AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಒಂದೇ ದಿನ ಜನ್ಮ ದಿನ ಆಚರಿಸಿಕೊಂಡ ಆರ್​ಸಿಬಿ ನಾಯಕ ಹಾಗೂ ಬ್ಯಾಟಿಂಗ್‌ ಕೋಚ್

Happy Birthday, Dinesh Karthik and Rajat Patidar: ಆರ್‌ಸಿಬಿ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಮತ್ತು ನಾಯಕ ರಜತ್ ಪಾಟೀದಾರ್ ಇಬ್ಬರೂ ಜೂನ್ 1 ರಂದು ಜನಿಸಿದ್ದಾರೆ. ಕಾರ್ತಿಕ್ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರೆ, ಪಾಟೀದಾರ್ 32ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆರ್‌ಸಿಬಿ ಈ ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಿದೆ. ಕಳೆದ ಸೀಸನ್ ವರೆಗೂ ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಫಿನಿಷರ್ ಆಗಿ ಆಡಿದ್ದರು.

IPL 2025: ಒಂದೇ ದಿನ ಜನ್ಮ ದಿನ ಆಚರಿಸಿಕೊಂಡ ಆರ್​ಸಿಬಿ ನಾಯಕ ಹಾಗೂ ಬ್ಯಾಟಿಂಗ್‌ ಕೋಚ್
Rcb
ಪೃಥ್ವಿಶಂಕರ
|

Updated on: Jun 01, 2025 | 5:58 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025  (IPL 2025) ರ ಫೈನಲ್‌ ತಲುಪಿದೆ. ಕ್ವಾಲಿಫೈಯರ್ 1 ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ತಲುಪಿರುವ ಆರ್​ಸಿಬಿ ಪ್ರಶಸ್ತಿಯಿಂದ ಒಂದು ಗೆಲುವಿನ ದೂರದಲ್ಲಿದೆ. ಒಂಬತ್ತು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಿದೆ. ಈ ಹಿಂದೆ 2016 ರಲ್ಲಿ ಫೈನಲ್ ತಲುಪಿದ್ದ ಆರ್​ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇದೀಗ ಮತ್ತೊಮ್ಮೆ ಫೈನಲ್ ತಲುಪಿರುವುದರಿಂದ ಆರ್​ಸಿಬಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಈ ಪ್ರಶಸ್ತಿ ಪಂದ್ಯ ಜೂನ್ 3 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ಈ ನಡುವೆ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ನಾಯಕ ರಜತ್ ಪಾಟಿದರ್ (Rajat Patidar) ಒಂದೇ ದಿನ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.

ಒಂದೇ ದಿನ ಇಬ್ಬರ ಜನ್ಮ ದಿನ

ಆರ್​ಸಿಬಿ ತಂಡದ ಮಾರ್ಗದರ್ಶಕ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ 1 ಜೂನ್ 1985 ರಂದು ಚೆನ್ನೈನಲ್ಲಿ ಜನಿಸಿದರು. ಅದೇ ದಿನ, 1 ಜೂನ್ 1993 ರಂದು, ನಾಯಕ ರಜತ್ ಪಾಟಿದಾರ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಇಂದು ಅಂದರೆ ಭಾನುವಾರ, ಕಾರ್ತಿಕ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರೆ, ಪಾಟೀದಾರ್ ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಜನ್ಮ ದಿನವನ್ನು ಆರ್‌ಸಿಬಿ ಶಿಬಿರದಲ್ಲಿ ಆಚರಿಸಲಾಗಿದೆ. ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರಿಗೂ ಶುಭ ಹಾರೈಸಿದೆ. ಕಳೆದ ಸೀಸನ್​ವರೆಗೂ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದರು.

ಆದರೆ ರಜತ್ ಪಾಟಿದಾರ್ ಆಟಗಾರನಾಗಿ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಇಬ್ಬರೂ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸೀಸನ್‌ನಲ್ಲಿ ಈ ಜೋಡಿ ಆರ್‌ಸಿಬಿಗೆ ಯಶಸ್ಸನ್ನು ತಂದುಕೊಟ್ಟಿದೆ. ಈ ಜೋಡಿ ಬ್ಯಾಟಿಂಗ್ ಕೋಚ್ ಮತ್ತು ನಾಯಕನಾಗಿ ಸೂಪರ್ ಹಿಟ್ ಎಂದು ಸಾಬೀತಾಗಿದೆ ಮತ್ತು ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಆಡಲು ಸಿದ್ಧವಾಗಿದೆ.

ಆರ್​​ಸಿಬಿ ತಂಡದ ಹೆಸರಲ್ಲಿ ಪೂಜೆ: ವಿಶೇಷ ಅಭಿಮಾನ ಮೆರೆದ ಕೊಡಗಿನ ಬಾಲಕ

ಫೈನಲ್​ಗಾಗಿ ಆರ್​ಸಿಬಿ ತಯಾರಿ

ನಾಯಕ ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಆರ್‌ಸಿಬಿಯನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜೂನ್ 3 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯಕ್ಕಾಗಿ ಇಡೀ ತಂಡ ಅಹಮದಾಬಾದ್ ತಲುಪಿದೆ. ಜೂನ್ 1 ರ ಭಾನುವಾರದಂದು ರಜತ್ ಪಡೆ 3 ಗಂಟೆಗಳ ಕಾಲ ಅಭ್ಯಾಸ ನಡೆಸಿದೆ. ಈ ಸಮಯದಲ್ಲಿ, ನಾಯಕ ಪಾಟಿದಾರ್ ಮತ್ತು ತಂಡದ ಉಳಿದ ಆಟಗಾರರು ನೆಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಅದೇ ಸಮಯದಲ್ಲಿ, ಕಾರ್ತಿಕ್ ಸೇರಿದಂತೆ ಇತರ ತರಬೇತುದಾರ ಸಿಬ್ಬಂದಿಗಳು ಕೂಡ ಆಟಗಾರರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ