AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್

Deepak Chahar in Tears, IND vs SA 3rd ODI: ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೇ ಕೆಲ ಎಸೆತಗಳಲ್ಲಿ ಎಡವಿದ ಭಾರತ ವಿರೋಚಿತ ಸೋಲುಕಂಡಿತು. ಗೆಲುವಿಗೆ ಹೋರಾಟ ನಡೆಸಿಯೂ ತಂಡ ಸೋತಾಗ ದುಃಖ ತಾಳಲಾರದೆ ದೀಪಕ್ ಚಹರ್ ಕಣ್ಣೀರಿಟ್ಟರು.

Deepak Chahar: ಪಂದ್ಯ ಸೋತ ದುಃಖದಲ್ಲಿ ಬೌಂಡರಿ ಲೈನ್ ಬಳಿಯೇ ಕಣ್ಣೀರಿಟ್ಟ ದೀಪಕ್ ಚಹರ್
Deepak Chahar Crying IND vs SA
TV9 Web
| Edited By: |

Updated on: Jan 24, 2022 | 10:49 AM

Share

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ (South Africa vs India) ಗೆಲುವಿಗೆ ಹೋರಾಟ ನಡೆಸಿದ್ದು ದೀಪಕ್ ಚಹರ್. 210 ರನ್​​ಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದು ದೀಪಕ್ ಚಹರ್. ಜಸ್ ಪ್ರೀತ್ ಬುಮ್ರಾ (Jasprit Bumrah) ಜೊತೆಗೂಡಿ ಆಕರ್ಷಕ 55 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವನ್ನು ಸಮೀಪಿಸಿದರು. ಆದರೆ, ಥ್ರಿಲ್ಲಿಂಗ್ ಗೆಲುವು ಪಡೆಯುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾಕ್ಕೆ ಕೊನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಮಾರಕ ದಾಳಿ ನಡೆಸಿ ಸೋಲುಣಿಸಿದರು. ಚಹರ್ ಕೇವಲ 34 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಿಡಿಸಿ 54 ರನ್​ ಚಚ್ಚಿ ಅಂತಿಮ ಹಂತದಲ್ಲಿ ಔಟಾದರು. ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ (Deepak Chahar) ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೇ ಕೆಲ ಎಸೆತಗಳಲ್ಲಿ ಎಡವಿದ ಭಾರತ ವಿರೋಚಿತ ಸೋಲುಕಂಡಿತು. ಗೆಲುವಿಗೆ ಹೋರಾಟ ನಡೆಸಿಯೂ ತಂಡ ಸೋತಾಗ ದುಃಖ ತಾಳಲಾರದೆ ದೀಪಕ್ ಚಹರ್ ಕಣ್ಣೀರಿಟ್ಟರು.

ಹೌದು, ಚಹರ್ ಅವರ ಬೌಂಡರಿ ಸಿಕ್ಸರ್​​ಗಳಿಂದ ಭಾರತ 45ನೇ ಓವರ್​ನಲ್ಲಿ 250 ರನ್​ಗಳ ಗಡಿ ದಾಟಿತ್ತು. ಕೇವಲ 31 ಎಸೆತಗಳಲ್ಲಿಯೇ ಏಕದಿನದಲ್ಲಿ ತಮ್ಮ 2ನೇ ಅರ್ಧಶತಕ ಪೂರೈಸಿದ ಚಹರ್ ತಂಡಕ್ಕೆ ಗೆಲುವು ನೀಡುವ ಸಂಪೂರ್ಣ ವಿಶ್ವಾಸದಲ್ಲಿದ್ದರು. ಕೊನೇ ಮೂರು ಓವರ್‌ಗಳಲ್ಲಿ ಭಾರತಕ್ಕೆ ಗೆಲ್ಲಲು ಬೇಕಿದ್ದಿದ್ದು ಕೇವಲ 10 ರನ್‌ ಮಾತ್ರ. ಇನ್ನೇನು ಭಾರತ ತಂಡ ಗೆಲ್ಲುವುದು ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಅದರಂತೆ ವಿಶ್ವಾಸದಲ್ಲಿದ್ದ ದೀಪಕ್‌ ಚಹರ್‌, ಲುಂಗಿ ಎನ್ಗಿಡಿ ಎಸೆತದಲ್ಲಿ ಕವರ್ಸ್‌ ಮೇಲೆ ಹೊಡೆಯಲು ಪ್ರಯತ್ನಿಸಿ ವಿಕೆಟ್‌ ಒಪ್ಪಿಸಿದರು.

ಚಹರ್‌ ಔಟಾಗಿದ್ದೇ ತಡ ಪಂದ್ಯದ ದಿಕ್ಕು ಎದುರಾಳಿ ತಂಡದತ್ತ ಮುಖ ಮಾಡಿತು. ಚಹರ್ ಔಟಾದರು ಅವರು ಡ್ರೆಸ್ಸಿಂಗ್ ರೂಮ್​ಗೆ ತೆರಳಿಲ್ಲ. ಬೌಂಡರಿ ಲೈನ್ ಬಳಿ ಭಾರತ ಗೆಲುವು ಸಾಧಿಸುತ್ತದೆ ಎಂದು ನಂಬಿ ಕುಳಿತಿದ್ದರು. ಆದರೆ, ಆಗಿದ್ದೇ ಬೇರೆ. ದಕ್ಷಿಣ ಆಫ್ರಿಕಾ ವೇಗಿಗಳ ನಿಧಾನಗತಿಯ ಎಸೆತಗಳನ್ನು ಎದುರಿಸುವಲ್ಲಿ ಜಸ್‌ಪ್ರಿತ್‌ ಬುಮ್ರಾ, ಯುಜ್ವೇಂದ್ರ ಚಹಲ್‌ ಹಾಗೂ ಪ್ರಸಿಧ್‌ ಕೃಷ್ಣ ವಿಫಲರಾದರು. ಭಾರತ ಸೋಲು ಕಂಡಿತು. ತಂಡ ಸೋತಾಗ ದುಃಖ ತಾಳಲಾರದೆ ಚಹರ್ ಗಳಗಳನೇ ಕಣ್ಣೀರಿಟ್ಟರು. ಈ ವೇಳೆ ಸಹ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ದೀಪಕ್‌ ಅವರನ್ನು ಸಮಾಧಾನ ಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಗೆಲುವಿವಾಗಿ ಹೋರಾಟ ನಡೆಸಿದ ದೀಪಕ್ ಚಹರ್ ಆಟವನ್ನು ನಾಯಕ ಕೆಎಲ್ ರಾಹುಲ್ ಕೊಂಡಾಡಿದ್ದಾರೆ. ದೀಪಕ್ ಚಹರ್ ನಮಗೆ ಗೆಲ್ಲಬಹುದಾದ ಉತ್ತಮ ಅವಕಾಶವನ್ನು ಮಾಡಿಕೊಟ್ಟಿದ್ದರು. ಪಂದ್ಯ ರೋಚಕತೆ ಸೃಷ್ಟಿಸುವಂತೆ ಮಾಡಿದರು ಎಂದು ಹೇಳಿದ್ದಾರೆ. ಈ ಮೂಲಕ ಪಂದ್ಯದ ಕೊನೆಯಲ್ಲಿ ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟರೂ ಕೂಡ ಆಟಗಾರರು ಉತ್ತಮ ಪ್ರದರ್ಶನ ನೀಡದೇ ಇರುವುದು ಸೋಲಿಗೆ ಕಾರಣವಾಯಿತು ಎಂಬುದನ್ನು ಕೆಎಲ್ ರಾಹುಲ್ ಪರೋಕ್ಷವಾಗಿ ತಿಳಿಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ದೀಪಕ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.

Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ

KL Rahul: ವೈಟ್​ವಾಷ್ ಮುಖಭಂಗದ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತು ಕೇಳಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ