AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ನೋ DRS, ಈ ಬಾರಿ SRS

IPL 2024: ಐಪಿಎಲ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.

IPL 2024: ನೋ DRS, ಈ ಬಾರಿ SRS
IPL
TV9 Web
| Edited By: |

Updated on:Mar 20, 2024 | 12:59 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (​IPL 2024) ಸೀಸನ್ 17 ರಲ್ಲಿ ಡಿಸಿಷನ್ ರಿವ್ಯೂ ಸಿಸ್ಟಂ (DRS) ಬದಲಿಗೆ ಸ್ಮಾರ್ಟ್ ರಿಪ್ಲೇ ಸಿಸ್ಟಂ (SRS) ಅನ್ನು ಬಳಸುವುದಾಗಿ ಬಿಸಿಸಿಐ ತಿಳಿಸಿದೆ. ಈ ಮೂಲಕ ಅಂಪೈರ್​ ತೀರ್ಪುಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದೆ. ಸ್ಮಾರ್ಟ್ ರಿಪ್ಲೇ ಸಿಸ್ಟಮ್​ ಬಳಕೆಯಿಂದ ತ್ವರಿತವಾದ, ಹೆಚ್ಚು ನಿಖರವಾದ ಫಲಿತಾಂಶ ಸಿಗಲಿದೆ. ಅಂದರೆ ಡಿಆರ್​ಎಸ್​ ತೀರ್ಪುಗಳಲ್ಲಿ ಕಂಡು ಬರುತ್ತಿದ್ದಂತಹ ಯಾವುದೇ ಗೊಂದಲಗಳು ಇಲ್ಲಿ ಕಾಣ ಸಿಗುವುದಿಲ್ಲ. ಈ ಮೂಲಕ ಮೂರನೇ ಅಂಪೈರ್ ತಕ್ಷಣವೇ ತೀರ್ಪು ಪ್ರಕಟಿಸಲಿದ್ದಾರೆ.

ಸ್ಮಾರ್ಟ್​ ರಿಪ್ಲೇ ಸಿಸ್ಟಮ್​ ಕಾರ್ಯ ನಿರ್ವಹಿಸುವುದು ಹೇಗೆ?

ಡಿಆರ್​ಎಸ್​ ನಂತೆ ಇಲ್ಲೂ ಕೂಡ ಫೀಲ್ಡ್​ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಬೇಕು. ಆದರೆ ಈ ಬಾರಿ ಮೂರನೇ ಅಂಪೈರ್ ಟಿವಿ ನಿರ್ದೇಶಕರ ಇನ್​ಪುಟ್​ಗಾಗಿ ಕಾಯುವುದಿಲ್ಲ. ಬದಲಾಗಿ ಹಾಕ್​-ಐ ಅಪರೇಟ್​ಗಳ ನೆರವಿನಿಂದ ತಕ್ಷಣವೇ ತೀರ್ಪು ಪ್ರಕಟಿಸಲಿದ್ದಾರೆ.

ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಅಡಿಯಲ್ಲಿ, ಟಿವಿ ಅಂಪೈರ್ ಎರಡು ಹಾಕ್-ಐ ಆಪರೇಟರ್‌ಗಳಿಂದ ನೇರವಾಗಿ ಇನ್‌ಪುಟ್‌ಗಳನ್ನು ಸ್ವೀಕರಿಸಲಿದ್ದಾರೆ. ಈ ಆಪರೇಟ್​ಗಳು ಕೂಡ ಅಂಪೈರ್​ ಜೊತೆಗೆ ಒಂದೇ ಕೋಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಆಪರೇಟರ್​ಗಳ ಮುಖ್ಯ ಕೆಲಸವೆಂದರೆ, ಹಾಕ್-ಐನ ಎಂಟು ಹೈ-ಸ್ಪೀಡ್ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಚಿತ್ರಗಳನ್ನು ಅಂಪೈರ್​ಗೆ ಒದಗಿಸುವುದು. ಇಲ್ಲಿಯವರೆಗೆ ಮೂರನೇ ಅಂಪೈರ್ ಮತ್ತು ಹಾಕ್-ಐ ಆಪರೇಟರ್‌ಗಳ ನಡುವೆ ವಾಹಿನಿಯಾಗಿದ್ದ ಟಿವಿ ಪ್ರಸಾರಕರು ಇನ್ನು ಮುಂದೆ ಹೊಸ ವ್ಯವಸ್ಥೆಯ ಅಡಿಯಲ್ಲಿ ಭಾಗಿಯಾಗುವುದಿಲ್ಲ.

SRSನ ಅನುಕೂಲವೇನು?

ಸ್ಮಾರ್ಟ್ ರಿಪ್ಲೇ ಸಿಸ್ಟಂ ಬಳಕೆಯಿಂದ ಮೂರನೇ ಅಂಪೈರ್ ಹಲವು ಆ್ಯಂಗಲ್​ನಿಂದ ವಿಡಿಯೋವನ್ನು ಪರಿಶೀಲಿಸಬಹುದು. ಅಂದರೆ ಇಲ್ಲಿ ಹಾಕ್​-ಐ ಆಪರೇಟರ್​ಗಳು ಸ್ಪ್ಲಿಟ್-ಸ್ಕ್ರೀನ್​ಗಳನ್ನು ಬಳಸಲಿದ್ದಾರೆ. ಇದರಿಂದ ತಕ್ಷಣವೇ ಯಾವುದೇ ತೀರ್ಪು ನೀಡಲು ಆಯಾ ಸ್ಕ್ರೀನ್​ನ ನೆರವು ಪಡೆಯಬಹುದು.

ಉದಾಹರಣೆಗೆ, ಬೌಂಡರಿ ಲೈನ್​ನಲ್ಲಿ ಫೀಲ್ಡರ್​​ ಕ್ಯಾಚ್ ಹಿಡಿದಿದ್ದಾರೆ ಎಂದಿಟ್ಟುಕೊಳ್ಳಿ. ಈ ವೇಳೆ ಫೀಲ್ಡರ್​ನ ಕಾಲು ಬೌಂಡರಿ ಲೈನ್​ಗೆ ತಾಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು, ತಕ್ಷಣವೇ ಕಾಲಿನ ಭಾಗದ ವಿಡಿಯೋವನ್ನು ಸ್ಪ್ಲಿಟ್ ಸ್ಕ್ರೀನ್​ನಲ್ಲಿ ಪರಿಶೀಲಿಸಬಹುದು. ಅಲ್ಲದೆ ಪಾದದ ಯಾವ ಭಾಗ ಬೌಂಡರಿ ಲೈನ್​ಗೆ ತಾಗಿದೆ ಎಂಬುದರ ತುಣುಕಿನ ಭಾಗದೊಂದಿಗೆ ಸ್ಪಷ್ಟ ತೀರ್ಪು ನೀಡಲು ಸಾಧ್ಯವಾಗಲಿದೆ.

ಈ ಹಿಂದೆ ಟಿವಿ ಅಂಪೈರ್‌ಗೆ ಅಂತಹ ಸ್ಪಷ್ಟ ದೃಶ್ಯಗಳು ಸಿಗುತ್ತಿರಲಿಲ್ಲ. ಇದರಿಂದ ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನೇ ಮೂರನೇ ಅಂಪೈರ್ ಮುಂದುವರೆಸುತ್ತಿದ್ದರು. ಆದರೆ ಈ ಬಾರಿ ಅಂತಹ ಸಮಸ್ಯೆ ಎದುರಾಗುವುದಿಲ್ಲ. ಬದಲಾಗಿ ಫೀಲ್ಡಿಂಗ್​, ನೋಬಾಲ್, ರನ್​ಔಟ್ ಸೇರಿದಂತೆ ಪ್ರತಿಯೊಂದರ ಸ್ಪಷ್ಟ ಚಿತ್ರಣ ಮೂರನೇ ಅಂಪೈರ್ ಬಳಿ ಇರಲಿದೆ.

ಕ್ಯಾಮೆರಾಗಳು ಇರುವುದೆಲ್ಲಿ?

ಐಪಿಎಲ್​ನ ಪ್ರತಿ ಪಂದ್ಯದಲ್ಲೂ ಎಂಟು ಹಾಕ್-ಐ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಬೌಂಡರಿಗಳ ಬಳಿ ನಾಲ್ಕು ಕ್ಯಾಮೆರಾಗಳನ್ನು ಮತ್ತು ವಿಕೆಟ್ ಸ್ಕ್ವೇರ್ ಬಳಿಕ ನಾಲ್ಕು ಕ್ಯಾಮೆರಾಗಳನ್ನು ಇಡಲಾಗುತ್ತದೆ. ಈ ಮೂಲಕ ಸ್ಟಂಪಿಂಗ್‌ಗಳು, ರನ್‌ಔಟ್‌ಗಳು, ಕ್ಯಾಚ್‌ಗಳು ಮತ್ತು ಓವರ್‌ಥ್ರೋಗಳ ದೃಶ್ಯಗಳನ್ನು ಈ ಕ್ಯಾಮೆರಾಗಳು ಸೆರೆ ಹಿಡಿಯಲಿದೆ.

ಇದನ್ನೂ ಓದಿ: Virat Kohli: ಈ ಸಲ RCB ಡಬಲ್ ಧಮಾಕ: ವಿರಾಟ್ ಕೊಹ್ಲಿ ಘೋಷಣೆ

ವಿಶೇಷ ಎಂದರೆ ಹಾಕ್-ಐ ಕ್ಯಾಮೆರಾಗಳು ಪ್ರತಿ ಸೆಕೆಂಡಿಗೆ ಸರಿಸುಮಾರು 300 ಫ್ರೇಮ್‌ಗಳಲ್ಲಿ ರೆಕಾರ್ಡ್ ಮಾಡುತ್ತವೆ. ಅಂದರೆ ಅಂಪೈರ್‌ಗಳು ತಮ್ಮ ನಿರ್ಧಾರವನ್ನು ಪ್ರಕಟಿಸಲು ಹಲವು ಆಯ್ಕೆಯನ್ನು ಹೊಂದಿರಲಿದ್ದಾರೆ. ಅಲ್ಲದೆ ಸ್ಪಷ್ಟ ಚಿತ್ರಣದೊಂದಿಗೆ ತೀರ್ಪನ್ನು ಪ್ರಕಟಿಸುವ ಆಯ್ಕೆ ಮೂರನೇ ಅಂಪೈರ್​ಗೆ ಇರಲಿದೆ. ಅದರಂತೆ ಸ್ಮಾರ್ಟ್ ರಿಪ್ಲೇ ಸಿಸ್ಟಂ ಐಪಿಎಲ್​ನಲ್ಲಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಬಿಸಿಸಿಐ ಮತ್ತು ಐಸಿಸಿ ಎಲ್ಲಾ ಟೂರ್ನಿಗಳಲ್ಲೂ SRS ಅನ್ನು ಬಳಸುವುದರಲ್ಲಿ ಅನುಮಾನವೇ ಬೇಡ.

Published On - 12:55 pm, Wed, 20 March 24

Follow Us
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!