AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕುಲದೈವ, ಇಷ್ಟದೈವ ಅಥವಾ ಆರಾಧ್ಯದೈವ; ಯಾವ ದೈವ ಆರಾಧನೆಯಿಂದ ಏನು ಫಲ?

ಪೂಜಾ ಪದ್ಧತಿಯಲ್ಲಿ ಕುಲದೈವ, ಇಷ್ಟದೈವ, ಆರಾಧ್ಯದೈವ ಮತ್ತು ಮನೆದೇವರ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಂದು ದೈವಕ್ಕೂ ತನ್ನದೇ ಆದ ಮಹತ್ವವಿದೆ ಮತ್ತು ಅವುಗಳ ಸರಿಯಾದ ಆರಾಧನೆಯಿಂದ ಕುಟುಂಬಕ್ಕೆ ಮತ್ತು ವ್ಯಕ್ತಿಗೆ ಶುಭ ಫಲಗಳು ದೊರೆಯುತ್ತವೆ. ಜಾತಕದ ಸ್ಥಾನಗಳಿಗೂ ದೈವ ಆರಾಧನೆಗೂ ಇರುವ ಸಂಬಂಧವನ್ನು ಇಲ್ಲಿ ವಿವರಿಸಲಾಗಿದೆ.

Daily Devotional: ಕುಲದೈವ, ಇಷ್ಟದೈವ ಅಥವಾ ಆರಾಧ್ಯದೈವ; ಯಾವ ದೈವ ಆರಾಧನೆಯಿಂದ ಏನು ಫಲ?
ದೈವ ಆರಾಧನೆImage Credit source: Pinterest
ಅಕ್ಷತಾ ವರ್ಕಾಡಿ
|

Updated on:May 24, 2026 | 8:35 AM

Share

“ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬುದು ಹಿಂದೂ ಧರ್ಮದ ಸಾರ. ಯಾವುದೇ ದೇವರನ್ನು ನಮಸ್ಕರಿಸಿದರೂ, ಅದು ಅಂತಿಮವಾಗಿ ಒಂದೇ ಪರಮಾತ್ಮನನ್ನು ತಲುಪುತ್ತದೆ. ಉದಾಹರಣೆಗೆ, ಅನ್ನ, ಚಿತ್ರಾನ್ನ, ಪುಳಿಯೋಗರೆ, ಪಲಾವ್ ಹೀಗೆ ಯಾವುದೇ ರೂಪದಲ್ಲಿ ಸೇವಿಸಿದರೂ, ಅದರ ಮೂಲ ಅಕ್ಕಿಯೇ ಆಗಿರುವಂತೆ, ವಿಭಿನ್ನ ದೈವಗಳ ಆರಾಧನೆಯು ಒಂದೇ ಭಗವಂತನನ್ನು ತಲುಪುತ್ತದೆ. ಆದಾಗ್ಯೂ, ಕೆಲವು ದೈವಗಳಿಗೆ ನಮ್ಮ ಜೀವನದಲ್ಲಿ ವಿಶೇಷ ಮಹತ್ವವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಕುಲದೈವದ ಮಹತ್ವ:

ಕುಲದೈವಕ್ಕೆ ನಮ್ಮ ಆರಾಧನಾ ಪದ್ಧತಿಯಲ್ಲಿ ಅತ್ಯಂತ ಹೆಚ್ಚು ಪ್ರಾಶಸ್ತ್ಯವಿದೆ. ಇದು ಏಳು ತಲೆಮಾರುಗಳಿಂದ ವಂಶವನ್ನು ರಕ್ಷಿಸಿಕೊಂಡು ಬಂದಿರುವ ದೈವ. ಕುಲದೈವದ ಆಯ್ಕೆಯನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ. ಕೆಲವರಿಗೆ ತಮ್ಮ ಕುಲದೈವದ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಹೊಸದಾಗಿ ಒಂದು ದೈವವನ್ನು ಆಯ್ಕೆ ಮಾಡಿಕೊಂಡು ಆರಾಧಿಸಬಹುದು. ಕುಲದೈವವು ವಂಶವನ್ನು ಅಪಘಾತಗಳು, ಅನಾರೋಗ್ಯ, ಅಕಾಲಿಕ ಮರಣ ಮತ್ತು ಇತರ ಅಕಾಲಿಕ ಘಟನೆಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕುಲದೈವಕ್ಕೆ ನಮಸ್ಕರಿಸುವುದು ಉತ್ತಮ. ಹೆಸರು ತಿಳಿದಿದ್ದರೆ, ಆ ಹೆಸರು ಹೇಳಿ ನಮಸ್ಕರಿಸಬೇಕು; ಇಲ್ಲದಿದ್ದರೆ, “ಕುಲದೇವತಾಭ್ಯೋ ನಮಃ” ಎಂದು ಹೇಳಬಹುದು. ಕನಿಷ್ಠ ವಾರಕ್ಕೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ಕುಟುಂಬ ಸಮೇತ ಕುಲದೈವದ ದರ್ಶನ ಮಾಡುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ.

ಇಷ್ಟದೈವದ ಪ್ರಭಾವ:

ಇಷ್ಟದೈವವು ಒಬ್ಬ ವ್ಯಕ್ತಿ ಮನಪೂರ್ವಕವಾಗಿ ಇಷ್ಟಪಟ್ಟು ನಂಬಿ ಆರಾಧಿಸುವ ದೈವ. ಇದು ಕೇವಲ ಆ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ, ಕುಟುಂಬದ ಎಲ್ಲರಿಗೂ ಅಲ್ಲ. ಮನಸ್ಸಿನಲ್ಲಿ ಸಂಪೂರ್ಣ ಶ್ರದ್ಧೆಯಿಂದ ಇಷ್ಟದೈವವನ್ನು ಪೂಜಿಸಿದರೆ, ಆ ದೈವವು ಶೀಘ್ರವಾಗಿ ಇಷ್ಟಾರ್ಥಗಳನ್ನು ಈಡೇರಿಸಿ, ಫಲಗಳನ್ನು ನೀಡುತ್ತದೆ. ಲಕ್ಷ್ಮಿ, ಶಿವ, ವಿಷ್ಣು, ತಿರುಪತಿ ವೆಂಕಟೇಶ ಹೀಗೆ ಒಬ್ಬೊಬ್ಬರಿಗೆ ಒಂದೊಂದು ದೈವ ಇಷ್ಟವಾಗಬಹುದು.

ಆರಾಧ್ಯದೈವದ ಮಹತ್ವ:

ಆರಾಧ್ಯದೈವವು ಜನ್ಮಜನ್ಮಾಂತರಗಳಿಂದ ಆರಾಧಿಸಿಕೊಂಡು ಬಂದಿರುವ ದೈವ. ಇದನ್ನು ಪೂರ್ಣ ಸಮರ್ಪಣಾ ಭಾವದಿಂದ ಪೂಜಿಸಿದರೆ, ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೋಗಲಾಡಿಸಿ, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಮನೆದೇವರು:

ಮನೆದೇವರು ಒಂದು ಕುಟುಂಬಕ್ಕೆ ಸೀಮಿತವಾದ ದೈವ. ಇದು ಸಾಮಾನ್ಯವಾಗಿ ಮೂರು ತಲೆಮಾರುಗಳವರೆಗೆ ಪೂಜಿಸಲ್ಪಡುತ್ತದೆ ಮತ್ತು ಕಾಲಾನಂತರದಲ್ಲಿ ಇದನ್ನು ಬದಲಾಯಿಸಬಹುದು.

ಜಾತಕ ಮತ್ತು ದೈವ ಆರಾಧನೆ:

ಜ್ಯೋತಿಷ್ಯದ ಪ್ರಕಾರ, ಜಾತಕದ ಲಗ್ನದಲ್ಲಿ ಪಂಚಮ ಸ್ಥಾನ (ಪೂರ್ವ ಪುಣ್ಯ ಸ್ಥಾನ) ಮತ್ತು ನವಮ ಸ್ಥಾನ (ಭಾಗ್ಯ ಸ್ಥಾನ) ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಸ್ಥಾನಗಳಲ್ಲಿರುವ ರಾಶಿಗೆ ಅನುಸಾರವಾಗಿ ದೈವಗಳನ್ನು ಪೂಜಿಸುವುದು ಉತ್ತಮ. ಹಾಗೆಯೇ, ತೃತೀಯ, ಅಷ್ಟಮ, ದ್ವಾದಶ ಸ್ಥಾನಗಳ ದೇವತೆಗಳನ್ನು ನೋಡಿದಾಗ, ಹಿಂದಿನ ಜನ್ಮದಲ್ಲಿ ಯಾವ ದೇವತೆಯನ್ನು ಆರಾಧಿಸಲಾಗಿದೆ ಎಂಬುದನ್ನು ಗುರುತಿಸಬಹುದು. ಈ ವಿಶ್ಲೇಷಣೆಯು ನಮ್ಮ ಸಂಚಿತ ಕರ್ಮ ಮತ್ತು ಪ್ರಾರಬ್ಧ ಕರ್ಮಗಳ ಕುರಿತು ಮಾಹಿತಿ ನೀಡುತ್ತದೆ.

ಒಟ್ಟಾರೆಯಾಗಿ, ಕುಲದೈವ, ಇಷ್ಟದೈವ, ಮನೆದೇವರು ಮತ್ತು ಆರಾಧ್ಯದೈವಗಳ ಆರಾಧನೆಯು ನಮ್ಮ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 am, Sun, 24 May 26

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ
ಇಂದು ಈ ರಾಶಿಯವರು ಹಿತಶತ್ರುಗಳಿಂದ ಜಾಗರೂಕರಾಗಿರಿ
ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ
ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ
ಭೂಪಾಲ್​ನಲ್ಲಿ ‘ಪೆದ್ದಿ ಹವಾ, ರಾಮ್ ಚರಣ್ ಜೊತೆ ಇನ್ಯಾರೆಲ್ಲ ಹಾಜರಿ
ಭೂಪಾಲ್​ನಲ್ಲಿ ‘ಪೆದ್ದಿ ಹವಾ, ರಾಮ್ ಚರಣ್ ಜೊತೆ ಇನ್ಯಾರೆಲ್ಲ ಹಾಜರಿ
ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ
ಮೋದಿ ಭೇಟಿಯಾದ ಮಾರ್ಕೊ ರುಬಿಯೋ: ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ
ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು?
ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು?
ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್
ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು