
ಐಪಿಎಲ್ 2026 ರ 61 ನೇ ಪಂದ್ಯದಲ್ಲಿ, ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಆರ್ಸಿಬಿ, ಪಂಜಾಬ್ ತಂಡವನ್ನು 23 ರನ್ಗಳಿಂದ ಸೋಲಿಸಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಪಂಜಾಬ್ ಸತತ ಆರನೇ ಸೋಲಿಗೆ ಕೊರಳೊಡ್ಡುವ ಮೂಲಕ ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಷ್ಟಕರವಾಗಿಸಿಕೊಂಡಿದೆ. ಆರ್ಸಿಬಿ 223 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 199 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್ಸಿಬಿ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 23 ರನ್ಗಳಿಂದ ಸೋಲಿಸಿ ಪ್ಲೇಆಫ್ಗೆ ಮುನ್ನಡೆಯಿತು. ಜಿತೇಶ್ ಶರ್ಮಾ ನಾಯಕತ್ವದಲ್ಲಿ, ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಸೋಲಿನಿಂದ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ಗೆ ತಲುಪುವ ಹಾದಿಯನ್ನು ಅತ್ಯಂತ ಕಷ್ಟಕರವಾಗಿಸಿದೆ.
ಶಶಾಂಕ್ (56) ಅವರ ಹೋರಾಟದ ಇನ್ನಿಂಗ್ಸ್ ಅಂತಿಮ ಓವರ್ನಲ್ಲಿ ಕೊನೆಗೊಂಡಿತು. ರಸಿಕ್ ಸಲಾಂ ಶಶಾಂಕ್ ಅವರ ವಿಕೆಟ್ ಪಡೆದು ಬೆಂಗಳೂರಿನ ಗೆಲುವನ್ನು ಖಚಿತಪಡಿಸಿದರು.
19ನೇ ಓವರ್ ನಲ್ಲಿ ಕೇವಲ 7 ರನ್ ಗಳನ್ನು ಬಿಟ್ಟುಕೊಡುವ ಮೂಲಕ ಜೋಶ್ ಹ್ಯಾಜಲ್ವುಡ್ ಪಂಜಾಬ್ಗೆ ಆಘಾತ ನೀಡಿದರು. ಪರಿಣಾಮವಾಗಿ, ಪಂಜಾಬ್ ಗೆಲುವಿಗೆ ಈಗ ಕೊನೆಯ ಓವರ್ ನಲ್ಲಿ 33 ರನ್ಗಳ ಅವಶ್ಯಕತೆಯಿದೆ.
ಶಶಾಂಕ್ ಸಿಂಗ್ ಸ್ಫೋಟಕ ಅರ್ಧಶತಕದೊಂದಿಗೆ ಪಂಜಾಬ್ ತಂಡದ ಭರವಸೆಯನ್ನು ಜೀವಂತವಾಗಿರಿಸಿದರು. 18 ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ, ಶಶಾಂಕ್ ಕೇವಲ 22 ಎಸೆತಗಳಲ್ಲಿ ಸೀಸನ್ನ ಮೊದಲ ಅರ್ಧಶತಕವನ್ನು ಬಾರಿಸಿದರು.
ಕೇವಲ 93 ರನ್ಗಳಿಗೆ ಐದು ವಿಕೆಟ್ಗಳನ್ನು ಕಳೆದುಕೊಂಡ ನಂತರ, ಮಾರ್ಕಸ್ ಸ್ಟೊಯಿನಿಸ್ ಮತ್ತು ಶಶಾಂಕ್ ಸಿಂಗ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಕೇವಲ 31 ಎಸೆತಗಳಲ್ಲಿ 67 ರನ್ಗಳ ಅಬ್ಬರದ ಪಾಲುದಾರಿಕೆಯನ್ನು ಹಂಚಿಕೊಂಡರು, ತಂಡವನ್ನು 160 ರನ್ಗಳ ಗಡಿ ದಾಟಿಸಿದರು.
ಪಂಜಾಬ್ ತನ್ನ ಅರ್ಧದಷ್ಟು ಬ್ಯಾಟಿಂಗ್ ಘಟಕವನ್ನು ಕೇವಲ 93 ರನ್ಗಳಿಗೆ ಕಳೆದುಕೊಂಡಿತು. ಈ ಬಾರಿ, ಸುಯಶ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ ಸೂರ್ಯಾಂಶ್ ಶೆಡ್ಜ್ ಅವರನ್ನು 35 ರನ್ಗಳಿಗೆ ಔಟ್ ಮಾಡಿದರು.
ಪಂಜಾಬ್ ತಂಡವು ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದು, ಕೂಪರ್ ಕಾನೊಲಿ (37) ಅವರ ವಿಕೆಟ್ ಅನ್ನು ರೊಮಾರಿಯೊ ಶೆಫರ್ಡ್ ಪಡೆದರು.
ಪಂಜಾಬ್ನ ಪರಿಸ್ಥಿತಿ ಹದಗೆಟ್ಟಿದ್ದು, ಈಗ ನಾಯಕ ಶ್ರೇಯಸ್ ಅಯ್ಯರ್ ಕೂಡ ಔಟ್ ಆಗಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ರಸಿಕ್ ಸಲಾಮ್ ಎರಡನೇ ಎಸೆತದಲ್ಲಿ ಅಯ್ಯರ್ (1) ಅವರನ್ನು ಔಟ್ ಮಾಡಿದರು. ಪಂಜಾಬ್ ಮೂರು ವಿಕೆಟ್ಗಳನ್ನು ಕಳೆದುಕೊಂಡಿದೆ.
ಪಂಜಾಬ್ನ ಇಬ್ಬರು ಆರಂಭಿಕ ಆಟಗಾರರು ಪೆವಿಲಿಯನ್ಗೆ ಮರಳಿದರು, ಇಬ್ಬರನ್ನೂ ಭುವನೇಶ್ವರ್ ಔಟ್ ಮಾಡಿದರು. ಮೂರನೇ ಓವರ್ನಲ್ಲಿ ಹಿಂತಿರುಗಿದ ಭುವನೇಶ್ವರ್, ಪ್ರಭ್ಸಿಮ್ರಾನ್ ಸಿಂಗ್ (2) ಅವರನ್ನು ಔಟ್ ಮಾಡಿದರು.
ಪಂಜಾಬ್ ಕಿಂಗ್ಸ್ ತಂಡ ಕಳಪೆ ಆರಂಭ ಪಡೆದು, ಮೊದಲ ಓವರ್ ನಲ್ಲೇ ಸ್ಫೋಟಕ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ (0) ಅವರನ್ನು ಕಳೆದುಕೊಂಡಿತು. ಭುವನೇಶ್ವರ್ ಮೂರು ಎಸೆತಗಳಲ್ಲಿ ಪ್ರಿಯಾಂಶ್ ಅವರನ್ನು ಔಟ್ ಮಾಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 222 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 58 ರನ್ಗಳೊಂದಿಗೆ ಉತ್ತಮ ಆರಂಭ ನೀಡಿದರು. ದೇವದತ್ ಪಡಿಕ್ಕಲ್ ಕೂಡ 45 ರನ್ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ವಿಕೆಟ್ ನಷ್ಟಕ್ಕೆ 200 ರನ್ ಗಳ ಗಡಿ ದಾಟಿದೆ. ವೆಂಕಟೇಶ್ ಅಯ್ಯರ್ 70 ರನ್ ಗಳೊಂದಿಗೆ ಕ್ರೀಸ್ ನಲ್ಲಿದ್ದಾರೆ.
ವೆಂಕಟೇಶ್ ಅಯ್ಯರ್ ಅದ್ಭುತ ಇನ್ನಿಂಗ್ಸ್ ಆಡಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಈ ಆವೃತ್ತಿಯಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಇದರೊಂದಿಗೆ, ಆರ್ಸಿಬಿ 17 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 187 ರನ್ಗಳನ್ನು ತಲುಪಿದೆ.
ವಿರಾಟ್ ಕೊಹ್ಲಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.ಇದರೊಂದಿಗೆ, ಆರ್ಸಿಬಿ ಸ್ಕೋರ್ 120 ರನ್ಗಳನ್ನು ತಲುಪಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಓವರ್ಗಳಲ್ಲಿ 2 ವಿಕೆಟ್ಗೆ 108 ರನ್ ಗಳಿಸಿದೆ. ವಿರಾಟ್ ಕೊಹ್ಲಿ 40 ರನ್ ಗಳಿಸಿ ಅರ್ಧಶತಕದ ಸಮೀಪದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 97 ರನ್ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ 25 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಈ ವಿಕೆಟ್ ಕೂಡ ಹರ್ಪ್ರೀತ್ ಬ್ರಾರ್ ಅವರ ಪಾಲಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ. ವಿರಾಟ್ ಕೊಹ್ಲಿ 32 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ದೇವದತ್ ಪಡಿಕ್ಕಲ್ 44 ರನ್ ಗಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ. ವಿರಾಟ್ ಕೊಹ್ಲಿ 24 ಮತ್ತು ದೇವದತ್ ಪಡಿಕ್ಕಲ್ 23 ರನ್ ಗಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 21 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಜಾಕೋಬ್ ಬೆಥೆಲ್ 7 ಎಸೆತಗಳಲ್ಲಿ 11 ರನ್ಗಳಿಗೆ ಔಟಾದರು. ಹರ್ಪ್ರೀತ್ ಬ್ರಾರ್ ತಂಡಕ್ಕೆ ಮೊದಲ ಬ್ರೇಕ್ಥ್ರೂ ನೀಡಿದರು.
ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕಾನೊಲಿ, ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜೈ, ಹರ್ಪ್ರೀತ್ ಬ್ರಾರ್ (ಮಾರ್ಕೊ ಯಾನ್ಸೆನ್ ಬದಲಿಗೆ), ಲಾಕಿ ಫರ್ಗುಸನ್ (ಕ್ಸೇವಿಯರ್ ಬಾರ್ಟ್ಲೆಟ್ ಬದಲಿಗೆ), ಅರ್ಶ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.
ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ (ಜಾಕೋಬ್ ಡಫಿ ಬದಲಿಗೆ), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ (ರಜತ್ ಪಾಟಿದಾರ್ ಬದಲಿಗೆ) ಮತ್ತು ಜೋಶ್ ಹ್ಯಾಜಲ್ವುಡ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ದುಕೊಂಡಿದೆ.ಹೀಗಾಗಿ ಆರ್ಸಿಬಿ ಬ್ಯಾಟಿಂಗ್ ಮಾಡಲಿದೆ. ಆದರೆ ಈ ಪಂದ್ಯಕ್ಕೆ ನಾಯಕ ರಜತ್ ಪಾಟಿದರ್ ಅಲಭ್ಯರಾಗಿದ್ದಾರೆ.
Published On - 3:02 pm, Sun, 17 May 26