AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2011 Cricket World Cup: ಭಾರತ ವಿಶ್ವಕಪ್​ ಗೆದ್ದು ಇಂದಿಗೆ 10 ವರ್ಷ.. ಒಬ್ಬ ಕ್ಯಾನ್ಸರ್​ ಪೀಡಿತ, ಒಬ್ಬ ಶತಕ ವಂಚಿತ, ಒಬ್ಬ ಸಮರ್ಥ ನಾಯಕನ ಆಟವನ್ನು ನಾವ್ಯಾರು ಮರೆಯುವಂತಿಲ್ಲ!

2011 Cricket World Cup: ಏಪ್ರಿಲ್ 2 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ತಾಯ್ನಾಡಿನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವಕಪ್ ಅನ್ನು ವಶಪಡಿಸಿಕೊಂಡಿತು.

2011 Cricket World Cup: ಭಾರತ ವಿಶ್ವಕಪ್​ ಗೆದ್ದು ಇಂದಿಗೆ 10 ವರ್ಷ.. ಒಬ್ಬ ಕ್ಯಾನ್ಸರ್​ ಪೀಡಿತ, ಒಬ್ಬ ಶತಕ ವಂಚಿತ, ಒಬ್ಬ ಸಮರ್ಥ ನಾಯಕನ ಆಟವನ್ನು ನಾವ್ಯಾರು ಮರೆಯುವಂತಿಲ್ಲ!
ವಿಶ್ವಕಪ್​ ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Apr 02, 2021 | 3:29 PM

Share

2 ಏಪ್ರಿಲ್ 2011. 28 ವರ್ಷಗಳ ನಂತರ ಭಾರತ ಪುರುಷರ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದ ದಿನಾಂಕ ಇದು. 23 ವರ್ಷಗಳ ಕಾಲ ವಿಶ್ವ ಚಾಂಪಿಯನ್ ಆಗಬೇಕೆಂಬ ಕನಸು ಕಾಣುತ್ತಿರುವ ಮನುಷ್ಯನ ಕನಸು ಈಡೇರಿದ ದಿನ. ಕ್ಯಾನ್ಸರ್ ವಿರುದ್ಧ ಹೋರಾಡುವ ವ್ಯಕ್ತಿಯಿಂದಾಗಿ ಶತಕೋಟಿ ಭಾರತೀಯರ ಮುಖ ಸಂತೋಷದಿಂದ ಅರಳಿದ ದಿನ. ತಂಡದ ಗೆಲುವು ಮತ್ತು ಯಶಸ್ಸು ಒಂದು ಶತಕದಂತಹ ವೈಯಕ್ತಿಕ ಮೈಲಿಗಲ್ಲುಗಿಂತ ಹೆಚ್ಚಿನದಾಗಿದೆ ಎಂದು ಇಡೀ ಜಗತ್ತಿಗೆ ತೋರಿಸಿದ ದಿನ. ಒಂದು ಸಣ್ಣ ಪಟ್ಟಣದ ವ್ಯಕ್ತಿಯೊಬ್ಬನ ಹೊಡೆತವು ದೇಶಾದ್ಯಂತ ದೀಪಾವಳಿಯನ್ನು ಸಮಯಕ್ಕೆ ಮುಂಚಿತವಾಗಿ ಪಡೆದ ದಿನ.10 ವರ್ಷಗಳ ಹಿಂದೆ ಇದೆ ದಿನದಂದು ಭಾರತೀಯರಿಗೆ ಯುದ್ಧವನ್ನೇ ಗೆದ್ದಷ್ಟು ಸಂತೋಷ, ಹೇಳಲಾಗದಷ್ಟು ಸಂತೋಷವನ್ನು ಪ್ರತಿಯೊಬ್ಬನ ಕಣ್ಗಳಲ್ಲೂ ಕಂಬನಿದಾರೆಯಾಗಿ ಹರಿಸಿದ ದಿನ ಇದು.

ಈ ಹನ್ನೊಂದು ಮುತ್ತುಗಳನ್ನು ಮರೆಯುವುದುಂಟೆ ಕ್ರಿಕೆಟನ್ನೇ ತಮ್ಮ ಧರ್ಮವನ್ನಾಗಿಸಿಕೊಂಡಿರುವ ಭಾರತೀಯರ 23 ವರ್ಷಗಳ ಕನಸು ಈಡೇರಿದ್ದು ಯಾವುದೋ ಒಂದು ಜಾದೂವಿನಂದಲ್ಲ, ಒಂದು ಚಮತ್ಕಾರದಿಂದಲ್ಲ. ಬದಲಿಗೆ ಭಾರತೀಯರ ಹೃದಯ ಸಿಂಹಾಸನದಲ್ಲಿ ಅದಾಗಲೇ ಕುಳಿತುಬಿಟ್ಟಿದ್ದ ಆ 11 ಜನ ಆಟಗಾರರಿಂದ. ವಿಶ್ವಕಪ್​ ಗೆಲ್ಲುವ ಕನಸು ನನಸಾಗಿದ್ದು, ವೀರೇಂದ್ರ ಸೆಹ್ವಾಗ್ ಎಂಬ ಸ್ಪೋಟಕ ಬ್ಯಾಟ್ಸ್​ಮನ್​ನಿಂದ. ಸಚಿನ್ ತೆಂಡೂಲ್ಕರ್ ಅವರಂತಹ ಶಾಂತಮೂರ್ತಿಯಿಂದ. ಗೌತಮ್ ಗಂಭೀರ್ ಎಂಬ ಸಮಯೋಜಿತ ಆಟಗಾರನಿಂದ. ಮಾರಾಣಾಂತಿಕ ಕಾಯಿಲೆ ಇದ್ದರು ದೇಶಕ್ಕಾಗಿ ಆಡಿದ ಯುವರಾಜ್ ಎಂಬ ಹೋರಾಟಗಾರನಿಂದ. ಜಹೀರ್ ಖಾನ್ ಅಂತಹ ವೇಗದ ಬೌಲಿಂಗ್​ ಜವಬ್ದಾರಿ ಹೊತ್ತ ಆಟಗಾರನಿಂದ. ಹರ್ಭಜನ್ ನಂತಹ ಗೂಗ್ಲಿ ಮಾಸ್ಟರ್​​ನಿಂದ. ವಿರಾಟ್ ಕೊಹ್ಲಿಯಂತಹ ಅಗ್ರೇಸಿವ್​ ಆಟಗಾರನಿಂದ. ಪ್ರತಿ ಅವಕಾಶದಲ್ಲೂ ಬೌಂಡರಿಗಳನ್ನು ಹೊಡೆಯಲು ಹವಣಿಸುವ ಸುರೇಶ್ ರೈನಾ ಅವರಿಂದ. ಮುನಾಫ್ ಪಟೇಲ್ ಅವರಂತಹ ಘಾತಕ ವೇಗಿಯಿಂದ. ಶ್ರೀಶಾಂತ್ ಅವರಂತಹ ಮುಂಗೋಪಿಯಿಂದ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತಹ ತಾಳ್ಮೆಯ ಆಟಗಾರನಿಂದ ವಿಶ್ವಕಪ್​ ಭಾರತದ ಮುಡಿಗೆರಿತು.

ಎಲ್ಲವೂ ವಿರುದ್ಧವಾಗಿದ್ದರೂ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಮುಂದೆ ಭಾರತ ಸವಾಲನ್ನು ಎದುರಿಸಿತು. ಮೊದಲು ಟಾಸ್ ಮತ್ತು ಬ್ಯಾಟಿಂಗ್ ಗೆದ್ದ ಶ್ರೀಲಂಕಾ, ಮಹೇಲಾ ಜಯವರ್ಧನೆ ಅವರ ಅಜೇಯ 103 ರನ್​ಗಳ ನೆರವಿನಿಂದ 274 ರನ್ ಟಾರ್ಗೆಟ್ ನೀಡಿತು. ಫೈನಲ್‌ನಲ್ಲಿ ಭಾರತದ ವಿರುದ್ಧ ಅನೇಕ ಘಟನೆಗಳು ನಡೆದವು. ಶ್ರೀಲಂಕಾ ಸತತ ಎರಡನೇ ವಿಶ್ವಕಪ್ ಫೈನಲ್ ಮತ್ತು ಐಸಿಸಿ ಪಂದ್ಯಾವಳಿಯಲ್ಲಿ ಆಡುತ್ತಿದ್ದಂತೆ, ಟೀಮ್ ಇಂಡಿಯಾದ ಮೇಲೆ ಅವರ ಮೇಲುಗೈ ಹೆಚ್ಚಾಗಿತ್ತು. ಅಲ್ಲಿಯವರೆಗೆ, ಯಾವುದೇ ತಂಡವು ತಮ್ಮ ತವರು ಮೈದಾನದಲ್ಲಿ ವಿಶ್ವಕಪ್ ಗೆದ್ದಿರಲಿಲ್ಲ. ಗುರಿಯನ್ನು ಬೆನ್ನಟ್ಟುವಾಗ ಕೇವಲ ಎರಡು ತಂಡಗಳು ಮಾತ್ರ ಫೈನಲ್‌ನಲ್ಲಿ ಗೆಲ್ಲಲು ಸಾಧ್ಯವಾಯಿತು. ಅಲ್ಲದೆ, ಫೈನಲ್‌ನಲ್ಲಿ ಬ್ಯಾಟ್ಸ್‌ಮನ್ ಶತಕ ಬಾರಿಸಿದ ತಂಡವು ಎಂದಿಗೂ ಸೋತಿರಲಿಲ್ಲ. ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಜೊತೆಯಾಟ ಬೇಗನೆ ಮುರಿಯಿತು. ಖಾತೆ ತೆರೆಯುವ ಮುನ್ನ ಸೆಹ್ವಾಗ್ ಎರಡನೇ ಎಸೆತದಲ್ಲಿ ಔಟಾದರು. ಸಚಿನ್ (18) ಎರಡು ಬೌಂಡರಿ ಹಾಕಿದ ನಂತರ ಪೆವಿಲಿಯನ್​ಗೆ ಮರಳಿದರು. ಈಗ ಪಂದ್ಯ ಸಂಪೂರ್ಣವಾಗಿ ಶ್ರೀಲಂಕಾದ ಕೈಯಲ್ಲಿತ್ತು. ಆದರೆ ಇಂತಹ ಸಂದರ್ಭಗಳು ಮಾತ್ರ ಒಬ್ಬ ನಾಯಕನ ಜವಬ್ದಾರಿಯನ್ನ ಎತ್ತಿಹಿಡಿಯುತ್ತವೆ.

ಸಚಿನ್​ ಕನಸು ಈಡೇರಿದ ದಿನ ಏಪ್ರಿಲ್ 2 ರ ದಿನ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯ. 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಟೀಮ್ ಇಂಡಿಯಾ ತನ್ನದೇ ಹೆಸರಿನಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಏಪ್ರಿಲ್ 2 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ತಾಯ್ನಾಡಿನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವಕಪ್ ಅನ್ನು ವಶಪಡಿಸಿಕೊಂಡಿತು.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ವೃತ್ತಿ ಜೀವನದ ಸರಿಸುಮಾರು 22 ವರ್ಷಗಳ ಕಾಲ ವಿಶ್ವಕಪ್‌ ಟ್ರೋಫಿಗಾಗಿ ಕಾದಿದ್ದರು. ಜತೆಗೆ, ವಿಶ್ವಕಪ್‌ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿದ್ದರು. ಅದರಂತೆ ಅಂದು ಭಾರತ, ಶ್ರೀಲಂಕಾ ತಂಡವನ್ನು ಮಣಿಸಿ ಎರಡನೇ ಬಾರಿ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಸಚಿನ್‌ ತೆಂಡೂಲ್ಕರ್‌ ಅವರ ಸುದೀರ್ಘ ಅವಧಿಯ ಕನಸು ಈಡೇರಿತು.

ಶತಕ ವಂಚಿತ ಗಂಭೀರ್​ ಮೌನವಾಗಿಬಿಟ್ಟಿದ್ದರು.. ಬೇಗನೆ ವಿಕೆಟ್​ಗಳು ಉರುಳಿದ ನಂತರ ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಗಂಭೀರ್​ ಹಾಗೂ ವಿರಾಟ್ ಕೊಹ್ಲಿ ನೆರವಾದರು. ಇಬ್ಬರೂ 83 ರನ್ ಸೇರಿಸಿದರು ಮತ್ತು ಪಂದ್ಯದಲ್ಲಿ ಭಾರತವನ್ನು ಜೀವಂತಗೊಳಿಸಿದರು. 35 ರನ್ ಗಳಿಸಿದ ಕೊಹ್ಲಿಯನ್ನ ತಿಲಕರತ್ನೆ ದಿಲ್ಶನ್ ಔಟ್​ ಮಾಡಿದರು. ಈಗ ಸಂಭ್ರಮಿಸುವ ಸರದಿ ಶ್ರೀಲಂಕಾದಾಗಿತ್ತು. ನಂತರ ಭಾರತ ನಿರೀಕ್ಷಿಸದ ಘಟನೆಯೊಂದು ನಡೆಯಿತು. ಕ್ಯಾಪ್ಟನ್ ಧೋನಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು. ವಿಶ್ವಕಪ್​ ಪಂದ್ಯಾವಳಿಯಲ್ಲಿ ಧೋನಿ ಉತ್ತಮ ಲಯದಲ್ಲಿದ್ದರು. ಆದರೆ ದೊಡ್ಡ ಇನ್ನಿಂಗ್ಸ್ ಆಡಿರಲಿಲ್ಲ. ಫೈನಲ್‌ಗೆ ಮುನ್ನ ಅವರ ಗರಿಷ್ಠ ಸ್ಕೋರ್ 34 ಆಗಿತ್ತು. ಐದನೇ ಸ್ಥಾನದಲ್ಲಿ ಧೋನಿ ಆಗಮಿಸಿದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಧೋನಿ 5ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವುದಕ್ಕೆ ಸಚಿನ್ ನೀಡಿದ ಸಲಹೆ ಕಾರಣವೆಂದು ಸೆಹ್ವಾಗ್ ಇತ್ತೀಚೆಗೆ ತಿಳಿಸಿದ್ದಾರೆ.

ಧೋನಿ 5ನೇ ಸ್ಥಾನದಲ್ಲಿ ಬಂದು ನೆಲಕಚ್ಚಿ ಆಡಲು ಪ್ರಾರಂಭಿಸಿದರು. ಗಂಭೀರ್ ಅವರೊಂದಿಗೆ 109 ರನ್ ಪಾಲುದಾರಿಕೆ ಹೊಂದಿದ್ದರು. ಈ ಪಾಲುದಾರಿಕೆಯು ಪಂದ್ಯದಲ್ಲಿ ಭಾರತದ ಮೇಲುಗೈ ಸಾಧಿಸಿತು. ಆದರೆ ಗೌತಮ್ ಗಂಭೀರ್ ಶತಕಕ್ಕೆ ಮೂರು ರನ್ ಇರುವಾಗ ಔಟಾದರು. ಆ ಸಮಯದಲ್ಲಿ ಎಲ್ಲರ ಬಾಯಲ್ಲೂ ಒಂದೇ ಒಂದು ವಿಷಯ ಇತ್ತು, ಅದು ಗಂಭೀರ್​, ಶತಕವನ್ನು ಸುಲಭವಾಗಿ ಮಾಡಬೇಕಾಗಿತ್ತು ಎಂಬುದು. ಆದರೆ ವೈಯಕ್ತಿಕ ಮೈಲಿಗಲ್ಲುಗಳಲ್ಲಿ ಸಿಲುಕಿಕೊಳ್ಳುವುದು ಗಂಭೀರ್ ಅಭ್ಯಾಸವಲ್ಲ. ಅವರು ನಿರಾಶೆಗೊಂಡರು ಸಹ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಹಿಂದಿರುಗಿದರು. ಈ ಸಮಯದಲ್ಲಿ ಭಾರತಕ್ಕೆ 52 ಎಸೆತಗಳಲ್ಲಿ 52 ರನ್ ಬೇಕಿತ್ತು.

ಅದು ಧೋನಿಯ ರಾತ್ರಿ.. ಯುವರಾಜ್ ಸಿಂಗ್ 2011ರ ವಿಶ್ವಕಪ್ ಮೈದಾನದಲ್ಲಿ ಹೀರೋ ಆಗಿದ್ದರು. ಈ ಆಟಗಾರ ಚೆಂಡು ಮತ್ತು ಬ್ಯಾಟ್‌ನಿಂದ ಸ್ಪ್ಲಾಶ್ ಮಾಡಿದ್ದ. ಪ್ರತಿ ತಂಡವು ಅವರ ಮುಂದೆ ಸೋಲನ್ನು ಒಪ್ಪಿಕೊಂಡಿತ್ತು. ಫೈನಲ್‌ನಲ್ಲಿಯೂ ಯುವಿ ಬೌಂಡರಿಗಳೊಂದಿಗೆ ಖಾತೆ ತೆರೆದರು. ನಂತರ, ಧೋನಿ-ಯುವಿ ಅವರ ಸಮರ್ಥ ಜೋಡಿ ಪರಿಚಿತ ಶೈಲಿಯಲ್ಲಿ ರನ್ ಗಳಿಸಿ ಭಾರತವನ್ನು ವಿಜಯದ ಹೊಸ್ತಿಲಿಗೆ ತಂದರು. 49 ನೇ ಓವರ್​ನಲ್ಲಿ ಭಾರತ ಗೆಲ್ಲಲು 12 ಎಸೆತಗಳಲ್ಲಿ ಐದು ರನ್ ಗಳಿಸಬೇಕಿತ್ತು. ಯುವರಾಜ್ ಮೊದಲ ಎಸೆತದಲ್ಲಿ ಒಂದು ರನ್ ಪಡೆದರು. ಈಗ ಧೋನಿ ಬ್ಯಾಟಿಂಗ್​ನಲ್ಲಿದ್ದರು ಮತ್ತು ಚೆಂಡು ನುವಾನ್ ಕುಲಶೇಖರ ಬಳಿ ಇತ್ತು. ಅವರು ಎರಡನೇ ಎಸೆತವನ್ನು ಲಾಂಗ್ ಆನ್ ಮೇಲೆ ಸಿಕ್ಸರ್​ ಬಾರಿಸಿ ಭಾರತಕ್ಕೆ ಜಯ ತಂದಿತ್ತರು.

ಗೆಲುವಿನ ನಂತರ ಬಿಕ್ಕಿ ಬಿಕ್ಕಿ ಅತ್ತ ಆಟಗಾರರು.. ಧೋನಿ ಸಿಕ್ಸರ್​ ಬಾರಿಸಿದ್ದೆ ತಡ ಗ್ಯಾಲರಿಯಲ್ಲಿದ್ದ ಅಷ್ಟೂ ಪ್ರೇಕ್ಷಕರು ಹುಚ್ಚೆದ್ದು ಕುಣಿಯಲ್ಲಾರಂಭಿಸಿದರು. ಜೊತೆಗೆ ಗಂಭೀರತೆಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಟೀಂ ಇಂಡಿಯಾದ ಇತರೆ ಆಟಗಾರರು, ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಣಿಯಲಾರಂಭಿಸಿದರು. ಒಂದೇ ಒಂದು ವಿಶ್ವಕಪ್​ ಗೆದ್ದು ತನ್ನ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಬೇಕೆಂದಿದ್ದ ಕ್ರಿಕೆಟ್​ ದೇವರು, ಅಂದು ಮೈದಾನದಲ್ಲಿ ಮಗುವಂತ್ತಾಗಿದ್ದರು. ಇಡೀ ಪಂದ್ಯಾವಳಿಯಲ್ಲಿ ಸೈನಿಕನಂತೆ ಹೋರಾಡಿದ್ದ ಯುವರಾಜ್​ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ಖುಷಿಗೆ ಎಲ್ಲರ ಕಣ್ಣಲ್ಲಿ ಕಣ್ಣೀರಿನ ಕೋಡಿಯೇ ಹರಿದಿತ್ತು. ಇಡೀ ಮೈದಾನದ ತುಂಬೆಲ್ಲಾ ಸಚಿನ್ ಅವರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡ ಆಟಗಾರರು ದೇವರ ಮೆರವಣಿಗೆಯನ್ನು ಮೈದಾನದ ಸುತ್ತಲೂ ಮಾಡಿಸಿದರು. ಆ ರೋಮಾಂಚನಕಾರಿ ಘಟನೆಯನ್ನು ಭಾರತೀಯರು ಎಂದಾದರೂ ಮರೆಯುವುದುಂಟೆ.

ಇದನ್ನೂ ಓದಿ:ನಿಂದಿಸಿದವರೇ ಬೆನ್ನು ತಟ್ತಿದ್ದಾರಲ್ಲಾ! ಭಾರತವೇ ಈ ಬಾರಿಯ T20 ವಿಶ್ವಕಪ್​ ಚಾಂಪಿಯನ್​ ಎಂದ ಮೈಕಲ್​ ವಾನ್

Published On - 11:50 am, Fri, 2 April 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ