹಿಂದಿನ ಪೌರಾಣಿಕ ನಂಬಿಕೆ

ಭಗವಾನ್ ಶಿವನಿಗೆ ಪ್ರಿಯವಾದ ಭಸ್ಮಧಾರಣೆಯ ಹಿಂದಿನ ಪೌರಾಣಿಕ ನಂಬಿಕೆಯು ಬಹಳ ಜನಪ್ರಿಯವಾಗಿದೆ. ಸತಿ ದೇವಿಯು ತನ್ನ ತಂದೆ ದಕ್ಷನ ಯಜ್ಞದ ಸಮಯದಲ್ಲಿ ಸತಿಗೆ ತನ್ನ ದೇಹವನ್ನು ಅರ್ಪಿಸಿದಳು. ಶಿವನು ಸತಿಯ ಮೃತದೇಹವನ್ನು ಹಿಡಿದಿರುವಾಗ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಸುಟ್ಟುಹಾಕಿದನು. ಭಗವಾನ್ ಶಿವನು ಸತಿಯ ದೇಹದ ಚಿತಾಭಸ್ಮವನ್ನು ತನ್ನ ದೇಹಕ್ಕೆ ಹೊದಿಸಿಕೊಳ್ಲುತ್ತಾನೆ. ಅಂದಿನಿಂದ ಮಹಾದೇವನಿಗೆ ಭಸ್ಮ ಎಂದರೆ ತುಂಬಾ ಇಷ್ಟ ಎಂದು ನಂಬಲಾಗಿದೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಅವರವರ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಮಾಹಿತಿ ಒದಗಿಸಿದ್ದೇವೆ.

Published On - 1:10 pm, Thu, 3 August 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು