ಆಪರೇಷನ್ ಸಿಂಧೂರ್: ಸಂಕಷ್ಟದಲ್ಲಿ 3 ಐಪಿಎಲ್ ತಂಡಗಳು; 2 ಪಂದ್ಯಗಳು ರದ್ದಾಗುವ ಸಾಧ್ಯತೆ
Operation Sindoor and IPL: ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಗಡಿ ರಾಜ್ಯಗಳಲ್ಲಿ ವಿಮಾನ ಹಾರಾಟ ರದ್ದಾಗಿದೆ, ಇದರಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಮುಂಬೈ ಇಂಡಿಯನ್ಸ್ ತಂಡ ಧರ್ಮಶಾಲಾ ತಲುಪಲು ಪರದಾಡುತ್ತಿದೆ, ಪಂದ್ಯ ರದ್ದಾಗುವ ಸಾಧ್ಯತೆಯಿದೆ.

ಪಿಒಕೆಯಲ್ಲಿ ಭಾರತೀಯ ಸೇನೆ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ (Operation Sindoor) ಎಂದು ಹೆಸರಿಸಲಾಗಿದೆ. ಮೇ 6 ರಂದು ತಡರಾತ್ರಿ ನಡೆದ ಈ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಮುನ್ನೇಚ್ಚರಿಕೆಯ ಕ್ರಮವಾಗಿ ಭಾರತ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು, ಮುಂದಿನ ಆದೇಶದವರೆಗೆ ಗಡಿ ರಾಜ್ಯಗಳಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ವಿಮಾನ ಹಾರಾಟವನ್ನು ನಿರ್ಬಂಧಗೊಳಿಸಿರುವ ಕಾರಣ ಐಪಿಎಲ್ನಲ್ಲಿ (IPL 2025) ಕೆಲವು ಪಂದ್ಯಗಳು ನಡೆಯುವುದು ಕಷ್ಟಕರವಾಗಿದೆ.
ವಾಸ್ತವವಾಗಿ ಮೇ 11 ರಂದು ಧರ್ಮಶಾಲಾದಲ್ಲಿ ಮುಂಬೈ ಹಾಗೂ ಪಂಜಾಬ್ ನಡುವೆ ಪಂದ್ಯ ನಿಗದಿಯಾಗಿದೆ. ಆದರೆ ಅಲ್ಲಿಗೆ ಪ್ರಯಾಣಿಸಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾವುದೇ ವಿಮಾನ ಸಿಗುತ್ತಿಲ್ಲ, ಏಕೆಂದರೆ ಭದ್ರತಾ ಕಾರಣಗಳಿಂದಾಗಿ ಅಲ್ಲಿನ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯ ಹೇಗೆ ನಡೆಯುತ್ತದೆ ಎಂಬುದು ಬಿಸಿಸಿಐಗೆ ಕಳವಳಕಾರಿ ವಿಷಯವಾಗಿದೆ. ಇದಲ್ಲದೆ, ಮೇ 8 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವೂ ಸಂಕಷ್ಟದಲ್ಲಿದೆ.
ಮುಂಬೈ ಪ್ರಯಾಣ ಕಷ್ಟಕರ
ಪಂಜಾಬ್ ಕಿಂಗ್ಸ್ ತಂಡವು ಮೇ 11 ರಂದು ಧರ್ಮಶಾಲಾದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಪಂಜಾಬ್ ಕಿಂಗ್ಸ್ ಈಗಾಗಲೇ ಧರ್ಮಶಾಲಾದಲ್ಲಿದೆ, ಆದರೆ ಮುಂಬೈ ಇಂಡಿಯನ್ಸ್ ಇನ್ನೂ ಅಲ್ಲಿಗೆ ತಲುಪಿಲ್ಲ. ಇದಕ್ಕೂ ಮುನ್ನ ಮೇ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ಅಲ್ಲಿ ಉಪಸ್ಥಿತರಿವೆ. ಆದರೆ ಈ ಪಂದ್ಯದಲ್ಲೂ ಬಿಕ್ಕಟ್ಟು ಎದುರಾಗುತ್ತಿದೆ. ಇದನ್ನು ಬಿಟ್ಟರೆ ಮುಂಬೈ ಇಂಡಿಯನ್ಸ್ ತಂಡ ಇನ್ನೂ ಅಲ್ಲಿಗೆ ತಲುಪಿಲ್ಲ.
ಆಪರೇಷನ್ ಸಿಂಧೂರ್ಗೆ ಪತರಗುಟ್ಟಿದ ಪಾಕ್: ಬಡಾಯಿ..ಬೊಗಳೆ ಬಿಡ್ತಿದ್ದ ರಕ್ಷಣಾ ಸಚಿವ ಯುಟರ್ನ್
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಯೊಬ್ಬರು ‘ಮುಂಬೈ ಇಂಡಿಯನ್ಸ್ ತಂಡವು ಮೇ 11 ರಂದು ಧರ್ಮಶಾಲಾದಲ್ಲಿ ಪಂಜಾಬ್ ವಿರುದ್ಧ ಪಂದ್ಯವನ್ನು ಆಡಬೇಕಿದೆ. ಆದರೆ ಚಂಡೀಗಢ ವಿಮಾನ ನಿಲ್ದಾಣ ಮುಚ್ಚಿದ ಕಾರಣ, ಈಗ ಧರ್ಮಶಾಲಾ ತಲುಪುವುದು ಕಷ್ಟಕರವಾಗಿದೆ. ನಾವು ದೆಹಲಿಯನ್ನು ಒಂದು ಆಯ್ಕೆಯಾಗಿ ನೋಡುತ್ತಿದ್ದೇವೆ, ಆದರೆ ತಂಡಗಳು ದೀರ್ಘ ರಸ್ತೆ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇದಲ್ಲದೆ, ಧರ್ಮಶಾಲಾಗೆ ಎಲ್ಲಾ ವಿಮಾನಗಳನ್ನು ಮೇ 10 ರವರೆಗೆ ರದ್ದುಗೊಳಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಇಂಡಿಗೊ ಘೋಷಿಸಿದೆ. ಏರ್ ಇಂಡಿಯಾದಂತಹ ಇತರ ವಿಮಾನಯಾನ ಸಂಸ್ಥೆಗಳು ಸಹ ಪ್ರಯಾಣಿಕರಿಗೆ ಸಲಹೆಯನ್ನು ನೀಡಿವೆ’.
#6ETravelAdvisory: Following aviation directives, flights to/from these cities remain cancelled until 10 May, 0529 hrs. Please check your flight status here https://t.co/ll3K8PwtRV. For rebooking or refunds, visit https://t.co/51Q3oUe0lP. We are here to support you! pic.twitter.com/sLHHzIZ99w
— IndiGo (@IndiGo6E) May 7, 2025
ಪಂದ್ಯ ರದ್ದಾಗುವುದೇ?
‘ನಮಗೆ ಇನ್ನೂ ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ನಾವು ನಮ್ಮ ಪಂದ್ಯಗಳತ್ತ ಗಮನ ಹರಿಸುತ್ತಿದ್ದೇವೆ’ ಎಂದು ಪಂಜಾಬ್ ಕಿಂಗ್ಸ್ ಅಧಿಕಾರಿ ತಿಳಿಸಿದ್ದಾರೆ. ಮೇ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ಗಳನ್ನು ಬಳಸಲಾಗುವುದು. ಮೂಲಗಳ ಪ್ರಕಾರ, ಪಾಕಿಸ್ತಾನ ಇದರ ಲಾಭ ಪಡೆಯಬಹುದು. ಆದ್ದರಿಂದ, ಪಂದ್ಯವನ್ನು ರದ್ದುಗೊಳಿಸುವ ಅಥವಾ ಮರು ನಿಗದಿಪಡಿಸುವ ಸಾಧ್ಯತೆಯಿದೆ. ಈ ಎರಡೂ ಸಂದರ್ಭಗಳಲ್ಲಿ, ತಂಡಗಳು ಅಲ್ಲಿಂದ ರಸ್ತೆ ಮೂಲಕ ಹಿಂತಿರುಗಬೇಕಾಗಬಹುದು. ಇದು ಎರಡೂ ತಂಡಗಳಿಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Wed, 7 May 25
