AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs HKG: 38 ರನ್​ಗಳಿಗೆ ಹಾಂಗ್​ ಕಾಂಗ್ ಆಲೌಟ್; ಸೂಪರ್ ಸಂಡೇಯಲ್ಲಿ ಭಾರತಕ್ಕೆ ಪಾಕ್ ಎದುರಾಳಿ..!

Asia Cup 2022: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಸೆ.4ರ ಭಾನುವಾರದಂದು ಇಬ್ಬರ ಮುಖಾಮುಖಿಗೆ ವೇಳಾಪಟ್ಟಿ ನಿಗದಿಯಾಗಿದೆ.

PAK vs HKG: 38 ರನ್​ಗಳಿಗೆ ಹಾಂಗ್​ ಕಾಂಗ್ ಆಲೌಟ್; ಸೂಪರ್ ಸಂಡೇಯಲ್ಲಿ ಭಾರತಕ್ಕೆ ಪಾಕ್ ಎದುರಾಳಿ..!
TV9 Web
| Edited By: |

Updated on:Sep 02, 2022 | 11:42 PM

Share

ಏಷ್ಯಾಕಪ್‌ನಲ್ಲಿ (Asia Cup) ಭಾರತ ಮತ್ತು ಪಾಕಿಸ್ತಾನ (India and Pakistan) ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಸೆ.4ರ ಭಾನುವಾರದಂದು ಇಬ್ಬರ ಮುಖಾಮುಖಿಗೆ ವೇಳಾಪಟ್ಟಿ ನಿಗದಿಯಾಗಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಹೀನಾಯವಾಗಿ ಸೋಲಿಸಿ, ಏಷ್ಯಾಕಪ್‌ನ ಸೂಪರ್ ಫೋರ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಟೀಮ್ ಇಂಡಿಯಾದೊಂದಿಗೆ ಒಂದು ವಾರದಲ್ಲಿ ಎರಡನೇ ಪಂದ್ಯವನ್ನು ಆಡಲಿದೆ. ಮೊಹಮ್ಮದ್ ರಿಜ್ವಾನ್, ಖುಷ್ದಿಲ್ ಷಾ ಮತ್ತು ಶಾದಾಬ್ ಖಾನ್ (Mohammad Rizwan, Khushdil Shah and Shadab Khan) ಅವರ ಪ್ರಬಲ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ಹಾಂಕಾಂಗ್ ತಂಡವನ್ನು 155 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಪಾಕಿಸ್ತಾನದ 193 ರನ್‌ಗಳ ಮುಂದೆ ಹಾಂಕಾಂಗ್ ತಂಡ ಕೇವಲ 38 ರನ್‌ಗಳಿಗೆ ಆಲೌಟಾಯಿತು.

ಗ್ರೂಪ್ ಸುತ್ತಿನ ಕೊನೆಯ ಪಂದ್ಯವು ಶುಕ್ರವಾರದಂದು ಶಾರ್ಜಾದಲ್ಲಿ ಸೆಪ್ಟೆಂಬರ್ 2 ರಂದು ನಡೆದಿದ್ದು, ಇಲ್ಲಿ ಗೆಲ್ಲುವ ತಂಡವು ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆಯಬೇಕಾಗಿತ್ತು. ಪಾಕಿಸ್ತಾನ ಮತ್ತು ಹಾಂಕಾಂಗ್ ತಮ್ಮ ಮೊದಲ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಆರಂಭದಿಂದಲೂ ಗೆಲುವಿನ ಸ್ಪರ್ಧಿಯಾಗಿದ್ದು, ಮಾಜಿ ಚಾಂಪಿಯನ್ ಎಲ್ಲರ ನಿರೀಕ್ಷೆಯನ್ನು ಸರಿ ಎಂದು ಸಾಬೀತುಪಡಿಸಿತು. ಪಾಕಿಸ್ತಾನ ಮೊದಲು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರೆ, ನಂತರ ವೇಗಿಗಳು-ಸ್ಪಿನ್ನರ್‌ಗಳ ಸಮಾನ ಸಹಕಾರದೊಂದಿಗೆ ಅನನುಭವಿ ಹಾಂಗ್ ಕಾಂಗ್ ತಂಡವನ್ನು ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಯಿತು. ಇದು ಟಿ20ಯಲ್ಲಿ ಪಾಕಿಸ್ತಾನದ ಅತಿ ದೊಡ್ಡ ಗೆಲುವಾಗಿದೆ.

ಪಾಕಿಸ್ತಾನ್ ಮೊದಲು ಬ್ಯಾಟ್ ಮಾಡಿದರೂ ಸತತ ಎರಡನೇ ಪಂದ್ಯದಲ್ಲಿ ತಂಡದ ನಾಯಕ ಬಾಬರ್ ಅಜಮ್ ವಿಫಲರಾದರು. ಭಾರತದ ವಿರುದ್ಧ ಕೇವಲ 10 ರನ್ ಗಳಿಸಿದ್ದ ಬಾಬರ್ ಈ ಬಾರಿ ಮೂರನೇ ಓವರ್​ನಲ್ಲಿ 9 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಎಹ್ಸಾನ್ ಎರಡನೇ ಬಾರಿಗೆ ಬಾಬರ್ ಅವರ ವಿಕೆಟ್ ಪಡೆದರು. ಇಲ್ಲಿಂದ ರಿಜ್ವಾನ್ ಮತ್ತು ಫಖರ್ ಜಮಾನ್ ಇನ್ನಿಂಗ್ಸ್ ನಿಭಾಯಿಸಿದರು.

ನಿಧಾನಗತಿಯ ಆರಂಭದ ನಂತರ ಇಬ್ಬರೂ ರನ್‌ಗಳ ವೇಗವನ್ನು ಹೆಚ್ಚಿಸಿದರು ಮತ್ತು ಎರಡನೇ ವಿಕೆಟ್‌ಗೆ 80 ಎಸೆತಗಳಲ್ಲಿ 116 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ರಿಜ್ವಾನ್ ಮೊದಲು 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ನಂತರ ಫಖರ್ 38 ಎಸೆತಗಳಲ್ಲಿ ಅರ್ಧಶತಕ ದಾಟಿದರು.

53 ರನ್ ಗಳಿಸಿ ಪೆವಿಲಿಯನ್​ಗೆ ವಾಪಸಾದ ಫಖರ್ ಅವರ ವಿಕೆಟ್ ಕೂಡ ಎಹ್ಸಾನ್ ಪಡೆದರು. ಇದಾದ ನಂತರ ರಿಜ್ವಾನ್ ಕೆಲವು ಬೌಂಡರಿಗಳನ್ನು ಬಾರಿಸಿದರು, ಆದರೆ ಖುಶ್ದಿಲ್ ಶಾ ಪಾಕಿಸ್ತಾನದ ಇನ್ನಿಂಗ್ಸ್ ಅನ್ನು ಕೊನೆಯವರೆಗೂ ಕೊಂಡೊಯ್ದರು. ಈ ಎಡಗೈ ಬ್ಯಾಟ್ಸ್‌ಮನ್ ಕೇವಲ 15 ಎಸೆತಗಳಲ್ಲಿ 5 ಸಿಕ್ಸರ್‌ ಸೇರಿದಂತೆ 35 ರನ್ ಗಳಿಸಿದರು. ಇದರಲ್ಲೂ ಖುಶ್ದಿಲ್ ಇನ್ನಿಂಗ್ಸ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

ಪ್ರತಿಕ್ರಿಯೆಯಾಗಿ, ಹಾಂಗ್ ಕಾಂಗ್‌ನ ಇನ್ನಿಂಗ್ಸ್ ಸರಿಯಾಗಿ ಪ್ರಾರಂಭವಾಗಲಿಲ್ಲ ಮತ್ತು ವಿಕೆಟ್‌ಗಳು ಬೀಳುತ್ತಲೇ ಇದ್ದವು. ಆರಂಭಿಕರು ಮೊದಲ ಎರಡು ಓವರ್‌ಗಳಲ್ಲಿ 16 ರನ್ ಸೇರಿಸಿದರು, ಆದರೆ ಮೂರನೇ ಓವರ್‌ನಿಂದ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು. ನಸೀಮ್ ಶಾ ವಿಕೆಟ್ ತೆರೆದರು, ನಂತರ ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರ ಸ್ಪಿನ್ ಜೋಡಿ ಇಡೀ ಹಾಂಕಾಂಗ್ ಇನ್ನಿಂಗ್ಸ್ ಮುಗಿಸಿತು. ಶಾದಾಬ್ ಕೇವಲ 2.4 ಓವರ್​ಗಳಲ್ಲಿ 8 ರನ್ ನೀಡಿ 4 ವಿಕೆಟ್ ಪಡೆದರೆ, ಮೊಹಮ್ಮದ್ ನವಾಜ್ 2 ಓವರ್​ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರು. ಹಾಂಗ್‌ಕಾಂಗ್‌ನ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅಲ್ಲದೆ ಗರಿಷ್ಠ 10 ರನ್‌ಗಳು ಹೆಚ್ಚುವರಿಯಾಗಿ ಬಂದವು. ಹಾಂಕಾಂಗ್ ಕೇವಲ 10.4 ಓವರ್‌ಗಳಲ್ಲಿ 38 ರನ್‌ಗಳಿಗೆ ಆಲೌಟ್ ಆಯಿತು.

Published On - 10:45 pm, Fri, 2 September 22

Follow Us
Web contact
Web contact

TV9 Kannada

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು