AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ರಾತ್ರಿ ಬೆಚ್ಚಿ ಬೀಳಿಸುವ ಕೆಟ್ಟ ಕನಸು ಬೀಳುತ್ತಿವೆಯೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ!

ಅನೇಕರಿಗೆ ನಿದ್ರೆಯಲ್ಲಿ ಭಯಾನಕ ದುಃಸ್ವಪ್ನಗಳು ಕಾಡುತ್ತವೆ, ಇದು ಆತಂಕಕ್ಕೆ ಕಾರಣವಾಗುತ್ತದೆ. ಇದಕ್ಕೆ ನಿಮ್ಮ ಮಲಗುವ ಕೋಣೆಯಲ್ಲಿನ ವಾಸ್ತು ದೋಷಗಳು ಕಾರಣವಿರಬಹುದು. ಸರಿಯಾದ ಮಲಗುವ ದಿಕ್ಕು, ಹಾಸಿಗೆ ಕೆಳಗಿನ ಸ್ವಚ್ಛತೆ, ಕನ್ನಡಿಯ ಪ್ರತಿಬಿಂಬ ಮತ್ತು ಕೋಣೆಯಲ್ಲಿನ ಚಿತ್ರಗಳಂತಹ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ನಕಾರಾತ್ಮಕ ಶಕ್ತಿ ನಿವಾರಿಸಿ, ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿಯ ಮತ್ತು ಗಾಢ ನಿದ್ರೆ ಪಡೆಯಬಹುದು.

Vastu Tips: ರಾತ್ರಿ ಬೆಚ್ಚಿ ಬೀಳಿಸುವ ಕೆಟ್ಟ ಕನಸು ಬೀಳುತ್ತಿವೆಯೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ!
ಕೆಟ್ಟ ಕನಸುImage Credit source: Adobe Stock
ಅಕ್ಷತಾ ವರ್ಕಾಡಿ
|

Updated on: Jul 03, 2026 | 9:29 AM

Share

ಅನೇಕ ಜನರು ನಿದ್ರೆಯ ಸಮಯದಲ್ಲಿ ಭಯಾನಕ ಅಥವಾ ವಿಚಿತ್ರ ಕನಸುಗಳನ್ನು ಕಾಣುತ್ತಾರೆ. ಇವು ಕೇವಲ ಆ ಕ್ಷಣದ ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ಮರುದಿನ ಇಡೀ ದಿನ ಒತ್ತಡ, ಆತಂಕ ಮತ್ತು ಅತಿಯಾದ ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀವು ಕೂಡ ಇಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಲಗುವ ಕೋಣೆಯಲ್ಲಿರುವ ಕೆಲವು ವಾಸ್ತು ದೋಷಗಳೇ ಇದಕ್ಕೆ ಕಾರಣವಾಗಿರಬಹುದು.

ನಾವು ವಾಸಿಸುವ ಮನೆಯಲ್ಲಿನ ಶಕ್ತಿಯ ಹರಿವು ನಮ್ಮ ಮನಸ್ಥಿತಿ, ಆರೋಗ್ಯ ಮತ್ತು ನಿದ್ರೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಲಗುವ ಕೋಣೆಯಲ್ಲಿನ ವಸ್ತುಗಳ ಜೋಡಣೆ, ಮಲಗುವ ದಿಕ್ಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆಯಂತಹ ಅಂಶಗಳು ನಮ್ಮ ಉಪಪ್ರಜ್ಞೆ ಮನಸ್ಸನ್ನು ನಿಯಂತ್ರಿಸುತ್ತವೆ. ಹಾಗಾದರೆ ದುಃಸ್ವಪ್ನಗಳನ್ನು ತಡೆದು, ನೆಮ್ಮದಿಯ ನಿದ್ರೆ ಪಡೆಯಲು ಅನುಸರಿಸಬೇಕಾದ ವಾಸ್ತು ಸಲಹೆಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.

ಮಲಗುವ ದಿಕ್ಕು ಸರಿಯಾಗಿರಲಿ:

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವಾಗ ನಿಮ್ಮ ತಲೆಯನ್ನು ಯಾವ ದಿಕ್ಕಿಗೆ ಇಡುತ್ತೀರಿ ಎಂಬುದು ಅತ್ಯಂತ ಮುಖ್ಯ. ಎಂದಿಗೂ ಉತ್ತರ ದಿಕ್ಕಿಗೆ (North) ತಲೆ ಇಟ್ಟು ಮಲಗಬಾರದು. ಭೂಮಿಯ ಕಾಂತೀಯ ವಲಯದ ಪ್ರಭಾವದಿಂದಾಗಿ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ಮಾನಸಿಕ ಅಶಾಂತಿ, ತಲೆನೋವು, ಆತಂಕ ಮತ್ತು ದುಃಸ್ವಪ್ನಗಳು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ, ನೆಮ್ಮದಿಯ ನಿದ್ರೆಗಾಗಿ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಲು ವಾಸ್ತು ತಜ್ಞರು ಸೂಚಿಸುತ್ತಾರೆ.

ಹಾಸಿಗೆಯ ಕೆಳಗೆ ಕಸ ಹಾಕಬೇಡಿ:

ಮನೆಯಲ್ಲಿ ಜಾಗ ಉಳಿಸಲು ಅನೇಕರು ಹಳೆಯ ಬೂಟುಗಳು, ಹರಿದ ಬಟ್ಟೆಗಳು, ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು, ಮುರಿದ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಸಿಗೆಯ (Bed) ಕೆಳಗೆ ತೂರಿಸಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಅಭ್ಯಾಸವು ಅತ್ಯಂತ ಅಪಾಯಕಾರಿ. ಇವು ಹಾಸಿಗೆಯ ಸುತ್ತ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತವೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ನಿದ್ರಾಹೀನತೆ ಕಾಡುತ್ತದೆ. ಆದ್ದರಿಂದ ಹಾಸಿಗೆಯ ಕೆಳಭಾಗವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.

ಕನ್ನಡಿಯ ಪ್ರತಿಬಿಂಬ ನಿಮ್ಮ ಹಾಸಿಗೆಯ ಮೇಲೆ ಬೀಳದಿರಲಿ:

ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಅಥವಾ ಕನ್ನಡಿ ಇಡುವುದು ಸಹಜ. ಆದರೆ, ನೀವು ಮಲಗಿರುವ ಹಾಸಿಗೆ ಅಥವಾ ನಿಮ್ಮ ದೇಹವು ಕನ್ನಡಿಯಲ್ಲಿ ಪ್ರತಿಬಿಂಬಿತವಾದರೆ ಅದನ್ನು ದೊಡ್ಡ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ರಾತ್ರಿ ವೇಳೆ ಆತಂಕವನ್ನು ಸೃಷ್ಟಿಸುತ್ತದೆ. ಒಂದು ವೇಳೆ ಕನ್ನಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಾಗದಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಅದರ ಮೇಲೆ ಒಂದು ಪರದೆ ಅಥವಾ ಬಟ್ಟೆಯನ್ನು ಮುಚ್ಚುವುದು ಉತ್ತಮ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಭಯಾನಕ ಚಿತ್ರಗಳು ಮಲಗುವ ಕೋಣೆಯಲ್ಲಿ ಬೇಡ:

ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಹಿಂಸಾತ್ಮಕ ಪ್ರಾಣಿಗಳು, ಯುದ್ಧದ ದೃಶ್ಯಗಳು, ಒಣಗಿದ ಅಥವಾ ಮುಳ್ಳಿನ ಸಸ್ಯಗಳು ಹಾಗೂ ಚೂಪಾದ ಆಯುಧಗಳ ಚಿತ್ರಗಳನ್ನು ಹಾಕಬೇಡಿ. ಇಂತಹ ನಕಾರಾತ್ಮಕ ಚಿತ್ರಗಳು ನಿಮ್ಮ ಉಪಪ್ರಜ್ಞೆ ಮನಸ್ಸನ್ನು ಪ್ರಚೋದಿಸಿ, ರಾತ್ರಿಯಿಡೀ ಚಡಪಡಿಕೆ ಮತ್ತು ಭಯಾನಕ ಕನಸುಗಳು ಬೀಳುವಂತೆ ಮಾಡುತ್ತವೆ.

ಉತ್ತಮ ನಿದ್ರೆಗಾಗಿ ಸರಳ ವಾಸ್ತು ಟಿಪ್ಸ್:

ರಾತ್ರಿ ಮಲಗುವ ಮುನ್ನ ಮಲಗುವ ಕೋಣೆಯಲ್ಲಿ ಲಘು ಸುಗಂಧದ್ರವ್ಯ (Room Freshener) ಅಥವಾ ಕರ್ಪೂರದ ಹರಳುಗಳನ್ನು ಇಡುವುದರಿಂದ ಗಾಳಿ ಶುದ್ಧವಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮಲಗುವ ಕೋಣೆಯಲ್ಲಿ ಅತ್ಯಂತ ಪ್ರಕಾಶಮಾನವಾದ ದೀಪಗಳ ಬದಲಿಗೆ ಹಿತವಾದ, ಕಡಿಮೆ ಬೆಳಕಿನ ನೈಟ್ ಲ್ಯಾಂಪ್ ಬಳಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ