AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Vakri 2024: ಐದು ತಿಂಗಳ ಕಾಲ ಶನಿ ಮಹಾತ್ಮನಿಗೆ ಹಿನ್ನಡೆ, ಈ ಮೂರು ರಾಶಿಯ ಉದ್ಯಮಿಗಳಿಗೆ ಅದೃಷ್ಟವೋ ಅದೃಷ್ಟ!

Lord Shani: ಶನಿಯ ಹಿಮ್ಮುಖ ಚಲನೆ ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಂಡರೆ ನಷ್ಟವಾದೀತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೊರಟಿರುವ ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಲೆಕ್ಕಾಚಾರ ಹಾಕಿ, ನಂತರವೇ ಖರೀದಿ-ಮಾರಾಟ ಮಾಡಬೇಕು.

Shani Vakri 2024: ಐದು ತಿಂಗಳ ಕಾಲ ಶನಿ ಮಹಾತ್ಮನಿಗೆ ಹಿನ್ನಡೆ, ಈ ಮೂರು ರಾಶಿಯ ಉದ್ಯಮಿಗಳಿಗೆ ಅದೃಷ್ಟವೋ ಅದೃಷ್ಟ!
ಐದು ತಿಂಗಳ ಕಾಲ ಹಿನ್ನಡೆಯಲ್ಲಿ ಶನಿ ಮಹಾತ್ಮ!
ಸಾಧು ಶ್ರೀನಾಥ್​
|

Updated on:Jun 13, 2024 | 10:53 AM

Share

ಹಿಂದೂ ಧರ್ಮದಲ್ಲಿ ನವಗ್ರಹಗಳಲ್ಲಿ ಶನಿಯು (Lord Shanishwara) ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯು ಕರ್ಮಫಲವನ್ನು ಕೊಡುವವನೆಂದೂ ಕರೆಯಲ್ಪಡುತ್ತಾನೆ. ಇತರ ಗ್ರಹಗಳಂತೆ, ಶನಿಯು ತನ್ನ ಚಲನೆಯಲ್ಲಿ ಬದಲಾವಣೆಗಳಿಗೆ ಒಳಗಾಗುತ್ತಾನೆ. ಒಂದು ಸಲ ನೇರ ದಾರಿಯಲ್ಲಿ ಸಾಗುತ್ತಾನೆ.. ಇನ್ನೊಂದು ಸಲ ಹಿನ್ನಡೆಯುತ್ತಾನೆ (Shani Vakri 2024). ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದ್ದಾನೆ. ಈ ರಾಶಿಯಲ್ಲಿ ಜೂನ್ 29 ರಂದು ಶನಿಯು ಹಿಮ್ಮುಖವಾಗಿ ಚಲಿಸಲಿದ್ದಾನೆ. ಕುಂಭ ರಾಶಿಯಲ್ಲಿರುವ ಶನಿಯು ನವೆಂಬರ್ 15 ರವರೆಗೆ ಸುಮಾರು ನಾಲ್ಕರಿಂದ ಐದು ತಿಂಗಳ ಕಾಲ ಹಿಮ್ಮುಖವಾಗಿಯೇ ಚಲಿಸುತ್ತದೆ (Astrology).

ವಾಸ್ತವವಾಗಿ ಶನಿಗ್ರಹದ ಹಿಮ್ಮುಖ ಚಲನೆಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಶನಿಯ ಹಿಮ್ಮುಖ ಪ್ರಭಾವದಿಂದಾಗಿ, ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಮತ್ತು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಶನಿಯ ಹಿಮ್ಮುಖ ಪರಿಣಾಮವು ಕೆಲವು ಜನರಿಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಶನಿಯ ಈ ಹಿಮ್ಮುಖ ಚಲನೆಯು ಕೆಲವು ಜನರನ್ನು ಎಚ್ಚರಿಸುತ್ತದೆ. ಮತ್ತು ಇದು ಕೆಲವರಿಗೆ ಅದೃಷ್ಟವನ್ನೂ ತರುತ್ತದೆ ಮತ್ತು ಜೀವನವನ್ನು ಬೆಳಗಿಸಲು ಸಹಾಯ ಮಾಡುತ್ತದೆ. ಇಂದು ಶನಿಯ ಹಿನ್ನಡೆಯಿಂದ ಯಾವ ರಾಶಿಚಕ್ರದ ಚಿಹ್ನೆಗಳು ಪ್ರಯೋಜನ ಪಡೆಯಲಿವೆ ಎಂಬುದನ್ನು ತಿಳಿಯೋಣ.

Shani Vakri 2024: ಶನಿ ದೇವರ ಹಿನ್ನಡೆಯಿಂದಾಗಿ ಈ ಮೂರು ರಾಶಿ ಚಿಹ್ನೆಯವರ ಬಾಳು ಬಂಗಾರವಾದೀತು

Shani Vakri 2024 ಕನ್ಯಾ: ಶನಿಯು ಕುಂಭ ರಾಶಿಯಲ್ಲಿದ್ದರೂ.. ಕನ್ಯಾ ರಾಶಿಯವರಿಗೆ ಕೆಲವು ಶುಭ ವಾರ್ತೆಗಳನ್ನು ತರುತ್ತಾನೆ. ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಅಂದರೆ ವಿದ್ಯಾರ್ಥಿಗಳಿಗೆ ಶನಿಯ ಹಿನ್ನಡೆಯು ಶುಭಕರವಾಗಿರಲಿದೆ. ಈ ನಾಲ್ಕೈದು ತಿಂಗಳುಗಳಲ್ಲಿ ನಕಾರಾತ್ಮಕ ಗ್ರಹಗಳ ಬಲಹೀನತೆಯಿಂದ ಜೀವನದಲ್ಲಿ ಧನಾತ್ಮಕತೆ ಇರುತ್ತದೆ. ಕನ್ಯಾ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಆದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬಾರದು. ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅವರು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಾರೆ.

ಇದನ್ನೂ ಓದಿ: ಪೂಜಾ ಕೋಣೆಯ ನಿರ್ಮಾಣದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ -ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸಿ

Shani Vakri 2024 ತುಲಾ: ಶನಿಯ ಹಿಮ್ಮುಖ ಚಲನೆ ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಕಾರಣಾಂತರಗಳಿಂದ ಅಪೂರ್ಣವಾಗಿದ್ದ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ. ಸಾಮಾಜಿಕ ಗೌರವ ಹೆಚ್ಚುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದರೆ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಂಡರೆ ನಷ್ಟವನ್ನು ಅನುಭವಿಸಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೊರಟಿರುವ ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಖರೀದಿ ಮತ್ತು ಮಾರಾಟ ಮಾಡಬೇಕು. ಹೂಡಿಕೆಗೆ ಉತ್ತಮ ಸಮಯ. ಹೊಸ ಅವಕಾಶಗಳು ದೊರೆಯುತ್ತವೆ.

Shani Vakri 2024 ವೃಶ್ಚಿಕ: ಜೂನ್ 29 ರಿಂದ ನವೆಂಬರ್ 15 ರವರೆಗೆ ಶನಿಯು ಹಿಮ್ಮೆಟ್ಟುವಿಕೆ ಈ ಚಿಹ್ನೆಗೆ ಸೇರಿದ ಜನರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಇದರಿಂದ ಅವರ ಆದಾಯವೂ ಹೆಚ್ಚುತ್ತದೆ. ಎಲ್ಲಾ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ. ವ್ಯಾಪಾರ ಮಾಡಲು ಬಯಸುವವರು, ಹೂಡಿಕೆ ಮಾಡಲು ಪಾಲುದಾರರನ್ನು ಹುಡುಕಬಹುದು. ವೃತ್ತಿಜೀವನದ ಯಶಸ್ಸಿಗೆ ಸಹಾಯ ಮಾಡುವ ಹೊಸ ಯೋಜನೆಗಳನ್ನು ಪಡೆಯಬಹುದು. ಪ್ರೇಮ ಸಂಬಂಧಗಳಲ್ಲಿ ಸ್ವಲ್ಪ ಮನಸ್ತಾಪ ಇರಬಹುದು.. ಆದರೆ ಬುದ್ದಿವಂತಿಕೆಯಿಂದ ಮಾತನಾಡಿ ಪರಿಹಾರ ಸಿಗುವ ಸಾಧ್ಯತೆ ಇದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 9:37 am, Thu, 13 June 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ