AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ತಂಡದ ಜೊತೆ ಕುಟುಂಬಸ್ಥರೂ ಬಯೋಬಬಲ್​ನಲ್ಲಿ ಇರಬಹುದು! ಆದ್ರೆ ಅಲ್ಲಿಂದ ಮುಂದಿನ ಪ್ರವಾಸಕ್ಕೆ ಇಂಗ್ಲೆಂಡ್ ನೀಡುತ್ತದಾ ಅನುಮತಿ?

ICC World Test Championship 2021: ಮುಂಬೈ ಬಯೋ-ಬಬಲ್ ಕೇಂದ್ರದಿಂದ ಮುಂದೆ ಇಂಗ್ಲೆಂಡ್​ನ ಸೌಥಾಂಪ್ಟನ್​ಗೂ ಆಟಗಾರರ ಪರಿವಾರದವರು ಪ್ರವಾಸ ಕೈಗೊಳ್ಳಬಹುದು ಎಂದೂ ಬಿಸಿಸಿಐ ಘೋಷಿಸಿದೆ. ಆದ್ರೆ ಒಂದೇ ಕಂಡೀಷನ್​... ಈ ಕುರಿತು ಯುಕೆ ಸರ್ಕಾರವು ಇಂಗ್ಲೆಂಡ್​ ಅಂಡ್​ ವೇಲ್ಸ್​ ಕ್ರಿಕೆಟ್​ ಮಂಡಳಿಗೆ (England and Wales Cricket Board -ECB) ಅನುಮತಿ ನೀಡಬೇಕಿದೆ. ಇದು ತುಸು ಕಷ್ಟಸಾಧ್ಯ.

ಭಾರತ ತಂಡದ ಜೊತೆ ಕುಟುಂಬಸ್ಥರೂ ಬಯೋಬಬಲ್​ನಲ್ಲಿ ಇರಬಹುದು! ಆದ್ರೆ ಅಲ್ಲಿಂದ ಮುಂದಿನ ಪ್ರವಾಸಕ್ಕೆ ಇಂಗ್ಲೆಂಡ್ ನೀಡುತ್ತದಾ ಅನುಮತಿ?
ಭಾರತ ತಂಡದ ಜೊತೆ ಕುಟುಂಬಸ್ಥರೂ ಬಯೋಬಬಲ್​ನಲ್ಲಿ ಇರಬಹುದು! ಆದ್ರೆ ಅಲ್ಲಿಂದ ಮುಂದಿನ ಪ್ರವಾಸಕ್ಕೆ ಇಂಗ್ಲೆಂಡ್ ನೀಡುತ್ತದಾ ಅನುಮತಿ?
ಸಾಧು ಶ್ರೀನಾಥ್​
| Edited By: |

Updated on:May 18, 2021 | 12:53 PM

Share

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ 2021 ಉದ್ಘಾಟನಾ ಫೈನಲ್​ ಮ್ಯಾಚ್​ ತಟಸ್ಥವಾಗಿ ಇಂಗ್ಲೆಂಡ್​ನ ಸೌಥಾಂಪ್ಟನ್​ ರೋಸ್​ಬೌಲ್​ನಲ್ಲಿ ಮುಂದಿನ ಜೂನ್ ಅಂತ್ಯಕ್ಕೆ ನಡೆಯಲಿದೆ. ಈ ಮಧ್ಯೆ, ಕೊರೊನಾ ಎಂಬ ಪೆಂಡಂಭೂತ ಇಡೀ ಜಗತ್ತನ್ನೇ ಕಾಡುತ್ತಿದೆ. ಅದು ಕ್ರಿಕೆಟ್​ ಜಗತ್ತಿಗೂ ಕಂಟಕವಾಗಿದೆ. ಹಾಗಾಗಿ ಆಟಗಾರರು, ಆಯಾ ಕ್ರಿಕೆಟ್​ ಮಂಡಳಿಗಳು ಸುರಕ್ಷತೆಯ ದೃಷ್ಟಿಯಿಂದ ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದರ ಹೊರತಾಗಿ ಮುಂದಿನ ತಿಂಗಳು ನ್ಯೂಜಿಲ್ಯಂಡ್​ ವಿರುದ್ಧ WTC 2021 ಫೈನಲ್​ ಆಡಲು ಭಾರತ ತಂಡ ಇಂಗ್ಲೆಂಡ್​ನ ಸೌಥಾಂಪ್ಟನ್ ಪಟ್ಟಣದತ್ತ ಪ್ರಯಾಣ ಬೆಳೆಸಲು ಸಜ್ಜಾಗಿದೆ. ಈ ಮಧ್ಯೆ, ಆಟಗಾರರು ಮ್ಮ ಕುಟುಂಬಸ್ಥರನ್ನೂ ತಮ್ಮ ಜೊತೆ, ಕರೆದುಕೊಂಡು ಹೋಗುತ್ತೇವೆ ಎಂದು ಮವಿ ಸಲ್ಲಿಸಿದ್ದರು. ಆದರೆ ಅದರ ಜೊತೆಗೆ ಕೊರೊನಾ ಅಪಾಯವೂ ಇರುವುದರಿಂದ ಬಿಸಿಸಿಐ ಆತಂಕದ ಗಂಟೆ ಬಾರಿಸಿತ್ತು. ಆದರೆ ಸದ್ಯಕ್ಕೆ ಭಾರತೀಯ ಕ್ರಿಕೆಟ್​ ಆಡಳಿತ ಮಂಡಳಿಯು ಆಟಗಾರರ ಕುಟುಂಬಸ್ಥರು ಮುಂಬೈನಲ್ಲಿ ಸ್ಥಾಪಿಸಲಾಗಿರುವ ಬಯೋ-ಬಬಲ್ (Mumbai bio-bubble) ನಲ್ಲಿ ಆಟಗಾರರ ಜೊತೆ ಬೆರೆಯಬಹುದು ಎಂದು ಸಮ್ಮತಿಸಿದೆ.

ಮುಂಬೈ ಬಯೋ-ಬಬಲ್ ಕೇಂದ್ರದಿಂದ ಮುಂದೆ ಇಂಗ್ಲೆಂಡ್​ನ ಸೌಥಾಂಪ್ಟನ್​ಗೂ ಆಟಗಾರರ ಪರಿವಾರದವರು ಪ್ರವಾಸ ಕೈಗೊಳ್ಳಬಹುದು ಎಂದೂ ಬಿಸಿಸಿಐ ಘೋಷಿಸಿದೆ. ಆದ್ರೆ ಒಂದೇ ಕಂಡೀಷನ್​… ಈ ಕುರಿತು ಯುಕೆ ಸರ್ಕಾರವು ಇಂಗ್ಲೆಂಡ್​ ಅಂಡ್​ ವೇಲ್ಸ್​ ಕ್ರಿಕೆಟ್​ ಮಂಡಳಿಗೆ (England and Wales Cricket Board -ECB) ಅನುಮತಿ ನೀಡಬೇಕಿದೆ. ಇದು ತುಸು ಕಷ್ಟಸಾಧ್ಯ.

ಏಕೆಂದ್ರೆ ಪೆಡಂಭೂತ ಕೊರೊನಾದಿಂದಾಗಿ ಯುಕೆ ಸರ್ಕಾರವು ಇಡೀ ಭಾರತ ದೇಶವನ್ನು ಕೆಂಪು ಪಟ್ಟಿಯಲ್ಲಿದೆ. ಭಾರತದಿಂದ ಆಗಮಿಸುವವರಿಗೆ ಪ್ರವಾಸ ನಿರ್ಬಂಧವನ್ನು ಹೇರಿದೆ. ಇಂಗ್ಲೆಂಡ್​ ಸರ್ಕಾರಕ್ಕೆ ಭಯ ಏನು ಅಂದ್ರೆ ಭಾರತದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ B.1.617 ಕೊರೊನಾ ಬಗ್ಗೆ. ಏಕೆಂದ್ರೆ ಇಂಗ್ಲೆಂಡ್​ನಲ್ಲಿ ಈಗಾಗಲೇ 2323 ಮಂದಿಗೆ B.1.617 ರೂಪಾಂತರಿ ಕೊರೊನಾ ಅಂಟಿಕೊಂಡಿದೆ.

ಬಿಸಿಸಿಐ ಸದ್ಯಕ್ಕೆ 20 ಆಟಗಾರರನ್ನೊಳಗೊಂಡ ಭಾರತ ಟೆಸ್ಟ್​ ತಂಡವನ್ನು ಪ್ರಕಟಿಸಿದೆ. ನ್ಯೂಜಿಲ್ಯಾಂಡ್​ ವಿರುದ್ಧ ICC World Test Championship 2021 ಫೈನಲ್​ ಪಂದ್ಯದ ನಂತರ ಆಗಸ್ಟ್​ ತಿಂಗಳಿಂದ ಇಂಗ್ಲೆಂಡ್​ ತಂಡದ ವಿರುದ್ಧ 5 ಟೆಸ್ಟ್​ ಮ್ಯಾಚ್​​ಗಳನ್ನು ಆಡಬೇಕಿದೆ.

ಮುಂಬೈನಲ್ಲಿ ನೆಲೆಸಿರುವ ಆಟಗಾರರು ಇದೇ ಬುಧವಾರದಿಂದ ಬಯೋ-ಬಬಲ್ ವ್ಯವಸ್ಥೆಗೆ ಅಂಕಿತವಾಗಲಿದ್ದಾರೆ. ಉಳಿದ ಭಾಗಗಳಿಂದ ಆಗಮಿಸುವ ಇತರೆ ಆಟಗಾರರು ಮೇ 24 ರಿಂದ Mumbai bio-bubble ಪ್ರವೇಶಿಸಲಿದ್ದಾರೆ.

ಅದಾದ ಬಳಿಕ, ಜೂನ್​ 18ರ ಮ್ಯಾಚ್​ಗೆ ಮುನ್ನ 10 ದಿನಗಳ ಲಘು ಕ್ಯಾರಂಟೈನ್​ಗೆ ಒಳಗಾಗಲಿದ್ದಾರೆ. ಫೈನಲ್​ ನಡೆಯುವ ಸೌಥಾಂಪ್ಟನ್ ​ಸಮೀಪದ ಹೋಟೆಲ್​ನಲ್ಲಿ ಬಬಲ್​ ವ್ಯವಸ್ಥೆಯಲ್ಲಿ ಆಟಗಾರರು ತಂಗಲಿದ್ದಾರೆ. ಅಲ್ಲಿ ಕ್ರಿಕೆಟ್​ ಪ್ರಾಕ್ಟೀಸ್​ ಮಾಡಬಹುದು.

(BCCI says Indian Test team family members can be with players in Mumbai bio bubble but UK government yet to permit the family members to travel uk for WTC)

ಮೊಟ್ಟಮೊದಲ ತಟಸ್ಥ ಟೆಸ್ಟ್​ ಪಂದ್ಯ ಎಲ್ಲಿ ನಡೆದಿತ್ತು? ಯಾರಯಾರ ಮಧ್ಯೆ? ಗೆಲವು ಯಾರದ್ದಾಗಿತ್ತು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ!

Published On - 12:27 pm, Tue, 18 May 21

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್