AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

All England Championship: ಕನಸು ನನಸಾಗಲಿಲ್ಲ; ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಗಾಯತ್ರಿ-ತ್ರಿಶಾ

All England Championship: ಕೇವಲ 51 ನಿಮಿಷಗಳಲ್ಲಿ ಚೀನಾದ ಜೋಡಿಯಿಂದ ಭಾರತದ ಜೋಡಿ ಟೂರ್ನಿಯಿಂದ ಹೊರಬಿತ್ತು. ಎರಡು ಗೇಮ್‌ಗಳ ಕಾಲ ನಡೆದ ಈ ಪಂದ್ಯದಲ್ಲಿ ಚೀನಾ ಜೋಡಿ 21-17, 21-16 ಅಂತರದಲ್ಲಿ ಜಯ ಸಾಧಿಸಿತು.

All England Championship: ಕನಸು ನನಸಾಗಲಿಲ್ಲ; ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಗಾಯತ್ರಿ-ತ್ರಿಶಾ
ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜಾಲಿ
TV9 Web
| Edited By: |

Updated on: Mar 20, 2022 | 11:20 AM

Share

ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ (All England Championship), ಲಕ್ಷ್ಯ ಸೇನ್ (Lakshya Sen) ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದರೆ, ಮತ್ತೊಂದೆಡೆ ಸೆಮಿಫೈನಲ್‌ನಲ್ಲಿಯೇ ಮಹಿಳಾ ಡಬಲ್ಸ್‌ನಲ್ಲಿ ಪಿ ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜಾಲಿ (P Gayatri Gopichand and Trisa Jolly) ಪಯಣ ಮುಗಿದಿದೆ. ಭಾರತದ ಯುವ ಜೋಡಿ ಕಠಿಣ ಪೈಪೋಟಿ ನೀಡಿದರೂ ಚೀನಾದ ಜೋಡಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಈ ಚೀನಾದ ಜೋಡಿ ಭಾರತದ ಯುವ ಜೋಡಿಯ ಫೈನಲ್ ತಲುಪುವ ಕನಸಿಗೆ ಅಡ್ಡಿಯಾಯಿತು. ಮತ್ತೊಂದೆಡೆ, ಜಾಂಗ್ ಶುಯೆನ್ ಮತ್ತು ಝೆಂಗ್ ಯು ಜಪಾನಿನ ನವೋಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ಅವರನ್ನು ಫೈನ್‌ನಲ್ಲಿ ಎದುರಿಸಲಿದ್ದಾರೆ.

ಆಲ್ ಇಂಗ್ಲೆಂಡ್‌ನಲ್ಲಿ ಭಾರತದ ಹಲವು ಸ್ಟಾರ್ ಆಟಗಾರರು ಭಾಗವಹಿಸಿದ್ದರು. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಕಂಚಿನ ವಿಜೇತ ಕಿಡಂಬಿ ಶ್ರೀಕಾಂತ್ ಅವರು ಸೆಮಿಫೈನಲ್‌ಗೂ ಮುನ್ನ ಟೂರ್ನಿಯಿಂದ ಹೊರಬಿದ್ದರು. ಲಕ್ಷ್ಯ ಸೇನ್ ಮತ್ತು ತ್ರಿಸಾ-ಗಾಯತ್ರಿ ಜೋಡಿ ಮಾತ್ರ ಸೆಮಿಫೈನಲ್ ತಲುಪಲು ಸಾಧ್ಯವಾಯಿತು.

ಭಾರತದ ಜೋಡಿಯ ಪಯಣ ಸೆಮಿಫೈನಲ್‌ನಲ್ಲಿ ಅಂತ್ಯ ಕೇವಲ 51 ನಿಮಿಷಗಳಲ್ಲಿ ಚೀನಾದ ಜೋಡಿಯಿಂದ ಭಾರತದ ಜೋಡಿ ಟೂರ್ನಿಯಿಂದ ಹೊರಬಿತ್ತು. ಎರಡು ಗೇಮ್‌ಗಳ ಕಾಲ ನಡೆದ ಈ ಪಂದ್ಯದಲ್ಲಿ ಚೀನಾ ಜೋಡಿ 21-17, 21-16 ಅಂತರದಲ್ಲಿ ಜಯ ಸಾಧಿಸಿತು. ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಶುಕ್ರವಾರ ಕೊರಿಯಾದ ಎರಡನೇ ಶ್ರೇಯಾಂಕದ ಲೀ ಸೊಹಿ ಮತ್ತು ಶಿನ್ ಸೆಯುಂಗ್‌ಚಾನ್ ಅವರನ್ನು ಸೋಲಿಸಿದ್ದರು. 46ನೇ ಶ್ರೇಯಾಂಕದ ಜೋಡಿ ತ್ರಿಸಾ ಮತ್ತು ಗಾಯತ್ರಿ 14-21, 22-20, 21-15 ರಲ್ಲಿ ಲೀ ಮತ್ತು ಶಿನ್ ಅವರನ್ನು ಸೋಲಿಸಿ ಸೆಮೀಸ್​ಗೆ ಟಿಕೆಟ್ ಕಾಯ್ದಿರಿಸಿದ್ದರು. ಆಲ್ ಇಂಗ್ಲೆಂಡ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಇದುವರೆಗೆ ಪದಕ ಸಿಕ್ಕಿಲ್ಲ.

ಸೈನಾ ನೆಹ್ವಾಲ್ ಕೊನೆಯ ಬಾರಿಗೆ 2015 ರಲ್ಲಿ ಆಲ್ ಇಂಗ್ಲೆಂಡ್ ಫೈನಲ್ ತಲುಪಿದ್ದರು. ಆದರೆ ಅವರಿಗೆ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಹೀಗಾಗಿ ಅವರು ರನ್ನರ್ ಅಪ್ ಆಗಿದ್ದರು. ಕೊನೆಯ ಬಾರಿಗೆ 2001 ರಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ನಲ್ಲಿ ಭಾರತದ ಪುಲ್ಲೇಲ ಗೋಪಿಚಂದ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದೀಗ ಭಾನುವಾರ, ಲಕ್ಷ್ಯ ಸೇನ್ ಅವರಿಗೆ ಈ ದಾಖಲೆ ಮಾಡುವ ಅವಕಾಶವಿದೆ. ಅವರ ಮಾರ್ಗದರ್ಶಕ ಮತ್ತು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಯಶಸ್ಸನ್ನು ಪುನರಾವರ್ತಿಸುವ ಅವಕಾಶವೂ ಅವರಿಗಿದೆ.

ಗುರಿಯ ಮೇಲೆ ಎಲ್ಲಾ ಭರವಸೆ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಶನಿವಾರ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ಮಲೇಷ್ಯಾದ ಲೀ ಜಿ ಜಿಯಾ ಅವರನ್ನು ಸೋಲಿಸಿ ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್‌ಗೆ ಪ್ರವೇಶಿಸಿದ್ದಾರೆ. 20 ವರ್ಷ ವಯಸ್ಸಿನ ಜಿಯಾ ಅವರನ್ನು 21-13 12-21 21-19 ರ ನಿಕಟ ಸೆಮಿಫೈನಲ್ ಹಣಾಹಣಿಯಲ್ಲಿ ಸೋಲಿಸಿ ಫೈನಲ್‌ನಲ್ಲಿ ಸ್ಥಾನ ಪಡೆದರು. ಇದರೊಂದಿಗೆ ಈ ಟೂರ್ನಿಯಲ್ಲಿ ಫೈನಲ್ ತಲುಪಿದ ದೇಶದ ಮೂರನೇ ಪುರುಷರ ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಲಕ್ಷ್ಯ ಪಯಣ ಅಮೋಘ ಲಯದಲ್ಲಿ ಸಾಗುತ್ತಿದೆ. ಈ ವರ್ಷದ ಜನವರಿಯಲ್ಲಿ ಲಕ್ಷ್ಯ ತಮ್ಮ ಮೊದಲ ಸೂಪರ್ 500 ಪಂದ್ಯಾವಳಿಯಾದ ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ನಂತರ ಕಳೆದ ವಾರ ಜರ್ಮನ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.

ಇದನ್ನೂ ಓದಿ:All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ