CSK vs RCB Highlights, IPL 2025: 17 ವರ್ಷಗಳ ನಂತರ ಚೆನ್ನೈನಲ್ಲಿ ಗೆದ್ದ ಆರ್ಸಿಬಿ
Chennai Super Kings vs Royal Challengers Bengaluru Highlights in Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ಸತತ ಎರಡನೇ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬೆಂಗಳೂರು ತಂಡವು ಇನ್ನೊಂದು ತಂಡದ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ನಡೆದ ಪಂದ್ಯವನ್ನು ಆರ್ಸಿಬಿ 50 ರನ್ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು, ಅದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರ ತವರು ಮೈದಾನವಾದ ಈಡನ್ ಗಾರ್ಡನ್ಸ್ನಲ್ಲಿ ಸೋಲಿಸಿತ್ತು.

ಹೊಸ ನಾಯಕ ಮತ್ತು ಹೊಸ ಸೀಸನ್ ಜೊತೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕಾಯುವಿಕೆ ಕೊನೆಗೂ ಮುಗಿದಿದೆ. 17 ವರ್ಷಗಳಿಂದ ಕಾಯುತ್ತಿದ್ದ ಬೆಂಗಳೂರು ತಂಡವು ಐದು ಬಾರಿಯ ಸಿಎಸ್ಕೆ ತಂಡವನ್ನು ಅವರ ತವರು ನೆಲವಾದ ಚೆಪಾಕ್ ಕ್ರೀಡಾಂಗಣದಲ್ಲಿ ಬಗ್ಗುಬಡಿದಿದೆ. ಐಪಿಎಲ್ 2025 ರ ತನ್ನ ಎರಡನೇ ಪಂದ್ಯದಲ್ಲಿ, ಹೊಸ ನಾಯಕ ರಜತ್ ಪಟಿದಾರ್ ನಾಯಕತ್ವದಲ್ಲಿ, ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರು ನೆಲದಲ್ಲಿ 50 ರನ್ಗಳ ಭಾರಿ ಅಂತರದಿಂದ ಸೋಲಿಸಿತು. ಈ ರೀತಿಯಾಗಿ, 18 ಆವೃತ್ತಿಗಳ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ, ಬೆಂಗಳೂರು ತಂಡವು ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಜಯಗಳಿಸಿದ ಸಾಧನೆ ಮಾಡಿದೆ. ಅಲ್ಲದೆ, ಬೆಂಗಳೂರು ಈ ಸೀಸನ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಚೆನ್ನೈ ಎರಡು ಪಂದ್ಯಗಳಲ್ಲಿ ಮೊದಲ ಸೋಲನ್ನು ಎದುರಿಸಿತು.
LIVE NEWS & UPDATES
-
50 ರನ್ಗಳಿಂದ ಗೆದ್ದ ಆರ್ಸಿಬಿ
ಆರ್ಸಿಬಿ ತಂಡವು ಸಿಎಸ್ಕೆ ತಂಡವನ್ನು 50 ರನ್ಗಳಿಂದ ಸೋಲಿಸಿತು. ಈ ಮೂಲಕ ಬೆಂಗಳೂರು ತಂಡ 17 ವರ್ಷಗಳ ನಂತರ ಚೆಪಾಕ್ನಲ್ಲಿ ಚೆನ್ನೈ ವಿರುದ್ಧ ಜಯಗಳಿಸಿದೆ.
-
6 ಎಸೆತಗಳಲ್ಲಿ 67 ರನ್ ಬೇಕು
ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಲು 6 ಎಸೆತಗಳಲ್ಲಿ 67 ರನ್ ಗಳು ಬೇಕಾಗಿವೆ, ಅದು ಅಸಾಧ್ಯ. ಇದರರ್ಥ ಸಿಎಸ್ಕೆ ಸೋಲು ಈಗ ಖಚಿತವಾಗಿದೆ.
-
-
17 ಓವರ್ಗಳ ನಂತರ CSK- 107/7
17 ಓವರ್ಗಳ ಅಂತ್ಯಕ್ಕೆ ಸಿಎಸ್ಕೆ 7 ವಿಕೆಟ್ಗಳ ನಷ್ಟಕ್ಕೆ 107 ರನ್ ಗಳಿಸಿದೆ.
-
100 ರನ್ ದಾಟಿದ ಚೆನ್ನೈ
ಚೆನ್ನೈ ಸೂಪರ್ ಕಿಂಗ್ಸ್ 16 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಇದೀಗ ಸಿಎಸ್ಕೆ ಗೆಲ್ಲಲು 24 ಎಸೆತಗಳಲ್ಲಿ 96 ರನ್ಗಳು ಬೇಕಾಗಿವೆ.
-
7ನೇ ವಿಕೆಟ್ ಪತನ
ಚೆನ್ನೈ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ. ಆರ್. ಅಶ್ವಿನ್ 8 ಎಸೆತಗಳಲ್ಲಿ 11 ರನ್ ಗಳಿಸುವ ಮೂಲಕ ಲಿಯಾಮ್ ಲಿವಿಂಗ್ಸ್ಟೋನ್ಗೆ ಬಲಿಯಾದರು.
-
-
14 ಓವರ್ಗಳ ನಂತರ CSK- 88/6
14 ಓವರ್ಗಳ ಆಟ ಮುಗಿದಿದೆ. ಚೆನ್ನೈ ತಂಡ ಇದುವರೆಗೆ 6 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.
-
ರಚಿನ್ ಕೂಡ ಔಟ್
ರಚಿನ್ ರವೀಂದ್ರ ಅವರ ಏಕಾಂಗಿ ಹೋರಾಟ ಅಂತ್ಯವಾಗಿದೆ. ಯಶ್ ದಯಾಳ್ ಎಸೆದಲ್ಲಿ ರನ್ ಕ್ಲೀನ್ ಬೌಲ್ಡ್ ಆಗಿದ್ದಾರೆ.
-
4 ವಿಕೆಟ್ ಪತನ
ಚೆನ್ನೈಗೆ ನಾಲ್ಕನೇ ಹೊಡೆತ, ಸ್ಯಾಮ್ ಕರನ್ 8 ರನ್ ಗಳಿಸಿ ಔಟಾದರು. ಲಿವಿಂಗ್ಸ್ಟೋನ್ ಚೆಂಡಿಗೆ ದೊಡ್ಡ ಸ್ಟ್ರೋಕ್ ಹೊಡೆಯಲು ಪ್ರಯತ್ನಿಸಿ ವಿಫಲರಾದರು. ಕೃನಾಲ್ ಪಾಂಡ್ಯ ಸುಲಭ ಕ್ಯಾಚ್ ಪಡೆದರು.
-
ಪವರ್ ಪ್ಲೇ ಅಂತ್ಯ
ಪವರ್ ಪ್ಲೇನಲ್ಲಿ ಚೆನ್ನೈ ಕೇವಲ 30 ರನ್ ಗಳಿಸಿ, 3 ವಿಕೆಟ್ಗಳನ್ನು ಕಳೆದುಕೊಂಡಿದೆ. ಹ್ಯಾಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ಚೆನ್ನೈ ತಂಡವನ್ನು ಕಟ್ಟಿಹಾಕಿದರು. ರಾಹುಲ್ ತ್ರಿಪಾಠಿ, ಹೂಡಾ ವಿಫಲರಾದರು ಮತ್ತು ಗಾಯಕ್ವಾಡ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
-
ಎರಡನೇ ವಿಕೆಟ್
ರುತುರಾಜ್ ಗಾಯಕ್ವಾಡ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಜೋಶ್ ಹ್ಯಾಜಲ್ವುಡ್ ವಿಕೆಟ್ ಪಡೆದರು. ಹ್ಯಾಝಲ್ವುಡ್ ಒಂದೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
-
ಚೆನ್ನೈಗೆ ಮೊದಲ ಹೊಡೆತ
ಚೆನ್ನೈ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ. ಜೋಶ್ ಹ್ಯಾಜಲ್ವುಡ್ ಅದ್ಭುತ ಬೌನ್ಸರ್ ಎಸೆದು ರಾಹುಲ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಫಿಲ್ ಸಾಲ್ಟ್ ಸುಲಭ ಕ್ಯಾಚ್ ಪಡೆದರು.
-
ಭುವಿ ಅದ್ಭುತ ಓವರ್
ಭುವನೇಶ್ವರ್ ಕುಮಾರ್ ಮೊದಲ ಓವರ್ ಚೆನ್ನಾಗಿ ಎಸೆದರು. ಆ ಓವರ್ನ ಕೊನೆಯ ಎಸೆತ ಆಕಸ್ಮಿಕವಾಗಿ ಬೌಂಡರಿಗೆ ಹೋಯಿತು.
-
196 ರನ್
ಚೆಪಾಕ್ ಪಿಚ್ನಲ್ಲಿ ಬೆಂಗಳೂರು 196 ರನ್ಗಳ ಬೃಹತ್ ಸ್ಕೋರ್ ಗಳಿಸಿದೆ. ಕೊನೆಯ ಓವರ್ನಲ್ಲಿ, ಟಿಮ್ ಡೇವಿಸ್ ಸ್ಯಾಮ್ ಕರನ್ ವಿರುದ್ಧ ಸತತ 3 ಸಿಕ್ಸರ್ಗಳನ್ನು ಬಾರಿಸಿದರು. ಈ ಓವರ್ನಲ್ಲಿ 19 ರನ್ಗಳು ಬಂದವು, ಇದರಿಂದಾಗಿ ಆರ್ಸಿಬಿ ಇಲ್ಲಿಗೆ ತಲುಪಿತು. ಚೆನ್ನೈ ಪರ ನೂರ್ ಗರಿಷ್ಠ 3 ವಿಕೆಟ್ ಪಡೆದರೆ, ಪತಿರಾನ ಕೂಡ 2 ವಿಕೆಟ್ ಪಡೆದರು.
-
7ನೇ ವಿಕೆಟ್ ಪತನ
19ನೇ ಓವರ್ನಲ್ಲಿ ಕೇವಲ 1 ರನ್ಗೆ 2 ವಿಕೆಟ್ ಪಡೆಯುವ ಮೂಲಕ ಮತಿಶಾ ಪತಿರಾನ ಆರ್ಸಿಬಿಗೆ ಆಘಾತ ನೀಡಿದರು. ಮೊದಲ ಎಸೆತದಲ್ಲೇ ಪಾಟಿದಾರ್ ಅವರನ್ನು ಔಟ್ ಮಾಡಿದ ನಂತರ, ಕೃನಾಲ್ ಪಾಂಡ್ಯ ಅವರ ವಿಕೆಟ್ ಅನ್ನು ಸಹ ಪಡೆದರು.
-
ಪಾಟಿದಾರ್ ಔಟ್
ಸಿಎಸ್ಕೆ ಅಂತಿಮವಾಗಿ ರಜತ್ ಪಾಟಿದಾರ್ (51) ಅವರ ವಿಕೆಟ್ ಪಡೆದಿದೆ. 19 ನೇ ಓವರ್ನಲ್ಲಿ, ಪತಿರಾನ ಅವರ ಮೊದಲ ಎಸೆತದಲ್ಲಿ ಪಾಟಿದಾರ್ ಹೈ ಶಾಟ್ ಆಡಿದರು ಮತ್ತು ಸ್ಯಾಮ್ ಕರನ್ ಕ್ಯಾಚ್ ತೆಗೆದುಕೊಳ್ಳುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಬೆಂಗಳೂರು ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ
-
ಪಾಟೀದಾರ್ ಅರ್ಧಶತಕ
ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಕಠಿಣ ಪಿಚ್ನಲ್ಲಿ ಅದ್ಭುತ ಅರ್ಧಶತಕ ಗಳಿಸಿದ್ದಾರೆ. 18ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಪಾಟಿದಾರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಋತುವಿನಲ್ಲಿ ಮತ್ತು ನಾಯಕನಾಗಿ ಇದು ಅವರ ಮೊದಲ ಅರ್ಧಶತಕವಾಗಿದೆ.
-
ಪಾಟಿದಾರ್ ಸ್ಫೋಟಕ ಬ್ಯಾಟಿಂಗ್
ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ತಮ್ಮ ತಂಡಕ್ಕಾಗಿ ವೇಗವಾಗಿ ರನ್ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು 14 ನೇ ಓವರ್ನಲ್ಲಿ ರವೀಂದ್ರ ಜಡೇಜಾ ವಿರುದ್ಧ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. 14 ಓವರ್ಗಳ ನಂತರ ಸ್ಕೋರ್ 134 ರನ್.
-
ಕೊಹ್ಲಿ ಔಟ್
ಬೆಂಗಳೂರು ತಂಡ ಮೂರನೇ ವಿಕೆಟ್ ಕಳೆದುಕೊಂಡಿದೆ, ಈ ಬಾರಿ ವಿರಾಟ್ ಕೊಹ್ಲಿ (31) ಔಟಾಗಿದ್ದಾರೆ.
-
ಪಾಟೀದಾರ್ಗೆ ಎರಡು ಜೀವದಾನ
ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಅವರಿಗೆ 2 ಜೀವದಾನ ದೊರೆತಿದೆ. 11 ನೇ ಓವರ್ನಲ್ಲಿ, ಪಾಟಿದಾರ್ ರವೀಂದ್ರ ಜಡೇಜಾ ಎಸೆತದಲ್ಲಿ ಹೈ ಶಾಟ್ಗೆ ಹೋದರು ಆದರೆ ದೀಪಕ್ ಹೂಡಾ ಲಾಂಗ್ ಆಫ್ನಲ್ಲಿ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಆ ಸಮಯದಲ್ಲಿ ಹೂಡಾ ಕೇವಲ 17 ರನ್ ಗಳಿಸಿದ್ದರು. ಇದಾದ ನಂತರ, 12 ನೇ ಓವರ್ನಲ್ಲಿಯೂ ಪಾಟಿದಾರ್ ಅವರ ಕ್ಯಾಚ್ ಮಿಸ್ ಆಯಿತು. ಆದಾಗ್ಯೂ, ಇದು ಸ್ವಲ್ಪ ಕಷ್ಟಕರವಾದ ಕ್ಯಾಚ್ ಆಗಿತ್ತು.
-
9 ಓವರ್ ಪೂರ್ಣ
ಆರ್ಸಿಬಿಯ ಇನ್ನಿಂಗ್ಸ್ನ 9 ಓವರ್ಗಳು ಪೂರ್ಣಗೊಂಡಿವೆ ಮತ್ತು ತಂಡದ ಆರಂಭವು ಬಲವಾಗಿದೆ. 2 ವಿಕೆಟ್ಗಳು ಬಿದ್ದಿದ್ದರೂ, ತಂಡವು ಈ 9 ಓವರ್ಗಳಲ್ಲಿ 83 ರನ್ಗಳನ್ನು ಗಳಿಸಿದೆ. ಪ್ರಸ್ತುತ ನಾಯಕ ರಜತ್ ಪಾಟಿದಾರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿದ್ದಾರೆ.
-
ಪಡಿಕ್ಕಲ್ ಔಟ್
ಬೆಂಗಳೂರು ತಂಡ ಎರಡನೇ ವಿಕೆಟ್ ಕಳೆದುಕೊಂಡಿದ್ದು, ದೇವದತ್ ಪಡಿಕ್ಕಲ್ ವೇಗದ ಇನ್ನಿಂಗ್ಸ್ ಆಡಿದ ನಂತರ ಪೆವಿಲಿಯನ್ಗೆ ಮರಳಿದ್ದಾರೆ. ಅಶ್ವಿನ್ ಎಸೆದ ಎಂಟನೇ ಓವರ್ನಲ್ಲಿ ಪಡಿಕ್ಕಲ್ (27) ಅವರನ್ನು ಔಟ್ ಮಾಡಿದರು.
-
ಜಡೇಜಾ ದುಬಾರಿ ಓವರ್
ಮೊದಲ ವಿಕೆಟ್ ಪತನದ ನಂತರ ಬಂದ ದೇವದತ್ ಪಡಿಕ್ಕಲ್, ಬಂದ ಕೂಡಲೇ ದಾಳಿ ನಡೆಸಿದರು. ಆರನೇ ಓವರ್ನಲ್ಲಿ ಸಿಕ್ಸರ್ ಬಾರಿಸಿದ ಪಡಿಕ್ಕಲ್, ಏಳನೇ ಓವರ್ನಲ್ಲಿ ರವೀಂದ್ರ ಜಡೇಜ ವಿರುದ್ಧ 2 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆ ಓವರ್ನಲ್ಲಿ 15 ರನ್ಗಳು ಬಂದವು.
-
ಮೊದಲ ವಿಕೆಟ್
ಐದನೇ ಓವರ್ನಲ್ಲಿ ಬೆಂಗಳೂರು ತಂಡಕ್ಕೆ ಮೊದಲ ಹೊಡೆತ ಬಿದ್ದಿತು. ಮತ್ತೊಮ್ಮೆ ಎಂಎಸ್ ಧೋನಿಯ ಮಿಂಚಿನ ವೇಗದ ಸ್ಟಂಪಿಂಗ್ ಚೆನ್ನೈ ತಂಡಕ್ಕೆ ಈ ಯಶಸ್ಸನ್ನು ತಂದುಕೊಟ್ಟಿತು. ನೂರ್ ಅಹ್ಮದ್ ಅವರ ಓವರ್ನ ಕೊನೆಯ ಎಸೆತದಲ್ಲಿ ಧೋನಿ ಫಿಲ್ ಸಾಲ್ಟ್ (32) ಅವರನ್ನು ಔಟ್ ಮಾಡಿದರು.
-
ರನ್ಗೆ ಕಡಿವಾಣ
ಬೆಂಗಳೂರು ತಂಡದ ವೇಗದ ಆರಂಭದ ನಂತರ, ಚೆನ್ನೈ ತಂಡವು ನಾಲ್ಕನೇ ಓವರ್ನಲ್ಲಿ ಸ್ವಲ್ಪ ನಿರಾಳವಾಯಿತು. ಎಡಗೈ ವೇಗಿ ಸ್ಯಾಮ್ ಕರನ್ ಕೇವಲ 5 ರನ್ ನೀಡಿ ಮಿತವ್ಯಯವಾಗಿ ಬೌಲಿಂಗ್ ಮಾಡಿದರು.
-
ಅಶ್ವಿನ್ ದುಬಾರಿ ಓವರ್
ಎರಡನೇ ಓವರ್ನಲ್ಲಿ ಬಂದ ರವಿಚಂದ್ರನ್ ಅಶ್ವಿನ್ ಸಾಕಷ್ಟು ದುಬಾರಿಯಾದರು. ಈ ಓವರ್ನಲ್ಲಿ ಫಿಲ್ ಸಾಲ್ಟ್ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ಓವರ್ನಲ್ಲಿ ಒಟ್ಟು 16 ರನ್ಗಳನ್ನು ಗಳಿಸಿದರು.
-
ಆರ್ಸಿಬಿ ಬ್ಯಾಟಿಂಗ್ ಆರಂಭ
ಆರ್ಸಿಬಿ ಬ್ಯಾಟಿಂಗ್ ಆರಂಭವಾಗಿದ್ದು, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿದೆ. ಕಳೆದ ಪಂದ್ಯದಲ್ಲಿ ಇಬ್ಬರೂ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್ನಲ್ಲಿ ಸಾಲ್ಟ್ 2 ಬೌಂಡರಿ ಹೊಡೆದರು.
-
ಸಿಎಸ್ಕೆ ತಂಡ
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಥಿಶಾ ಪತಿರಾನ, ಖಲೀಲ್ ಅಹ್ಮದ್.
-
ಆರ್ಸಿಬಿ ತಂಡ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್.
-
ಟಾಸ್ ಗೆದ್ದ ಚೆನ್ನೈ
ಟಾಸ್ ಗೆದ್ದ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Mar 28,2025 7:02 PM