AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್‌ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು

AB de Villiers Slams Asia Cup Trophy Row: 2025 ರ ಏಷ್ಯಾಕಪ್ ಗೆದ್ದ ಭಾರತಕ್ಕೆ ಟ್ರೋಫಿ ಸಿಗದ ವಿವಾದ ಕುರಿತು ಎಬಿ ಡಿವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು ಎಂದು ಒತ್ತಿ ಹೇಳಿದ್ದಾರೆ. ಕ್ರೀಡೆಯನ್ನು ರಾಜಕೀಯದಿಂದ ಹೊರಗಿಟ್ಟು ಆಚರಿಸಬೇಕು ಎಂದೂ ಡಿವಿಲಿಯರ್ಸ್ ತಿಳಿಸಿದ್ದಾರೆ.

‘ನಾನು ದುಃಖಿತನಾಗಿದ್ದೇನೆ’; ಏಷ್ಯಾಕಪ್‌ ಟ್ರೋಫಿ ವಿವಾದದ ಬಗ್ಗೆ ಡಿವಿಲಿಯರ್ಸ್ ಮಾತು
Ab De Villiers
ಪೃಥ್ವಿಶಂಕರ
|

Updated on:Oct 02, 2025 | 7:49 PM

Share

2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್​ಗಳಿಂದ ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದ ಭಾರತ ತಂಡಕ್ಕೆ ಇದುವರೆಗೂ ಟೂರ್ನಿಯ ಟ್ರೋಫಿ ಹಾಗೂ ಪದಕ ಸಿಕ್ಕಿಲ್ಲ. ಪ್ರಶಸ್ತಿ ಪ್ರಸ್ತುತಿ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮತ್ತು ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿತು. ಇತ್ತ ಭಾರತದ ಈ ನಡೆಯಿಂದ ಕೆರಳಿಂದ ಮೊಹ್ಸಿನ್ ನಖ್ವಿ, ಟೀಂ ಇಂಡಿಯಾಕ್ಕೆ ಸೇರಬೇಕಿದ್ದ ಟ್ರೋಫಿ ಮತ್ತು ಪದಕಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ನಖ್ವಿ ಈ ನಡೆಯನ್ನು ಎಲ್ಲೆಡೆ ಖಂಡಿಸಲಾಗುತ್ತಿದೆ. ಇದೀಗ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (AB de Villiers) ಇಡೀ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದಾರೆ.

ದುಃಖಿತನಾಗಿದ್ದೇನೆ ಎಂದ ಡಿವಿಲಿಯರ್ಸ್

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, ‘ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕವಾಗಿ ಇಡಬೇಕು. ಆದರೆ ರಾಜಕೀಯವು ಕ್ರೀಡೆಗಳನ್ನು ಮರೆಮಾಡುತ್ತಿರುವುದನ್ನು ನೋಡಿ ದುಃಖಿತನಾಗಿದ್ದೇನೆ. ಏಷ್ಯಾಕಪ್ ಟ್ರೋಫಿಯನ್ನು ಪ್ರದಾನ ಮಾಡುವ ವ್ಯಕ್ತಿಯ ಬಗ್ಗೆ ಟೀಂ ಇಂಡಿಯಾ ಅಸಮಾಧಾನ ಹೊಂದಿತ್ತು. ಕ್ರೀಡೆಯಲ್ಲಿ ಇದು ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ. ರಾಜಕೀಯವನ್ನು ಬದಿಗಿಡಬೇಕು. ಕ್ರಿಕೆಟ್ ಒಂದು ಆಚರಣೆ ಅದನ್ನು ಹಾಗೆಯೇ ಪರಿಗಣಿಸಬೇಕು. ಇದು ತುಂಬಾ ವಿಚಿತ್ರವಾದ ಪರಿಸ್ಥಿತಿಯಾಗಿತ್ತು. ಆಟಗಾರರನ್ನು ಅಂತಹ ಸಂದಿಗ್ಧತೆಯಲ್ಲಿ ನೋಡುವುದು ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

ಸಮತೋಲಿತ ತಂಡವಾಗಿ ಕಾಣುತ್ತದೆ

ಇನ್ನು ಭಾರತ ಟಿ20 ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿವಿಲಿಯರ್ಸ್,‘ ಭಾರತವು ಪ್ರಸ್ತುತ ಬಹಳ ಸಮತೋಲಿತ ತಂಡವಾಗಿ ಕಾಣುತ್ತದೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ತಂಡವು ಬಹಳಷ್ಟು ಪ್ರತಿಭೆಯನ್ನು ಹೊಂದಿದೆ. ದೊಡ್ಡ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ನೋಡಲು ಸಂತೋಷವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Thu, 2 October 25

ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
ಸಾಲುಮರದ ತಿಮ್ಮಕ್ಕ ಕಷ್ಟಕಾಲದಲ್ಲಿದ್ದಾಗ ಜೊತೆಗೆ ನಿಂತಿದ್ದ ಟಿವಿ9
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ದುಡ್ಡು ಕೊಟ್ಟು ‘ಜೈ’ ಸಿನಿಮಾ ಮೊದಲ ಟಿಕೆಟ್ ಖರೀದಿಸಿದ ಸುದೀಪ್
ದುಡ್ಡು ಕೊಟ್ಟು ‘ಜೈ’ ಸಿನಿಮಾ ಮೊದಲ ಟಿಕೆಟ್ ಖರೀದಿಸಿದ ಸುದೀಪ್