AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಿರಾಟ್ ಕೊಹ್ಲಿ ಮದುವೆಯಾಗಿದ್ದಕ್ಕೆ ಈಗ ಚೆನ್ನಾಗಿ ಆಡ್ತಿಲ್ಲ ಎಂದ ಮಾಜಿ ಕ್ರಿಕೆಟಿಗ

Shoaib Akhtar: ಒಬ್ಬ ಆಟಗಾರ, ವಿಶೇಷವಾಗಿ ತಂಡದ ನಾಯಕನು ತಂಡದಿಂದ ನಿವೃತ್ತಿಯಾದ ನಂತರವೇ ಮದುವೆಯಾಗಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.

Virat Kohli: ವಿರಾಟ್ ಕೊಹ್ಲಿ ಮದುವೆಯಾಗಿದ್ದಕ್ಕೆ ಈಗ ಚೆನ್ನಾಗಿ ಆಡ್ತಿಲ್ಲ ಎಂದ ಮಾಜಿ ಕ್ರಿಕೆಟಿಗ
Virat Kohli
TV9 Web
| Edited By: |

Updated on:Jan 24, 2022 | 11:46 AM

Share

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಈ ನಡುವೆ ಕೊಹ್ಲಿ ಫಾರ್ಮ್​ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನೀಡಿರುವ ಹೇಳಿಕೆ ಇದೀಗ ನಗೆಪಾಟಲಿಗೀಡಾಗಿದೆ. ಅಖ್ತರ್ ಅವರ ಪ್ರಕಾರ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅವರ ಆಟದ ಮೇಲೆ ಪರಿಣಾಮ ಬೀರಿದೆ. ಮದುವೆಯ ಒತ್ತಡವು ಅವರ ಆಟದ ಮೇಲೆ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಅಖ್ತರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, “ವಿರಾಟ್ ನಾಯಕತ್ವವನ್ನು ತೊರೆದಿಲ್ಲ. ಆದರೆ ತೊರೆಯುವಂತೆ ಒತ್ತಡ ಹೇರಲಾಯಿತು. ಇದು ಅವರಿಗೆ ಉತ್ತಮ ಸಮಯವಲ್ಲ. ಹೀಗಾಗಿ ಅವರು ಎಂತಹ ಆಟಗಾರ ಎಂಬುದನ್ನು ಈಗ ಸಾಬೀತುಪಡಿಸಬೇಕಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವರು ಉಕ್ಕಿನಿಂದ ಅಥವಾ ಕಬ್ಬಿಣದಿಂದ ಮಾಡಲ್ಪಟ್ಟಿದೆಯೇ? ಎಂಬುದು ಗೊತ್ತಾಗಲಿದೆ. ವಿರಾಟ್ 6-7 ವರ್ಷಗಳ ಕಾಲ ನಾಯಕತ್ವ ವಹಿಸಿದ್ದರು. ನಾನು ಅವರ ನಾಯಕತ್ವದ ಪರವಾಗಿ ಇಲ್ಲ. ಅವರು 100, 120 ರನ್ ಗಳಿಸಲು ಮತ್ತು ಅವರ ಬ್ಯಾಟಿಂಗ್‌ನತ್ತ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ ಎಂದು ಅಖ್ತರ್ ತಿಳಿಸಿದರು.

ಕೊಹ್ಲಿ ಮದುವೆಯಾಗುವುದರ ಬದಲು 10-12 ವರ್ಷಗಳ ಕಾಲ ರನ್ ಮತ್ತು ದಾಖಲೆಗಳ ಮೇಲೆ ಮಾತ್ರ ಗಮನ ಹರಿಸಬೇಕಿತ್ತು. ಈಗ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಆದರೆ ನಾನು ಕೊಹ್ಲಿ ಸ್ಥಾನದಲ್ಲಿದ್ದರೆ ನಾನು ಮದುವೆಯಾಗುತ್ತಿರಲಿಲ್ಲ. ಕೇವಲ ರನ್ ಗಳಿಸಿ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೆ ಎಂದು ಅಖ್ತರ್ ಹೇಳಿದರು.

ಈ 10-12 ವರ್ಷಗಳ ಕ್ರಿಕೆಟ್ ವಿಭಿನ್ನ ಸಮಯ ಮತ್ತು ಮತ್ತೆ ಬರುವುದಿಲ್ಲ. ನಾನು ಮದುವೆಯಾಗುವುದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಒಂದು ವೇಳೆ ನೀವು ಭಾರತಕ್ಕಾಗಿ ಆಡುತ್ತಿದ್ದೀರಿ, ನೀವು ಸ್ವಲ್ಪ ಸಮಯವನ್ನು ಕಾಯಬಹುದಿತ್ತು. ಏಕೆಂದರೆ ಅಭಿಮಾನಿಗಳು ಕೊಹ್ಲಿಯ ಬಗ್ಗೆ ಹುಚ್ಚರಾಗಿದ್ದಾರೆ. ಅವರು ಕಳೆದ 20 ವರ್ಷಗಳಿಂದ ಪಡೆಯುತ್ತಿರುವ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಹೀಗಾಗಿ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮದುವೆಯಾಗಬಾರದಿತ್ತು ಎಂದು ಅಖ್ತರ್ ಅಭಿಪ್ರಾಯಪಟ್ಟರು.

ಇದೇ ಮದುವೆಯ ಒತ್ತಡವು ಆಟಗಾರನ ಆಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ಹೌದು” ಎಂದು ಅಖ್ತರ್ ಉತ್ತರಿಸಿದರು. ಮಕ್ಕಳಿಂದ, ಕುಟುಂಬದವರಿಂದ ಒತ್ತಡವಿದೆ. ಜವಾಬ್ದಾರಿ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತದೆ. ಕ್ರಿಕೆಟಿಗರಿಗೆ 14-15 ವರ್ಷಗಳ ಅಲ್ಪ ವೃತ್ತಿಜೀವನವಿದೆ. ಅದರಲ್ಲಿ ನೀವು ಐದು-ಆರು ವರ್ಷಗಳ ಕಾಲ ಉತ್ತುಂಗದಲ್ಲಿದ್ದೀರಿ. ವಿರಾಟ್ ಅವರ ಆ ವರ್ಷಗಳು ದಾಟಿದೆ, ಈಗ ಹೋರಾಟ ಮಾಡಬೇಕಿದೆ ಎಂದು ಶೊಯೇಬ್ ಅಖ್ತರ್ ತಿಳಿಸಿದರು.

ಒಬ್ಬ ಆಟಗಾರ, ವಿಶೇಷವಾಗಿ ತಂಡದ ನಾಯಕನು ತಂಡದಿಂದ ನಿವೃತ್ತಿಯಾದ ನಂತರವೇ ಮದುವೆಯಾಗಬೇಕು ಎಂದು ಇದೇ ವೇಳೆ ಸಲಹೆ ನೀಡಿದ ಅಖ್ತರ್, ಆಡುವಾಗ ಹೆಚ್ಚು ಒತ್ತಡ ಇರಬಾರದು, ಮುಕ್ತವಾಗಿ ಆಟವಾಡಿ. ಹಾಗಾಗಿ ವೃತ್ತಿಜೀವನದಲ್ಲಿ ಮದುವೆಯಾಗಬೇಡಿ ಎಂದರು. ಅಲ್ಲದೆ ನಾನು ನಿವೃತ್ತಿಯಾದ ಬಳಿಕವಷ್ಟೇ ಮದುವೆಯಾದೆ ಇದೇ ವೇಳೆ ಶೊಯೇಬ್ ಅಖ್ತರ್ ತಿಳಿಸಿದರು.

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Shoaib Akhtar believes pressure of marriage affected Virat Kohli’s game)

Published On - 10:42 pm, Sun, 23 January 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?