AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monday Devotion: ಎಲ್ಲಾ ಕಷ್ಟಗಳಿಂದ ಶೀಘ್ರ ಪರಿಹಾರ ಪಡೆಯಲು 3 ಸೋಮವಾರ ಈ ರೀತಿ ಮಾಡಿ

ಜೀವನದ ಎಲ್ಲಾ ಸಮಸ್ಯೆಗಳಿಗೆ ವೆಚ್ಚವಿಲ್ಲದೆ, ಯಾವುದೇ ಭೇದವಿಲ್ಲದೆ ಆಚರಿಸಬಹುದಾದ ಒಂದು ಸರಳ ಪರಿಹಾರ ಮಾರ್ಗವನ್ನು ಈ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ. ಮೂರು ಸೋಮವಾರಗಳಂದು ಸಂಧ್ಯಾಕಾಲದಲ್ಲಿ ಶಿವಲಿಂಗಕ್ಕೆ ಭಸ್ಮಾಭಿಷೇಕ ಮಾಡಿ "ಓಂ ನಮಃ ಶಿವಾಯ" ಮಂತ್ರ ಜಪಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Monday Devotion: ಎಲ್ಲಾ ಕಷ್ಟಗಳಿಂದ ಶೀಘ್ರ ಪರಿಹಾರ ಪಡೆಯಲು 3 ಸೋಮವಾರ ಈ ರೀತಿ ಮಾಡಿ
ಕಷ್ಟಗಳಿಂದ ಶೀಘ್ರ ಪರಿಹಾರImage Credit source: Pinterest
ಅಕ್ಷತಾ ವರ್ಕಾಡಿ
|

Updated on:May 21, 2026 | 8:02 AM

Share

ಮಾನವನ ಬದುಕಿನಲ್ಲಿ ಸಮಸ್ಯೆಗಳು ನಿರಂತರ. ಹಳೆಯ ಸಮಸ್ಯೆಗಳು, ಹೊಸ ಸಮಸ್ಯೆಗಳು, ಮತ್ತು ಭವಿಷ್ಯದಲ್ಲಿ ಬರಬಹುದಾದ ಕಷ್ಟಗಳು ಜೀವನದ ಭಾಗವಾಗಿವೆ. ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಈ ಸಮಸ್ಯೆಗಳಿಗೆ ಭಗವಂತನೇ ಪರಿಹಾರಗಳನ್ನೂ ನೀಡಿದ್ದಾನೆ ಎನ್ನುವುದು ಆಧ್ಯಾತ್ಮಿಕ ನಂಬಿಕೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಇಂದು ತಿಳಿಸಲಾಗುವ ಪರಿಹಾರವು ಯಾವುದೇ ಖರ್ಚಿಲ್ಲದೆ, ಯಾರನ್ನೂ ಅವಲಂಬಿಸದೆ, ಎಲ್ಲರೂ ಆಚರಿಸಬಹುದಾದ ಒಂದು ಪುಟ್ಟ ತಂತ್ರವಾಗಿದೆ. ಇದು ಶಕ್ತಿವಂತ ಮತ್ತು ಸರ್ವರಿಗೂ ಅನ್ವಯಿಸುವ ಪರಿಹಾರ. ಇದಕ್ಕೆ ಯಾವುದೇ ಜಾತಿ, ಮತ, ಭೇದ, ಅರ್ಹತೆ ಅಥವಾ ನಿರ್ದಿಷ್ಟ ಪರಿಕರಗಳ ಅಗತ್ಯವಿಲ್ಲ. ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ವಿದ್ಯೆಯ ಸಮಸ್ಯೆ, ವಿವಾಹದ ಸಮಸ್ಯೆ, ಮನೆ ಕಟ್ಟಿಕೊಳ್ಳುವ ಸಮಸ್ಯೆ, ಪ್ರಯಾಣಕ್ಕೆ ಅಡ್ಡಿಗಳು, ಶತ್ರು ಕಾಟ ಹೀಗೆ ನೂರಾರು ಸಮಸ್ಯೆಗಳಿಗೆ ಈ ಪರಿಹಾರವು ಅನ್ವಯಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಕಷ್ಟಗಳಿಗೆ ಶೀಘ್ರವಾಗಿ ಮತ್ತು ವೆಚ್ಚರಹಿತವಾಗಿ ಪರಿಹಾರವನ್ನು ಬಯಸುತ್ತಾರೆ.

ನಮ್ಮ ಸಮಸ್ಯೆಗಳಿಗೆ ಕರ್ಮಫಲವೂ ಒಂದು ಕಾರಣವೆಂದು ಶಾಸ್ತ್ರಗಳು ಹೇಳುತ್ತವೆ. ಪೂರ್ವಜನ್ಮದ ಕರ್ಮಗಳು ನಮ್ಮನ್ನು ಈಗ ಕಾಡಿಸುತ್ತಿರಬಹುದು. ಆದರೆ, ಈ ಕರ್ಮಫಲವನ್ನೂ ನಿವಾರಿಸುವ ಶಕ್ತಿ ಈ ಪರಿಹಾರಕ್ಕಿದೆ. ಪರಶಿವನು ಬೋಳಾಶಂಕರ. ಅವರು ಲಯಕಾರಕ ಮತ್ತು ಮನಸ್ಸು ಮಾಡಿದರೆ ಏನು ಬೇಕಾದರೂ ಕೊಡಬಲ್ಲರು. ಶಿವನು ಯಾರಿಗಾಗಿಯೂ ಕಾಯುವುದಿಲ್ಲ; ಸ್ವಇಚ್ಛೆಯಿಂದ ಬೇಗ ಆಶೀರ್ವಾದವನ್ನು ನೀಡುವವನು.

ಈ ಪರಿಹಾರವು “ಓಂ ನಮಃ ಶಿವಾಯ” ಮಂತ್ರದ ಶಕ್ತಿಯ ಮೇಲೆ ಆಧಾರಿತವಾಗಿದೆ. ಕೇವಲ ಮೂರು ಸೋಮವಾರಗಳ ಕಾಲ ಈ ವಿಧಾನವನ್ನು ಅನುಸರಿಸಬೇಕು. ಪುರುಷರು, ಸ್ತ್ರೀಯರು, ವೃದ್ಧರು ಅಥವಾ ಮಕ್ಕಳು ಯಾರಾದರೂ ಇದನ್ನು ಆಚರಿಸಬಹುದು. ಯಾವುದೇ ನಿರ್ದಿಷ್ಟ ಆಹಾರ ಪದ್ಧತಿಯ ನಿಯಮಗಳಿಲ್ಲ, ಆದರೆ ಮನಸ್ಸಿನ ಶುದ್ಧತೆ ಮುಖ್ಯ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಮೂರು ಸೋಮವಾರಗಳಂದು ಸಂಧ್ಯಾಕಾಲದಲ್ಲಿ, ಅಂದರೆ ಸಾಯಂಕಾಲ 6 ಗಂಟೆ 5 ನಿಮಿಷದಿಂದ 8 ಗಂಟೆ 30 ನಿಮಿಷದೊಳಗೆ ಈ ಪರಿಹಾರವನ್ನು ಮಾಡಬೇಕು. ಮೊದಲು ಶುದ್ಧವಾಗಿ ಕೈ ಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿ. ನಂತರ, 2 ಇಂಚು ಅಳತೆಯ ಸಣ್ಣ ಶಿವಲಿಂಗವನ್ನು ತೆಗೆದುಕೊಳ್ಳಿ. ಈ ಶಿವಲಿಂಗವು ಸ್ಪಟಿಕದ್ದಾಗಿರಲಿ ಅಥವಾ ಮಣ್ಣಿನದ್ದಾಗಿರಲಿ, ಸ್ವತಃ ತಯಾರಿಸಿದ ಮಣ್ಣಿನ ಲಿಂಗವೂ ಉತ್ತಮ ಎಂದು ಹೇಳಲಾಗುತ್ತದೆ. ಪೂರ್ವಾಭಿಮುಖವಾಗಿ ಕುಳಿತು, ಶಿವಲಿಂಗಕ್ಕೆ ಭಸ್ಮಾಭಿಷೇಕ ಮಾಡಿ. ಅಂಗಡಿಗಳಲ್ಲಿ ಸಿಗುವ ವಿಭೂತಿ ಪುಡಿಯನ್ನು ತಂದು, ಅದನ್ನು ಬೆರಳಿನಿಂದ ಸ್ಪರ್ಶಿಸದೆ, ಇನ್ನೊಂದು ವಿಧಾನದಿಂದ ಲಿಂಗದ ಮೇಲೆ ಅರ್ಪಿಸಿ ಅಭಿಷೇಕ ಮಾಡಬೇಕು. ಭಸ್ಮವನ್ನು ಅರ್ಪಿಸುವಾಗ ನಿರಂತರವಾಗಿ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು.

ಈ ಮೂರು ಸೋಮವಾರಗಳಂದು ಮಾಂಸಾಹಾರ ಅಥವಾ ಮಧ್ಯಪಾನವನ್ನು ತ್ಯಜಿಸುವುದು ಮನಸ್ಸಿನ ಶುದ್ಧತೆಗೆ ಉತ್ತಮ. ಈ ಪರಿಹಾರವನ್ನು ನಂಬಿಕೆಯಿಂದ ಆಚರಿಸಿದಲ್ಲಿ, ಮೊದಲ ಸೋಮವಾರದ ನಂತರವೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲು ಪ್ರಾರಂಭಿಸುತ್ತದೆ. ಎರಡನೇ ಸೋಮವಾರಕ್ಕೆ ಹೆಚ್ಚಿನ ಪರಿಹಾರ ಕಂಡುಬಂದು, ಮೂರನೇ ಸೋಮವಾರದ ವೇಳೆಗೆ ಕಷ್ಟಕರವಾದ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. ಆದರೆ, ಈ ಪರಿಹಾರವು ಧರ್ಮಬದ್ಧವಾಗಿರಬೇಕು ಎಂಬುದನ್ನು ನೆನಪಿಡಿ. ಕೇವಲ “ಓಂ ನಮಃ ಶಿವಾಯ” ಮಂತ್ರ, ವಿಭೂತಿ ಮತ್ತು 2 ಇಂಚಿನ ಶಿವಲಿಂಗ – ಇಷ್ಟೇ ಇದಕ್ಕೆ ಬೇಕಾಗಿರುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:02 am, Thu, 21 May 26

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More