AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ

ಭಾರತೀಯ ದೇಶಿಯ ಕ್ರಿಕೆಟ್‌ನಲ್ಲಿ ಪಾರದರ್ಶಕತೆ ಮತ್ತು ಶಿಸ್ತನ್ನು ಹೆಚ್ಚಿಸಲು ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಶಿಫಾರಸುಗಳ ಅಡಿಯಲ್ಲಿ ತರಲಾಗಿರುವ ಈ ನಿಯಮಗಳು, ಕೇವಲ ಬೌಲಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್, ಓವರ್‌ಥ್ರೋ ಮತ್ತು ಪಂದ್ಯದ ಫಲಿತಾಂಶಗಳ ಮೇಲೂ ಭಾರಿ ಪ್ರಭಾವ ಬೀರಲಿವೆ. ಈ ಹೊಸ ನಿಯಮಗಳ ಬಗ್ಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್​: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ
BCCI / Team IndiaImage Credit source: BCCI
ಝಾಹಿರ್ ಯೂಸುಫ್
|

Updated on: Jul 22, 2026 | 8:43 AM

Share

ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಇನ್ಮುಂದೆ ಬೌಲರ್‌ಗಳು ತಪ್ಪು ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಮುಂಬರುವ 2026–27ರ ದೇಶಿಯ ಕ್ರಿಕೆಟ್ ಸೀಸನ್‌ನಿಂದ ಜಾರಿಗೆ ಬರುವಂತೆ, ಬಿಸಿಸಿಐ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಯಾವುದೇ ಬೌಲರ್ ಉದ್ದೇಶಪೂರ್ವಕವಾಗಿ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ ಎಸೆದರೆ, ಅವರನ್ನು ಇಡೀ ಪಂದ್ಯದಿಂದಲೇ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗುತ್ತದೆ.

ಹಳೆಯ ನಿಯಮದ ಪ್ರಕಾರ, ಇಂತಹ ತಪ್ಪು ಮಾಡಿದ ಬೌಲರ್‌ಗೆ ಕೇವಲ ಆ ನಿರ್ದಿಷ್ಟ ಇನ್ನಿಂಗ್ಸ್‌ನಲ್ಲಿ ಮಾತ್ರ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗುತ್ತಿತ್ತು. ಆದರೆ ಪಂದ್ಯದ ಪಾವಿತ್ರ್ಯತೆ ಕಾಪಾಡಲು ಬಿಸಿಸಿಐ ಈಗ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರ ಜೊತೆಗೆ ಬಿಸಿಸಿಐ ಮತ್ತಷ್ಟು ಹೊಸ ನಿಯಮಗಳನ್ನು ಕೂಡ ಪರಿಚಯಿಸಿದ್ದಾರೆ.

ದೇಶಿ ಕ್ರಿಕೆಟ್‌ನ ಹೊಸ ನಿಯಮಗಳು:

ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಶಿಫಾರಸುಗಳ ಆಧಾರದ ಮೇಲೆ ಬಿಸಿಸಿಐ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದಲೇ ಈ ನಿಯಮಗಳು ಜಾರಿಗೆ ಬರಲಿವೆ.

  1. ನೋ-ಬಾಲ್ ನಿಯಮ: ಬೌಲರ್ ಎಸೆದ ಫ್ರಂಟ್-ಫುಟ್ ನೋ-ಬಾಲ್ ಅಥವಾ ಬೀಮರ್ (ಡೇಂಜರಸ್ ಫುಲ್ ಟಾಸ್) ಬೇಕಂತಲೇ ಎಸೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕು ಆನ್-ಫೀಲ್ಡ್ ಅಂಪೈರ್‌ಗಳಿಗೆ ಇರುತ್ತದೆ. ಅಂಪೈರ್ ಅದನ್ನು ‘ಉದ್ದೇಶಪೂರ್ವಕ’ ಎಂದು ಘೋಷಿಸಿದರೆ ಆ ಬೌಲರ್ ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡುವಂತಿಲ್ಲ.
  2. ಓವರ್ ಪೂರ್ಣಗೊಳಿಸುವುದು ಕಡ್ಡಾಯ: ಬಹುದಿನಗಳ ಪಂದ್ಯಗಳಲ್ಲಿ (ಉದಾಹರಣೆಗೆ ರಣಜಿ, ದುಲೀಪ್ ಟ್ರೋಫಿ), ದಿನದ ಕೊನೆಯ ಓವರ್ ನಡೆಯುತ್ತಿರುವಾಗ ವಿಕೆಟ್ ಬಿದ್ದರೂ ಸಹ ಆ ಓವರ್ ಅನ್ನು ಪೂರ್ತಿಯಾಗಿ ಮುಗಿಸಬೇಕು. ತಡವಾದ ಸಂಜೆ ಹೊಸ ಬ್ಯಾಟರ್ ಕ್ರೀಸ್‌ಗೆ ಬರುವುದನ್ನು ತಪ್ಪಿಸಲು ಸ್ಟಂಪ್ಸ್ ಘೋಷಿಸುವ ಹಳೇ ಪದ್ಧತಿಯನ್ನು ಕೈ ಬಿಡಲಾಗಿದೆ.
  3. ಕೃತಕ ಫಲಿತಾಂಶಗಳಿಗೆ ತಡೆ: ಪಂದ್ಯದಲ್ಲಿ ಕೃತಕ ಅಥವಾ ಮೊದಲೇ ನಿರ್ಧರಿಸಿದ ಫಲಿತಾಂಶವನ್ನು ತರಲು ಯಾವುದೇ ತಂಡ ಕೊನೆಯ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡುವಂತಿಲ್ಲ ಅಥವಾ ಬಿಟ್ಟುಕೊಡುವಂತಿಲ್ಲ. ಈ ಹಿಂದೆ ಡ್ರಾ ಆಗುವಂತಹ ಪಂದ್ಯಗಳಲ್ಲಿ ಫಲಿತಾಂಶ ನಿರ್ಧರಿಸಲು ಬೇಕೆಂದೇ ಡಿಕ್ಲೇರ್ ಘೋಷಿಸಿ ಕೊನೆಯ 10 ಓವರ್​ಗಳಲ್ಲಿ ಇಂತಿಷ್ಟು ರನ್​ಗಳ ಗುರಿ ನೀಡಲಾಗುತ್ತಿತ್ತು. ಇಂತಹ ನಿರ್ಧಾರಗಳನ್ನು ಎರಡು ತಂಡಗಳ ಕೋಚ್ ಅಥವಾ ನಾಯಕರುಗಳು ಚರ್ಚಿಸಿ ತೆಗೆದುಕೊಳ್ಳುತ್ತಿದ್ದರು. ಇದೀಗ ಈ ರೀತಿಯ ಅನುಕೂಲಕರ ಕೃತಕ ಫಲಿತಾಂಶ ರೂಪಿಸುವುದಕ್ಕೂ ಬಿಸಿಸಿಐ ತಡೆ ನೀಡಿದೆ.
  4. ವಿಕೆಟ್ ಕೀಪರ್ ನಿಯಮ: ಬೌಲರ್ ಓಡಿ ಬರುವಾಗ ವಿಕೆಟ್ ಕೀಪರ್ ಹೇಗೆ ಬೇಕಾದರೂ ಕದಲಬಹುದು ಅಥವಾ ಅವರ ಗ್ಲೌಸ್ ಸ್ಟಂಪ್‌ಗಿಂತ ಸ್ವಲ್ಪ ಮುಂದೆ ಬಂದರೂ ಸಹ ಅದನ್ನು ತಪ್ಪು ಎಂದು ಪರಿಗಣಿಸಲಾಗುವುದಿಲ್ಲ. ಈ ಹಿಂದೆ ಬೌಲರ್ ತನ್ನ ರನ್-ಅಪ್ ಆರಂಭಿಸಿದ ಕ್ಷಣದಿಂದ ಹಿಡಿದು ಚೆಂಡನ್ನು ಎಸೆಯುವವರೆಗೆ, ವಿಕೆಟ್ ಕೀಪರ್‌ನ ಗ್ಲೌಸ್‌ಗಳು (ಕೈಗಳು) ಅಥವಾ ದೇಹದ ಯಾವುದೇ ಭಾಗವು ಸ್ಟಂಪ್‌ಗಿಂತ ಮುಂದೆ ಬರುವಂತಿರಲಿಲ್ಲ. ಅಲ್ಲದೆ ಈ ತಪ್ಪಿಗೆ ಪೆನಾಲ್ಟಿ ರನ್​ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಬೌಲರ್ ರನ್ ಅಪ್ ವೇಳೆ ವಿಕೆಟ್ ಕೀಪರ್ ಹೇಗೆ ಬೇಕಾದರೂ ಇರಬಹುದು ಎಂದು ತಿಳಿಸಲಾಗಿದೆ. ಅಲ್ಲದೆ ಚೆಂಡು ಹಿಡಿಯುವಾಗ ಮಾತ್ರ ವಿಕೆಟ್ ಕೀಪರ್ ಗ್ಲೌಸ್ ವಿಕೆಟ್​ನ ಹಿಂದೆ ಇರಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.
  5. ಕೋಚ್‌ಗಳಿಗೆ ಮೈದಾನ ಪ್ರವೇಶ: ದೇಶಿಯ ಏಕದಿನ ಪಂದ್ಯಗಳಲ್ಲಿ ಸ್ಟ್ರಾಟಜಿಕ್ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಹೆಡ್ ಕೋಚ್‌ಗಳು ಮೈದಾನದೊಳಗೆ ಬಂದು ಆಟಗಾರರೊಂದಿಗೆ ಚರ್ಚಿಸಲು ಅವಕಾಶ ನೀಡಲಾಗಿದೆ.
  6. ಲೆಗ್-ಸೈಡ್ ವೈಡ್ ಲೈನ್: ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ವೈಡ್ ಬಾಲ್ ನಿರ್ಧಾರಗಳನ್ನು ನಿಖರವಾಗಿ ತೆಗೆದುಕೊಳ್ಳಲು ಅಂಪೈರ್‌ಗಳ ಸಹಾಯಕ್ಕಾಗಿ ಲೆಗ್ ಸೈಡ್‌ನಲ್ಲಿ ಪ್ರತ್ಯೇಕವಾದ ಗೆರೆಯನ್ನು ಪೇಂಟ್ ಮಾಡಲಾಗುತ್ತದೆ.
  7. ಓವರ್​ ಥ್ರೋ ನಿಯಮ: ಹಿಂದೆ ಫೀಲ್ಡರ್ ಎಸೆದ ಚೆಂಡು ವಿಕೆಟ್‌ಗೆ ತಾಗದೆ ಅಥವಾ ಯಾರ ಕೈಗೂ ಸಿಗದೆ ದೂರ ಹೋದಾಗ, ಅದನ್ನು ಸಾಮಾನ್ಯವಾಗಿ ‘ಓವರ್‌ ಥ್ರೋ’ ಎಂದೇ ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಫೀಲ್ಡರ್‌ನ ಉದ್ದೇಶ ಏನೇ ಇದ್ದರೂ ರನ್‌ಗಳ ಲೆಕ್ಕಾಚಾರದಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಕೇವಲ ಚೆಂಡು ಕೈತಪ್ಪಿ ಹೋದರೆ ಅದು ಓವರ್‌ ಥ್ರೋ ಆಗುವುದಿಲ್ಲ. ಅಂಪೈರ್‌ಗಳು ಓವರ್‌ ಥ್ರೋ ಎಂದು ಘೋಷಿಸಬೇಕಾದರೆ, ಅದು ರನೌಟ್ ಮಾಡಲು ಎಸೆದ ಥ್ರೋ ಆಗಿರಬೇಕು ಅಥವಾ ರನ್ ಓಡುವುದನ್ನು ತಡೆಯಲು ಎಸೆದ ಥ್ರೋ ಆಗಿರಬೇಕು ತಿಳಿಸಲಾಗಿದೆ.
  8. ಡೆಡ್ ಬಾಲ್ ನಿಯಮ: ಚೆಂಡು ಸಂಪೂರ್ಣವಾಗಿ ಯಾರಾದರೂ ಒಬ್ಬ ಫೀಲ್ಡರ್ ಕೈ ಸೇರಿದರೆ ಅಥವಾ ಮೈದಾನದಲ್ಲಿ ಒಂದೆಡೆ ಚಲನೆ ಇಲ್ಲದೆ ನಿಂತರೆ, ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಬಹುದು. ಚೆಂಡು ಕಡ್ಡಾಯವಾಗಿ ವಿಕೆಟ್ ಕೀಪರ್ ಅಥವಾ ಬೌಲರ್ ಕೈಗೇ ಬರಬೇಕು ಎಂಬ ಹಳೇ ನಿಯಮವನ್ನು ಇಲ್ಲಿ ಸಡಿಲಗೊಳಿಸಲಾಗಿದೆ.
  9. ಫೀಲ್ಡಿಂಗ್ ನಿಯಮ: ಬೌಲರ್ ಚೆಂಡನ್ನು ಎಸೆಯುವ ನಿಖರ ಕ್ಷಣದಲ್ಲಿ ಮೈದಾನದಲ್ಲಿರುವ ಎಲ್ಲಾ ಫೀಲ್ಡರ್‌ಗಳು ಕಡ್ಡಾಯವಾಗಿ ಬೌಂಡರಿ ಗೆರೆಯ ಒಳಗೇ ಇರಬೇಕು. ಬೌಂಡರಿ ಗೆರೆಯ ಹೊರಗೆ ನಿಂತು ಅಥವಾ ಗೆರೆಯನ್ನು ದಾಟಿ ಓಡಿ ಬಂದು ಫೀಲ್ಡಿಂಗ್ ಮಾಡುವಂತಿಲ್ಲ. ಕ್ರಿಕೆಟ್ ಆಟವು ಸಂಪೂರ್ಣವಾಗಿ ಬೌಂಡರಿ ಗೆರೆಯ ಒಳಗಡೆಯೇ ನಡೆಯಬೇಕು ಎಂಬ ಉದ್ದೇಶದಿಂದ ಲೋಪದೋಷವನ್ನು ಸರಿಪಡಿಸಲಾಗಿದೆ.
  10. ಸ್ಟ್ರೈಕರ್ ಚೇಂಜ್ ನಿಯಮ: ಬ್ಯಾಟರ್ ಯಾರಾದರೂ ಫೀಲ್ಡರ್ ಕ್ಯಾಚ್ ಹಿಡಿಯುವುದಕ್ಕೆ ಅಡ್ಡ ಬಂದು ಔಟ್ ಆದಾಗ, ಕ್ರೀಸ್‌ನಲ್ಲಿ ಉಳಿಯುವ ಇನ್ನೊಬ್ಬ ಬ್ಯಾಟರ್ ಮುಂದಿನ ಎಸೆತವನ್ನು ಎದುರಿಸಬೇಕೇ (ಸ್ಟ್ರೈಕ್ ತಗೋಬೇಕೇ) ಅಥವಾ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಇರಬೇಕೇ ಎಂಬುದನ್ನು ಫೀಲ್ಡಿಂಗ್ ತಂಡದ ನಾಯಕನೇ ನಿರ್ಧರಿಸಬಹುದು.

ಇದನ್ನೂ ಓದಿ: 3 ಖಂಡಗಳ 6 ದೇಶಗಳಲ್ಲಿ ಮುಂದಿನ ಫಿಫಾ ವಿಶ್ವಕಪ್​!

2026-27ರ ದೇಶೀಯ ಕ್ರಿಕೆಟ್​ ಸೀಸನ್‌ನಿಂದ ಜಾರಿಗೆ ಬರಲಿರುವ ಈ ಕಠಿಣ ನಿಯಮಗಳು ಮೈದಾನದಲ್ಲಿ ಶಿಸ್ತನ್ನು ಹೆಚ್ಚಿಸುವುದರ ಜೊತೆಗೆ, ಕ್ರಿಕೆಟ್ ಆಟವನ್ನು ಇನ್ನು ಹೆಚ್ಚಿನ ತಾಂತ್ರಿಕ ನಿಖರತೆ ಹಾಗೂ ಪಾರದರ್ಶಕತೆಯತ್ತ ಕೊಂಡೊಯ್ಯಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Follow Us
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?