AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: RCB ಆಟಗಾರನ ದೊಡ್ಡ ಎಡವಟ್ಟು: ಸೋಲಿನಿಂದ ಜಸ್ಟ್ ಪಾರು

IPL 2025 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 42ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 205 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 194 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

IPL 2025: RCB ಆಟಗಾರನ ದೊಡ್ಡ ಎಡವಟ್ಟು: ಸೋಲಿನಿಂದ ಜಸ್ಟ್ ಪಾರು
Rcb
ಝಾಹಿರ್ ಯೂಸುಫ್
|

Updated on: Apr 26, 2025 | 10:31 AM

Share

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೇವಲ 11 ರನ್​ಗಳ ಜಯ ಸಾಧಿಸಿದೆ. ಅದು ಕೂಡ ಕೊನೆಯ ಓವರ್​ ಮೂಲಕ ಎಂಬುದು ವಿಶೇಷ. ಅದರಲ್ಲೂ ಕೊನೆಯ 2 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು ಕೇವಲ 18 ರನ್​ಗಳ ಅವಶ್ಯಕತೆಯಿತ್ತು. ಇದರ ನಡುವೆ ಆರ್​ಸಿಬಿ ಆಟಗಾರನ ಮಾಡಿದ ತಪ್ಪಿನಿಂದಾಗಿ ಈ ಗುರಿಯು 13 ಕ್ಕೆ ಬರುತ್ತಿತ್ತು ಎಂದರೆ ನಂಬಲೇಬೇಕು.

9ನೇ ಓವರ್​ನ ಕೊನೆಯ ಎಸೆತದಲ್ಲಿ ನಿತೀಶ್ ರಾಣಾ  ಕವರ್ಸ್​ನತ್ತ ಬಾರಿಸಿದ್ದರು. ಈ ವೇಳೆ ರಿಯಾನ್ ಪರಾಗ್ ಓಡಲು ಮುಂದಾದರೂ, ರಾಣಾ ರನ್ ನಿರಾಕರಿಸಿದರು. ಅತ್ತ  ಕಡೆಯಿಂದ ಫೀಲ್ಡರ್ ಚೆಂಡನ್ನು ವಿಕೆಟ್ ಕೀಪರ್​ನತ್ತ ಎಸೆದಿದ್ದಾರೆ. ಆದರೆ ಚೆಂಡು ಹಿಡಿಯುವಲ್ಲಿ ಜಿತೇಶ್ ಶರ್ಮಾ ವಿಫಲರಾದರು. ಈ ವೇಳೆ ವಿಕೆಟ್ ಕೀಪರ್ ಹಿಂದೆ ಇದ್ದ ಸುಯಶ್ ಸರ್ಮಾ ತನ್ನ ಕ್ಯಾಪ್​ನಿಂದ ಚೆಂಡನ್ನು ಹಿಡಿದಿದ್ದಾರೆ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

10ನೇ ಓವರ್​ ಆರಂಭಕ್ಕೂ ಮುನ್ನ ಅಂಪೈರ್ ಫೀಲ್ಡರ್ ಕ್ಯಾಪ್​ನಲ್ಲಿ ಚೆಂಡನ್ನು ಹಿಡಿದಿರುವುದನ್ನು ಮರು ಪರಿಶೀಲಿಸಿದ್ದಾರೆ. ಈ ವಿಡಿಯೋ ಪರಿಶೀಲನೆ ವೇಳೆ ನಾನ್ ಸ್ಟ್ರೈಕ್​ನಲ್ಲಿದ್ದ ಅಂಪೈರ್ ಓವರ್​ ಮುಗಿದಿರುವುದನ್ನು ಘೋಷಿಸಿರುವುದು ಕಂಡು ಬಂದಿದೆ. ಇಲ್ಲದಿದ್ದರೆ ಆರ್​ಸಿಬಿ ತಂಡಕ್ಕೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತಿತ್ತು.

ಸುಯಶ್ ಶರ್ಮಾ ಮಾಡಿದ ತಪ್ಪಿನ ಬಗ್ಗೆ ಕಾಮೆಂಟೇಟರ್​ಗಳ ಚರ್ಚೆ:

ಐಪಿಎಲ್ ನಿಯಮದ ಪ್ರಕಾರ, ಒಬ್ಬ ಫೀಲ್ಡರ್ ತನ್ನ ದೇಹದ ಯಾವುದೇ ಭಾಗದಿಂದ ಚೆಂಡನ್ನು ಫೀಲ್ಡಿಂಗ್ ಮಾಡಬಹುದು. ಆದಾಗ್ಯೂ, ಚೆಂಡು ಆಟದಲ್ಲಿರುವಾಗ, ಅದನ್ನು ಬೇರೆ ವಸ್ತುಗಳಿಂದ ತಡೆದರೆ ಅಥವಾ ಫೀಲ್ಡಿಂಗ್ ಮಾಡಿದ್ದರೆ ಅದನ್ನು ಕಾನೂನುಬಾಹಿರ ಫೀಲ್ಡಿಂಗ್ ಪರಿಗಣಿಸಲಾಗುತ್ತದೆ.

ಇಲ್ಲಿ ಸುಯಶ್ ಶರ್ಮಾ ಕ್ಯಾಪ್​ನಲ್ಲಿ ಚೆಂಡನ್ನು ತಡೆದಿರುವುದು ಕಾನೂನುಬಾಹಿರವಾಗಿತ್ತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 5 ರನ್​ಗಳನ್ನು ನೀಡಬೇಕಿತ್ತು. ಆದರೆ ಸುಯಶ್ ಚೆಂಡನ್ನು ತಡೆಯುವ ಮುನ್ನವೇ ಅಂಪೈರ್ ಓವರ್​ ಮುಗಿದಿದೆ ಎಂದು ಸೂಚನೆ ನೀಡಿದ್ದರು. ಹೀಗಾಗಿ ಚೆಂಡು ಡೆಡ್ ಆಗಿದೆ ಎಂದು ಪರಿಗಣಿಸಲಾಗಿದೆ.

ಒಂದು ವೇಳೆ ಅಂಪೈರ್ ಓವರ್ ಮುಗಿದಿದೆ ಎನ್ನುವ ಮೊದಲೇ, ಸುಯಶ್ ಶರ್ಮಾ ಕ್ಯಾಪ್​ಗೆ ಚೆಂಡು ತಾಗಿದ್ದರೆ 5 ರನ್​ಗಳ ಪೆನಾಲ್ಟಿ ವಿಧಿಸಲಾಗುತ್ತಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಚ್ಚುವರಿ 5 ರನ್​ಗಳು ಲಭಿಸುತ್ತಿತ್ತು. ಆದರೆ ಚೆಂಡನ್ನು ಗಮನಿಸದೇ ಅಂಪೈರ್ ಓವರ್ ಮುಕ್ತಾಯ ಎಂದಿರುವುದು ಆರ್​ಸಿಬಿ ಪಾಲಿಗೆ ವರವಾಗಿ ಪರಿಣಮಿಸಿತು.

ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?

ಒಂದು ವೇಳೆ ಈ 5 ರನ್ ಲಭಿಸಿದ್ದರೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೊನೆಯ 2 ಓವರ್​ಗಳಲ್ಲಿ ಗೆಲ್ಲಲು ಕೇವಲ 13 ರನ್​ಗಳ ಅವಶ್ಯಕತೆ ಮಾತ್ರ ಇರುತ್ತಿತ್ತು. ಈ ಮೂಲಕ ಆರ್​ಆರ್​ ತಂಡಕ್ಕೆ ಸುಲಭವಾಗಿ ಗೆಲ್ಲುವ ಅವಕಾಶವಿರುತ್ತಿತ್ತು. ಆದರೆ ಅದೃಷ್ಟ ಆರ್​ಸಿಬಿ ಪರವಿದ್ದ ಕಾರಣ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ರನ್​ಗಳ ರೋಚಕ ಜಯ ಸಾಧಿಸಿದೆ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ