AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನದಿ ತೀರದಲ್ಲಿ ಸ್ನಾನ ಮಾಡುತ್ತಿರುವ ಕನಸು ಕಂಡರೆ ಅದು ಶುಭದ ಮುನ್ಸೂಚನೆ

Bathing in Dream: ಒಂದು ವೇಳೆ ನಿಮ್ಮ ಕನಸಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳುತ್ತಿರುವ ಹಾಗೆ ಕಾಣಿಸಿದರೆ ಇದು ಒಂದು ರೀತಿಯ ಒಳ್ಳೆಯ ಕನಸು ಅಂತನೇ ಹೇಳಬಹುದು. ನೀವು ತುಂಬಾ ತಿಂಗಳುಗಳಿಂದ ಅಥವಾ ವರ್ಷಗಳಿಂದ ಯಾವುದಾದರೂ ಒಂದು ಗುರಿಯನ್ನು ಮುಟ್ಟಬೇಕು ಎಂದು ಕಷ್ಟಪಡುತ್ತಿದ್ದರೆ / ಪ್ರಯತ್ನ ಪಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಆ ಗುರಿಯನ್ನು ನೀವು ತಪ್ಪದೆ ಮುಟ್ಟುತ್ತೀರಾ ಎಂದು ಈ ಕನಸು ನಿಮಗೆ ತಿಳಿಸುತ್ತಿದೆ ಎನ್ನಬಹುದು.

ನದಿ ತೀರದಲ್ಲಿ ಸ್ನಾನ ಮಾಡುತ್ತಿರುವ ಕನಸು ಕಂಡರೆ ಅದು ಶುಭದ ಮುನ್ಸೂಚನೆ
ಕೊಳಕು ನೀರಿನಲ್ಲಿ ಸ್ನಾನ ಮಾಡಿದಂತೆ ಕನಸು ಕಂಡರೆ ಅದರ ಅರ್ಥ ಏನು?
ಸಾಧು ಶ್ರೀನಾಥ್​
|

Updated on:Oct 10, 2024 | 9:25 AM

Share

Dream of bathing in dirty water: ಅಕಸ್ಮಾತ್ ಕನಸಿನಲ್ಲಿ ನೀವು ಸ್ನಾನ ಮಾಡುವ ಪ್ರಸಂಗ ಕಂಡುಬಂದರೆ ಜ್ಯೋತಿಷ್ಯದ ಪ್ರಕಾರ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ನೀವು ಒಳ್ಳೆಯ ನೀರಿನಿಂದ ಅಂದರೆ ಬಾತ್​​ರೂಮಿನಲ್ಲಿ ಅಥವಾ ಯಾವುದಾದರೂ ನದಿ ತೀರದಲ್ಲಿ ಸ್ನಾನ ಮಾಡುತ್ತಿರುವ ಹಾಗೆ ಕಾಣಿಸಿದರೆ ಅದನ್ನು ಶುಭ ಎಂದು ಪರಿಗಣಿಸಬಹುದು. ಅದು ನಿಮಗೆ ಒಳಿತಾಗುವುದರ ಮುನ್ಸೂಚನೆ ಎನ್ನಬಹುದು.

ಜಲಪಾತ ಅಥವಾ ಬೇರೆ ಎಲ್ಲಿಯೇ ಆಗಲಿ ಆಗಲಿ ಒಳ್ಳೆಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ತುಂಬಾನೇ ಒಳ್ಳೆಯ ಕನಸು ಎಂದು ಭಾವಿಸಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂದು ಈ ಕನಸು ನಿಮಗೆ ಹೇಳುತ್ತಿದೆ. ಅಷ್ಟೇ ಅಲ್ಲದೆ ಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಇನ್ನು ನೀವು ಯಾವುದಾದರೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವಾಗ ಒಂದು ವೇಳೆ ನೀವು ಸ್ನಾನ ಮಾಡುತ್ತಿರುವ ಕನಸು ಕಂಡರೆ ಮುಂಬರುವ ದಿನಗಳಲ್ಲಿ ಗುಣಮುಖರಾಗುತ್ತೀರ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ. ಒಂದು ವೇಳೆ ನಿಮಗೆ ಆರೋಗ್ಯ ಚೆನ್ನಾಗಿಯೇ ಇದ್ದು, ಇಂತಹ ಕನಸು ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲಿಕ್ಕೆ ಇನ್ನಷ್ಟು ಪ್ರಯತ್ನವನ್ನು ಪಡುತ್ತೀರಾ ಎಂಬ ಮಾಹಿತಿಯನ್ನು ಸಹ ಈ ಕನಸು ತಿಳಿಸುತ್ತದೆ.

ಅದೇ ಒಂದು ವೇಳೆ, ನಿಮ್ಮ ಕನಸಿನಲ್ಲಿ ನೀವು ಕೊಳಕು ನೀರಿನಿಂದ ಸ್ನಾನವನ್ನು ಮಾಡುತ್ತಿರುವ ರೀತಿ ಕನಸು ಬಂದರೆ ಇದು ಅಷ್ಟಾಗಿ ಒಳ್ಳೆಯ ಕನಸಲ್ಲ ಎಂಬ ಲೆಕ್ಕಾಚಾರ ಹಾಕಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಮಾನಸಿಕ ತುಮುಲ ಕಾಡುತ್ತದೆ ಎಂದು ಈ ಕನಸು ನಿಮ್ಮನ್ನು ಎಚ್ಚರಿಸುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳನ್ನೂ ತುಂಬಾ ಹುಷಾರಾಗಿ ಮಾಡಬೇಕೆಂದು ಎಂದು ಈ ಕನಸು ತಿಳಿಸುತ್ತದೆ. ಗಂಡಾಂತರ ಇರುವಂತಹ ಕೆಲಸಗಳನ್ನು ನೀವು ತುಂಬಾ ಯೋಚಿಸಿ ಬುದ್ಧಿವಂತಿಕೆಯಿಂದ ಮಾಡಬೇಕು ಎಂದು ಈ ಕನಸು ನಿಮಗೆ ತಿಳಿಸುತ್ತದೆ.

ಇದನ್ನೂ ಓದಿ: Dasara 2024 – ಈ ಬಾರಿ ನವರಾತ್ರಿ 9 ಅಲ್ಲ 10 ದಿನ ಇರುತ್ತದೆ, ಅದರಿಂದ ಏನಾಗುತ್ತದೆ?

ಒಂದು ವೇಳೆ ನಿಮ್ಮ ಕನಸಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳುತ್ತಿರುವ ಹಾಗೆ ಕಾಣಿಸಿದರೆ ಇದು ಒಂದು ರೀತಿಯ ಒಳ್ಳೆಯ ಕನಸು ಅಂತನೇ ಹೇಳಬಹುದು. ನೀವು ತುಂಬಾ ತಿಂಗಳುಗಳಿಂದ ಅಥವಾ ವರ್ಷಗಳಿಂದ ಯಾವುದಾದರೂ ಒಂದು ಗುರಿಯನ್ನು ಮುಟ್ಟಬೇಕು ಎಂದು ಕಷ್ಟಪಡುತ್ತಿದ್ದರೆ / ಪ್ರಯತ್ನ ಪಡುತ್ತಿದ್ದರೆ ಮುಂಬರುವ ದಿನಗಳಲ್ಲಿ ಆ ಗುರಿಯನ್ನು ನೀವು ತಪ್ಪದೆ ಮುಟ್ಟುತ್ತೀರಾ ಎಂದು ಈ ಕನಸು ನಿಮಗೆ ತಿಳಿಸುತ್ತಿದೆ ಎನ್ನಬಹುದು. ಒಟ್ಟಾರೆಯಾಗಿ ನಿಮ್ಮ ಕನಸಿನಲ್ಲಿ ಒಳ್ಳೆಯ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯ ಸಂಕೇತ ಕೆಟ್ಟ ನೀರಿನಿಂದ ಸ್ನಾನ ಮಾಡಿದರೆ ಕೆಟ್ಟ ಸಂಕೇತ ಎಂದು ತಿಳಿದುಕೊಳ್ಳಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 2:02 am, Wed, 9 October 24

ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?