
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೊಳಲನ್ನು ಇಡುವುದರಿಂದ ಆ ಮನೆ ಶ್ರೀಕೃಷ್ಣನ ನಿವಾಸದಷ್ಟೇ ಪವಿತ್ರವಾಗುತ್ತದೆ. ಶ್ರೀಕೃಷ್ಣನ ಆಶೀರ್ವಾದದಿಂದ ಕುಟುಂಬದಲ್ಲಿ ಸದಾ ಶಾಂತಿ, ನೆಮ್ಮದಿ ಮತ್ತು ಸಂತೋಷ ನೆಲೆಸುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದಲ್ಲದೇ ಮನೆಯಲ್ಲಿ ಕೊಳಲನ್ನು ಇಟ್ಟುಕೊಳ್ಳುವುದರಿಂದ ಸಂಪತ್ತು ಮತ್ತು ಸಮೃದ್ಧಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಕೊಳಲನ್ನು ಸಂಪತ್ತಿನ ಅಧಿಪತಿಯಾದ ಕುಬೇರ ದೇವನಿಗೆ ಸಂಯೋಜಿಸಲಾಗುತ್ತದೆ. ಕೊಳಲಿನ ಉಪಸ್ಥಿತಿ ಮತ್ತು ನಾದವು ಮನಸ್ಸನ್ನು ಶಮನಗೊಳಿಸುವುದಲ್ಲದೆ, ಮನೆಯಲ್ಲಿ ಕಲೆ ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ.
ಮನೆಯ ದೇವರ ಕೋಣೆಯಲ್ಲಿ ಕೊಳಲನ್ನು ಇಡುವುದು ಅತ್ಯಂತ ಶುಭ. ಇದಲ್ಲದೆ, ವ್ಯವಹಾರದಲ್ಲಿ ನಿರಂತರ ನಷ್ಟ ಅಥವಾ ಹಣಕಾಸಿನ ಅಭಾವ ಎದುರಿಸುತ್ತಿರುವವರು ತಮ್ಮ ಕೆಲಸದ ಸ್ಥಳದಲ್ಲಿ (Office/Shop) ಕೊಳಲನ್ನು ಇಟ್ಟುಕೊಳ್ಳುವುದರಿಂದ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಪ್ಲಾಸ್ಟಿಕ್ ಅಥವಾ ಇತರ ಅನಗತ್ಯ ಲೋಹಗಳಿಂದ ಮಾಡಿದ ಕೊಳಲುಗಳಿಗಿಂತ ಮರದ (ಬಿದಿರಿನ) ಕೊಳಲನ್ನು ಬಳಸುವುದು ಅತ್ಯಂತ ಸೂಕ್ತ. ಒಂದು ವೇಳೆ ಲೋಹದ ಕೊಳಲನ್ನು ಇಡಲು ಬಯಸಿದರೆ, ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಕೊಳಲನ್ನು ಆಯ್ಕೆ ಮಾಡಿಕೊಳ್ಳುವುದು ವಾಸ್ತು ಪ್ರಕಾರ ಶ್ರೇಷ್ಠ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Wed, 9 September 26