AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neem Tree: ಮನೆಯ ಸಮೀಪ ಬೇವಿನ ಮರ ಇರುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ

ಬೇವಿನ ಮರ ಮನೆಯ ಸಮೀಪ ಇರುವುದು ಶುಭವೇ ಅಶುಭವೇ ಎಂಬ ಪ್ರಶ್ನೆಗೆ, ಇದು ಆರೋಗ್ಯ, ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ಹಲವು ಸಕಾರಾತ್ಮಕ ಫಲಗಳನ್ನು ನೀಡುತ್ತದೆ. ರೋಗಗಳನ್ನು ದೂರವಿಡುವುದರ ಜೊತೆಗೆ, ಇದು ದೇವಿಯ ಸಂಕೇತವೆಂದು ನಂಬಲಾಗಿದೆ. ನಕಾರಾತ್ಮಕ ಶಕ್ತಿಗಳನ್ನು ದೂರಮಾಡಿ, ಜೀವನದಲ್ಲಿ ಸ್ಥಿರತೆ ಮತ್ತು ಮನಃಶಾಂತಿ ನೀಡುತ್ತದೆ.

Neem Tree: ಮನೆಯ ಸಮೀಪ ಬೇವಿನ ಮರ ಇರುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ
ಬೇವಿನ ಮರ
ಅಕ್ಷತಾ ವರ್ಕಾಡಿ
|

Updated on: Jan 21, 2026 | 10:02 AM

Share

ಬೇವಿನ ಮರದ ಮಹತ್ವ ಮತ್ತು ಮನೆ ಹತ್ತಿರ ಇರುವುದರ ಶುಭಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಬೇವಿನ ಮರವನ್ನು ಮನೆಯ ಹತ್ತಿರ ಇರಿಸುವುದರಿಂದ ಮನಸ್ಸಿನ ವಿಕಾರಗಳುಂಟಾಗಬಹುದು ಅಥವಾ ದುಷ್ಟ ಶಕ್ತಿಗಳು ಆವರಿಸಬಹುದು ಎಂಬಂತಹ ಋಣಾತ್ಮಕ ನಂಬಿಕೆಗಳು ಕೆಲವರಲ್ಲಿ ಇವೆ. ಆದರೆ, ಈ ಮರದ ಬಗ್ಗೆ ಧನಾತ್ಮಕ ಮತ್ತು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಅನೇಕ ಶುಭಫಲಗಳು ಗೋಚರಿಸುತ್ತವೆ.

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನಮಾನವಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಅಥವಾ ಗ್ರಾಮಗಳ ಚಾವಡಿಗಳಲ್ಲಿ (ಸಭೆ ಸೇರುವ ಸ್ಥಳಗಳು) ಬೇವಿನ ಮರಗಳನ್ನು ನೆಡುತ್ತಿದ್ದರು. ಬೇವಿನ ಮರವು ಆಲದ ಮರ ಮತ್ತು ಅರಳಿ ಮರದಂತೆ ಸಮುದಾಯ ಸಭೆಗಳಿಗೆ, ನ್ಯಾಯ ತೀರ್ಮಾನಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಿತ್ತು.

ವೈಜ್ಞಾನಿಕವಾಗಿ ಹೇಳುವುದಾದರೆ, ಬೇವಿನ ಮರವು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಶುದ್ಧ ಗಾಳಿಯನ್ನು ನೀಡುವುದರ ಮೂಲಕ ಉಸಿರಾಟದ ಪ್ರಕ್ರಿಯೆಗೆ ನೆರವಾಗುತ್ತದೆ. ಇದರ ತೊಗಟೆ, ಹಣ್ಣು ಮತ್ತು ಎಲೆಗಳು ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೋಗಗಳಿಗೆ ಚಿಕಿತ್ಸೆಯಾಗಿ ಬಳಕೆಯಾಗುತ್ತವೆ. ಮನೆಯ ಸುತ್ತ ಬೇವಿನ ಮರ ಇರುವುದರಿಂದ ಕ್ರಿಮಿ ಕೀಟಗಳು ಮತ್ತು ರೋಗರುಜಿನಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ.

ಆಧ್ಯಾತ್ಮಿಕವಾಗಿ, ಬೇವಿನ ಮರವನ್ನು ಸಾಕ್ಷಾತ್ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ, ವಿವಾಹ ಆಗದಿರುವವರು, ಪದೇ ಪದೇ ಕಷ್ಟಗಳು ಎದುರಿಸುತ್ತಿರುವವರು, ಮಾಟಮಂತ್ರದಂತಹ ನಕಾರಾತ್ಮಕ ಶಕ್ತಿಗಳಿಂದ ಬಳಲುತ್ತಿರುವವರು ಈ ಮರದ ಬಳಿ ಅರಿಶಿಣ-ಕುಂಕುಮ ಕಟ್ಟಿ ನಮಸ್ಕರಿಸುವುದರಿಂದ ಶುಭಫಲಗಳು ಪ್ರಾಪ್ತವಾಗುತ್ತವೆ ಎಂದು ನಂಬಲಾಗುತ್ತದೆ. ದೇವಿಯ ಆವಾಹನೆ ಈ ಮರದಲ್ಲಿದೆ ಎಂಬುದು ಪ್ರತೀತಿ.

ಬೇವಿನ ಮರದ ಮತ್ತೊಂದು ಪ್ರಮುಖ ಉಪಯೋಗವೆಂದರೆ ಮಕ್ಕಳಲ್ಲಿ ಸಿಡುಬು (ಅಮ್ಮ) ಕಾಣಿಸಿಕೊಂಡಾಗ. ಹಳ್ಳಿಗಳಲ್ಲಿ ಸಿಡುಬಿನಿಂದ ಬಳಲುತ್ತಿರುವ ಮಕ್ಕಳಿಗೆ ಬೇವಿನ ಸೊಪ್ಪನ್ನು ಹಾಸಿಗೆಯ ಮೇಲೆ ಹಾಕುವುದು ಅಥವಾ ಮನೆ ಬಾಗಿಲಿಗೆ ಕಟ್ಟುವ ಪದ್ಧತಿ ಇದೆ. ಬೇವಿನ ಸೊಪ್ಪನ್ನು ಗೋಮೂತ್ರದೊಂದಿಗೆ ಇಟ್ಟಾಗ, ಅದು ಬ್ಯಾಕ್ಟೀರಿಯಾಗಳ ಪ್ರವೇಶವನ್ನು ತಡೆದು, ರೋಗ ನಿವಾರಣೆಗೆ ಸಹಾಯ ಮಾಡುತ್ತದೆ. ಬೇವಿನ ಸೊಪ್ಪು ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಜ್ಯೋತಿಷ್ಯದ ದೃಷ್ಟಿಯಿಂದ, ಬೇವಿನ ಮರವು ಶನಿ, ರಾಹು, ಕೇತು ಗ್ರಹಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಕರ್ಮಫಲವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲವಾದರೂ, ಇದರ ಪ್ರಭಾವವನ್ನು ತಗ್ಗಿಸಬಹುದು. ಪ್ರಯಾಣಕ್ಕೆ ಹೊರಡುವಾಗ ಎರಡು ಬೇವಿನ ಎಲೆಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಅಥವಾ ಒಂದು ಎಲೆಯನ್ನು ತಿಂದು ಹೋಗುವುದು ಶುಭಸೂಚಕವೆಂದು ಪರಿಗಣಿಸಲಾಗುತ್ತದೆ. ಬೇವಿನ ಮರವು ಜೀವನದಲ್ಲಿ ಸ್ಥಿರತೆ, ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಬೇವಿನ ಮರವು ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇದ್ದರೆ ಅತಿ ಹೆಚ್ಚು ಶುಭಫಲಗಳನ್ನು ನೀಡುತ್ತದೆ ಮತ್ತು ಮಂಗಳ ಯೋಗವನ್ನು ತರುತ್ತದೆ. ತಮಿಳುನಾಡು ಮುಂತಾದ ಪ್ರದೇಶಗಳಲ್ಲಿ ಬೇವಿನ ಮರಕ್ಕೆ ಅರಿಶಿಣ ಹಚ್ಚಿ ಕುಂಕುಮದ ಬೊಟ್ಟನ್ನು ಇಟ್ಟು ಪೂಜಿಸುವುದು ಸರ್ವೇಸಾಮಾನ್ಯ. ಒಟ್ಟಾರೆಯಾಗಿ, ಬೇವಿನ ಮರವು ಶುಭದ ಸಂಕೇತವಾಗಿದ್ದು, ಅದು ಮನೆ ಹತ್ತಿರ ಇರುವುದು ಹಲವು ಸಕಾರಾತ್ಮಕ ಲಾಭಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು