AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inauspicious Day: ಚಿನ್ನ ಮತ್ತು ಕಬ್ಬಿಣವನ್ನು ಯಾವ ದಿನ ಖರೀದಿ ಮಾಡಬಾರದು, ಇಲ್ಲಿದೆ ನಿಖರ ಮಾಹಿತಿ ನೋಡಿ

ಕಬ್ಬಿಣ ಲೋಹವು ಶನಿದೇವನ ಅಂಶವಾಗುತ್ತದೆ. ಹಾಗಾಗಿ ಶನಿವಾರದಂದು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುವನ್ನು ದಾನವಾಗಿ ನೀಡಿದರೆ ಶನಿಮಹಾತ್ಮನನ್ನು ಸಂತುಷ್ಟಗೊಳಿಸಬಹುದು. ಮತ್ತೊಂದು ವಿಷಯವೆಂದರೆ ಶನಿವಾರ ಹೊರತುಪಡಿಸಿ, ವಾರದ ಇತರೆ ಯಾವುದೇ ದಿನಗಳಂದು ನೀವು ಕಬ್ಬಿಣವನ್ನು ಖರೀದಿ ಮಾಡಬಹುದು.

Inauspicious Day: ಚಿನ್ನ ಮತ್ತು ಕಬ್ಬಿಣವನ್ನು ಯಾವ ದಿನ ಖರೀದಿ ಮಾಡಬಾರದು, ಇಲ್ಲಿದೆ ನಿಖರ ಮಾಹಿತಿ ನೋಡಿ
ಅಪ್ಪಿತಪ್ಪಿಯೂ ಚಿನ್ನ ಮತ್ತು ಕಬ್ಬಿಣವನ್ನು ಈ ದಿನಗಳಂದು ಖರೀದಿ ಮಾಡಬೇಡಿ!
TV9 Web
| Edited By: ಸಾಧು ಶ್ರೀನಾಥ್​|

Updated on: May 05, 2022 | 8:16 PM

Share

ಮೊನ್ನೆಯಷ್ಟೇ ಅಕ್ಷಯ ತೃತೀಯ ಆಚರಿಸಿದ್ದೀರಿ. ಆ ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಿ, ಸಮೃದ್ಧಿ ಕಂಡಿದ್ದೀರಿ. ಅಕ್ಷಯವಾಗುವ ತೃತೀಯದ ದಿನ ಚಿನ್ನ ಖರೀದಿಸಬಹುದಾದರೆ ಯಾವ ದಿನದಂದು ಚಿನ್ನ ಖರೀದಿಸಬಾರದು ಮತ್ತು ಅದರ ಜೊತೆಗೆ, ಯಾವ ದಿನದಂದು ಕಬ್ಬಿಣ ಖರೀದಿ ಮಾಡಬಾರದು ಎಂಬುದು ಸಹ ಬಹುಮುಖ್ಯವಾಗುತ್ತದೆ. ಶುಭ ಘಳಿಗೆಯಲ್ಲಿ ಸ್ವಚ್ಛ ಮನಸಿನಿಂದ ಏನೇ ಮಾಡಿದರೂ ಅದು ಕೈಗೂಡುತ್ತದೆ. ಅದು ಪ್ರಯೋಜನಕಾರಿಯೂ ಆದೀತು. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ದಿನದಂದು ಏನು ಮಾಡಬೇಕು ಎಂಬುದನ್ನು ಪ್ರಧಾನವಾಗಿ ಹೇಳಲಾಗುತ್ತದೆ. ನಮ್ಮ ಜೀವನದಲ್ಲಿ ಮುಖ್ಯವಾಗುವ ಚಿನ್ನ ಮತ್ತು ಕಬ್ಬಿಣ ಖರೀದಿಸುವ ಸಮಯದ ಬಗ್ಗೆ ತಿಳಿಯುವುದು ಅತ್ಯವಶ್ಯವಾಗುತ್ತದೆ. ಇದರ ಬಗ್ಗೆ ಈಗ ಒಂದಿಷ್ಟು  ನಿಖರ ಮಾಹಿತಿ ತಿಳಿದುಕೊಳ್ಳೋಣ.

ಚಿನ್ನ ಖರೀದಿಗೆ ಅತ್ಯಂತ ಪ್ರಶಸ್ತ ಘಳಿಗೆಯೆಂದರೆ ಅಕ್ಷಯ ತೃತೀಯ ಮತ್ತು ಧನ್​ ತೆರಸಾ ಆಗಿದೆ. ಈ ದಿನದಂದು ಚಿನ್ನ ಖರೀದಿಸಿದರೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಹೆಚ್ಚಾಗಿಯೇ ಆಗುತ್ತದೆ. ಇದರ ಹೊರತಾಗಿ ವಾರದ ದಿನಗಳಲ್ಲಿ ಚಿನ್ನ ಖರೀದಿಸಬೇಕು ಎಂದು ನೀವು ಇಚ್ಛಿಸಿದ್ದೇ ಆದರೆ ಅತ್ಯವಶ್ಯವಾಗಿ ಭಾನುವಾರ ಮತ್ತು ಗುರುವಾರಗಳಂದು ಚಿನ್ನ ಖರೀದಿ ಮಾಡಬಹುದು.

ಅಕ್ಷಯ ತೃತೀಯ ಮತ್ತು ಧನ್​ ತೆರಸಾ ದಿನದಂದು ಚಿನ್ನ ಖರೀದಿ ಮಾಡಿದರೆ ಕೇವಲ ಮಹಾಲಕ್ಷ್ಮಿಯ ಕೃಪಾಕಟಾಕ್ಷವಷ್ಟೇ ಅಲ್ಲ; ಸೂರ್ಯ ಭಗವಂತನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ. ಹಾಗಾಗಿ ಭಾನುವಾರ ಚಿನ್ನದ ಖರೀದಿಗೆ ಪ್ರಶಸ್ತವಾಗಿರುತ್ತದೆ. ಇಲ್ಲಿ ಮತ್ತೊಂದು ವಿಚಾರ ನಿಮ್ಮ ಗಮನಕ್ಕೆ ತರುವುದಾದರೆ ಅಪ್ಪಿತಪ್ಪಿಯೂ ನೀವು ಚಿನ್ನವನ್ನು ಶನಿವಾರ ಖರೀದಿಸಬೇಡಿ.

ಕಬ್ಬಿಣ ಲೋಹವು ಶನಿದೇವನ ಅಂಶವಾಗುತ್ತದೆ. ಹಾಗಾಗಿ ಶನಿವಾರದಂದು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುವನ್ನು ದಾನವಾಗಿ ನೀಡಿದರೆ ಶನಿಮಹಾತ್ಮನನ್ನು ಸಂತುಷ್ಟಗೊಳಿಸಬಹುದು. ಮತ್ತೊಂದು ವಿಷಯವೆಂದರೆ ಶನಿವಾರ ಹೊರತುಪಡಿಸಿ, ವಾರದ ಇತರೆ ಯಾವುದೇ ದಿನಗಳಂದು ನೀವು ಕಬ್ಬಿಣವನ್ನು ಖರೀದಿ ಮಾಡಬಹುದು.

ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ

ಇದನ್ನೂ ಓದಿ: Suspend: ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!

ಇದನ್ನೂ ಓದಿ: ವ್ಯವಸ್ಥೆಗೇ ಸಡ್ಡು ಹೊಡೆಯುವಂತೆ, ಪಿಎಸ್ಐ ನೇಮಕ ಅಕ್ರಮ ಪ್ರಕರಣವನ್ನೇ ರದ್ದುಗೊಳಿಸುವಂತೆ ಹೈಕೋರ್ಟ್​​ಗೆ ಮೊರೆಹೋದ ಇಬ್ಬರು ಆರೋಪಿಗಳು

Follow Us
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ