AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sports Awards 2021: ನೀರಜ್​ಗೆ ಖೇಲ್ ರತ್ನ, ಕನ್ನಡಿಗ ಸುಹಾಸ್​ಗೆ ಅರ್ಜುನ! ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ

Sports Awards 2021: ಕ್ರೀಡೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಇಂದು ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Sports Awards 2021: ನೀರಜ್​ಗೆ ಖೇಲ್ ರತ್ನ, ಕನ್ನಡಿಗ ಸುಹಾಸ್​ಗೆ ಅರ್ಜುನ! ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ
ನೀರಜ್ ಚೋಪ್ರಾ ಮತ್ತು ಮನ್ಪ್ರೀತ್ ಸಿಂಗ್
TV9 Web
| Updated By: ಪೃಥ್ವಿಶಂಕರ|

Updated on:Nov 13, 2021 | 6:12 PM

Share

ಕ್ರೀಡೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಕ್ರೀಡಾಪಟುಗಳು, ತರಬೇತುದಾರರಿಗೆ ಇಂದು ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಿದರು. ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿದವರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪ್ರಶಸ್ತಿ, ಮೌಲಾನಾ ಅಬುಲ್ ಕಲಾಂ ಆಜಾದ್ ಪ್ರಶಸ್ತಿ ಸೇರಿವೆ. ಈ ಪ್ರಶಸ್ತಿಗಳನ್ನು ಹಾಕಿಯ ಮ್ಯಾಜಿಕ್ ಡೇ ಎಂದು ಕರೆಯಲಾಗುವ ಮೇಜರ್ ಧ್ಯಾನಚಂದ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ಘೋಷಿಸಲಾಗಿದ್ದರೂ, ಈ ಬಾರಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದಿಂದಾಗಿ ಈ ಪ್ರಶಸ್ತಿಗಳ ಘೋಷಣೆ ವಿಳಂಬವಾಗಿದೆ. ಕ್ರೀಡಾ ಜಗತ್ತಿನ ಅತ್ಯುನ್ನತ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನು ಈ ವರ್ಷ 12 ಆಟಗಾರರಿಗೆ ನೀಡಲಾಗುವುದು. ಒಂದೇ ಬಾರಿಗೆ ಇಷ್ಟೊಂದು ಆಟಗಾರರಿಗೆ ಖೇಲ್ ರತ್ನ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು.

ಟೋಕಿಯೊ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಇದಲ್ಲದೆ, ಪುರುಷ ಕುಸ್ತಿಪಟು ರವಿ ದಹಿಯಾ, ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಹಾಕಿ ತಂಡದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್, ಪ್ಯಾರಾಲಿಂಪಿಕ್ ಪದಕ ವಿಜೇತ ಶೂಟರ್ ಅವನಿ ಲೆಖರಾ, ಪ್ಯಾರಾಥ್ಲೀಟ್ ಸುಮಿತ್ ಆಂಟಿಲ್, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಕೃಷ್ಣ ನಗರ, ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಹೆಸರುಗಳು ಸೇರಿವೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಹಾಕಿ ತಂಡದ ನಾಯಕ ಸುನಿಲ್ ಛೆಟ್ರಿ ಅವರಿಗೂ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು.

35 ಮಂದಿಗೆ ಅರ್ಜುನ ಪ್ರಶಸ್ತಿ ಇದೇ ವೇಳೆ ಒಟ್ಟು 35 ಮಂದಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೆಚ್ಚಿನ ಆಟಗಾರರು ಹಾಕಿಯಲ್ಲಿ ತೊಡಗಿಸಿಕೊಂಡಿದ್ದರು. ಇದರಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ಆಟಗಾರರು ಭಾಗವಹಿಸಿದ್ದರು. ಭಾರತದ ಪುರುಷರ ಹಾಕಿ ತಂಡ ನಾಲ್ಕು ದಶಕಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದೆ. ಈ ಬಾರಿ ತಂಡ ಕಂಚಿನ ಪದಕದೊಂದಿಗೆ ಮರಳಿದೆ. ಅದೇ ಸಮಯದಲ್ಲಿ, ಮಹಿಳಾ ತಂಡವು ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದ ಸೆಮಿಫೈನಲ್ ಪ್ರವೇಶಿಸಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದರು. ಪುರುಷರ ತಂಡದಿಂದ ದಿಲ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದ್ರ ಕುಮಾರ್, ಅಮಿತ್ ರೋಹಿದಾಸ್, ಬಿರೇಂದರ್ ಲಾಕ್ರಾ, ಸುಮಿತ್, ನೀಲಕಾಂತ್ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಸಿಂಗ್, ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣ್ ಕುಮಾರ್ ಇದ್ದಾರೆ. ಅದೇ ವೇಳೆ ಕ್ರಿಕೆಟಿಗ ಶಿಖರ್ ಧವನ್ ಹೆಸರೂ ಇದರಲ್ಲಿ ಸೇರಿದೆ. ಖಡ್ಗಧಾರಿ ಭವಾನಿ ದೇವಿ ಜತೆಗೆ ಕನ್ನಡಿಗ ಸುಹಾಸ್​ ಸೇರಿದಂತೆ ಹಲವು ಪ್ಯಾರಾ ಅಥ್ಲೀಟ್‌ಗಳೂ ಈ ಪಟ್ಟಿಯಲ್ಲಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ ಅಥ್ಲೆಟಿಕ್ಸ್ ಕೋಚ್ ಟಿಪಿ ಔಸೆಫ್, ಕ್ರಿಕೆಟ್ ಕೋಚ್ ಸರ್ಕಾರ್ ತಲ್ವಾರ್ ಅವರು ಜೀವಮಾನ ವಿಭಾಗದಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ತರಬೇತುದಾರರಲ್ಲಿ ಸೇರಿದ್ದಾರೆ. ಇದರಲ್ಲಿ ಹಾಕಿ ಕೋಚ್ ಸರ್ಪಾಲ್ ಸಿಂಗ್, ಕಬಡ್ಡಿ ಕೋಚ್ ಅಶನ್ ಕುಮಾರ್ ಮತ್ತು ಈಜು ತರಬೇತುದಾರ ತಪನ್ ಕುಮಾರ್ ಪಾಣಿಗ್ರಾಹಿ ಅವರ ಹೆಸರೂ ಸೇರಿದೆ. ಮತ್ತೊಂದೆಡೆ, ಅಥ್ಲೆಟಿಕ್ಸ್ ಕೋಚ್ ರಾಧಾಕೃಷ್ಣನ್ ನಾಯರ್, ಬಾಕ್ಸಿಂಗ್ ಕೋಚ್ ಸಂಧ್ಯಾ ಗುರುಂಗ್, ಹಾಕಿ ಕೋಚ್ ಪ್ರೀತಮ್ ಸಿವಾಚ್, ಪ್ಯಾರಾ ಶೂಟಿಂಗ್ ಕೋಚ್ ಜೈ ಪ್ರಕಾಶ್ ನೌಟಿಯಾಲ್, ಟೇಬಲ್ ಟೆನಿಸ್ ಕೋಚ್ ಸುಬ್ರಮಣ್ಯಂ ರಾಮನ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಯ ನಿಯಮಿತ ವಿಭಾಗದಲ್ಲಿ ಸೇರಿಸಲಾಗಿದೆ.

ಜೀವಮಾನ ಸಾಧನೆ ಪ್ರಶಸ್ತಿ ಜೀವಮಾನ ಸಾಧನೆ ಪ್ರಶಸ್ತಿಯ ಪಟ್ಟಿಯಲ್ಲಿ ಕೋಚ್ ಲೇಖ್ ಕೆಸಿ, ಚೆಸ್ ಕೋಚ್ ಅಭಿಜಿತ್ ಕುಂಟೆ, ಹಾಕಿ ಕೋಚ್ ದೇವಿಂದರ್ ಸಿಂಗ್ ಗಾರ್ಚಾ, ಕಬಡ್ಡಿ ಕೋಚ್ ವಿಕಾಸ್ ಕುಮಾರ್, ಕುಸ್ತಿ ಕೋಚ್ ಸಜ್ಜನ್ ಸಿಂಗ್ ಅವರ ಹೆಸರುಗಳಿವೆ. ಖೇಲ್ ರತ್ನ ಪ್ರಶಸ್ತಿಯು 25 ಲಕ್ಷ ರೂಪಾಯಿ ನಗದು, ಪದಕ ಮತ್ತು ಗೌರವ ಪತ್ರವನ್ನು ಒಳಗೊಂಡಿದೆ. ಅರ್ಜುನ ಪ್ರಶಸ್ತಿಯು 15 ಲಕ್ಷ ರೂಪಾಯಿ ಬಹುಮಾನ, ಕಂಚಿನ ಪದಕ ಮತ್ತು ಗೌರವ ಪ್ರಮಾಣಪತ್ರವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾಜಿ ಕ್ರೀಡಾ ಸಚಿವ ಕರೆನ್ ರಿಜಿಜು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Published On - 6:09 pm, Sat, 13 November 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು