AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs RCB, IPL 2025: ಅಕ್ಷರ್ ಪಟೇಲ್ ಕಳಪೆ ನಾಯಕತ್ವ ಮತ್ತು 13 ನೇ ಓವರ್..: ಈ 4 ತಪ್ಪುಗಳಿಂದ ಡೆಲ್ಲಿಗೆ ಸೋಲು

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೃನಾಲ್ ಪಾಂಡ್ಯಗೆ ಕ್ರೀಸ್ನಲ್ಲಿ ಸೆಟ್ ಆಗಲು ಸಾಕಷ್ಟು ಅವಕಾಶ ನೀಡಿತು. 16 ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಎರಡನೇ ಸ್ಪೆಲ್‌ಗೆ ಕರೆತರಲಾಯಿತು. ಅಷ್ಟೊತ್ತಿಗೆ ವಿರಾಟ್ ಮತ್ತು ಕೃನಾಲ್ ಸೆಟ್ ಆಗಿದ್ದರು. ಹೀಗಿದ್ದರೂ ಸ್ಟಾರ್ಕ್ ಒಂದು ಅವಕಾಶ ಸೃಷ್ಟಿಸಿ ಕೊಟ್ಟರು. ಆದರೆ ಅಭಿಷೇಕ್ ಪೊರೆಲ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಇದು ಡಿಸಿ ಸೋಲಿಗೆ ಪ್ರಮುಖ ಕಾರಣವಾಯಿತು.

DC vs RCB, IPL 2025: ಅಕ್ಷರ್ ಪಟೇಲ್ ಕಳಪೆ ನಾಯಕತ್ವ ಮತ್ತು 13 ನೇ ಓವರ್..: ಈ 4 ತಪ್ಪುಗಳಿಂದ ಡೆಲ್ಲಿಗೆ ಸೋಲು
Dc Vs Rcb
Follow us
Vinay Bhat
|

Updated on: Apr 28, 2025 | 9:34 AM

ಬೆಂಗಳೂರು (ಏ. 28): ಐಪಿಎಲ್ 2025 ರ ತನ್ನ 9 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Royal Challengers Bengaluru) ಸೋಲು ಕಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ತವರು ನೆಲವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 162 ರನ್​​ಗಳ ಸಾಧಾರಣ ಟಾರ್ಗೆಟ್ ನೀಡಿತಷ್ಟೆ. ಇದಕ್ಕೆ ಉತ್ತರವಾಗಿ ಆರ್‌ಸಿಬಿ 19ನೇ ಓವರ್‌ನಲ್ಲಿ ಗುರಿ ತಲುಪಿತು. ಒಂದು ಹಂತದಲ್ಲಿ ದೆಹಲಿ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತ್ತು ಆದರೆ ಆ ನಂತರ ಆರ್‌ಸಿಬಿಗೆ ಮತ್ತೆ ಚೇತರಿಸಿಕೊಂಡು ಕಮ್​ಬ್ಯಾಕ್ ಮಾಡಿತು. ಲಯವನ್ನು ಕಾಯ್ದುಕೊಳ್ಳುವಲ್ಲಿ ಅಕ್ಷರ್ ಪಡೆ ವಿಫಲವಾಯಿತು. ಆರ್‌ಸಿಬಿ ಗೆಲುವು ಸಾಧಿಸಲು ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ಕೆಲವು ತಪ್ಪುಗಳನ್ನು ನೋಡುವುದಾದರೆ…

ಮಧ್ಯದ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್:

ಡೆಲ್ಲಿ ಕ್ಯಾಪಿಟಲ್ಸ್ ಮಧ್ಯಮ ಓವರ್‌ಗಳಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿತು. ಪವರ್ ಪ್ಲೇ ನಂತರ ತಂಡದ ಸ್ಕೋರ್ 52 ರನ್ ಆಗಿತ್ತು. 15 ಓವರ್‌ಗಳ ನಂತರ ಕೇವಲ 108 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು. ಅಂದರೆ ಬ್ಯಾಟ್ಸ್‌ಮನ್‌ಗಳು 9 ಓವರ್‌ಗಳಲ್ಲಿ ಕೇವಲ 56 ರನ್‌ಗಳನ್ನು ಗಳಿಸಿದರು. ಈ ಕಾರಣದಿಂದಾಗಿ ತಂಡವು ಕೇವಲ 162 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು.

ಸ್ಟಾರ್ಕ್ ಅವರ ಎರಡನೇ ಸ್ಪೆಲ್ ವಿಳಂಬ:

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೃನಾಲ್ ಪಾಂಡ್ಯಗೆ ಕ್ರೀಸ್​ನಲ್ಲಿ ಸೆಟ್ ಆಗಲು ಸಾಕಷ್ಟು ಅವಕಾಶ ನೀಡಿತು. 16 ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಎರಡನೇ ಸ್ಪೆಲ್‌ಗೆ ಕರೆತರಲಾಯಿತು. ಅಷ್ಟೊತ್ತಿಗೆ ವಿರಾಟ್ ಮತ್ತು ಕೃನಾಲ್ ಸೆಟ್ ಆಗಿದ್ದರು. ಹೀಗಿದ್ದರೂ ಸ್ಟಾರ್ಕ್ ಒಂದು ಅವಕಾಶ ಸೃಷ್ಟಿಸಿ ಕೊಟ್ಟರು. ಆದರೆ ಅಭಿಷೇಕ್ ಪೊರೆಲ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಸ್ಟಾರ್ಕ್ 13 ನೇ ಓವರ್‌ನಲ್ಲಿ ಬಂದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಏಕೆಂದರೆ ಆರ್‌ಸಿಬಿ ಈ ಓವರ್‌ನಿಂದ ದಾಳಿ ಆರಂಭಿಸಿತು.

ಇದನ್ನೂ ಓದಿ
Image
ಕೊಹ್ಲಿ-ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?
Image
ಕೃನಾಲ್ ಆಲ್​ರೌಂಡರ್ ಆಟ; ಆರ್​ಸಿಬಿಗೆ 7ನೇ ಜಯ
Image
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
Image
ಒಂದೇ ಓವರ್​ನಲ್ಲಿ 3ಕ್ಕಿಂತ ಹೆಚ್ಚು ವಿಕೆಟ್; ಬುಮ್ರಾ ದಾಖಲೆ

Virat Kohli: ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?

ವಿಪ್ರರಾಜ್‌ಗೆ ಒಂದು ಓವರ್:

ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗಿತ್ತು. ಅಕ್ಷರ್ ತಮ್ಮ 4 ಓವರ್‌ಗಳಲ್ಲಿ 19 ರನ್‌ಗಳನ್ನು ನೀಡಿದರು. ಕುಲ್ದೀಙ್ ಕೂಡ ಕೇವಲ 28 ರನ್ ಮಾತ್ರ ನೀಡಿದರು. ಆರ್‌ಸಿಬಿ ಸ್ಪಿನ್ನರ್ ಕೂಡ ಉತ್ತಮವಾಗಿ ಆಡಿದರು. ಇದಾದ ನಂತರವೂ ಅಕ್ಷರ್ ಪಟೇಲ್ ವಿಪ್ರರಾಜ್ ನಿಗಮ್ ಗೆ ಒಂದೇ ಒಂದು ಓವರ್ ನೀಡಿದರು. ಬೆಂಗಳೂರಿನಲ್ಲಿ ನಡೆದ ಈ ಎರಡೂ ತಂಡಗಳ ಪಂದ್ಯದಲ್ಲಿ ವಿಪ್ರರಾಜ್ ವಿರಾಟ್ ಮತ್ತು ಕೃನಾಲ್ ಇಬ್ಬರನ್ನೂ ಔಟ್ ಮಾಡಿದ್ದರು.

19ನೇ ಓವರ್‌ನಲ್ಲಿ ಮುಖೇಶ್‌ಗೆ ಬೌಲಿಂಗ್:

ಆರ್‌ಸಿಬಿ ಗೆಲುವಿಗೆ ಎರಡು ಓವರ್‌ಗಳಲ್ಲಿ 17 ರನ್‌ಗಳು ಬೇಕಾಗಿದ್ದವು. ಮಿಚೆಲ್ ಸ್ಟಾರ್ಕ್ ಒಂದು ಓವರ್ ಬೌಲಿಂಗ್ ಮಾಡಿದ್ದರು. ಇದಾದ ನಂತರವೂ ಅಕ್ಷರ್ ಪಟೇಲ್ ಮುಖೇಶ್ ಕುಮಾರ್​ಗೆ ಬೌಲಿಂಗ್ ನೀಡಿದರು. ಮೊದಲ 3 ಓವರ್‌ಗಳಲ್ಲಿ ಮುಖೇಶ್ 32 ರನ್‌ಗಳನ್ನು ನೀಡಿದರು. ಟಿಮ್ ಡೇವಿಡ್ ಕೇವಲ 3 ಎಸೆತಗಳಲ್ಲಿ 19 ರನ್ (ನೋ ಬಾಲ್ ಸೇರಿದಂತೆ) ಗಳಿಸುವ ಮೂಲಕ ಪಂದ್ಯವನ್ನು ಮುಗಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ