AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni Birthday: 43 ಎಕರೆಯಲ್ಲಿ ಸಾವಯವ ಕೃಷಿ; ರೈತ ಧೋನಿಯ ವ್ಯವಸಾಯದ ಬದುಕು ಹೇಗಿದೆ ಗೊತ್ತಾ?

MS Dhoni Birthday: ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಧೋನಿ ರಾಂಚಿಯ ನಾಗ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಈಜಾ ಫಾರ್ಮ್ ಎಂಬ ಹೆಸರಿನಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದಾರೆ.

MS Dhoni Birthday: 43 ಎಕರೆಯಲ್ಲಿ ಸಾವಯವ ಕೃಷಿ; ರೈತ ಧೋನಿಯ ವ್ಯವಸಾಯದ ಬದುಕು ಹೇಗಿದೆ ಗೊತ್ತಾ?
ಎಂಎಸ್ ಧೋನಿ
ಪೃಥ್ವಿಶಂಕರ
|

Updated on:Jul 07, 2023 | 11:32 AM

Share

ವಿಶ್ವ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಭಾರತ ಕ್ರಿಕೆಟ್ ತಂಡದ (Team India) ಮಾಜಿ ನಾಯಕ ಹಾಗೂ ರಾಂಚಿಯ ಯುವರಾಜ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಜುಲೈ 7 ರಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಕ್ರಿಕೆಟ್ ಜೊತೆಗಿನ ಮಾಹಿಯ ಒಡನಾಟ ಮತ್ತು ಅವರ ಯಶಸ್ಸನ್ನು ಇಡೀ ಜಗತ್ತು ನೋಡಿದೆ. ಧೋನಿಗೆ ಕ್ರಿಕೆಟ್ ಎಂದರೆ ಮೊದಲ ಪ್ರೀತಿ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಹೊರತುಪಡಿಸಿ, ಧೋನಿಯ ಇತರ ಹವ್ಯಾಸಗಳ ಬಗ್ಗೆ ಮಾತನಾಡುವುದಾದರೆ, ಧೋನಿಗೆ ದುಬಾರಿ ವಾಹನಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ವಾಹನಗಳ ಸಂಗ್ರಹದಲ್ಲಿ, ಧೋನಿ ಹಮ್ಮರ್ H-2, ಪೋರ್ಷೆ 911, ಫೆರಾರಿ GT-5990, ಜೀಪ್, ಲ್ಯಾಂಡ್ ರೋವರ್ 3, ಆಡಿ ಕ್ಯೂ7, ಕಾನ್ಫೆಡರೇಟ್ ಹೆಲ್‌ಕ್ಯಾಟ್ X32, ಹಾರ್ಲೆ ಡೇವಿಡ್ಸನ್ ಫ್ಯಾಟ್‌ಬಾಯ್, ಕವಾಸಕಿ 1 ನಿಂಜಾ ಝಡ್‌ಎಕ್ಸ್ ಸೇರಿದಂತೆ ವಿವಿಧ ಕಂಪನಿಗಳ ಬೈಕ್‌ಗಳು ಮತ್ತು ಐಷಾರಾಮಿ ಕಾರುಗಳಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಧೋನಿ ರಾಂಚಿಯ ನಾಗ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಈಜಾ ಫಾರ್ಮ್ ಎಂಬ ಹೆಸರಿನಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಸ್ಟ್ರಾಬೆರಿ, ಕ್ಯಾಪ್ಸಿಕಂ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ಸೋರೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಟೊಮೇಟೊ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಮಾಹಿ ಅವರ ಜಮೀನಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ.

MS Dhoni Net Worth: 42ನೇ ವಸಂತಕ್ಕೆ ಕಾಲಿಟ್ಟ ಕ್ಯಾಪ್ಟನ್ ಕೂಲ್ ಧೋನಿ ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?

ಕಡಕ್ನಾಥ್ ಜಾತಿಯ ಕೋಳಿಗಳ ಸಾಕಾಣಿಕೆ

ಇದರೊಂದಿಗೆ ಧೋನಿ ಫಾರ್ಮ್‌ನಲ್ಲಿ ಕಡಕ್ನಾಥ್ ಜಾತಿಯ ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತಿದೆ. ಕಡಕ್ನಾಥ್ ಕೋಳಿಯ ಹೊರತಾಗಿ, ಧೋನಿ ಅವರ ಫಾರ್ಮ್ನಿಂದ ಮೊಟ್ಟೆಗಳು ಸಹ ದೊಡ್ಡ ಪ್ರಮಾಣದಲ್ಲಿ ಪೂರೈಕೆಯಾಗುತ್ತವೆ. ಈಜಾ ಫಾರ್ಮ್ನ ವಾಟ್ಸಾಪ್ ಗ್ರೂಪ್ ನಂಬರ್​ನಲ್ಲಿ ಆರ್ಡರ್ ಮಾಡಿದರೆ, ಮೊಟ್ಟೆಗಳನ್ನು ಸುಲಭವಾಗಿ ಮನೆಗೆ ಪೂರೈಸಲಾಗುತ್ತದೆ. ಇದರೊಂದಿಗೆ ಈಜಾ ಫಾರ್ಮ್‌ನ ಔಟ್‌ಲೆಟ್‌ನಲ್ಲಿಯೂ ಮಾರಾಟ ಮಾಡಲಾಗುತ್ತದೆ.

ವಾಟ್ಸಪ್​ನಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಆರ್ಡರ್ ಮಾಡಬಹುದು

ಕೋಳಿ ಮಾಂಸದ ಜೊತೆಗೆ ಭಾರತೀಯ ತಳಿಯ ದೇಸಿಗಿರ್ ಹಸು, ಸೆಹ್ವಾಲ್ ಮತ್ತು ಫ್ರೈಸೆನ್ ತಳಿಯ ಸುಮಾರು 300 ಹಸುಗಳನ್ನು ಧೋನಿ ಅವರ ಫಾರ್ಮ್‌ನಲ್ಲಿ ಸಾಕಲಾಗಿದ್ದು, ಈಜಾ ಫಾರ್ಮ್‌ನ ವಾಟ್ಸಾಪ್ ಗ್ರೂಪ್‌ನಲ್ಲಿ ಆರ್ಡರ್ ಮಾಡುವ ಮೂಲಕ ಅಥವಾ ಈಜಾ ಫಾರ್ಮ್‌ನ ಅಂಗಡಿಯಲ್ಲಿ ಸುಲಭವಾಗಿ ಹಾಲನ್ನು ಖರೀದಿಸಬಹುದು. ಇದರೊಂದಿಗೆ ಅಂಗಡಿಯಿಂದ ಮನೆಗೆ ಹಾಲು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.

ತರಕಾರಿ, ಹಣ್ಣು, ಕೋಳಿ ಸಾಕಿರುವ ಧೋನಿ ಈಗ ತಮ್ಮ ಜಮೀನಿನಲ್ಲಿ ಮೀನುಗಳನ್ನು ಸಾಕುತ್ತಿದ್ದಾರೆ. ಮೀನು ಸಾಕಣೆಗಾಗಿಯೇ ಎರಡು ದೊಡ್ಡ ಕೊಳಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ರೆಹು, ಕಾಟ್ಲಾ ಮತ್ತು ಟೆಲ್ಪಿಯಾ ಎಂಬ ಜಾತಿಯ ಮೀನುಗಳನ್ನು ಸಾಕಲಾಗುತ್ತಿದೆ. ಮೀನುಗಳು ಚಿಕ್ಕದಾಗಿರುವುದರಿಂದ ಸದ್ಯ ಅವುಗಳನ್ನು ಖರೀದಿಸಿ ಮಾರಾಟ ಮಾಡುತ್ತಿಲ್ಲ.

43 ಎಕರೆ ಪ್ರದೇಶದಲ್ಲಿ ಫಾರ್ಮ್ ಹೌಸ್

ಮಹೇಂದ್ರ ಸಿಂಗ್ ಧೋನಿಯ ಸಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಬೆಳೆದ ತರಕಾರಿಗಳು ಮತ್ತು ಹಣ್ಣುಗಳನ್ನು ಈಜಾ ಫಾರ್ಮ್ ಹೆಸರಿನ ವಾಟ್ಸಾಪ್ ಗುಂಪಿನಲ್ಲಿ ಆರ್ಡರ್ ಮಾಡುವ ಮೂಲಕ ಅಥವಾ ಈಜಾ ಫಾರ್ಮ್ ಹೆಸರಿನ ಔಟ್‌ಲೆಟ್‌ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಖರೀದಿಸಬಹುದು. ರಾಜಧಾನಿ ರಾಂಚಿಯ ಲಾಲ್‌ಪುರದಲ್ಲಿರುವ ಸುಜಾತಾ ಚೌಕ್ ಮತ್ತು ಈಜಾ ಫಾರ್ಮ್‌ನ ಮಳಿಗೆಗಳ ಜೊತೆಗೆ, ಡೈಲಿ ಮಾರ್ಕೆಟ್‌ನಲ್ಲಿರುವ ಅಂಗಡಿಯಿಂದ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದರೊಂದಿಗೆ ಆಲ್ ಸೀಸನ್ ಫಾರ್ಮ್ ಫ್ರೆಶ್ ಏಜೆನ್ಸಿ ಮೂಲಕ ಧೋನಿ ಅವರ ಫಾರ್ಮ್‌ನಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ದುಬೈ ಮತ್ತು ಇತರ ಗಲ್ಫ್ ದೇಶಗಳಿಗೆ ಕಳುಹಿಸಲಾಗುತ್ತದೆ. ಸದ್ಯ ಧೋನಿಯ ಇಜಾ ಫಾರ್ಮ್‌ನಲ್ಲಿ ಸುಮಾರು 150 ಮಂದಿ ಕೆಲಸ ಮಾಡುತ್ತಿದ್ದಾರೆ. ಧೋನಿ ಅವರ ಹಿರಿಯ ಸಹೋದರ ನರೇಂದ್ರ ಸಿಂಗ್ ಧೋನಿ ಮತ್ತು ಅವರ ಆಪ್ತರು ಫಾರ್ಮ್ ಹೌಸ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 7 July 23

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ