AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varalakshmi Vrat 2023: ವರಮಹಾಲಕ್ಷ್ಮೀ ಹಬ್ಬ: ಪೂಜಾ ತಯಾರಿ ಹೇಗಿರಬೇಕು? ಮಾಡಿಕೊಳ್ಳಬೇಕಾದ ಸಿದ್ಧತೆಗಳಾವವು?

ವರಮಹಾಲಕ್ಷ್ಮೀ ಹಬ್ಬದ ಆಚರಣೆ ಪ್ರತಿ ಪ್ರದೇಶಗಳಿಗೂ ಬೇರೆ ಬೇರೆಯಾಗಿರಬಹುದು. ಕೆಲವು ಕಡೆಗಳಲ್ಲಿ ಕಲಶಕ್ಕೆ ಸೀರೆಯನ್ನು ತೊಡಿಸಿ, ಲಕ್ಷ್ಮೀ ದೇವಿಯನ್ನು ಆಭರಣಗಳಿಂದ ಅಲಂಕರಿಸಲಾಗುತ್ತದೆ. ವರಮಹಾಲಕ್ಷ್ಮೀ ವ್ರತದ ದಿನ ಪೂಜಾ ತಯಾರಿ ಹೇಗಿರಬೇಕು? ಮುಂಚಿತವಾಗಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Varalakshmi Vrat 2023: ವರಮಹಾಲಕ್ಷ್ಮೀ ಹಬ್ಬ: ಪೂಜಾ ತಯಾರಿ ಹೇಗಿರಬೇಕು? ಮಾಡಿಕೊಳ್ಳಬೇಕಾದ ಸಿದ್ಧತೆಗಳಾವವು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:Aug 24, 2023 | 9:45 AM

Share

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು (Varalakshmi Vrat) ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಈ ದಿನ ಕಲಶವನ್ನಿಟ್ಟು ಅದನ್ನು ಲಕ್ಷ್ಮೀಯಂತೆ ಅಲಂಕರಿಸಿ ವಿಶೇಷವಾಗಿ ಪೂಜಿಸುತ್ತಾರೆ. ಈ ವ್ರತಕ್ಕೆ ಸಿದ್ಧತೆ ಹೇಗೆ ಮಾಡಿಕೊಳ್ಳುವುದು? ಪೂಜೆಗೆ ಯಾವ ಯಾವ ಸಾಮಗ್ರಿಗಳು ಬೇಕಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

– ಮೊದಲು ಲಕ್ಷ್ಮೀಯನ್ನು ಕೂರಿಸಲು ಕಲಶ ಖರೀದಿಸಿ. ಈ ಮೊದಲೇ ವರಮಹಾಲಕ್ಷ್ಮೀ ವ್ರತ ಆಚರಣೆ ಮಾಡಿಕೊಂಡು ಬಂದಿದ್ದರೇ ನೀವು ಹಿಂದಿನ ವರ್ಷ ಬಳಸಿದ ಕಲಶವನ್ನೇ ಚೆನ್ನಾಗಿ ತೊಳೆದು ಬಳಸಬಹುದು. ಇಲ್ಲವಾದಲ್ಲಿ ತಾಮ್ರ ಅಥವಾ ಬೆಳ್ಳಿಯ ಕಲಶ ಇಟ್ಟು ಅದಕ್ಕೆ ನೀರು ತುಂಬಿಸಿ ಸ್ವಲ್ಪ ಅಕ್ಕಿ ಸೇರಿಸಿ ಜೊತೆಗೆ ಮನೆಯಲ್ಲಿರುವ ಬೆಳ್ಳಿ, ಚಿನ್ನ ಅಥವಾ ಬಳಕೆಯಲ್ಲಿರುವ ನಾಣ್ಯಗಳನ್ನು ಸೇರಿಸಬೇಕು. ಇದನ್ನು ತಯಾರಿಸುವ ವಿಧಾನ ಪ್ರತಿ ಪದೇಶಗಳಿಗೂ ಬೇರೆ ಬೇರೆಯಾಗಿರಬಹುದು ಕೆಲವರು ಕಲಶದೊಳಗೆ ವೀಳ್ಯದೆಲೆಗಳು, ಅಡಿಕೆ, ಹಣ್ಣು, ಖರ್ಜೂರ ಇತ್ಯಾದಿಗಳನ್ನು ಬಳಸುತ್ತಾರೆ.

– ಕಲಶದ ಮೇಲ್ಭಾಗದಲ್ಲಿ 5 ಮಾವಿನ ಎಲೆಗಳನ್ನು ಹಾಕಿ. ಎಲೆಗಳು ಕಲಶದ ಬಾಯಿಗಳು ಸಂಪೂರ್ಣವಾಗಿ ಮುಚ್ಚಿರುವಂತೆ ನೋಡಿಕೊಳ್ಳಿ. ಮಾವಿನ ಎಲೆಗಳ ತುದಿಗಳು ನೆಲದ ಕಡೆಗೆ ಮುಖ ಮಾಡಿರಬೇಕು.

– ಮಾವಿನ ಎಲೆಗಳ ಮೇಲೆ ತೆಂಗಿನಕಾಯಿ ಇಡಬೇಕು. ಆ ತೆಂಗಿನಕಾಯಿಯ ಜುಟ್ಟು ಮೇಲ್ಮುಖವಾಗಿರಬೇಕು.

– ತೆಂಗಿನಕಾಯಿಯ ಮೇಲೆ ಅರಿಶಿನದಿಂದ ಲಕ್ಷ್ಮೀಯ ಮುಖ ಮಾಡಿ ಶೃಂಗಾರ ಮಾಡಬಹುದು. ಕೆಲವರು ತೆಂಗಿನಕಾಯಿಗೆ ಲಕ್ಷ್ಮೀಯ ಬೆಳ್ಳಿ ಮುಖವಾಡವಿಟ್ಟು ಒಡವೆ ಹಾಕಿ ಶೃಂಗರಿಸಿ ಪೂಜೆ ಮಾಡುತ್ತಾರೆ.

– ಕಲಶದ ಬಾಯಿಗೆ ನಿಮಗೆ ಸಹಾಯವಾಗುವಂತೆ ಕೋಲು ಅಥವಾ ತಂತಿ ಕಟ್ಟಿಕೊಂಡು ಅದಕ್ಕೆ ಸೀರೆ ಉಡಿಸಿ. ಕೆಂಪು ಅಥವಾ ಹಸಿರು ಸೀರೆ ಉಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಪೇಟೆಯಲ್ಲಿ ಸಿಗುವ ರೆಡಿಮೇಡ್ ರೇಷ್ಮೆ ಸೀರೆಯನ್ನೂ ಕೂಡ ತರಬಹುದು.

ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತದಂದು ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

– ಸೀರೆ ಉಡಿಸಿದ ಬಳಿಕ ಕೊರಳಿಗೆ ಮಂಗಳ ಸೂತ್ರ ಹಾಕುವುದನ್ನು ಮರೆಯಬೇಡಿ.

– ಕಮಲ, ಮಲ್ಲಿಗೆ, ಗುಲಾಬಿಗಳಂತಹ ಲಕ್ಷ್ಮೀಗೆ ಪ್ರೀಯವಾದ ಹೂವುಗಳನ್ನು ಅಲಂಕಾರಕ್ಕೆ ಬಳಸಿ.

– ಕ್ಯಾಂಡಲ್​​​ಗಳಿಗಿಂತ ಮಣ್ಣಿನ ದೀಪ ಅದರಲ್ಲಿಯೂ ತುಪ್ಪದ ದೀಪ ಹಚ್ಚುವುದು ತುಂಬಾ ಶ್ರೇಷ್ಠ.

– ಇನ್ನು ಅರಿಶಿನ, ಕುಂಕುಮ, ಬಳೆ, ಹಣೆಗಿಡುವ ತಿಲಕ, ಕನ್ನಡಿ, ಬಾಚಣಿಕೆ ಎಲ್ಲವೂ ಪೂಜೆಗಿಡಬೇಕು.

– ನೈವೇದ್ಯವು ಅಷ್ಟೇ ಲಕ್ಷ್ಮೀಗೆ ಪ್ರೀಯವಾದ ಹಯಗ್ರೀವ, ಕಡಲೆಕಾಳು ಪಂಚಕಜ್ಜಾಯ, ಹೆಸರು ಬೆಳೆ ಪಂಚಕಜ್ಜಾಯ ಇತ್ಯಾದಿ ಪ್ರಸಾದಗಳನ್ನು ಮಾಡಬಹುದು. ಯಾವುದೇ ಕಾರಣಕ್ಕೂ ಅಕ್ಕಿ ಸೇರಿಸಿದ ಆಹಾರವನ್ನು ಮಾಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Sat, 19 August 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ