AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳಿನ ಕೊನೆಯ ಟಿ20ಐ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವ ಸಾಧ್ಯತೆ

ಈಗಾಗಲೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯ ನಾಳಿನ ಪಂದ್ಯಕ್ಕೆ ಟೀಮಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆಯೇ ಎಂಬ ಕುತೂಹಲ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಹುಟ್ಟಿದೆ. ಮೂಲಗಳ ಪ್ರಕಾರ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಅವರನ್ನು ನಾಳೆ ಆಡಿಸುವ ನಿರೀಕ್ಷೆಯಿದೆ.

ನಾಳಿನ ಕೊನೆಯ ಟಿ20ಐ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವ ಸಾಧ್ಯತೆ
ಜಸ್ಪ್ರೀತ್ ಬುಮ್ರಾ
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 07, 2020 | 7:50 PM

Share

ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಗೆದ್ದಾಗಿದೆ, ಈ ಹಿನ್ನೆಲೆಯಲ್ಲಿ ನಾಳೆ ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಭಾರತ ಅಡುವ ಇಲೆವೆನ್​ನಲ್ಲಿ ಪ್ರಯೋಗಗಳನ್ನು ಮಾಡುವ ಸಾಧ್ಯತೆಯಿದೆಯೇ?

ಟೀಮ್ ಇಂಡಿಯ

ಮೂಲಗಳ ಪ್ರಕಾರ, ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಟೀಮಿನ ಅಗ್ರಮಾನ್ಯ ಬೌಲರ್ ಜಸ್ಪ್ರೀತ್ ಬುಮ್ರಾ ಆವರನ್ನು ನಾಳೆ ಆಡಿಸುವ ನಿರೀಕ್ಷೆಯಿದೆ. ಮುಂದಿನ ವರ್ಷ ಟಿ20 ಕ್ರಿಕೆಟ್​ ವಿಶ್ವಕಪ್​ ನಡೆಯಲಿರುವುದರಿಂದ ಅದಕ್ಕೆ ಮೊದಲು ಈ ಆವೃತ್ತಿಯ ಕೆಲ ಪಂದ್ಯಗಳನ್ನು ಅವರು ಆಡಲೆಂಬ ಅಭಿಪ್ರಾಯ ಟೀಮ್ ಮ್ಯಾನೇಜ್ಮೆಂಟ್ ಹೊಂದಿದೆ.

ಓದುಗರಿಗೆ ಗೊತ್ತಿದೆ, ಆಸ್ಟ್ರೇಲಿಯ ಸಿಡ್ನಿಯಲ್ಲಿ ನಡೆದ ಮೊದಲೆರಡು 50-ಓವರ್​ಗಳ ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ ರವಿವಾರದ ಟಿ20 ಐ ಪಂದ್ಯದ ಜೊತೆಗೆ ಸರಣಿಯನ್ನೂ ಸೋತಿರುವುದು ಅದರ ಆತ್ಮಗೌರವಕ್ಕೆ ಭಾರೀ ಹೊಡೆತ ನೀಡಿದೆ. ಈ ದೃಷ್ಟಿಯಲ್ಲಿ ಅದು ನಾಳಿನ ಪಂದ್ಯವನ್ನು ಗೆಲ್ಲಲು ತನ್ನಿಡೀ ಸಾಮರ

ಶಿಖರ್ ಧವನ್

್ಥ್ಯವನ್ನು ವಿನಿಯೋಗಿಸಲಿದೆ. 50-ಓವರ್​ಗಳ ಕೊನೆ ಪಂದ್ಯ ಮತ್ತು ಎರಡು ಟಿ20 ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಭಾರತಕ್ಕೆ ನಾಳಿನ ಪಂದ್ಯವನ್ನು ಗೆದ್ದು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆ ಇಟ್ಟುಕೊಂಡಿದೆ.

ಹಾಗಾದರೆ, ಕೊನೆಯ ಪಂದ್ಯಕ್ಕೆ ಭಾರತದ ಟೀಮ್ ಕಾಂಪೊಸಿಷನ್ ಹೇಗಿರಬಹುದು ಅಂತ ನೋಡುವ.

ಆರಂಭಿಕ ಜೋಡಿಯನ್ನು ಪ್ರಾಯಶಃ ಬದಲಾಯಿಸಲಿಕ್ಕಿಲ್ಲ. ಶಿಖರ್ ಧವನ್ ಮತ್ತು ಕೆ ಎಲ್​ ರಾಹುಲ್ ಉತ್ತಮ ಆರಂಭಗಳನ್ನು ಒದಗಿಸಲು ವಿಫಲರಾದರೂ ವೈಯಕ್ತಿಕವಾಗಿ ಅವರು ತಲಾ ಒಂದೊಂದು ಅರ್ಧ ಶತಕವನ್ನು ಬಾರಿಸಿದ್ದಾರೆ. ಮಾಯಾಂಕ್ ಅಗರ್​ವಾಲ್ ಅವರನ್ನು ಆಡಿಸುವ ಯೋಚನೆ ಟೀಮ್ ಮ್ಯಾನೇಜ್ಮೆಂಟ್​ ಬಂದರೂ ಹಾಗೆ ಮಾಡುವ ಸಾಧ್ಯತೆಗಳಿಲ್ಲ. ಯಾಕೆಂದರೆ, ಸೀಮಿತ ಓವರ್​ಗಳ ಸರಣಿಯ ನಂತರ ಶಿಖರ್ ಸ್ವದೇಶಕ್ಕೆ ಮರಳಲಿದ್ದಾರೆ, ಅವರು ಟೆಸ್ಟ್​ಗಳನ್ನು ಆಡುವ ತಂಡದಲ್ಲಿಲ್ಲ. ಅದರೆ, ಮಾಯಾಂಕ್ ಟೆಸ್ಟ್ ಟೀಮಿನಲ್ಲಿದ್ದಾರೆ.

ರಾಹುಲ್ ವಿಕೆಟ್​ಗಳ ಹಿಂದೆಯೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರನ್ನು ಬದಲಾವಣೆ ಮಾಡಲಾರರು. ನಾಯಕ ವಿರಾಟ್​ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ, ಆದರೆ ಪಂದ್ಯ ಮುಗಿಯುವವರೆಗೆ ಬ್ಯಾಟ್​ಮಾಡಲು ವಿಫಲರಾಗುತ್ತಿದ್ದಾರೆ. ನಾಳೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶವಿದೆ ಕೊಹ್ಲಿಗಿದೆ. ಹಾಗಾಗಿ ಅವರು ರಾಹುಲ್​ಗೆ ನಾಯಕತ್ವವಹಿಸಿ ರೆಸ್ಟ್​ ಮಾಡಲಾರರು.

ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಐಪಿಎಲ್​ನಲ್ಲಿ ತೋರಿದ ಸ್ಪರ್ಶವನ್ನು ಪುನರಾವರ್ತಿಸಲು ವಿಫಲರಾಗಿದ್ದಾರೆ. ಆದರೆ ಅವರು ಶಿಖರ್ ಅವರಂತೆ ಟೆಸ್ಟ್ ಟೀಮಿನಲ್ಲಿ ಅವರೂ ಇಲ್ಲ. ಹಾಗಾಗಿ ಅವರಿಗೆ ವಿಶ್ವಕಪ್​ಗೆ ಮೊದಲು ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಸಿಗಬಹುದು, ಅಂದರೆ ನಾಳಿನ ಪಂದ್ಯದಲ್ಲಿ ಅವರನ್ನು ಆಡಿಸಬಹುದು.

ಸಂಜು ಸ್ಯಾಮ್ಸನ್ ತಮಗೆ ನೀಡಿದ ಅವಕಾಶಗಳನ್ನು ಹಾಳು ಮಾಡಿಕೊಂಡರೆಂದೇ ಹೇಳಬಹುದು. ಎರಡು ಪಂದ್ಯಗಳಲ್ಲೂ ಅವರು ಒಂದೊಂದು ಸಿಕ್ಸರ್ ಬಾರಿಸಿದರೂ ದೊಡ್ಡ ಸ್ಕೋರ್ ದಾಖಲಿಸಲಿಲ್ಲ. ಅವರನ್ನು ಡ್ರಾಪ್ ಮಾಡಿ ಕರ್ನಾಟಕದ ಹುಡುಗ ಮನೀಶ್ ಪಾಂಡೆ ಅವರನ್ನು ಆಡಿಸಬಹುದು.

ಎರಡನೇ ಪಂದ್ಯವನ್ನು ಭಾರತಕ್ಕೆ ಗೆದ್ದುಕೊಟ್ಟ ಹಾರ್ದಿಕ್ ಪಾಂಡ್ಯ ಆವರನ್ನು ರೆಸ್ಟ್ ತೆಗೆದುಕೊಳ್ಳಿ ಎಂದು ಹೇಳುವ ಪ್ರಮೇಯವೇ ಉದ್ಭವಿಸದು. ಆದರೆ ಮೊದಲ ಪಂದ್ಯದಲ್ಲಿ ವಿರೋಚಿತ ಆಟವಾಡಿದ ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರು ನಾಳೆ ಆಡಲಾರರು.

ಎರಡನೆ ಟಿ20 ಪಂದ್ಯದಲ್ಲಿ ದುಬಾರಿಯಾದ ವಾಷಿಂಗ್ಟನ್ ಸುಂದರ್ ನಿಶ್ಚಿತವಾಗಿಯೂ ನಾಳಿನ ಪಂದ್ಯ ಆಡಲಿದ್ದಾರೆ. ಅವರನ್ನೂ ವಿಶ್ವಕಪ್​ಗೆ ತಯಾರು ಮಾಡಬೇಕಿದೆ.

ಬೌಲರ್​ಗಳಲ್ಲಿ ಬುಮ್ರಾ ಅವರನ್ನು ಆಡಿಸಬೇಕಾದರೆ, ಟಿ20 ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಲು ವಿಫಲರಾಗಿರುವ ದೀಪಕ್ ಚಹರ್​ ಅವರನ್ನು ಕೈಬಿಡಬೇಕಾಗುತ್ತದೆ. ನಟರಾಜನ್ ಅವರನ್ನಾಗಲೀ ಅಥವಾ ಶಾರ್ದಲ್ ಠಾಕುರ್ ಅವರನ್ನಾಗಲಿ ಹೊರಗೆ ಕೂರಿಸುವುದು ಒಳ್ಳೆ ಕ್ರಮವೆನಿಸಲಾರದು. ಸುಂದರ್ ಅವರ ಜೊತೆಗಾರ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಲ್ ಆಡಲಿದ್ದಾರೆ.

ಪ್ರಾಯಶಃ ಈ ಕಾಂಪೊಸಿಷನ್​ ಜೊತೆಗೆ ನಾಳೆ ಟೀಮ್ ಇಂಡಿಯ ಮೈದಾನಕ್ಕಿಳಿಯಬಹುದು.