AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Shastra: ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವ ಅಭ್ಯಾಸ ನಿಮಗಿದ್ಯಾ? ವಾಸ್ತು ಎಚ್ಚರಿಕೆ ಇಲ್ಲಿದೆ

ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವುದು ಸಾಮಾನ್ಯ ಅಭ್ಯಾಸ. ಆದರೆ ವಾಸ್ತು ಪ್ರಕಾರ, ಈ ಸಣ್ಣ ತಪ್ಪು ಮನೆಯ ನೆಮ್ಮದಿ, ಧನಾತ್ಮಕ ಶಕ್ತಿ ಮತ್ತು ಆರ್ಥಿಕ ಸ್ಥಿತಿಯನ್ನು ಹಾಳುಮಾಡುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಮಾನಸಿಕ ಗೊಂದಲ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಈ ಅಭ್ಯಾಸವನ್ನು ಬದಲಿಸಿ, ಸರಳ ವಾಸ್ತು ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಮರಳಿ ತರಬಹುದು.

Vasthu Shastra: ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವ ಅಭ್ಯಾಸ ನಿಮಗಿದ್ಯಾ? ವಾಸ್ತು ಎಚ್ಚರಿಕೆ ಇಲ್ಲಿದೆ
ವಾಸ್ತು ಶಾಸ್ತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 02, 2026 | 8:56 AM

Share

ಸಾಮಾನ್ಯವಾಗಿ ದಿನನಿತ್ಯದ ಬದುಕಿನಲ್ಲಿ ಈ ತಪ್ಪನ್ನು ಮಾಡುತ್ತಲೇ ಇರುತ್ತೇವೆ. ಆಫೀಸ್ ಅಥವಾ ಹೊರಗಡೆಯಿಂದ ಸುಸ್ತಾಗಿ ಮನೆಗೆ ಬಂದ ತಕ್ಷಣ, ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಸರಿಯಾದ ಜಾಗದಲ್ಲಿಡುವ ಬದಲಿಗೆ ಪಕ್ಕದಲ್ಲೇ ಇರುವ ಕುರ್ಚಿ ಅಥವಾ ಸೋಫಾದ ಮೇಲೆ ಎಸೆದುಬಿಡುತ್ತೇವೆ. ಒಂದೆರಡು ದಿನಗಳಲ್ಲಿ ಆ ಒಂದು ಶರ್ಟ್, ಬಟ್ಟೆಗಳ ದೊಡ್ಡ ಬೆಟ್ಟವಾಗಿ ಮಾರ್ಪಟ್ಟಿರುತ್ತದೆ.

ಇದು ನಮಗೆ ಕೇವಲ ಒಂದು ಸಾಮಾನ್ಯ ಸೋಮಾರಿತನದ ಅಭ್ಯಾಸವಾಗಿ ಕಾಣಿಸಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಒಂದು ಸಣ್ಣ ತಪ್ಪು ಮನೆಯ ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ವಾಸ್ತು ಪ್ರಕಾರ, ಮನೆಯ ಪೀಠೋಪಕರಣಗಳು ಕೇವಲ ಕುಳಿತುಕೊಳ್ಳಲು ಮಾತ್ರವಲ್ಲ, ಅವು ಗೌರವ ಮತ್ತು ಸ್ಥಿರತೆಯ ಸಂಕೇತಗಳಾಗಿವೆ. ಹಾಗಾದರೆ, ಕುರ್ಚಿಯ ಮೇಲೆ ಬಟ್ಟೆಗಳನ್ನು ರಾಶಿ ಹಾಕುವುದರಿಂದ ನಿಮ್ಮ ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕುರ್ಚಿಗಳು ಗೌರವ ಮತ್ತು ಸ್ಥಿರತೆಯ ಸಂಕೇತ:

ವಾಸ್ತು ಶಾಸ್ತ್ರದಲ್ಲಿ ಕುರ್ಚಿ ಮತ್ತು ಸೋಫಾಗಳಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅವುಗಳ ಮೇಲೆ ಅಸ್ತವ್ಯಸ್ತವಾಗಿ ಬಟ್ಟೆಗಳನ್ನು ಹಾಕಿ ಮುಚ್ಚಿದಾಗ, ಆ ಜಾಗದಲ್ಲಿ ಶಕ್ತಿಯ ಚಲನೆ ನಿಂತುಹೋಗುತ್ತದೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಮನೆಯವರಲ್ಲಿ ವಿನಾಕಾರಣ ಕೋಪ, ಕಿರಿಕಿರಿ ಮತ್ತು ಸೋಮಾರಿತನ ಹೆಚ್ಚಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೂ ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಮತ್ತು ಜಗಳಗಳು ಉಂಟಾಗುತ್ತವೆ. ಯಾವುದೇ ಕೆಲಸದಲ್ಲೂ ಗಮನ ಹರಿಸಲು ಸಾಧ್ಯವಾಗದೆ, ಮಾನಸಿಕವಾಗಿ ಸದಾ ಆಯಾಸದ ಅನುಭವವಾಗುತ್ತದೆ.

ಆರ್ಥಿಕ ನಷ್ಟ ಮತ್ತು ಸಾಲದ ಸುಳಿ:

ಕುರ್ಚಿಯ ಮೇಲಿನ ಬಟ್ಟೆಗಳ ರಾಶಿ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಬಟ್ಟೆಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಹಾಕುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗಿ, ಧನಾಗಮನಕ್ಕೆ ಅಡ್ಡಿಯಾಗುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಇದರಿಂದ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಿ, ಕಷ್ಟಪಟ್ಟು ಗಳಿಸಿದ ಹಣ ನೀರಿನಂತೆ ಪೋಲಾಗುತ್ತದೆ. ಕೈಯಲ್ಲಿ ಹಣ ನಿಲ್ಲದೆ ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರು ಸಹ ಆರ್ಥಿಕವಾಗಿ ಯಾವುದೇ ಪ್ರಗತಿ ಕಾಣಿಸುವುದಿಲ್ಲ.

ಮಾನಸಿಕ ಗೊಂದಲಗಳು:

ಮನೋವಿಜ್ಞಾನದ ಪ್ರಕಾರವೂ, ದಿನಾಲೂ ಕಣ್ಣೆದುರೇ ಇರುವ ಇಂತಹ ಅಸ್ತವ್ಯಸ್ತವಾದ ಬಟ್ಟೆಗಳ ರಾಶಿ ನಮ್ಮ ಮೆದುಳಿನ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದು ನಿಮ್ಮ ಆಲೋಚನೆಗಳಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ವೃತ್ತಿಜೀವನದಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅಡ್ಡಿಯಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸರಳ ವಾಸ್ತು ಪರಿಹಾರಗಳು:

ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುವುದು ಕಷ್ಟವೇನಲ್ಲ. ಈ ಕೆಳಗಿನ ಸರಳ ನಿಯಮಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಮತ್ತೆ ಸಂತೋಷವನ್ನು ಮರುಕಳಿಸುವಂತೆ ಮಾಡಬಹುದು:

  • ಕುಳಿತುಕೊಳ್ಳುವ ಜಾಗವನ್ನು ಸದಾ ಮುಕ್ತವಾಗಿಡಿ. ಮನೆಯ ಕುರ್ಚಿಗಳು ಯಾವಾಗಲೂ ಸ್ವಚ್ಛವಾಗಿದ್ದು, ಯಾರಾದರೂ ಅತಿಥಿಗಳು ಬಂದರೆ ತಕ್ಷಣ ಕುಳಿತುಕೊಳ್ಳಲು ಸಿದ್ಧವಾಗಿರಬೇಕು.
  • ಬಟ್ಟೆಗಳನ್ನು ಒಗೆದು ಒಣಗಿದ ತಕ್ಷಣ, ಅವುಗಳನ್ನು ಅಲ್ಲೇ ಬಿಡದೆ ಮಡಚಿ ವಾರ್ಡ್‌ರೋಬ್ ಅಥವಾ ಕಪಾಟಿನಲ್ಲಿ ವ್ಯವಸ್ಥಿತವಾಗಿ ಇಡಿ.
  • ಬಿಚ್ಚಿದ ಕೊಳಕು ಬಟ್ಟೆಗಳನ್ನು ಕುರ್ಚಿಯ ಮೇಲೆ ಹಾಕುವ ಬದಲಿಗೆ, ಕಣ್ಣಿಗೆ ಕಾಣಿಸದಂತೆ ಒಂದು ಮುಚ್ಚಳವಿರುವ ಲಾಂಡ್ರಿ ಬಾಸ್ಕೆಟ್ (ಬಟ್ಟೆ ಬುಟ್ಟಿ) ಒಳಗೆ ಹಾಕಿಡಿ.

ದಿನಕ್ಕೆ 5 ನಿಮಿಷ ಮೀಸಲಿಡಿ:

ಪ್ರತೀ ದಿನ ಸಂಜೆ ಮನೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ವಸ್ತುಗಳನ್ನು ತೆಗೆದು ಸರಿಯಾದ ಜಾಗದಲ್ಲಿಡಲು ಕೇವಲ 5 ನಿಮಿಷ ಮೀಸಲಿಡಿ. ಮನೆ ಎಷ್ಟು ಸ್ವಚ್ಛವಾಗಿರುತ್ತದೋ, ಅಷ್ಟೇ ವೇಗವಾಗಿ ಧನಾತ್ಮಕ ಶಕ್ತಿ ಮತ್ತು ಐಶ್ವರ್ಯ ನಿಮ್ಮ ಮನೆಗೆ ಹರಿದುಬರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ