AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli Resigns: ಎಲ್ಲಾ ಮಾದರಿಯ ನಾಯಕತ್ವ ತೊರೆಯುವ ಕೊಹ್ಲಿಯ ನಿರ್ಧಾರಕ್ಕೆ 4 ಪ್ರಮುಖ ಕಾರಣಗಳಿವು

Virat Kohli: ಕೆಲವು ತಿಂಗಳ ಹಿಂದೆಯಷ್ಟೇ ಭಾರತೀಯ ಕ್ರಿಕೆಟ್‌ನ ಅತ್ಯಂತ ಶಕ್ತಿಶಾಲಿ ಮುಖವಾಗಿ ಕಾಣುತ್ತಿದ್ದ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಅತ್ಯಂತ ಏಕಾಂಗಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ಟೆಸ್ಟ್ ಮಾದರಿಗೆ ಏಕಾಏಕಿ ರಾಜೀನಾಮೆ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿದೆ.

Virat Kohli Resigns: ಎಲ್ಲಾ ಮಾದರಿಯ ನಾಯಕತ್ವ ತೊರೆಯುವ ಕೊಹ್ಲಿಯ ನಿರ್ಧಾರಕ್ಕೆ 4 ಪ್ರಮುಖ ಕಾರಣಗಳಿವು
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Jan 16, 2022 | 4:47 PM

Share

ಮೊದಲ T20, ನಂತರ ODI ಮತ್ತು ಈಗ ಟೆಸ್ಟ್… ನಾಲ್ಕು ತಿಂಗಳೊಳಗೆ, ಭಾರತ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವು ಸಂಪೂರ್ಣವಾಗಿ ಮುಗಿದಿದೆ. 2015 ರಲ್ಲಿ ಕೊಹ್ಲಿ ಮೊದಲ ಬಾರಿಗೆ ತಂಡದ ನಾಯಕನಾದ ಟೆಸ್ಟ್ ಮಾದರಿಯಲ್ಲಿ ಏಳು ವರ್ಷಗಳ ನಂತರ, ಅದೇ ಮಾದರಿಯಲ್ಲಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕೊಹ್ಲಿ ತಮ್ಮ ನಾಯಕತ್ವದ ಅವಧಿಯನ್ನು ಕೊನೆಗೊಳಿಸಿದರು. ಕೆಲವು ತಿಂಗಳ ಹಿಂದೆಯಷ್ಟೇ ಭಾರತೀಯ ಕ್ರಿಕೆಟ್‌ನ ಅತ್ಯಂತ ಶಕ್ತಿಶಾಲಿ ಮುಖವಾಗಿ ಕಾಣುತ್ತಿದ್ದ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಅತ್ಯಂತ ಏಕಾಂಗಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ಟೆಸ್ಟ್ ಮಾದರಿಗೆ ಏಕಾಏಕಿ ರಾಜೀನಾಮೆ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿದೆ.

2021ರ ಸೆಪ್ಟೆಂಬರ್‌ನಲ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯಲು ಕೊಹ್ಲಿ ನಿರ್ಧರಿಸಿದ್ದರು. ನಂತರ ಟಿ20 ವಿಶ್ವಕಪ್ ನಂತರ ನಾಯಕತ್ವದಿಂದ ಕೆಳಗಿಳಿಯುವುದಾಗಿ, ಆದರೆ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ನಾಯಕನಾಗಿ ಮುಂದುವರಿಯುವುದಾಗಿ ಹೇಳಿದ್ದರು. ಆದರೆ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೊಹ್ಲಿಯನ್ನು ಏಕದಿನ ಕ್ರಿಕೆಟ್‌ನ ನಾಯಕತ್ವದಿಂದ ವಜಾಗೊಳಿಸಿ ರೋಹಿತ್ ಶರ್ಮಾಗೆ ಜವಾಬ್ದಾರಿಯನ್ನು ನೀಡಿತು. ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದು, ಇದರೊಂದಿಗೆ ಅವರ ಯಶಸ್ವಿ ಅವಧಿ ಅಂತ್ಯಗೊಂಡಿದೆ. ಕಾರಣಗಳ ಬಗ್ಗೆ ಮಾತನಾಡಿದರೆ, ಕೊಹ್ಲಿಯ ಮನಸ್ಸನ್ನು ಅವರು ಮಾತ್ರ ತಿಳಿದುಕೊಳ್ಳಬಹುದು, ಆದರೆ ಬಾಹ್ಯವಾಗಿ ಈ ನಾಲ್ಕು ಕಾರಣಗಳು ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸಾರ್ವಭೌಮತ್ವಕ್ಕೆ ಕುತ್ತು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಜೊತೆಗೆ ಈ ಮಾದರಿಯಲ್ಲಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಕೊಹ್ಲಿ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ನಾಯಕತ್ವವನ್ನು ಮುಂದುವರಿಸಲು ಬಯಸಿದ್ದರು. ಆದರೆ ಮಂಡಳಿಯು ಏಕದಿನ ಪಂದ್ಯಗಳ ನಾಯಕತ್ವವನ್ನು ಅವರಿಂದ ಕಿತ್ತುಕೊಂಡು ರೋಹಿತ್ ಶರ್ಮಾಗೆ ನೀಡಿತು. ನಿಸ್ಸಂಶಯವಾಗಿ, ತಂಡದಲ್ಲಿ ರೋಹಿತ್ ಅವರ ಬೆಳೆಯುತ್ತಿರುವ ಸ್ಥಾನಮಾನ ಮತ್ತು ಜವಾಬ್ದಾರಿಯು ಕೊಹ್ಲಿಯ ದೀರ್ಘಕಾಲದ ಏಕಸ್ವಾಮ್ಯ ಶಕ್ತಿಯನ್ನು ಛಿದ್ರಗೊಳಿಸಿತು.

ಮಂಡಳಿಯೊಂದಿಗೆ ವಿವಾದ ಏಕದಿನ ತಂಡದ ನಾಯಕತ್ವ ಕೈತಪ್ಪುವುದರೊಂದಿಗೆ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ವಿವಾದ ಮುನ್ನೆಲೆಗೆ ಬಂದಿತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಟ್ವೆಂಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ಕೊಹ್ಲಿಯನ್ನು ಕೇಳಿಕೊಂಡಿದ್ದರು ಎಂದು ಹೇಳಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಅದನ್ನು ಅಲ್ಲಗಳೆದರು. ಅಂತಹ ಪರಿಸ್ಥಿತಿಯಲ್ಲಿ, ಯಾವಾಗಲೂ ಸಂಭವಿಸಿದಂತೆ, ಸ್ಟಾರ್​ ಆಟಗಾರರು ಸಹ ಪ್ರಭಾವಿ ಮಂಡಳಿಯ ಮುಂದೆ ಏಕಾಂಗಿಯಾಗುತ್ತಾರೆ, ಕೊಹ್ಲಿಗೂ ಅದೇ ಸಂಭವಿಸಿತು. ಮಂಡಳಿಯ ಬೆಂಬಲ ಸಂಪೂರ್ಣವಾಗಿ ಕೊಹ್ಲಿಗೆ ಕೊನೆಗೊಂಡಿತು.

ಬ್ಯಾಟ್ ಅಬ್ಬರಿಸಲಿಲ್ಲ ODI-T20 ನಲ್ಲಿ ICC ಟ್ರೋಫಿ ಗೆಲ್ಲಲಾಗಲಿಲ್ಲ ಎಂಬ ವಿವಾದವು ಕೊಹ್ಲಿ ವಿರುದ್ಧ ಕೇಳಿಬಂದಿತು, ಟೆಸ್ಟ್‌ನಲ್ಲಿ ಅವರ ಕಳಪೆ ಫಾರ್ಮ್‌ನ ಒತ್ತಡವು ಹೆಚ್ಚಾಗತೊಡಗಿತು. ಕಳೆದ 2 ವರ್ಷಗಳಿಂದ ಯಾವುದೇ ಫಾರ್ಮೆಟ್​ನಲ್ಲಿ ಶತಕ ಸಿಡಿಸಲು ಕೊಹ್ಲಿಗೆ ಸಾಧ್ಯವಾಗಿರಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು, ಅಲ್ಲಿ ಅವರು ಮೊದಲಿನಂತೆ ಬೌಲರ್‌ಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅದೇ ತಪ್ಪುಗಳಿಂದ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನಿರೀಕ್ಷಿತ ಸೋಲಿನ ನಂತರ ಕೊಹ್ಲಿ ತಮ್ಮ ಸ್ಥಾನವನ್ನು ಬಲಪಡಿಸುವ ಅವಕಾಶವನ್ನು ಕಳೆದುಕೊಂಡರು.

ತರಬೇತುದಾರನನ್ನು ಬದಲಾಯಿಸಲಾಯಿತು 2021 ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ ಸೋಲನುಭವಿಸುವುದರೊಂದಿಗೆ, ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅಧಿಕಾರಾವಧಿಯೂ ಕೊನೆಗೊಂಡಿತು. ಶಾಸ್ತ್ರಿ ಅವರು 2017 ರಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು ಮತ್ತು ಅವರ ನೇಮಕದಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಬ್ಬರ ಜೋಡಿಯು ಅನೇಕ ಯಶಸ್ಸನ್ನು ಸಾಧಿಸಿತು ಮತ್ತು ಹೆಚ್ಚಿನ ಮಟ್ಟಿಗೆ, ಟೀಮ್ ಇಂಡಿಯಾದಲ್ಲಿ ಏಕಪಕ್ಷೀಯ ಆಡಳಿತವನ್ನು ಸಹ ಮಾಡಲಾಯಿತು. ಶಾಸ್ತ್ರಿ ನಿರ್ಗಮಿಸಿದ ತಕ್ಷಣ ರಾಹುಲ್ ದ್ರಾವಿಡ್ ಹೊಸ ಕೋಚ್ ಆದರು. ಅಂತಹ ಪರಿಸ್ಥಿತಿಯಲ್ಲಿ ಕೊಹ್ಲಿಗೆ ಶಾಸ್ತ್ರಿಯಂತಹ ವಿಶ್ವಾಸಾರ್ಹ ಪಾಲುದಾರರಿರಲಿಲ್ಲ, ಅದು ಸಮೀಕರಣಗಳನ್ನು ಬದಲಾಯಿಸಿತು.

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?