AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಕಳೆದ ಐಪಿಎಲ್​ನ ಫ್ಲಾಪ್ ಸ್ಟಾರ್​ಗಳೇ ಈ ಆವೃತ್ತಿಯ ಮ್ಯಾಚ್​ ವಿನ್ನರ್​ಗಳು! ಇಲ್ಲಿದೆ ನೋಡಿ ವಿವರ

IPL 2022: ಕಳೆದ ವರ್ಷ ಕಳಪೆ ಪ್ರದರ್ಶನದಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ಕ್ರಿಕೆಟಿಗರು ಈ ಆವೃತ್ತಿಯಲ್ಲಿ ಸೂಪರ್​ಸ್ಟಾರ್​ಗಳಾಗಿ ಮಿಂಚುತ್ತಿದ್ದಾರೆ. ಅದೂ ಸಾಲದೆಂಬಂತೆ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಹಳೆಯ ತಂಡಗಳೆದುರು ಭರ್ಜರಿ ಪ್ರದರ್ಶನ ನೀಡುವ ಮೂಲಕ ತಕ್ಕ ಎದುರೇಟು ನೀಡುತ್ತಿರುವುದು ಈ ಆವೃತ್ತಿಯ ವಿಶೇಷವಾಗಿದೆ.

IPL 2022: ಕಳೆದ ಐಪಿಎಲ್​ನ ಫ್ಲಾಪ್ ಸ್ಟಾರ್​ಗಳೇ ಈ ಆವೃತ್ತಿಯ ಮ್ಯಾಚ್​ ವಿನ್ನರ್​ಗಳು! ಇಲ್ಲಿದೆ ನೋಡಿ ವಿವರ
Kuldeep Yadav
TV9 Web
| Edited By: |

Updated on: Apr 29, 2022 | 6:05 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ (Indian Premier League)ನಲ್ಲಿ ಒಂದೇ ರಾತ್ರಿಯಲ್ಲಿ ಕೆಲವು ಕ್ರಿಕೆಟಿಗರು ಸ್ಟಾರ್​ಗಳಾದರೆ ಇನ್ನು ಕೆಲವರು ಫ್ಲಾಪ್ ಸ್ಟಾರ್​ಗಳಾಗಿಬಿಡುತ್ತಾರೆ. ಯಾರು ಮ್ಯಾಚ್​ ವಿನ್ನರ್​ಗಳಾಗುತ್ತಾರೆ, ಯಾರು ಪಂದ್ಯವನ್ನು ಸೋಲುವಂತೆ ಮಾಡುತ್ತಾರೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದಕ್ಕೆ ತಕ್ಕ ಉದಾಹರಣೆ ಎಂದರೆ, ಈ ಐಪಿಎಲ್​ನಲ್ಲಿ ಮಿಂಚುತ್ತಿರುವ ಕ್ರಿಕೆಟಿಗರಾಗಿದ್ದಾರೆ. ಕಳೆದ ವರ್ಷ ಕಳಪೆ ಪ್ರದರ್ಶನದಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ಕ್ರಿಕೆಟಿಗರು ಈ ಆವೃತ್ತಿಯಲ್ಲಿ ಸೂಪರ್​ಸ್ಟಾರ್​ಗಳಾಗಿ (IPL 2022 Top Performers) ಮಿಂಚುತ್ತಿದ್ದಾರೆ. ಅದೂ ಸಾಲದೆಂಬಂತೆ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಹಳೆಯ ತಂಡಗಳೆದುರು ಭರ್ಜರಿ ಪ್ರದರ್ಶನ ನೀಡುವ ಮೂಲಕ ತಕ್ಕ ಎದುರೇಟು ನೀಡುತ್ತಿರುವುದು ಈ ಆವೃತ್ತಿಯ ವಿಶೇಷವಾಗಿದೆ. ಅಂತಹ ಕೆಲವು ಆಟಗಾರರ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ.

  1. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಕುಲದೀಪ್ ಯಾದವ್ ಬೆಂಚ್ ಮೇಲೆ ಕುಳಿತಿದ್ದೆ ಬಂತು. ಈ ಆಟಗಾರನಿಗೆ ಕೆಲವೇ ಕೆಲವು ಅವಕಾಶಗಳನ್ನು ನೀಡಲಾಯಿತು. ಕಳೆದ ಋತುವಿನಲ್ಲಿ ಕೋಲ್ಕತ್ತಾ ಈ ಆಟಗಾರನನ್ನು ಕೇವಲ 5 ಪಂದ್ಯಗಳಲ್ಲಿ ಆಡಿಸಿತ್ತು. ಆ ಪಂದ್ಯಗಳಲ್ಲಿ ಕುಲ್ದೀಪ್ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿತ್ತು. ಆದರೆ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಚೈನಾಮನ್ ಬೌಲರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಕುಲದೀಪ್ 8 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅವರು 18 ವಿಕೆಟ್‌ಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್‌ಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.
  2. ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ವಿಫಲರಾಗಿದ್ದರು, ಆದರೆ ಈ ಬಾರಿ ಈ ಆಟಗಾರ ಪ್ರತಿ ಪಂದ್ಯದಲ್ಲೂ ರನ್ ಗಳಿಸುವ ಪ್ರತಿಜ್ಞೆ ಮಾಡಿದ್ದಾರೆ. ಪಾಂಡ್ಯ ಕಳೆದ ಋತುವಿನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 14.11 ಸರಾಸರಿಯಲ್ಲಿ 127 ರನ್ ಗಳಿಸಿದ್ದರು. ಆದರೆ ಈ ಬಾರಿ ಈ ಆಟಗಾರ 7 ಪಂದ್ಯಗಳಲ್ಲಿ 305 ರನ್ ಗಳಿಸಿದ್ದಾರೆ. ಪಾಂಡ್ಯ ಬ್ಯಾಟ್‌ನಿಂದ ಮೂರು ಅರ್ಧಶತಕಗಳು ಬಂದಿವೆ.
  3. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಕಳೆದ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 98 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಬ್ಯಾಟಿಂಗ್ ಸರಾಸರಿ ಪ್ರತಿ ಇನ್ನಿಂಗ್ಸ್‌ಗೆ 17 ರನ್‌ಗಳಿಗಿಂತ ಕಡಿಮೆ ಇತ್ತು .ಆದರೆ ಈ ಬಾರಿ ಈ ಆಟಗಾರನಿಗೆ ಆರಂಭಿಕರಾಗಿ ಅವಕಾಶ ಸಿಕ್ಕಿದ್ದು ಅವರು 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 285 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ 2 ಅರ್ಧಶತಕಗಳನ್ನು ಗಳಿಸಿದ್ದಾರೆ.
  4. ಸನ್‌ರೈಸರ್ಸ್ ಹೈದರಾಬಾದ್‌ನ ಏಕೈಕ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಂ ಕಳೆದ ಋತುವಿನಲ್ಲಿ ತಮ್ಮ ಪ್ರತಿಭೆಗೆ ಅನುಗುಣವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್ 6 ಪಂದ್ಯಗಳಲ್ಲಿ 146 ರನ್ ಗಳಿಸಿತ್ತು. ಆದರೆ ಈ ಋತುವಿನಲ್ಲಿ ಈ ಆಟಗಾರ ಹೈದರಾಬಾದ್ ಪರ ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಿದ್ದಾರೆ. ಮಾರ್ಕ್ರಾಮ್ 6 ಇನ್ನಿಂಗ್ಸ್‌ಗಳಲ್ಲಿ 123 ಸರಾಸರಿಯಲ್ಲಿ 246 ರನ್ ಗಳಿಸಿದ್ದಾರೆ.
  5. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಮ್ಯಾಚ್ ಫಿನಿಶರ್ ಡೇವಿಡ್ ಮಿಲ್ಲರ್ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್‌ನಿಂದ 8 ಇನ್ನಿಂಗ್ಸ್‌ಗಳಲ್ಲಿ 24.80 ಸರಾಸರಿಯಲ್ಲಿ ಕೇವಲ 124 ರನ್ ಗಳಿಸಲಾಯಿತು. ಆದರೆ ಈ ಬಾರಿ ಈ ಆಟಗಾರ 59.25ರ ಸರಾಸರಿಯಲ್ಲಿ 237 ರನ್ ಗಳಿಸಿದ್ದಾರೆ. ತಂಡದ ಸ್ಟ್ರೈಕ್ ರೇಟ್ ಕೂಡ 150ರ ಸಮೀಪದಲ್ಲಿದೆ.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್