ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್: ಇದು ಮಣಿಕಟ್ಟಿನ ಮ್ಯಾಜಿಷೀಯನ್ ಜಿ. ವಿಶ್ವನಾಥ್ ಕಥೆ

Gundappa Viswanath: ಟೀಮ್ ಇಂಡಿಯಾ ಪರ 91 ಟೆಸ್ಟ್ ಪಂದ್ಯಗಳನ್ನಾಡಿರುವ ಗುಂಡಪ್ಪ ವಿಶ್ವನಾಥ್ ಅವರು 1 ದ್ವಿಶತಕ, 14 ಶತಕ ಹಾಗೂ 35 ಅರ್ಧಶತಕಗಳೊಂದಿಗೆ 6080 ರನ್​ ಕಲೆಹಾಕಿದ್ದಾರೆ.

ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್: ಇದು ಮಣಿಕಟ್ಟಿನ ಮ್ಯಾಜಿಷೀಯನ್ ಜಿ. ವಿಶ್ವನಾಥ್ ಕಥೆ
Gundappa Viswanath
Follow us
| Updated By: ಝಾಹಿರ್ ಯೂಸುಫ್

Updated on:Feb 12, 2023 | 6:39 PM

ಅದು ನವೆಂಬರ್ 28, 1969…ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿತ್ತು. ಮನ್ಸೂರ್ ಅಲಿ ಖಾನ್ ಪಟೌಡಿ ಮುನ್ನಡೆಸಿದ್ದ ಟೀಮ್ ಇಂಡಿಯಾ ಪರ ಅಂದು 20ರ ಹರೆಯದ ಯುವ ತರುಣನೊಬ್ಬ ಪದಾರ್ಪಣೆ ಮಾಡಿದ್ದ. ಉತ್ತಮ ಆರಂಭ ಪಡೆದಿದ್ದ ಭಾರತ ತಂಡವು 171 ರನ್​ ಕಲೆಹಾಕಿತ್ತು. ಈ ಹಂತದಲ್ಲಿ 3ನೇ ವಿಕೆಟ್ ಕಳೆದುಕೊಂಡಾಗ ನಾಯಕ ಮನ್ಸೂರ್ ಅಲಿ ಖಾನ್ ಚೊಚ್ಚಲ ಬಾರಿ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಆಟಗಾರನನ್ನು ಕಣಕ್ಕಿಳಿಸಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆ ಆಟಗಾರ ಶೂನ್ಯಕ್ಕೆ ಔಟಾಗಿದ್ದರು. ಇತ್ತ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ಭಾರದ ಹೆಜ್ಜೆಯಾಗಿ ಪೆವಿಲಿಯನ್​ಗೆ ಮರಳಿದ್ದ ಯುವ ಆಟಗಾರನ ಬೆನ್ನು ತಟ್ಟಿ ಅಂದು ಟೀಮ್ ಇಂಡಿಯಾ ನಾಯಕ ಹೇಳಿದ್ದು ಒಂದೇ ಮಾತು, ನೀವು ಶತಕ ಹೊಡಿತೀರಿ ಬಿಡಿ ಎಂದು.

ಆತ ನಾಯಕನ ಈ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. 2ನೇ ಇನಿಂಗ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು. ಅಲ್ಲದೆ 25 ಬೌಂಡರಿಗಳೊಂದಿಗೆ 137 ರನ್​ಗಳ ಅಮೋಘ ಇನಿಂಗ್ಸ್ ಆಡಿ ಎದೆಯುಬ್ಬಿಸುತ್ತಾ ಪೆವಿಲಿಯನ್ ಕಡೆ ನಗುಮುಖದೊಂದಿಗೆ ಹೆಜ್ಜೆ ಹಾಕಿದ್ದರು. ಹೀಗೆ ಚೊಚ್ಚಲ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿ ಅದೇ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರನ ಹೆಸರು ಗುಂಡಪ್ಪ ರಂಗನಾಥ್ ವಿಶ್ವನಾಥ್…ಎಸ್, ಕನ್ನಡಿಗರ ಪಾಲಿನ ಹೆಮ್ಮೆಯ ಜಿ ವಿಶ್ವನಾಥ್.

ಜಿ ವಿಶ್ವನಾಥ್ ಎಂದಾಗ ಈಗಲೂ ಕ್ರಿಕೆಟ್ ಪ್ರಿಯರಿಗೆ ನೆನಪಿಗೆ ಬರುವುದು ಎರಡು ಶಾಟ್​ಗಳು…ಲೇಟ್ ಕಟ್ ಅ್ಯಂಡ್ ವೃಸ್ಟಿ ಶಾಟ್. ಕಲಾತ್ಮಕ ಹೊಡೆತಗಳ ಮೂಲಕ ಬೌಲರ್​ಗಳ ನಿದ್ದೆಗೆಡಿಸಿದ್ದ ವಿಶ್ವನಾಥ್ ಅವರನ್ನು ಇಂದಿಗೂ ಮಣಿಕಟ್ಟಿನ ಮ್ಯಾಜೀಷಿಯನ್ ಎಂದು ಬಣ್ಣಿಸಲಾಗುತ್ತದೆ. ಏಕೆಂದರೆ ಅವರಂತೆ ಮಣಿಕಟ್ಟನ್ನು ತಿರುಗಿಸಿ ವೇಗದ ಬೌಲರ್​ಗಳಿಗೆ ಬ್ಯಾಟ್ ಮೂಲಕ ಉತ್ತರ ನೀಡಿದ ಮತ್ತೊಬ್ಬ ಆಟಗಾರನಿಲ್ಲ ಎನ್ನಬಹುದು. ಅಷ್ಟೇ ಅಲ್ಲದೆ 70 ಮತ್ತು 80 ದಶಕದಲ್ಲಿ ಬ್ಯಾಟ್ಸ್​ಮನ್​ಗಳಿಗೆ ನಡುಕ ಹುಟ್ಟಿಸಿದ್ದ ವೆಸ್ಟ್ ಇಂಡೀಸ್​ನ ಘಾತಕ ವೇಗಿಗಳಿಗೂ ಲೇಟ್ ಕಟ್ ಶಾಟ್ ಮೂಲಕ ಉತ್ತರ ನೀಡುತ್ತಿದ್ದರು. ಅಂತಹದೊಂದು ತಾಳ್ಮೆ ಹಾಗೂ ಚಾಣಕ್ಯತೆ ಕನ್ನಡಿಗನಲ್ಲಿತ್ತು.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಇನ್ನು ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದಾಗ ಮನ್ಸೂರ್ ಅಲಿ ಖಾನ್ ಪಟೌಡಿ ನೀವು ಶತಕ ಬಾರಿಸುತ್ತೀರಿ ಎಂದು ಹೇಳಲೂ ಕೂಡ ಕಾರಣ ಅದೇ ಮಣಿಕಟ್ಟಿನ ಮ್ಯಾಜಿಕ್. ಏಕೆಂದರೆ 1967-68ರ ಸೀಸನ್​ನಲ್ಲಿ ಆಂಧ್ರಪ್ರದೇಶದ ವಿರುದ್ಧ ನಡೆದ ರಣಜಿ ಟ್ರೋಫಿಯಲ್ಲಿ ಮೈಸೂರು ತಂಡದ ಪರ ಕಣಕ್ಕಿಳಿದಿದ್ದ ಜಿ ವಿಶ್ವನಾಥ್ ಭರ್ಜರಿ ದ್ವಿಶತಕ ಸಿಡಿಸಿದ್ದರು. ಈ ಡಬಲ್ ಸೆಂಚುರಿಯನ್ನು ಹತ್ತಿರದಿಂದ ನೋಡಿದ ಆಟಗಾರರಲ್ಲಿ ಮನ್ಸೂರ್ ಅಲಿ ಖಾನ್ ಕೂಡ ಒಬ್ಬರು. ಹೀಗಾಗಿಯೇ ಪಟೌಡಿ ಅವರು ಗುಂಡಪ್ಪ ವಿಶ್ವನಾಥ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದರು. ಆ ಬಳಿಕ ನಡೆದಿದೆಲ್ಲವೂ ಇತಿಹಾಸ.

ಏಕೆಂದರೆ ಇಂದಿನ ಕಲಾತ್ಮಕತೆಯ ಬ್ಯಾಟಿಂಗ್, ರಕ್ಷಣಾತ್ಮಕ ಆಟ, ತಾಳ್ಮೆಯ ಪ್ರತಿರೂಪಗಳನ್ನು ಅಂದೇ ಗುಂಡಪ್ಪ ವಿಶ್ವನಾಥ್ ಕ್ರಿಕೆಟ್ ಅಂಗಳದಲ್ಲಿ ತೋರಿಸಿದ್ದರು. ಯಾವಾಗ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದರೋ ಅವರ ಅತ್ಯಾಧ್ಭುತ ಬ್ಯಾಟಿಂಗ್​ ಶೈಲಿಯು ವಿಶ್ವಮಟ್ಟದಲ್ಲಿ ಚರ್ಚಾ ವಿಷಯವಾಯಿತು. ಅದರಲ್ಲೂ ವಿದೇಶಿ ಸರಣಿಗಳ ವೇಳೆ ಗುಂಡಪ್ಪ ವಿಶ್ವನಾಥ್ ಅವರ ಕಲಾತ್ಮಕ ಹೊಡೆತಗಳನ್ನು ವೀಕ್ಷಿಸಲೆಂದೇ ಕ್ರಿಕೆಟ್​ ಪ್ರೇಮಿಗಳು ಮೈದಾನಕ್ಕೆ ಆಗಮಿಸುತ್ತಿದ್ದರು. ಇದಕ್ಕೆ ತಾಜಾ ಉದಾಹರಣೆಯೇ ಈಗಿನ ಯಾರ್ಕ್‌ಷೈರ್ ಮತ್ತು ಮಿಡ್ಲ್‌ಸೆಕ್ಸ್ ಕ್ರಿಕೆಟ್ ಕ್ಲಬ್​ನ ಸದಸ್ಯರಾಗಿರುವ ಡಾನ್ ರೆಡ್‌ಫೋರ್ಡ್ ಮಾಡಿರುವ ಟ್ವೀಟ್​ಗಳು.

ಭದ್ರಾವತಿಯ ಮಣ್ಣಿನ ಮಗ ಗುಂಡಪ್ಪ ವಿಶ್ವನಾಥ್. ಅತ್ಯುತ್ತಮ ಕಲಾತ್ಮಕತೆ, ಸೊಬಗಿನ ಬ್ಯಾಟಿಂಗ್ ಶೈಲಿಯ ಹರಿಕಾರ. ನಾನು ವಿಶ್ವನಾಥ್ ಅವರಿಗಿಂತ ಅತ್ಯಾಕರ್ಷಕ ಮತ್ತು ಅತ್ಯುತ್ತಮ ಬ್ಯಾಟರ್ ಅನ್ನು ನೋಡಿಲ್ಲ. ನಿಜವಾಗಿಯೂ ಅವರ ಬ್ಯಾಟ್​ ನರ್ತಿಸುತ್ತಿತ್ತು. ನನ್ನ ಜೀವನದಲ್ಲಿ ಒಬ್ಬ ಆಟಗಾರನನ್ನು ನಾನು ಆರಿಸಬೇಕಾದರೆ, ನಾನು GRV (ಗುಂಡಪ್ಪ ರಂಗನಾಥ್ ವಿಶ್ವನಾಥ್) ಅನ್ನು ಆಯ್ಕೆ ಮಾಡುತ್ತೇನೆ ಎಂಬಾರ್ಥದಲ್ಲಿ ಡಾನ್ ರೆಡ್‌ಫೋರ್ಡ್ ಟ್ವೀಟ್ ಮಾಡಿದ್ದಾರೆ.

ವಿಶ್ವನಾಥ್ ಅವರ ಹುಟ್ಟುಹಬ್ಬದಂದು ಬ್ರಿಟನ್ ಮೂಲದ ರೆಡ್​ಫೋರ್ಡ್ ಮಾಡಿರುವ ಈ ಟ್ವೀಟ್​ಗಳೇ ಸಾಕು 70/80ರ ದಶಕದಲ್ಲಿ ಅವರು ಅದ್ಯಾವ ರೀತಿಯಲ್ಲಿ ಮೋಡಿ ಮಾಡಿದ್ದರು ಎಂದು ತಿಳಿಯಲು. ಇಂತಹದೊಂದು ಮೋಡಿಯ ಮೂಲಕವೇ ಅವರು 100ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು.

ಟೀಮ್ ಇಂಡಿಯಾ ಪರ 91 ಟೆಸ್ಟ್ ಪಂದ್ಯಗಳನ್ನಾಡಿರುವ ಗುಂಡಪ್ಪ ವಿಶ್ವನಾಥ್ ಅವರು 1 ದ್ವಿಶತಕ, 14 ಶತಕ ಹಾಗೂ 35 ಅರ್ಧಶತಕಗಳೊಂದಿಗೆ 6080 ರನ್​ ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ 91 ಪಂದ್ಯಗಳಲ್ಲಿ ಮಣಿಕಟ್ಟಿನ ಮ್ಯಾಜಿಕ್ ಮೂಲಕ ಮೂಡಿಬಂದ ಫೋರ್​ಗಳ ಸಂಖ್ಯೆ 616 ಎಂದರೆ ನಂಬಲೇಬೇಕು. ಹಾಗೆಯೇ 25 ಏಕದಿನ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಪ್ರತಿನಿಧಿಸಿದ್ದ ಜಿ ವಿಶ್ವನಾಥ್ ಅವರು 2 ಅರ್ಧಶತಕಗಳೊಂದಿಗೆ 830 ರನ್​ ಕಲೆಹಾಕಿದ್ದಾರೆ.

ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಗುಂಡಪ್ಪ ವಿಶ್ವನಾಥ್ ಅವರು ವಿವಾಹವಾಗಿರುವುದು ದಿ ಲೆಜೆಂಡ್ ಸುನಿಲ್ ಗವಾಸ್ಕರ್ ಅವರ ಸಹೋದರಿಯನ್ನು. ಹಲವು ಪಂದ್ಯಗಳನ್ನು ಜೊತೆಯಾಗಿ ಆಡಿದ್ದ ಈ ಗಾವಸ್ಕರ್ ಹಾಗೂ ವಿಶ್ವನಾಥ್ ಅವರ ನಡುವೆ ತುಂಬಾ ಆತ್ಮೀಯತೆ ಬೆಳೆದಿತ್ತು. 1978 ರಲ್ಲಿ ಗವಾಸ್ಕರ್ ಅವರ ಸಹೋದರಿ ಕವಿತಾ ಅವರನ್ನು ವಿವಾಹವಾಗುವ ಮೂಲಕ ಇಬ್ಬರು ದಿಗ್ಗಜರು ಸಂಬಂಧಿಕರಾದರು.

ದುರಂತ ಎಂದರೆ 80 ರ ದಶಕದಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರೂ ಗುಂಡಪ್ಪ ವಿಶ್ವನಾಥ್ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. 40 ವರ್ಷಗಳೇ ಕಳೆದರೂ ಈ ನೋವನ್ನು ಗುಂಡಪ್ಪ ಮರೆತಿಲ್ಲ ಎಂಬುದೇ ಸತ್ಯ. ಏಕೆಂದರೆ 1982-83 ರಲ್ಲಿ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಗುಂಡಪ್ಪ ವಿಶ್ವನಾಥ್ ಅವರು ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಯಿತು.

ದುರಾದೃಷ್ಟ ಅವರಿಗೆ ಆ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ 1983 ರ ವಿಶ್ವಕಪ್ ಆಡಬೇಕೆಂಬ ಕನಸು ಹೊಂದಿದ್ದ ಗುಂಡಪ್ಪ ವಿಶ್ವನಾಥ್ ಅವರ ಕ್ರಿಕೆಟ್​ ಕೆರಿಯರ್​ ಅದೇ ವರ್ಷ ಅಂತ್ಯಗೊಂಡಿದ್ದು ಮಾತ್ರ ವಿಪರ್ಯಾಸ ಎನ್ನಬಹುದು. ಅಂದಹಾಗೆ ಇಂದು ಗುಂಡಪ್ಪ ವಿಶ್ವನಾಥ್ ಅವರ 74ನೇ ಹುಟ್ಟುಹಬ್ಬ…ಎನಿವೇ ಹ್ಯಾಪಿ ಬರ್ತ್​ ಡೇ ಲೆಜೆಂಡ್.

Published On - 6:33 pm, Sun, 12 February 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ