AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhasma for Lord Shiva: ಪರಮಾತ್ಮ ಶಿವನಿಗೆ ಭಸ್ಮಅಂದರೆ ‘ಪ್ರೀತಿ’ ಯಾಕೆ? ಪುರುಷರು ಮಾತ್ರ ಶಿವನಿಗೆ ಭಸ್ಮ ಅರ್ಪಿಸುತ್ತಾರೆ, ಕಾರಣ ಏನು?

ಶಿವನಿಗೆ ಪ್ರಿಯವಾದ ಭಸ್ಮಧಾರಣೆಯ ಹಿಂದಿನ ಪೌರಾಣಿಕ ನಂಬಿಕೆಯು ಬಹಳ ಜನಪ್ರಿಯವಾಗಿದೆ. ಸತಿ ದೇವಿಯು ತನ್ನ ತಂದೆ ದಕ್ಷನ ಯಜ್ಞದ ಸಮಯದಲ್ಲಿ ಸತಿಗೆ ತನ್ನ ದೇಹವನ್ನು ಅರ್ಪಿಸಿದಳು. ಶಿವನಿಗೆ ಭಸ್ಮಅಂದರೆ ’ಪ್ರೀತಿ‘ ಯಾಕೆ? ಎಂಬುದು ಅಲ್ಲಿಂದ ಉದ್ಭವವಾಗುತ್ತದೆ

Bhasma for Lord Shiva: ಪರಮಾತ್ಮ ಶಿವನಿಗೆ ಭಸ್ಮಅಂದರೆ ‘ಪ್ರೀತಿ’ ಯಾಕೆ? ಪುರುಷರು ಮಾತ್ರ ಶಿವನಿಗೆ ಭಸ್ಮ ಅರ್ಪಿಸುತ್ತಾರೆ, ಕಾರಣ ಏನು?
ಪರಮಾತ್ಮ ಶಿವನಿಗೆ ಭಸ್ಮಅಂದರೆ ’ಪ್ರೀತಿ‘ ಯಾಕೆ?
Follow us
ಸಾಧು ಶ್ರೀನಾಥ್​
|

Updated on:Aug 03, 2023 | 1:11 PM

ಶಿವನ ಮಹಿಮೆ ಅಪಾರ. ಶಿವನು (Lord Shiva) ಕರುಣಾಮಯಿ ವ್ಯಕ್ತಿ ಎಂಬುದು ಹಿಂದೂಗಳ ನಂಬಿಕೆ. ಶಿವನ ಹುಟ್ಟು ಮತ್ತು ಸಾವಿನ ಬಂಧನಗಳಿಂದ ಮುಕ್ತವಾಗುತ್ತಾನೆ, ಇತರರ ದುಃಖದಲ್ಲಿ ಸಾಂತ್ವನ ಹೇಳುತ್ತಾನೆ ಆ ಪರಮಾತ್ಮ. ನೀವು ಮಾಡಬೇಕಾಗಿರುವುದು ಭಕ್ತಿಯಿಂದ ನೀರನ್ನು ಅರ್ಪಿಸಿ ನಮಸ್ಕರಿಸಿ, ಶಿವ ಸಂಪ್ರೀತನಾಗುತ್ತಾನೆ. ಆತ ಧಾರಾಳವಾಗಿ ತನ್ನ ಆಶೀರ್ವಾದವನ್ನು ಧಾರೆಯೆರೆಯುತ್ತಾನೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ಶಿವನನ್ನು ಭೋಲಾ ಶಂಕರ ಎಂದೂ ಕರೆಯುತ್ತಾರೆ. ಮೇಲಾಗಿ ಶಿವನ ಜೀವನ ಕ್ರಮ ಬೇರೆ ದೇವರುಗಳ ರೀತಿ ಅಲ್ಲ. ಸ್ಮಶಾನಗಳಲ್ಲಿ ವಾಸಿಸುವ, ಹಾವುಗಳನ್ನು ಆಭರಣವಾಗಿ ಧರಿಸುವ, ದೇಹಕ್ಕೆ ಬೂದಿಯನ್ನು ಲೇಪಿಸುವ ಶಂಕರ ಆತ. ವಿಶೇಷವಾಗಿ ಭಸ್ಮ ಎಂಬುದು ಶಿವನಿಗೆ ಪ್ರಿಯವಾದದ್ದು ಎಂದು ಪುರಾಣ ಗ್ರಂಥಗಳಲ್ಲಿ (Spiritual) ಹೇಳಲಾಗಿದೆ. ದೇವಾದಿದೇವನು ತನ್ನ ದೇಹದ ಮೇಲೆ ಬೂದಿಯನ್ನು ಏಕೆ ಹಚ್ಚುತ್ತಾನೆ ಎಂದು ಇಲ್ಲಿ ತಿಳಿದುಕೊಳ್ಳೋಣ (Shravana Masa 2023).

ಭಸ್ಮದಲ್ಲಿರುವ ಎರಡು ಅಕ್ಷರಗಳ ಅರ್ಥ ಹೀಗಿದೆ – ಭ ಎಂದರೆ ಭತ್ಸರಣಂ.. ಎಂದರೆ ನಾಶ ಮಾಡುವುದು, ಇನ್ನು ಸ್ಮ ಎಂದರೆ ಪಾಪಗಳನ್ನು ನಾಶ ಮಾಡಿ ದೇವರನ್ನು ಸ್ಮರಿಸುವುದು ಎಂದರ್ಥ. ಭಸ್ಮ ಎಂದರೆ ಪಾಪಗಳನ್ನು ಸುಡುವುದು ಎಂದು ಪಂಡಿತರು ಹೇಳುತ್ತಾರೆ. ಭಸ್ಮ ನಮಗೆ ಜೀವನದ ನಶ್ವರತೆಯನ್ನು ನೆನಪಿಸುತ್ತಲೇ ಇರುತ್ತದೆ. ಭಸ್ಮವು ಭಗವಾನ್ ಶಿವನ ರೂಪವಾಗಿದೆ ಮತ್ತು ಅದನ್ನು ಬಳಸುವುದರಿಂದ ದುಃಖಗಳು ಮತ್ತು ಪಾಪಗಳು ನಾಶವಾಗುತ್ತವೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಭಸ್ಮವನ್ನು ಮಂಗಳಕರವೆಂದು ವಿವರಿಸಲಾಗಿದೆ.

Also Read: ಝಾನ್ಸಿಯಲ್ಲಿ ಸಾಕ್ಷಾತ್​​ ಶಿವನನ್ನು ಸಾಂಪ್ರದಾಯಿಕವಾಗಿ, ಅದ್ದೂರಿಯಾಗಿ ಅಕ್ಷರಶಃ ಮದುವೆಯಾದ ಯುವತಿ! ಫೋಟೋಗಳು ವೈರಲ್

ಭಸ್ಮವನ್ನು ಶಿವನಿಗೆ ಏಕೆ ಅರ್ಪಿಸಲಾಗುತ್ತದೆ?

ತ್ರಿನೇತ್ರ ಶಿವನಿಗೆ ಭಸ್ಮ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಭಸ್ಮವನ್ನು ಶಿವನಿಗೆ ಆಭರಣವೆಂದು ಪರಿಗಣಿಸಲಾಗಿದೆ. ಭಗವಾನ್ ಶಿವನಿಗೆ ಭಸ್ಮವನ್ನು ಅರ್ಪಿಸುವ ಭಕ್ತರಿಗೆ ತತಕ್ಷಣ ಆಶೀರ್ವದಿಸುತ್ತಾನೆ. ಇದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಭಸ್ಮವನ್ನು ಅರ್ಪಿಸುವುದರಿಂದ ಮನಸ್ಸು ಲೌಕಿಕ ಭ್ರಮೆಗಳಿಂದ ಮುಕ್ತವಾಗುತ್ತದೆ ಎಂಬುದು ನಂಬಿಕೆ. ಆದರೆ ಪುರುಷರು ಮಾತ್ರ ಶಿವನಿಗೆ ಭಸ್ಮವನ್ನು ಅರ್ಪಿಸುತ್ತಾರೆ. ಸ್ತ್ರೀಯರು ಭಸ್ಮವನ್ನು ಅರ್ಪಿಸುವುದು ಶುಭವಲ್ಲ.

ಶಿವನ ದಹನದ ಹಿಂದಿನ ಪೌರಾಣಿಕ ನಂಬಿಕೆ

ಭಗವಾನ್ ಶಿವನಿಗೆ ಪ್ರಿಯವಾದ ಭಸ್ಮಧಾರಣೆಯ ಹಿಂದಿನ ಪೌರಾಣಿಕ ನಂಬಿಕೆಯು ಬಹಳ ಜನಪ್ರಿಯವಾಗಿದೆ. ಸತಿ ದೇವಿಯು ತನ್ನ ತಂದೆ ದಕ್ಷನ ಯಜ್ಞದ ಸಮಯದಲ್ಲಿ ಸತಿಗೆ ತನ್ನ ದೇಹವನ್ನು ಅರ್ಪಿಸಿದಳು. ಶಿವನು ಸತಿಯ ಮೃತದೇಹವನ್ನು ಹಿಡಿದಿರುವಾಗ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಸುಟ್ಟುಹಾಕಿದನು. ಭಗವಾನ್ ಶಿವನು ಸತಿಯ ದೇಹದ ಚಿತಾಭಸ್ಮವನ್ನು ತನ್ನ ದೇಹಕ್ಕೆ ಹೊದಿಸಿಕೊಳ್ಲುತ್ತಾನೆ. ಅಂದಿನಿಂದ ಮಹಾದೇವನಿಗೆ ಭಸ್ಮ ಎಂದರೆ ತುಂಬಾ ಇಷ್ಟ ಎಂದು ನಂಬಲಾಗಿದೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಅವರವರ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಮಾಹಿತಿ ಒದಗಿಸಿದ್ದೇವೆ.

Published On - 1:10 pm, Thu, 3 August 23

ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್